ಮೂರು ದಿನಗಳ ನಂತರ ಈ ರಾಶಿಗಳ ಮೇಲೆ ಕೃಪಾ ದೃಷ್ಟಿ ಹರಿಸಲಿದ್ದಾನೆ ಶನಿ ಮಹಾತ್ಮ

ಇನ್ನು ನಾಲ್ಕು ದಿನಗಳ ನಂತರ ಶನಿ ಹಿಮ್ಮುಖ ಚಲನೆ ಆರಂಭಿಸಲಿದ್ದಾನೆ. ಶನಿಯು ಹಿಮ್ಮುಖ ಚಲನೆ ವಿವಿಧ ರಾಶಿಚಕ್ರ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ. ಈ ಸಮಯದಲ್ಲಿ, ಶನಿಯು ಕೆಲವು ರಾಶಿಯವರ ಮೇಲೆ ವಿಶೇಷ ಆಶೀರ್ವಾದ ನೀಡುತ್ತಾನೆ.   

Written by - Ranjitha R K | Last Updated : Jun 2, 2022, 08:50 AM IST
  • ನಾಲ್ಕು ದಿನಗಳಲ್ಲಿ ಶನಿಯ ಹಿಮ್ಮುಖ ಚಲನೆ ಆರಂಭವಾಗಲಿದೆ.
  • ಜೂನ್ 5 ರಂದು ಮತ್ತೆ ಹಿಮ್ಮುಖ ಚಲನೆ ಆರಂಭಿಸಲಿದ್ದಾನೆ.
  • ಶನಿಯ ಹಿಮ್ಮುಖ ಚಲನೆ ಈ ರಾಶಿಯವರಿಗೆ ತರಲಿದೆ ಅದೃಷ್ಟ
ಮೂರು ದಿನಗಳ ನಂತರ ಈ ರಾಶಿಗಳ ಮೇಲೆ ಕೃಪಾ ದೃಷ್ಟಿ ಹರಿಸಲಿದ್ದಾನೆ ಶನಿ ಮಹಾತ್ಮ  title=
Shani vakri effects on zodic sign (file photo)

ಬೆಂಗಳೂರು :  ನಾಲ್ಕು ದಿನಗಳಲ್ಲಿ ಶನಿಯ ಹಿಮ್ಮುಖ ಚಲನೆ ಆರಂಭವಾಗಲಿದೆ. ಏಪ್ರಿಲ್‌ನಲ್ಲಿ ಕುಂಭ ರಾಶಿಯನ್ನು ಪ್ರವೇಶಿಸಿರುವ ಕರ್ಮಫಲದಾತ ಶನಿಯು ಜೂನ್ 5 ರಂದು ಈ ರಾಶಿಯಲ್ಲಿ ಮತ್ತೆ ಹಿಮ್ಮುಖ ಚಲನೆ ಆರಂಭಿಸಲಿದ್ದಾನೆ. ಶನಿಯ ಹಿಮ್ಮುಖ ಚಲನೆ ಕೆಲವು ಅನೇಕ ರಾಶಿಗಳಿಗೆ ಶುಭ ಫಲವನ್ನು ನೀಡುತ್ತದೆ. ಇನ್ನು ಕೆಲವು ರಾಶಿಗಳಿಗೆ ಈ  ಸಮಯ ಕಷ್ಟದಿಂದ ಕೂಡಿರುತ್ತದೆ.  ಶನಿಯು ಹಿಮ್ಮುಖವಾಗಿದ್ದಾಗ, ವೃತ್ತಿ ಮತ್ತು ಜೀವನದಲ್ಲಿ ಪ್ರಗತಿಯಲ್ಲಿ ಅಡೆತಡೆಗಳು ಮತ್ತು ಜೀವನದಲ್ಲಿ ಅಶಾಂತಿ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ. ಯಾರ ರಾಶಿಯಲ್ಲಿ ಶನಿಯ ಸ್ಥಾನವು ಸರಿಯಾಗಿಲ್ಲವೋ, ಅವರ ಜೀವನ ಹಾದಿ ಕಷ್ಟದಿಂದ ಕೂಡಿರುತ್ತದೆ. 

ಜ್ಯೋತಿಷಿಗಳ ಪ್ರಕಾರ, ಶನಿಯ ಹಿಮ್ಮುಖ ಚಲನೆ ಧನು ರಾಶಿ, ಮೇಷ ಮತ್ತು ಕನ್ಯಾ ರಾಶಿಯವರಿಗೆ ಪ್ರಯೋಜನಕಾರಿಯಾಗಿರಲಿದೆ. ಕರ್ಕ, ಮೀನ ಮತ್ತು ವೃಶ್ಚಿಕ ರಾಶಿಯ ಜನರು ಹಣ ಮತ್ತು ವೃತ್ತಿಯಲ್ಲಿ ಕೆಲವು ತೊಂದರೆಗಳನ್ನು ಎದುರಿಸಬೇಕಾಗಬಹುದು. 

ಇದನ್ನೂ ಓದಿ : Surya Rashi Parivartan: ಜೂ.15ರ ಸೂರ್ಯ ರಾಶಿ ಬದಲಾವಣೆಯಿಂದ ಎಲ್ಲಾ ರಾಶಿಗಳ ಮೇಲೆ ಪರಿಣಾಮ

ಧನು ರಾಶಿ : ಧನು ರಾಶಿಯವರು ವೃತ್ತಿ ಬದಲಾಯಿಸುವ ಮೂಲಕ ದೊಡ್ಡ ಮಟ್ಟದ ಯಶಸ್ಸು, ಲಾಭವನ್ನು ಪಡೆಯಬಹುದು. ಆದರೆ ಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ. ನಿಮ್ಮ ಪರಿಶ್ರಮಕ್ಕೆ ತಕ್ಕ ಫಲವನ್ನು ಕರ್ಮ ಫಲದತ ಶನಿ ಮಹಾತ್ಮ ಕರುಣಿಸಲಿದ್ದಾನೆ.  ಈ ಸಮಯದಲ್ಲಿ ನಿಮಗೆ ಉದ್ಯೋಗಾವಕಾಶಗಳು ದೊರೆಯುತ್ತವೆ. ವೃತ್ತಿಯಲ್ಲಿ ದೊಡ್ಡ ಮಟ್ಟದ ಯಶಸ್ಸು ಸಿಗಲಿದೆ. 

ಮೇಷ ರಾಶಿ : ಈ ರಾಶಿಯವರಿಗೆ ತಮ್ಮ ಗುರಿಗಳನ್ನು ಈಡೇರಿಸಿಕೊಳ್ಳಲು ಇದಕ್ಕಿಂತ ಉತ್ತಮ ಅವಕಾಶ ಸಿಗುವುದಿಲ್ಲ. ಉದ್ಯಮಿಗಳು ಹೊಸ ವ್ಯವಹಾರವನ್ನು ಪ್ರಾರಂಭಿಸಬಹುದು.  ಈ ಸಮಯದಲ್ಲಿ ಆರಂಭಿಸುವ ಕೆಲಸದಲ್ಲಿ ಬಹಳಷ್ಟು ಯಶಸ್ಸು ಸಿಗುತ್ತದೆ. ಯಾವ ಕೆಲಸಕ್ಕೆ ಕೈ ಹಾಕಿದರೂ ಯಶಸ್ಸು ಖಂಡಿತಾ. 

ಇದನ್ನೂ ಓದಿ : Guru Gochar 2022: ಮುಂದಿನ ಒಂದು ವರ್ಷದವರೆಗೆ ಈ ರಾಶಿಗಳ ಮೇಲೆ ದೇವಗುರು ಬೃಹಸ್ಪತಿಯ ಕೃಪೆ ಇರಲಿದೆ

ಕನ್ಯಾ ರಾಶಿ :  ಈ ರಾಶಿಚಕ್ರದ ಜನರಿಗೆ ಸಣ್ಣ ಪ್ರಯತ್ನ ಕೂಡಾ ದೊಡ್ಡ ಮಟ್ಟದ ಯಶಸ್ಸು ತಂದು ಕೊಡುತ್ತದೆ. ಯಾವುದಾದರೂ ಕೆಲಸ ಆರಂಭಿಸಬೇಕು ಎಂದು ಕೊಂಡಿದ್ದಾರೆ ಇಂದು ಉತ್ತಂ ಸಮಯ. ಆದರೆ ಈ ಸಮಯದಲ್ಲಿ, ಕೀಲು ನೋವಿನಂತಹ ಸಮಸ್ಯೆಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ.

( ಸೂಚನೆ : ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News