ಮೂಡಾ ಅವ್ಯವಹಾರದ ತನಿಖೆಗೆ ಆಗ್ರಹಿಸಿ ವಿಪಕ್ಷಗಳ ಅಹೋರಾತ್ರಿ ಧರಣಿ ! ವಿಧಾನ ಸಭೆಯಲ್ಲಿಯೇ ನಿದ್ದೆಗೆ ಜಾರಿದ ನಾಯಕರು

 ಮೂಡಾದ ನಿವೇಶನ ಹಂಚಿಕೆಯಲ್ಲಿನ ಅಕ್ರಮ ಪ್ರಕರಣದ ಬಗ್ಗೆ ಚರ್ಚೆಗೆ ಅವಕಾಶ ನೀಡದಿರುವುದನ್ನು ಖಂಡಿಸಿ ವಿರೋಧ ಪಕ್ಷಗಳು ವಿಧಾನ ಮಂಡಲದಲ್ಲಿ ಧರಣಿ ನಡೆಸಿವೆ. ರಾತ್ರಿ ಪೂರ್ತಿ ಧರಣಿ ನಡೆಸಿದ ಪ್ರತಿಪಕ್ಷ ಸದಸ್ಯರು ವಿಧಾನ ಮಂಡಲದಲ್ಲಿಯೇ  ನಿದ್ದೆಗೆ ಜಾರಿದ್ದರು.   

Written by - Ranjitha R K | Last Updated : Jul 25, 2024, 10:19 AM IST
  • ಇಂದು ಎಂಟನೇ ದಿನದ ವಿಧಾನಸಭಾ ಕಲಾಪ ನಡೆಯಲಿದೆ.
  • ಆಡಳಿತಾರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷ ಬಿಜೆಪಿ, ಜೆಡಿಎಸ್ ನಡುವೆ ವಾಕ್ಸಮರ
  • ಕಲಾಪವನ್ನ ಅನಿರ್ಧಿಷ್ಟಾವಧಿಗೆ ಮುಂದೂಡುವ ಸಾಧ್ಯತೆ
ಮೂಡಾ ಅವ್ಯವಹಾರದ ತನಿಖೆಗೆ ಆಗ್ರಹಿಸಿ ವಿಪಕ್ಷಗಳ ಅಹೋರಾತ್ರಿ ಧರಣಿ ! ವಿಧಾನ ಸಭೆಯಲ್ಲಿಯೇ ನಿದ್ದೆಗೆ ಜಾರಿದ ನಾಯಕರು  title=

ಬೆಂಗಳೂರು : ಇಂದು ಎಂಟನೇ ದಿನದ ವಿಧಾನಸಭಾ ಕಲಾಪ ನಡೆಯಲಿದೆ. ಇಂದೂ ಕೂಡ ಆಡಳಿತಾರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷ ಬಿಜೆಪಿ, ಜೆಡಿಎಸ್ ನಡುವೆ  ವಾಕ್ಸಮರ ನಡೆಯಲಿದೆ. ಈಗಾಗಲೇ ಮುಡಾ ಅಕ್ರಮ ಹಗರಣದ ಚರ್ಚೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ಪ್ರತಿಪಕ್ಷಗಳು, ರಾತ್ರಿ ಅಹೋರಾತ್ರಿ ಧರಣಿ ಕೂಡ ನಡೆಸಿವೆ. ಒಂದು ವೇಳೆ ಪ್ರತಿಪಕ್ಷಗಳು ಪ್ರತಿಭಟನೆಯಿಂದ ಹಿಂದೆ ಸರಿಯದಿದ್ದರೆ ಇಂದು ಕೂಡಾ ಮತ್ತೆ ಗದ್ದಲ, ಕೋಲಾಹಲ ನಿರ್ಮಾಣವಾಗುವುದು ಗ್ಯಾರಂಟಿ. ಹೀಗಾದಾಗ ಕಲಾಪವನ್ನ ಮುಂದೂಡುವ ಸಾಧ್ಯತೆ ಇರುತ್ತೆ. ಅಲ್ಲದೆ, ಇಂದೇ ಕಲಾಪವನ್ನ ಅನಿರ್ಧಿಷ್ಟಾವಧಿಗೆ ಮುಂದೂಡುವ ಸಾಧ್ಯತೆ ಕೂಡಾ ಹೆಚ್ಚಿದೆ. 

ಮುಡಾ ಹಗರಣದ ಚರ್ಚೆಗೆ ಆಗ್ರಹಿಸಿ ಪ್ರತಿಪಕ್ಷಗಳಾದ ಜೆಡಿಎಸ್ - ಬಿಜೆಪಿ ಅಹೋರಾತ್ರಿ ಧರಣಿ ನಡೆಸಿವೆ. ವಿಪಕ್ಷಗಳ ಈ ಅಹೋರಾತ್ರಿ ಧರಣಿ ಪ್ರತಿಪಕ್ಷಗಳದ್ದಾದರೂ ರಾಜ್ಯ ಸರ್ಕಾರಕ್ಕೆ ಮುಜುಗರವನ್ನು ಉಂಟು ಮಾಡಿದೆ. 
ವಿಧಾನ ಪರಿಷತ್ ಹಾಗೂ ವಿಧಾನಸಭೆಯ ಸಭಾಂಗಣದ ಒಳಗೆಯೇ ಸದಸ್ಯರ ಅಹೋರಾತ್ರಿ ಧರಣಿ ನಡೆದಿದೆ. 

ಇದನ್ನೂ ಓದಿ : ಕೊಪ್ಪದ ಯುವತಿ ಮಿಸ್ಸಿಂಗ್ ಕೇಸ್ ಗೆ ಬಿಗ್ ಟ್ವಿಸ್ಟ್

ಧರಣಿ ನಿರತ ವಿಪಕ್ಷ ಸದಸ್ಯರು ರಾತ್ರಿ ವಿಧಾನ ಮಂಡಲದ ಸಭಾಂಗಣದಲ್ಲಿಯೇ  ನಿದ್ದೆಗ ಜಾರಿದ್ದಾರೆ. ಈ ಮೂಲಕ  ಬಿಜೆಪಿ- ಜೆಡಿಎಸ್ ಸದಸ್ಯರು ರಾಷ್ಟ್ರದ ಗಮನ ಸೆಳೆದಿದ್ದಾರೆ. ಇನ್ನು ಅಹೋರಾತ್ರಿ ಧರಣಿಯಲ್ಲೂ ಸಿದ್ದರಾಮಯ್ಯ ಸರ್ಕಾರದ ಅಕ್ರಮದ ಬಗ್ಗೆಯೇ ಪ್ರಸ್ತಾಪ ನಡೆದಿದೆ ಎನ್ನಲಾಗಿದೆ. 

ವಿಧಾನಮಂಡಲದ ಅಧಿವೇಶನ ಶುಕ್ರವಾರ ಅಂತ್ಯಗೊಳ್ಳಲಿದೆ.ಈ ಮಧ್ಯೆ, ದಲಿತರಿಗೆ ಅನ್ಯಾಯವಾಗದಂತೆ ಅಹೋರಾತ್ರಿ ಪ್ರತಿಭಟನೆ ನಡೆಸುತ್ತೇವೆ. ಮುಖ್ಯಮಂತ್ರಿ ಕುಟುಂಬಕ್ಕೆ ನೀಡಿರುವ ನಿವೇಶನಗಳನ್ನು ವಾಪಸ್ ಪಡೆಯುತ್ತೇವೆ ಹಾಗೂ ಅಕ್ರಮವಾಗಿ ಹಂಚಿಕೆ ಮಾಡಿರುವ 5 ಸಾವಿರಕ್ಕೂ ಹೆಚ್ಚು ನಿವೇಶನಗಳನ್ನು ವಾಪಸ್ ಪಡೆಯುತ್ತೇವೆ ಎಂದು  ರಾಜ್ಯ ಬಿಜೆಪಿ ಅಧ್ಯಕ್ಷ, ಶಾಸಕ ಬಿ ವೈ ವಿಜಯೇಂದ್ರ ಹೇಳಿದ್ದಾರೆ. ಮುಡಾ ಹಗರಣದ ಚರ್ಚೆಗೆ ಅವಕಾಶ ನೀಡದೆ ಮುಖ್ಯಮಂತ್ರಿಗಳು ಚರ್ಚೆಯಿಂದ ದೂರ ಓಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ :  ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News