ಸಮ್ಮಿಶ್ರ ಸರ್ಕಾರದ ಸಾವಿಗೆ ಹಾಲೆ ಸಾಕು,ವಿಷ ಹಾಕುವ ಅಗತ್ಯವಿಲ್ಲ- ಗೋವಿಂದ ಕಾರಜೋಳ

ಸಮ್ಮಿಶ್ರ ಸರ್ಕಾರದ ಸಾವಿಗೆ ಹಾಲೆ ಸಾಕು ಅದಕ್ಕೆ ವಿಷ ಹಾಕುವ ಅಗತ್ಯವಿಲ್ಲವೆಂದು ಬಿಜೆಪಿ ನಾಯಕ ಗೋವಿಂದ್ ಕಾರಜೋಳ ಅಭಿಪ್ರಾಯಪಟ್ಟಿದ್ದಾರೆ.

Last Updated : Sep 17, 2018, 04:41 PM IST
ಸಮ್ಮಿಶ್ರ ಸರ್ಕಾರದ ಸಾವಿಗೆ ಹಾಲೆ ಸಾಕು,ವಿಷ ಹಾಕುವ ಅಗತ್ಯವಿಲ್ಲ- ಗೋವಿಂದ ಕಾರಜೋಳ  title=
Photo:facebook

ಬೆಂಗಳೂರು: ಸಮ್ಮಿಶ್ರ ಸರ್ಕಾರದ ಸಾವಿಗೆ ಹಾಲೆ ಸಾಕು ಅದಕ್ಕೆ ವಿಷ ಹಾಕುವ ಅಗತ್ಯವಿಲ್ಲವೆಂದು ಬಿಜೆಪಿ ನಾಯಕ ಗೋವಿಂದ್ ಕಾರಜೋಳ ಅಭಿಪ್ರಾಯಪಟ್ಟಿದ್ದಾರೆ.

ಕಾಂಗ್ರೆಸ್ -ಜೆಡಿಎಸ್ ಸರ್ಕಾರದ ಅಸ್ಥಿರತೆಯನ್ನು ಪ್ರಸ್ತಾಪಿಸುತ್ತಾ ಮಾತನಾಡಿದ ಗೋವಿಂದ್ ಕಾರಜೋಳ "ನಾವು ಸಮ್ಮಿಶ್ರ ಸರ್ಕಾರದ ಸಾವಿಗೆ ವಿಷವನ್ನು ಹಾಕುವ ಅಗತ್ಯವಿಲ್ಲ ಅದಕ್ಕೆ ಸಾಯಲು ಹಾಲೆ ಸಾಕು ಎಂದು ಎಂದು ತಿಳಿಸಿದರು.

ಇನ್ನು ಮುಂದುವರೆದು ಮಾತನಾಡಿದ ಅವರು "ಸಮ್ಮಿಶ್ರ ಸರ್ಕಾರದಲ್ಲಿ ಬೆಳಗಾವಿ,ದಾವಣಗೆರೆ ಮತ್ತು ಬೆಂಗಳೂರು ಎಂದು ಮೂರು ಬಣಗಳಿವೆ ಎಂದರು.ಇತ್ತೀಚಿಗೆ ಆಪರೇಷನ್ ಕಮಲದ ಮೂಲಕ ಬಿಜೆಪಿ ಸಮ್ಮಿಶ್ರ ಸರ್ಕಾರವನ್ನು ಬಿಳಿಸಲು ಯತ್ನಿಸುತ್ತಿದೆ ಎನ್ನುವ  ಆರೋಪಕ್ಕೆ ಪ್ರತಿಕ್ರಿಯಿಸಿದ ಕಾರಜೋಳ ಬೇರೆ ಶಾಸಕರನ್ನು ಸೆಳೆಯುವ ಪ್ರಯತ್ನ ಮಾಡಿಲ್ಲ ಎಂದು ತಿಳಿಸಿದರು.

 

Trending News