Vastu Plant Tips: ಮನೆಯ ಈ ಭಾಗದಲ್ಲಿ ಇದೊಂದು ಗಿಡವನ್ನು ನೆಟ್ಟರೆ ಸಾಕು ಜಾತಕದಲ್ಲಿನ ದೋಷಗಳು ಶೀಘ್ರವೇ ಪರಿಹಾರವಾಗುತ್ತೆ

Kaner Plant: ದೇವಾನುದೇವತೆಗಳ ಆಶೀರ್ವಾದ ಪಡೆಯಲು ಅವುಗಳಿಗೆ ಸಂಬಂಧಿಸಿದ ಮರವನ್ನು ಪೂಜಿಸಿದರೆ ಶೀಘ್ರದಲ್ಲಿಯೇ ದೇವರ ಕೃಪೆ ಲಭಿಸುತ್ತದೆ ಎಂದು ಹೇಳಲಾಗುತ್ತದೆ. ವಾಸ್ತು ಮತ್ತು ಗ್ರಹ ದೋಷಗಳನ್ನು ತೊಡೆದುಹಾಕಲು, ಮನೆಯಲ್ಲಿ ಕನೇರ್ ಗಿಡವನ್ನು ನೆಡಲು ಸಲಹೆ ನೀಡಲಾಗುತ್ತದೆ. ಈ ಮರದ ಎಲ್ಲಾ ಭಾಗಗಳಲ್ಲಿ ಹಾಲಿನ ರಸವು ಕಂಡುಬರುತ್ತದೆ. ಪ್ರಾಣಿ ಪಕ್ಷಿಗಳು ಇದರ ಎಲೆಗಳನ್ನು ತಿನ್ನುವುದಿಲ್ಲ.

Written by - Bhavishya Shetty | Last Updated : Dec 22, 2022, 05:05 PM IST
    • ಕಣಗಿಲೆ ಗಿಡ ಮನೆಯಲ್ಲಿದ್ದರೆ ಜಾತಕದಲ್ಲಿರುವ ಅಶುಭ ಗ್ರಹಗಳ ಪ್ರಭಾವ ದೂರವಾಗುತ್ತದೆ
    • ಜೀವನದಲ್ಲಿನ ಹಲವಾರು ಸಮಸ್ಯೆಗಳಿಂದ ಮುಕ್ತಿಯನ್ನು ಪಡೆಯಲು ಸಾಧ್ಯ
    • ವಾಸ್ತು ಮತ್ತು ಗ್ರಹ ದೋಷಗಳನ್ನು ತೊಡೆದುಹಾಕಲು ಕನೇರ್ ಗಿಡವನ್ನು ನೆಡಲು ಸಲಹೆ ನೀಡಲಾಗುತ್ತದೆ
Vastu Plant Tips: ಮನೆಯ ಈ ಭಾಗದಲ್ಲಿ ಇದೊಂದು ಗಿಡವನ್ನು ನೆಟ್ಟರೆ ಸಾಕು ಜಾತಕದಲ್ಲಿನ ದೋಷಗಳು ಶೀಘ್ರವೇ ಪರಿಹಾರವಾಗುತ್ತೆ title=
Kaner plant

Kaner Plant: ವಾಸ್ತು ಶಾಸ್ತ್ರದಲ್ಲಿ ಮರಗಳು ಮತ್ತು ಸಸ್ಯಗಳಿಗೆ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಅದರಲ್ಲೂ ಅವುಗಳನ್ನು ಸರಿಯಾದ ದಿಕ್ಕಿನಲ್ಲಿ ನೆಡಬೇಕು ಎಂದು ಹೇಳಲಾಗುತ್ತದೆ. ಇಲ್ಲೊಂದು ಗಿಡದ ಬಗ್ಗೆ ನಾವು ನಿಮಗೆ ಮಾಹಿತಿಯನ್ನು ನೀಡಲಿದ್ದೇವೆ. ಈ ಗಿಡದ ಮಹತ್ವದ ಬಗ್ಗೆ ಶ್ರೀಕೃಷ್ಣನೇ ಭಗವದ್ಗೀತೆಯಲ್ಲಿ ಸಾರಿದ್ದಾರೆ. ಈ ಗಿಡವನ್ನು ನೆಡುವುದರಿಂದ ಮನುಷ್ಯ ಜೀವನದಲ್ಲಿನ ಹಲವಾರು ಸಮಸ್ಯೆಗಳಿಂದ ಮುಕ್ತಿಯನ್ನು ಪಡೆಯಲು ಸಾಧ್ಯ. ಆ ಗಿಡದ ಹೆಸರು ಕನೇರ್ ಅಥವಾ ಕಣಗಿಲೆ. ಈ ಗಿಡ ಮನೆಯಲ್ಲಿದ್ದರೆ ಜಾತಕದಲ್ಲಿರುವ ಅಶುಭ ಗ್ರಹಗಳ ಪ್ರಭಾವ ದೂರವಾಗುತ್ತದೆ.

ಇದನ್ನೂ ಓದಿ: ಪ್ರೀತಿಯ ವಿಷಯದಲ್ಲಿ ಮಹಾ ಅದೃಷ್ಟವಂತರು ಈ ಅಕ್ಷರದ ಹೆಸರಿನವರು

ಹಿಂದೂ ಧರ್ಮದಲ್ಲಿ, ಕೆಲವು ವಿಶೇಷ ದಿನಾಂಕ, ಉಪವಾಸ ಇತ್ಯಾದಿಗಳಲ್ಲಿ ಮರಗಳು ಮತ್ತು ಸಸ್ಯಗಳ ಪೂಜೆಗೆ ವಿಶೇಷ ಪ್ರಾಮುಖ್ಯತೆಯನ್ನು ನೀಡಲಾಗಿದೆ.

ದೇವಾನುದೇವತೆಗಳ ಆಶೀರ್ವಾದ ಪಡೆಯಲು ಅವುಗಳಿಗೆ ಸಂಬಂಧಿಸಿದ ಮರವನ್ನು ಪೂಜಿಸಿದರೆ ಶೀಘ್ರದಲ್ಲಿಯೇ ದೇವರ ಕೃಪೆ ಲಭಿಸುತ್ತದೆ ಎಂದು ಹೇಳಲಾಗುತ್ತದೆ. ವಾಸ್ತು ಮತ್ತು ಗ್ರಹ ದೋಷಗಳನ್ನು ತೊಡೆದುಹಾಕಲು, ಮನೆಯಲ್ಲಿ ಕನೇರ್ ಗಿಡವನ್ನು ನೆಡಲು ಸಲಹೆ ನೀಡಲಾಗುತ್ತದೆ. ಈ ಮರದ ಎಲ್ಲಾ ಭಾಗಗಳಲ್ಲಿ ಹಾಲಿನ ರಸವು ಕಂಡುಬರುತ್ತದೆ. ಪ್ರಾಣಿ ಪಕ್ಷಿಗಳು ಇದರ ಎಲೆಗಳನ್ನು ತಿನ್ನುವುದಿಲ್ಲ. ಈ ಗುಣದಿಂದಾಗಿಯೇ ಜನರಿಗೆ ತುಂಬಾ ಅನುಕೂಲವಾಗಿದೆ.

ಕನೇರ್ ಮರದ ಪರಿಹಾರಗಳು:

ಕನೇರ್ ಅಥವಾ ಕಣಗಿಲೆ ಮರವನ್ನು ಅನೇಕ ರೋಗಗಳನ್ನು ಗುಣಪಡಿಸಲು ಸಹ ಬಳಸಲಾಗುತ್ತದೆ. ಚರ್ಮ ರೋಗಗಳಿಂದ ಮುಕ್ತಿ ಹೊಂದಲು ಇದರ ಎಲೆಗಳನ್ನು ನೀರಿನಲ್ಲಿ ಕುದಿಸಿ ಸ್ನಾನ ಮಾಡಿದರೆ ಒಳ್ಳೆಯದು ಎಂದು ಹೇಳಲಾಗುತ್ತದೆ.

ಮತ್ತೊಂದೆಡೆ, ಒಬ್ಬ ವ್ಯಕ್ತಿಯು ಕುಷ್ಠರೋಗದಿಂದ ಬಳಲುತ್ತಿದ್ದರೆ ಇದರ ತಾಜಾ ಬೇರನ್ನು ಸಾಸಿವೆ ಎಣ್ಣೆಯಲ್ಲಿ ಕುದಿಸಿ, ಅದನ್ನು ಫಿಲ್ಟರ್ ಮಾಡಿ ಮತ್ತು ತಂಪಾಗಿಸಿದ ನಂತರ, ಕುಷ್ಠರೋಗದ ಗಾಯಗಳ ಮೇಲೆ ಲೇಪಿಸುವುದು ಪ್ರಯೋಜನಕಾರಿಯಾಗಿದೆ.

ವಾಸ್ತು ಶಾಸ್ತ್ರದ ಪ್ರಕಾರ, ಗುರುವಾರ ಬೆಳಿಗ್ಗೆ ಸೂರ್ಯೋದಯಕ್ಕೆ ಮುಂಚಿತವಾಗಿ ಪುಷ್ಯ ನಕ್ಷತ್ರದಲ್ಲಿ ಕೆಂಪು ಕನೇರ್ ಕೊಂಬೆಯನ್ನು ಮುರಿಯಿರಿ. ಅದನ್ನು ಒಣಗಿಸಿದ ನಂತರ ಅದರ ಏಳು ತುಂಡುಗಳನ್ನಾಗಿ ಮಾಡಿ. ಅದರ ಮೇಲೆ ಕಪ್ಪು ಶಾಯಿಯಿಂದ ಶತ್ರುಗಳ ಹೆಸರನ್ನು ಬರೆಯಿರಿ. ಇದರ ನಂತರ ಅದನ್ನು ಕರ್ಪೂರದಿಂದ ಸುಡಬೇಕು. ಹೀಗೆ ಮಾಡಿದರೆ ಶತ್ರು ನಾಶವಾಗುತ್ತದೆ.

ಕನೇರ್‌ ಗಿಡಕ್ಕೆ ದಿನವೂ ನೀರು ಅರ್ಪಿಸುವುದರಿಂದ ಮಂಗಳದೋಷ ದೂರವಾಗುತ್ತದೆ. ಇನ್ನು ಮನೆಯಲ್ಲಿ ಕನೇರ್ ಗಿಡ ನೆಟ್ಟರೆ ಶುಭ ಫಲ ಸಿಗುತ್ತದೆ ಎಂದು ಹೇಳಲಾಗುತ್ತದೆ. ಇದನ್ನು ಮನೆಯ ಪಶ್ಚಿಮ ಅಥವಾ ವಾಯುವ್ಯ ಮೂಲೆಯಲ್ಲಿ ನೆಡಬೇಕು.

ಅಶ್ವಿನಿ ಮತ್ತು ಅನುರಾಧಾ ನಕ್ಷತ್ರದಲ್ಲಿ ಜನಿಸಿದ ಮಕ್ಕಳಿಗೆ ಕನೇರ್ ಗಿಡವನ್ನು ಮುಟ್ಟಿದರೆ ಮಾತ್ರ ಲಾಭವಾಗುತ್ತದೆ ಎನ್ನುತ್ತಾರೆ ವಾಸ್ತು ತಜ್ಞರು. ಇದರ ಜೊತೆಗೆ ಜಾತಕದಲ್ಲಿ ಮಂಗಳದೋಷದ ಪರಿಣಾಮಗಳನ್ನು ತಪ್ಪಿಸಲು ಮಂಗಳವಾರದಂದು ಸ್ನಾನದ ನೀರಿನಲ್ಲಿ ಕನೇರ್ ಹೂವು ಮತ್ತು ಎಲೆಗಳು, ಬಿಲ್ವದ ತೊಗಟೆ, ರಕ್ತ ಚಂದನ, ಮಲ್ಕಾಂಗ್ನಿ ಹೂವುಗಳು ಇತ್ಯಾದಿಗಳನ್ನು ಸೇರಿಸಿ ಸ್ನಾನ ಮಾಡಿ. ಶೀಘ್ರದಲ್ಲಿಯೇ ಅನುಕೂಲವಾಗಲಿದೆ.

ಇದನ್ನೂ ಓದಿ: Palmistry In Kannada: ನಿಮ್ಮ ಅಂಗೈಯನ್ನು ನೀವೇ ನೋಡಿ ನಿಮ್ಮ ಭವಿಷ್ಯ ತಿಳಿದುಕೊಳ್ಳಿ, ಇಲ್ಲಿದೆ ಟ್ರಿಕ್

ಮನೆಯಲ್ಲಿ ಕನೇರ್ ಗಿಡವನ್ನು ನೆಟ್ಟರೆ ನಕಾರಾತ್ಮಕ ಶಕ್ತಿ ನಾಶವಾಗುತ್ತದೆ ಮತ್ತು ಧನಾತ್ಮಕ ಶಕ್ತಿಯ ಸಂವಹನ ಹೆಚ್ಚುತ್ತದೆ.

(ಸೂಚನೆ: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News