Daily Horoscope: ದಿನಭವಿಷ್ಯ 28-04-2021 Today astrology

ಶ್ರೀ ಶ್ರೀ ಕ್ಷೇತ್ರ ಮಂದಾರ್ತಿ ಗಣಪತಿ  ಸ್ವಾಮಿ  ಅನುಗ್ರಹದಿಂದ ಇಂದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ...

Written by - Zee Kannada News Desk | Last Updated : Apr 28, 2021, 06:50 AM IST
  • ಸಿಂಹ ರಾಶಿಯವರೇ ಜೀವನದಲ್ಲಿ ಸೋಲು ಗೆಲುವು ಸಾಮಾನ್ಯ. ಕತ್ತಲು ಇದೇ ಎಂದು ಕೊರಗುವುದರಲ್ಲಿ ಅರ್ಥವಿಲ್ಲ
  • ತುಲಾ ರಾಶಿಯವರು ನಿಮ್ಮ ಮನೆ ದೇವರನ್ನು ಗೌರವ ಪೂರ್ವಕವಾಗಿ ನಂಬಿ ಸ್ತುತಿಸಿ
  • ಧನಸ್ಸು ರಾಶಿಯವರಿಗೆ ಅತ್ಯಂತ ನಂಬುಗೆಗೆ ಪಾತ್ರರಾದ ಸ್ನೇಹಿತರು, ಬಂಧುಗಳೇ ನಿಮಗೆ ಹಣಕಾಸಿನ ವಿಷಯದಲ್ಲಿ ಮೋಸ ಮಾಡುವ ಸಾಧ್ಯತೆ ಇರುತ್ತದೆ
Daily Horoscope: ದಿನಭವಿಷ್ಯ 28-04-2021 Today astrology  title=
Daily horoscope (ದಿನಭವಿಷ್ಯ 28-04-2021)

Daily horoscope (ದಿನಭವಿಷ್ಯ 28-04-2021) :  ಶ್ರೀ ಶ್ರೀ ಕ್ಷೇತ್ರ ಮಂದಾರ್ತಿ ಗಣಪತಿ  ಸ್ವಾಮಿ ಅನುಗ್ರಹದಿಂದ ಇಂದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ...

ಮೇಷ ರಾಶಿ: 
ಗಡಿಬಿಡಿಯು ನಿಮ್ಮ ಕೆಲಸದಲ್ಲಿ ಅನಾನುಕೂಲತೆಯನ್ನು ಉಂಟು ಮಾಡುವುದು. ಸಾವಧಾನವಾಗಿ ಚಿಂತಿಸಿ ಕಾರ್ಯ ಪ್ರವೃತ್ತರಾಗುವುದರಿಂದ ಒಳಿತಾಗುವುದು. ದೂರದ ಹಳೆಯ ಗೆಳೆಯನ ಭೇಟಿ ಸಾಧ್ಯತೆ ಇದೆ.
      
ವೃಷಭ ರಾಶಿ: 
ವಾಹನಗಳನ್ನು ಓಡಿಸುವಾಗ ಹೆಚ್ಚಿನ ಕಾಳಜಿ ಇರಲಿ. ನಿರ್ಲಕ್ಷ ವಹಿಸಿದರೆ ತೊಂದರೆಗಳು ಹೆಚ್ಚು. ಮಕ್ಕಳ ವಿದ್ಯಾಭ್ಯಾಸದಲ್ಲಿ ಕೊಂಚ ಹಿನ್ನಡೆ ಕಂಡು ಬರುವುದು. ಗುರುರಾಯರ ಸ್ಮರಿಸಿ ದಿನವನ್ನು ಆರಂಭಿಸಿ.      

ಮಿಥುನ ರಾಶಿ:
ಸದಾ ಪಾದರಸದಂತೆ ಚುರುಕಾಗಿರುವ ನಿಮ್ಮನ್ನು ಕಂಡು ಹಲವರಿಗೆ ಅಚ್ಚರಿ. ನಿಮ್ಮ ಈ ಉತ್ಸಾಹಶೀಲತೆಯನ್ನು ಮೆಚ್ಚಿ ಹಲವರಿಂದ ಪ್ರಶಂಸೆಗೆ ಒಳಗಾಗುವಿರಿ. ವಿವಿಧ ಮೂಲಗಳಿಂದ ಹಣಕಾಸು ಬರುವುದು.      

ಕಟಕ ರಾಶಿ:
ಮನೆಮಂದಿಯನ್ನು ದೇವಾಲಯಗಳಿಗೆ ಕರೆದುಕೊಂಡು ಹೋಗಿ ಬನ್ನಿ. ಈ ದಿನದ ಹೆಚ್ಚಿನ ಸಮಯವನ್ನು ಮನೆಮಂದಿಯ ಸದಸ್ಯರಿಗಾಗಿ ಮೀಸಲಿಡಿ. ಇದರಿಂದ ಮನೆಯ ಸದಸ್ಯರು ಸಂತೋಷವನ್ನು ಹೊಂದುವರು.
    
ಇದನ್ನೂ ಓದಿ -   ಧನಲಾಭವೋ ದಟ್ಟ ದಾರಿದ್ರ್ಯವೋ.? ಮನೆಯಲ್ಲಿನ ಈ ಐದು ಶಕುನ ಹೇಳುತ್ತೆ ನಿಮ್ಮ ಗ್ರಹಗತಿ

ಸಿಂಹ ರಾಶಿ: 
ಜೀವನದಲ್ಲಿ ಸೋಲು ಗೆಲುವು ಸಾಮಾನ್ಯ. ಕತ್ತಲು ಇದೇ ಎಂದು ಕೊರಗುವುದರಲ್ಲಿ ಅರ್ಥವಿಲ್ಲ. ಕತ್ತಲಿನಲ್ಲಿ ನಕ್ಷತ್ರಗಳನ್ನು ಕಾಣುವ ಸುಯೋಗ ನಿಮ್ಮದಾಗುವುದು. ಅಂತೆಯೆ ಬಾಳಿನಲ್ಲಿ ಒಂದು ಹೊಸ ಆಶಾಕಿರಣ ಮೂಡುವುದು.      

ಕನ್ಯಾ ರಾಶಿ: 
ಹಣಕಾಸಿನ ವ್ಯವಹಾರದ ನಿಮ್ಮ ನಿರ್ವಹಣಾ ಸಾಮರ್ಥ್ಯ‌ ನಿಮಗೆ ಗೌರವ ಮತ್ತು ಪ್ರಶಂಸೆಗಳನ್ನು ತಂದುಕೊಡುವುದು. ಸಾಲದ ತೀರುವಳಿಗಾಗಿ ನೀವು ಅಗತ್ಯ ನಿರ್ಧಾರಗಳನ್ನು ಕೈಗೊಳ್ಳುವಿರಿ.   
   
ತುಲಾ ರಾಶಿ:

ನಿಮ್ಮ ಮನೆ ದೇವರನ್ನು ಗೌರವ ಪೂರ್ವಕವಾಗಿ ನಂಬಿ ಸ್ತುತಿಸಿ. ಮನೆಯ ಕಾರ್ಯಗಳಲ್ಲಿ ಹೆಚ್ಚಿನ ಆಸಕ್ತಿ ಕಂಡುಬರಲಿದೆ. ಮಕ್ಕಳ ಉಜ್ವಲ ಭವಿಷ್ಯಕ್ಕೆ ಇಂದೇ ಯೋಜನೆಗಳನ್ನು ರೂಪಿಸುವುದು ಒಳ್ಳೆಯದು. 

ವೃಶ್ಚಿಕ ರಾಶಿ: 
ಒಂದು ಪಕ್ಕಾ ಆದ ದೊಡ್ಡ ವಹಿವಾಟುವೊಂದನ್ನು ನಿಭಾಯಿಸುವ ಜವಾಬ್ದಾರಿ ನಿಮ್ಮದಾಗುವುದು. ದಿನದಿಂದ ದಿನಕ್ಕೆ ನಿಮ್ಮ ಕೀರ್ತಿ ಮುಗಿಲೆತ್ತರಕ್ಕೆ ಏರುವುದು. ಹಾಗಂತ ಅಹಂಕಾರ ಪಡುವುದು ಸೂಕ್ತವಲ್ಲ.      

ಇದನ್ನೂ ಓದಿ - ಸದಾ ಅನಾರೋಗ್ಯ ಕಾಡುತ್ತಿದ್ದರೆ ಮನೆಯ ವಾಸ್ತು ಮೇಲೊಮ್ಮೆ ಗಮನ ಹರಿಸಿ

ಧನಸ್ಸು ರಾಶಿ: 
ಅತ್ಯಂತ ನಂಬುಗೆಗೆ ಪಾತ್ರರಾದ ಸ್ನೇಹಿತರು, ಬಂಧುಗಳೇ ನಿಮಗೆ ಹಣಕಾಸಿನ ವಿಷಯದಲ್ಲಿ ಮೋಸ ಮಾಡುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ಎಚ್ಚರ ವಹಿಸುವುದು ಒಳ್ಳೆಯದು. ನಿಮ್ಮ ಮನೆ ಕುಲದೇವರನ್ನು ಭಜಿಸಿ.      

ಮಕರ ರಾಶಿ: 
ಬೆಳ್ಳಗಿರುವುದೆಲ್ಲಾ ಹಾಲು ಎಂದು ಭ್ರಮಿಸಿ ಮೋಸ ಹೋಗದಿರಿ. ವ್ಯವಹಾರದಲ್ಲಿ ನಿಮ್ಮ ಬುದ್ಧಿಚಾತುರ್ಯವನ್ನು ಪೂರ್ಣವಾಗಿ ಉಪಯೋಗಿಸಿಕೊಳ್ಳಿ. ಕೆಲವೊಮ್ಮೆ ವ್ಯವಹಾರದಲ್ಲಿ ನಿಷ್ಠೂರತೆ ಫಲ ಕೊಡುವುದು.      

ಕುಂಭ ರಾಶಿ: 
ಟೀಕಿಸುವ ಜನರ ಬಗ್ಗೆ ಆತಂಕ ಪಡಬೇಕಾಗಿಲ್ಲ. ಹೊಗಳುವ ಜನರೇ ನಿಮಗೆ ಆತಂಕ ಉಂಟು ಮಾಡುವ ಸಂದರ್ಭವಿರುತ್ತದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.      

ಮೀನ ರಾಶಿ:
ನೀವು ಸಾಮಾಜಿಕವಾಗಿ ನಡೆಸಲಿರುವಂತಹ ಚಟುವಟಿಕೆಗಳಿಂದ ಒತ್ತಡವಿದ್ದರು ಅದು ಸಂತೋಷವನ್ನುಂಟು ಮಾಡುವುದು. ಜ್ಞಾನದ ಸಂವರ್ಧನೆಗಳಿಗಾಗಿ ಪ್ರವಾಸವನ್ನು ಕೈಗೊಳ್ಳುವಿರಿ. ಇದಕ್ಕೆ ಪೂರಕವಾಗಿ ಹಣಕಾಸು ಬರುವುದು.      

ಇದನ್ನೂ ಓದಿ- ಸಮಸ್ಯೆಗಳು ಬೆನ್ನುಬಿಡುತ್ತಿಲ್ಲವೇ? ಹಾಗಿದ್ದರೆ ಈ ಉಪಾಯಗಳನ್ನು ನಿಮ್ಮದಾಗಿಸಿಕೊಳ್ಳಿ

ಪಂಡಿತ್ ದಾಮೋದರ್ ಭಟ್  ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮ ಪ್ರೀತಿ, ಪ್ರೇಮ, ಮದುವೆ, ದಾಂಪತ್ಯ ಕಲಹ, ಹಣಕಾಸು ವ್ಯವಹಾರಗಳು, ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಕರೆ ಮಾಡಿ: 9008993001 Call / WhatsApp

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News