Marriage Problems Solutions : ಮದುವೆ ಸಮಸ್ಯೆಯಿಂದ ಬೇಸತ್ತಿದ್ದೀರಾ? ಹಾಗಿದ್ರೆ ಈ ರತ್ನದ ನೀಲಮಣಿ ಧರಿಸಿ, ಪರಿಹಾರ ಪಡೆಯಿರಿ

ಕೆಲವು ಜನರು ಮದುವೆ ಸಮಯದಲ್ಲಿ ಪದೇ ಪದೇ ತೊಂದರೆಗೆ ಒಳಗಾಗುತ್ತಾರೆ. ಈ ಸಮಸ್ಯೆಯಿಂದ ಕೆಲವೊಮ್ಮೆ ಮದುವೆ ಮುರಿದುಹೋಗುತ್ತದೆ, ಅಲ್ಲದೆ ಬೇರೆ ಯಾವುದಾದರೂ ಕಾರಣದಿಂದ, ನೆಚ್ಚಿನ ಜೀವನ ಸಂಗಾತಿ ಸಿಗುವುದಿಲ್ಲ. ಅಂತವರಿಗೆ ಜ್ಯೋತಿಷ್ಯದಲ್ಲಿ ಕೆಲವು ಪರಿಹಾರಗಳಿವೆ. ಜ್ಯೋತಿಷ್ಯದ ರತ್ನ ಶಾಸ್ತ್ರದಲ್ಲಿ ಉಲ್ಲೇಖಿಸಿರುವ ಪರಿಹಾರದ ಬಗ್ಗೆ ಇಂದು ನಾವು ನಿಮಗೆ ತಿಳಿಸಲಿದ್ದೇವೆ.

Written by - Channabasava A Kashinakunti | Last Updated : Jul 23, 2021, 10:58 AM IST
  • ಕೆಲವು ಜನರು ಮದುವೆ ಸಮಯದಲ್ಲಿ ಪದೇ ಪದೇ ತೊಂದರೆಗೆ ಒಳಗಾಗುತ್ತಾರೆ
  • ಜ್ಯೋತಿಷ್ಯದ ರತ್ನ ಶಾಸ್ತ್ರದಲ್ಲಿ ಉಲ್ಲೇಖಿಸಿರುವ ಪರಿಹಾರ
  • ಗುರು ಗ್ರಹದ ಪ್ರತಿನಿಧಿಯನ್ನು ನೀಲಮಣಿ ಎಂದು ಕರೆಯಲಾಗುತ್ತದೆ
Marriage Problems Solutions : ಮದುವೆ ಸಮಸ್ಯೆಯಿಂದ ಬೇಸತ್ತಿದ್ದೀರಾ? ಹಾಗಿದ್ರೆ ಈ ರತ್ನದ ನೀಲಮಣಿ ಧರಿಸಿ, ಪರಿಹಾರ ಪಡೆಯಿರಿ title=

ನವದೆಹಲಿ : ಕೆಲವು ಜನರು ಮದುವೆ ಸಮಯದಲ್ಲಿ ಪದೇ ಪದೇ ತೊಂದರೆಗೆ ಒಳಗಾಗುತ್ತಾರೆ. ಈ ಸಮಸ್ಯೆಯಿಂದ ಕೆಲವೊಮ್ಮೆ ಮದುವೆ ಮುರಿದುಹೋಗುತ್ತದೆ, ಅಲ್ಲದೆ ಬೇರೆ ಯಾವುದಾದರೂ ಕಾರಣದಿಂದ, ನೆಚ್ಚಿನ ಜೀವನ ಸಂಗಾತಿ ಸಿಗುವುದಿಲ್ಲ. ಅಂತವರಿಗೆ ಜ್ಯೋತಿಷ್ಯದಲ್ಲಿ ಕೆಲವು ಪರಿಹಾರಗಳಿವೆ. ಜ್ಯೋತಿಷ್ಯದ ರತ್ನ ಶಾಸ್ತ್ರದಲ್ಲಿ ಉಲ್ಲೇಖಿಸಿರುವ ಪರಿಹಾರದ ಬಗ್ಗೆ ಇಂದು ನಾವು ನಿಮಗೆ ತಿಳಿಸಲಿದ್ದೇವೆ.

ಈ ಸಮಸ್ಯೆಗಳು ನೀಲಮಣಿಯಿಂದ ಸಂಭವಿಸುತ್ತದೆ :

ಗುರು ಗ್ರಹದ ಪ್ರತಿನಿಧಿಯನ್ನು ನೀಲಮಣಿ(Blue Pukhraj) ಎಂದು ಕರೆಯಲಾಗುತ್ತದೆ. ನೀಲಮಣಿ, ಹಳದಿ, ನೀಲಿ ಮತ್ತು ಬಿಳಿ ಬಣ್ಣದಲ್ಲಿದೆ. ಗುರು ಗ್ರಹವನ್ನು ಬಲಪಡಿಸಲು ಸಾಮಾನ್ಯವಾಗಿ ಹಳದಿ ನೀಲಮಣಿ ಧರಿಸಲು ಸೂಚಿಸಲಾಗುತ್ತದೆ, ಇದು ಬಹಳ ಪರಿಣಾಮಕಾರಿ. ಆದರೆ ನೀಲಿ ನೀಲಮಣಿ ಅಂದರೆ ನೀಲಮಣಿ ರತ್ನದ ಕಲ್ಲು ಕೂಡ ಬಹಳ ಪರಿಣಾಮಕಾರಿ ಎಂದು ಹೇಳಲಾಗುತ್ತದೆ. ನೀಲಮಣಿ ವಿಶೇಷವಾಗಿ ನಿಮ್ಮ ಪ್ರೀತಿಯನ್ನು ಪಡೆಯಲು ಮತ್ತು ಮದುವೆಯಲ್ಲಿನ ತೊಂದರೆಗಳನ್ನು ನಿವಾರಿಸಲು ಅದ್ಭುತ ಫಲಿತಾಂಶಗಳನ್ನು ನೀಡುತ್ತದೆ. ಇದಲ್ಲದೆ, ನೀಲಮಣಿ ಧರಿಸುವುದರಿಂದ ಅನೇಕ ಪ್ರಯೋಜನಗಳಿವೆ. ಇತರ ರತ್ನದ ಹವಳಗಳನ್ನ ಧರಿಸುವ ಮುನ್ನ ತಜ್ಞರನ್ನು ಸಂಪರ್ಕಿಸಿದಂತೆ ಈ ರತ್ನದ ಕಲ್ಲುಗಳನ್ನು ಧರಿಸುವ ಮುನ್ನ ಸಹ ಸಂಪರ್ಕಿಸಿ.

ಇದನ್ನೂ ಓದಿ : Daily Horoscope: ದಿನಭವಿಷ್ಯ 23-07-2021 Today astrology

ನೀಲಮಣಿ ಧರಿಸುವುದು ಪ್ರೀತಿಯಲ್ಲಿ ಯಶಸ್ಸು ಕಾಣಬಹುದು. ಇಷ್ಟಪಟ್ಟ ಸಂಗಾತಿಯನ್ನು ಮದುವೆ(Marriage)ಯಾಗುವುದರಲ್ಲಿ ಬರುವ ಸಮಸ್ಯೆಗಳನ್ನು ದೂರ ಮಾಡುತ್ತದೆ.

- ಮದುವೆ ಮುರಿದು ಹೋಗುತ್ತಿದ್ದರೆ ಅಥವಾ ಮದುವೆಯನ್ನು ಸರಿಪಡಿಸಲು ಅಡೆತಡೆಗಳು ಇದ್ದಲ್ಲಿ, ಈ ರತ್ನವನ್ನು ಧರಿಸುವುದರಿಂದ ಶೀಘ್ರದಲ್ಲೇ ಪರಿಹಾರ ಕಾಣಬಹುದು. 

- ನೀಲಮಣಿ ಆರೋಗ್ಯ(Health)ಕ್ಕೂ ಒಳ್ಳೆಯದು. ಇದು ಮನಸ್ಸನ್ನು ಶಾಂತವಾಗಿರಿಸುತ್ತದೆ. ಉದ್ದೇಶಪೂರ್ವಕ ಭಯಕ್ಕೆ  ಪರಿಹಾರವನ್ನು ನೀಡುತ್ತದೆ. ಹೆಚ್ಚು ಕೋಪಗೊಳ್ಳುವ ಅಥವಾ ಆಗಾಗ ವಿವಾದಗಳಿಗೆ ಒಳಗಾಗುವರು. ಈ ರತ್ನದ ಕಲ್ಲನ್ನು ಧರಿಸುವುದರಿಂದ ಪ್ರಯೋಜನ ಪಡೆಯಬಹುದು.

ಇದನ್ನೂ ಓದಿ : ಮೃತ್ಯುವಿನ ನಂತರ ಪಿಂಡ ಪ್ರದಾನ ಮಾಡುವ ಹಿಂದಿನ ಕಾರಣ ತಿಳಿದಿದೆಯಾ ?

- ನೀಲಮಣಿ ಧರಿಸುವುದು ಪ್ರಗತಿಯ ಹೊಸ ಬಾಗಿಲು ತೆರೆಯುತ್ತದೆ. ವೃತ್ತಿಜೀವನ(Professional Life)ದಲ್ಲಿ ಎತ್ತರಕ್ಕೆ ಬೆಳೆಯಬಹುದು.

- ನೀಲಮಣಿ ನಿದ್ರೆಯ ತೊಂದರೆಗಳು, ಆಲಸ್ಯ, ಸೋಮಾರಿತನವನ್ನು ತೊಡೆದುಹಾಕಲು ಮತ್ತು  ವ್ಯಕ್ತಿಗೆ ಶಕ್ತಿಯನ್ನ ನೀಡುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News