ಡ್ರಗ್ಸ್ ಧಂಧೆ: ಸಿಸಿಬಿ ಪೊಲೀಸರಿಂದ‌ ಪ್ರಶಾಂತ್ ಸಂಬರಗಿ ವಿಚಾರಣೆ

ಸ್ವಯಂಘೋಷಿತ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿಗೆ ಇಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ಸಿಸಿಬಿ ಕಚೇರಿಗೆ ಆಗಮಿಸುವಂತೆ  ಪ್ರಕರಣದ ತನಿಖೆ ನಡೆಸುತ್ತಿರುವ ಸಿಟಿ ಕ್ರೈಂ ಬ್ರಾಂಚ್ ಪೊಲೀಸ್ ಅಧಿಕಾರಿಗಳು ನೊಟೀಸ್ ನೀಡಿದ್ದಾರೆ. 

Last Updated : Sep 12, 2020, 06:38 AM IST
  • ಬಿಟ್ಟಿ ಪ್ರಚಾರಕ್ಕಾಗಿ ಹಪಹಪಿಸುತ್ತಿದ್ದ ಪ್ರಶಾಂತ್ ಸಂಬರಗಿಗೆ ಸಂಕಷ್ಟ ಶುರು
  • ಐಪಿಸಿ ಸೆಕ್ಷನ್ 120/B, 504, 463, 465, 506 ಅಡಿಯಲ್ಲಿ ಪ್ರಶಾಂತ್ ಸಂಬರಗಿ ವಿರುದ್ದ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ
  • ನಟಿ ಸಂಜನಾ ಜೊತೆ ಜಮೀರ್ ಅಹ್ಮದ್ ಶ್ರೀಲಂಕಾಗೆ ಹೋಗಿದ್ದರು ಎಂದು ಆರೋಪ‌ ಮಾಡಿದ್ದ ಸಂಬರಗಿ‌
ಡ್ರಗ್ಸ್ ಧಂಧೆ: ಸಿಸಿಬಿ ಪೊಲೀಸರಿಂದ‌ ಪ್ರಶಾಂತ್ ಸಂಬರಗಿ ವಿಚಾರಣೆ title=

ಬೆಂಗಳೂರು: ರಾಜ್ಯದಲ್ಲಿ ಪತ್ತೆಯಾಗಿರುವ ಡ್ರಗ್ಸ್ ಮಾಫಿಯಾದಲ್ಲಿ (Drug Mafia) ಪ್ರಚಾರ ಪಡೆಯಲು ಬಾಯಿಗೆ ಬಂದಂತೆ ಮಾತನಾಡುತ್ತಿದ್ದ, ತಾನು ಕೂಡ ಚಿತ್ರರಂಗಕ್ಕೆ ಸಂಬಂಧಿಸಿದವನು ಎಂದು ಸುಳ್ಳು ಹೇಳುತ್ತಿದ್ದ ಪ್ರಶಾಂತ್ ಸಂಬರಗಿ (Prashant Sambharagi)ಯನ್ನು  ಇಂದು ಸಿಟಿ ಕ್ರೈಂ ಬ್ರಾಂಚ್ ಪೊಲೀಸರು (CCB) ವಿಚಾರಣೆ ನಡೆಸಲಿದ್ದಾರೆ.

ಸ್ವಯಂಘೋಷಿತ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿಗೆ ಇಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ಸಿಸಿಬಿ ಕಚೇರಿಗೆ ಆಗಮಿಸುವಂತೆ  ಪ್ರಕರಣದ ತನಿಖೆ ನಡೆಸುತ್ತಿರುವ ಸಿಟಿ ಕ್ರೈಂ ಬ್ರಾಂಚ್ ಪೊಲೀಸ್ ಅಧಿಕಾರಿಗಳು ನೊಟೀಸ್ ನೀಡಿದ್ದಾರೆ. ನೊಟೀಸ್ ನಲ್ಲಿ ಡ್ರಗ್ಸ್ ಮಾಫಿಯಾಕ್ಕೆ ಸಂಬಂಧಿಸಿದಂತೆ ನಿಮ್ಮ ಬಳಿ‌ ಇರೋ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳಿ ಎಂದು ತಿಳಿಸಿದ್ದಾರೆ.

ರಾಗಿಣಿ ದ್ವಿವೇದಿ 'ಡ್ರಗ್ಸ್ ಹುಡುಗಿ' ಅಂತಾ ಗೊತ್ತಿರಲಿಲ್ಲ: ರಮೇಶ್ ಜಾರಕಿಹೊಳಿ‌

ಪ್ರಶಾಂತ್ ಸಂಬರಗಿ ಈಗಾಗಲೇ ಡ್ರಗ್ಸ್ ಮಾಫಿಯಾದಲ್ಲಿ ಚಿತ್ರನಟಿ ಸಂಜನಾ ಗುಲ್ರಾನಿ (Sanjana Gulrani) ಮತ್ತು ಬೆಂಗಳೂರಿನ‌ ಚಾಮರಾಜಪೇಟೆಯ ಶಾಸಕ‌  ಜಮೀರ್ ಅಹ್ಮದ್ ಅವರು ಇದ್ದಾರೆ ಎಂದು ಬಹಿರಂಗವಾಗಿ ಹೇಳಿರುವುದರಿಂದ ಇಂದಿನ‌ ವಿಚಾರಣೆ ಸಂದರ್ಭದಲ್ಲಿ ಪೂರಕ ದಾಖಲೆಗಳನ್ನು ಒದಗಿಸಬೇಕಾಗುತ್ತದೆ.

ನಟಿ ಸಂಜನಾ ಜೊತೆ ಜಮೀರ್ ಅಹ್ಮದ್ ಶ್ರೀಲಂಕಾಗೆ ಹೋಗಿದ್ದರು ಎಂದು ಸಂಬರಗಿ‌ ಆರೋಪ‌ ಮಾಡಿದ್ದು, ಇದೇ ಹಿನ್ನಲೆಯಲ್ಲಿ ಶಾಸಕ ಜಮೀರ್ ಅಹಮದ್, ಪ್ರಶಾಂತ್ ಸಂಬರಗಿ ವಿರುದ್ದ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಡ್ರಗ್ಸ್ ಧಂಧೆ: ಪ್ರಶಾಂತ್ ಸಂಬರಗಿ ವಿರುದ್ದ ದೂರು ದಾಖಲಿಸಿದ ಜಮೀರ್ ಅಹಮದ್

ಐಪಿಸಿ ಸೆಕ್ಷನ್ 120/B, 504, 463, 465, 506  ಅಡಿಯಲ್ಲಿ ಪ್ರಶಾಂತ್ ಸಂಬರಗಿ ವಿರುದ್ದ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಡ್ರಗ್ಸ್ ಮಾಫಿಯಾದಲ್ಲಿ ನನ್ನ ಹೆಸರು ಪ್ರಸ್ತಾಪ ಮಾಡ್ತಿದ್ದಾರೆ ಎಂದೇ ದೂರು ದಾಖಲಿಸಿದ್ದಾರೆ. ಜೊತೆಗೆ ಒಳಸಂಚು ರೂಪಿಸಿ, ಮಾನಹಾನಿ ಮಾಡುತ್ತಾ ಇದ್ದಾರೆ ಎಂದು ಜಮೀರ್ ಅಹಮದ್ ದೂರು ನೀಡಿದ್ದಾರೆ.

ಜಮೀರ್ ಅಹಮದ್ ಅವರು ನೀಡಿದ ದೂರಿನ ಅನ್ವಯ ಎನ್ ಸಿ ಆರ್ ದಾಖಲು ಮಾಡಿಕೊಳ್ಳಲಾಗಿತ್ತು. ಬಳಿಕ ಎಫ್ ಐ ಆರ್ ದಾಖಲು ಮಾಡಿಕೊಳ್ಳಲು ನ್ಯಾಯಾಲಯದ ಅನುಮತಿ ಕೇಳಲಾಗಿತ್ತು. ನ್ಯಾಯಾಲಯದ ಅನುಮತಿ ಮೇರೆಗೆ ಈಗ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇದರಿಂದ ಬಿಟ್ಟಿ ಪ್ರಚಾರಕ್ಕಾಗಿ ಹಪಹಪಿಸುತ್ತಿದ್ದ ಪ್ರಶಾಂತ್ ಸಂಬರಗಿಗೆ ಸಂಕಷ್ಟ ಶುರುವಾದಂತಾಗಿದೆ.
 

Trending News