ಲಕ್ಷ್ಮೀ ಮತ್ತು ಕುಬೇರ ದೇವನ ಆಶೀರ್ವಾದಕ್ಕಾಗಿ ಈ ಐದು ವಸ್ತುಗಳನ್ನು ಮನೆಗೆ ತನ್ನಿ

ಲಕ್ಷ್ಮೀ ದೇವಿ ಮತ್ತು ಕುಬೇರ ದೇವನನ್ನು ಓಲೈಸಲು ಯಾವ ಕ್ರಮಗಳನ್ನು ಅನುಸರಿಸಬೇಕು ಎನ್ನುವುದನ್ನು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಇದರ ಪ್ರಕಾರ, ಮನೆಯಲ್ಲಿ ಕೆಲವು ವಸ್ತುಗಳನ್ನು ಇಡಬೇಕು

Written by - Ranjitha R K | Last Updated : Jul 14, 2023, 02:08 PM IST
  • ವಾಸ್ತು ಶಾಸ್ತ್ರದ ನಿಯಮಗಳನ್ನು ಪಾಲಿಸುವುದರಿಂದ ಕುಟುಂಬದಲ್ಲಿ ಸಂತೋಷ, ಸಮೃದ್ಧಿ ನೆಲೆ
  • ಲಕ್ಷ್ಮೀ ದೇವಿ ಮತ್ತು ಕುಬೇರ ದೇವನ ಆಶೀರ್ವಾದ ಪಡೆಯಲು ಈ ವಸ್ತುಗಳನ್ನು ಮನೆಗೆ ತನ್ನಿ
  • ಮನೆಯ ಅಭಿವೃದ್ದಿ ಮತ್ತು ಶ್ರೇಯಸ್ಸಿಗಾಗಿ ವಾಸ್ತು ಸಲಹೆ
ಲಕ್ಷ್ಮೀ ಮತ್ತು ಕುಬೇರ ದೇವನ ಆಶೀರ್ವಾದಕ್ಕಾಗಿ ಈ ಐದು ವಸ್ತುಗಳನ್ನು ಮನೆಗೆ ತನ್ನಿ  title=

ಬೆಂಗಳೂರು : ಮನೆಯಲ್ಲಿ ವಾಸ್ತು ಶಾಸ್ತ್ರದ ನಿಯಮಗಳನ್ನು ಪಾಲಿಸುವುದರಿಂದ ಕುಟುಂಬದಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಯಾಗುತ್ತದೆ. ಹಣಕಾಸಿನ ಲಾಭವಾಗುತ್ತದೆ. ಈ ಹಿನ್ನೆಲೆಯಲ್ಲಿ ಮನೆಯಲ್ಲಿ ವಾಸ್ತು ನಿಯಮಗಳನ್ನು ಪಾಲಿಸುವುದು ಅವಶ್ಯಕ. ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ, ಲಕ್ಷ್ಮೀ ದೇವಿ  ಮತ್ತು ಕುಬೇರ ದೇವನ ಕೃಪೆ ಯಾರ ಮೇಲಿರುತ್ತದೆಯೋ ಆ ವ್ಯಕ್ತಿ ಶ್ರೀಮಂತನಾಗುವುದನ್ನು  ಯಾರೂ ತಡೆಯುವುದು ಸಾಧ್ಯವಾಗುವುದಿಲ್ಲ. ಅಂಥವರ ಜೀವನದಲ್ಲಿ  ಹಣದ ಕೊರತೆ ಎದುರಾಗುವುದಿಲ್ಲ. ಲಕ್ಷ್ಮೀ ದೇವಿ ಮತ್ತು ಕುಬೇರ ದೇವನನ್ನು ಓಲೈಸಲು ಯಾವ ಕ್ರಮಗಳನ್ನು ಅನುಸರಿಸಬೇಕು ಎನ್ನುವುದನ್ನು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಇದರ ಪ್ರಕಾರ, ಮನೆಯಲ್ಲಿ ಕೆಲವು ವಸ್ತುಗಳನ್ನು ಇಡಬೇಕು. ಈ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಂಡರೆ ಸಂತೋಷ ಮತ್ತು ಸಮೃದ್ಧಿಯ ಬಾಗಿಲು ತೆರೆಯುತ್ತದೆ. 

ಗಣೇಶ-ಲಕ್ಷ್ಮಿ-ಕುಬೇರನ ವಿಗ್ರಹ : 
ಮನೆಯಲ್ಲಿ ಹಣದ ಹರಿವನ್ನು ಹೆಚ್ಚಿಸಲು, ಲಕ್ಷ್ಮೀ ಕುಬೇರ ಮತ್ತು ಗಣೇಶನ ಮೂರ್ತಿಗಳನ್ನು ದೇವರ ಕೋಣೆಯಲ್ಲಿ ಇಡಬೇಕು. ಈ ಮೂರು ದೇವರುಗಳನ್ನು ಪ್ರತಿನಿತ್ಯ ಸರಿಯಾದ ವಿಧಿವಿಧಾನಗಳೊಂದಿಗೆ ಪೂಜಿಸಬೇಕು. ಹೀಗೆ ಮಾಡುವುದರಿಂದ ಕುಟುಂಬದಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚುತ್ತದೆ.  

ಇದನ್ನೂ ಓದಿ : ಮನೆಯ ಮುಖ್ಯ ದ್ವಾರಕ್ಕೆ ಈ ಸಸ್ಯದ ಬೇರನ್ನು ನೇತು ಹಾಕಿದರೆ ಒಲಿದು ಬರುವಳು ಭಾಗ್ಯ ಲಕ್ಷ್ಮೀ

ಕಲಶ : 
ಧಾರ್ಮಿಕ ನಂಬಿಕೆಗಳ ಪ್ರಕಾರ, ಸಂಪತ್ತು ಮತ್ತು ಸಮೃದ್ಧಿಯನ್ನು ಪಡೆಯಲು, ಅಷ್ಟದಳ ಕಮಲದ ಮಂಗಲ ಕಲಶವನ್ನು ಸ್ಥಾಪಿಸಿ  ಮನೆಯ ಈಶಾನ್ಯ ಮೂಲೆಯಲ್ಲಿ ಇಡಬೇಕು. ಆ ಕಲಶದಲ್ಲಿ ನೀರು ತುಂಬಿಸಿ ತಾಮ್ರದ ನಾಣ್ಯವನ್ನು ಹಾಕಿ. ಇದರ ನಂತರ ತೆಂಗಿನ  ಗರಿಗಳನ್ನು ಹಾಕಿ ತೆಂಗಿನಕಾಯಿಯನ್ನು ಇಡಬೇಕು. 

ಕವಡೆ : 
 ಲಕ್ಷ್ಮೀ ದೇವಿಯ ಆಶೀರ್ವಾದ ಪಡೆಯಲು ಬಿಳಿ ಕವಡೆಯನ್ನು ಅರಿಶಿನ ಅಥವಾ ಕುಂಕುಮದಲ್ಲಿ ನೆನೆಸಿ ಒಣಗಿಸಿ. ಇದಾದ ನಂತರ ಆ ಕವಡೆಗಳು ಹಳದಿ ಬಣ್ಣಕ್ಕೆ ತಿರುಗಿದಾಗ ಕೆಂಪು ಬಟ್ಟೆಯಲ್ಲಿ ಕಟ್ಟಿ ಮನೆಯ ಕಮಾನಿನಲ್ಲಿ ಇಡಿ. ಹಳದಿ ಕವಡೆಯು ಲಕ್ಷ್ಮೀ ದೇವಿಯ ಸಂಕೇತವಾಗಿದೆ. ಹೀಗೆ ಮನೆಯಲ್ಲಿ ಕವಡೆಗಳನ್ನು ಇಟ್ಟುಕೊಳ್ಳುವುದರಿಂದ ಹಣದ ಹರಿವು ಹೆಚ್ಚಾಗುತ್ತದೆ.  

ನಾಣ್ಯಗಳು :
ಲಕ್ಷ್ಮೀ ಮತ್ತು ಕುಬೇರ ದೇವನ ಆಶೀರ್ವಾದ ಪಡೆಯಲು ಮನೆಯ ತಿಜೋರಿಯಲ್ಲಿ ಅಥವಾ ಪರ್ಸ್ ನಲ್ಲಿ 3 ನಾಣ್ಯಗಳನ್ನು  ಇರಿಸಿ. ಈ ನಾಣ್ಯಗಳನ್ನು ಕೆಂಪು ದಾರದಿಂದ ಕಟ್ಟಿ ಮನೆಯ ದೇವರ ಮನೆಯಲ್ಲಿ ನೇತು ಹಾಕಲೂ ಬಹುದು. ಈ ರೀತಿ ಮಾಡುವುದರಿಂದ ಅದೃಷ್ಟ ಒಲಿಡು ಬರುತ್ತದೆ.  ಮಾತ್ರವಲ್ಲ ಅನೇಕ ರೀತಿಯ ಸಮಸ್ಯೆಗಳು ದೂರವಾಗುತ್ತವೆ. 

ಇದನ್ನೂ ಓದಿ :  ಶುಕ್ರವಾರ ತಪ್ಪದೇ ಈ ಕೆಲಸಮಾಡಿ..! ಲಕ್ಷ್ಮೀ ಒಲುಮೆ, ಸಂಪತ್ತು ವೃದ್ದಿ ಖಂಡಿತ

ಮೀನಿನ ಪ್ರತಿಮೆ  :
ವಾಸ್ತು ಶಾಸ್ತ್ರದ ಪ್ರಕಾರ ಸಂತೋಷ, ಸಮೃದ್ಧಿ, ಸಂಪತ್ತು ಮತ್ತು ಉತ್ತಮ ಆರೋಗ್ಯಕ್ಕಾಗಿ, ಮೀನಿನ ಬೆಳ್ಳಿಯ ಪ್ರತಿಮೆಯನ್ನು ಮನೆಯಲ್ಲಿ ಇಡಬಹುದು. ಈ ರೀತಿಯ ಪ್ರತಿಮೆಯು ಮನೆಯಲ್ಲಿ ಶಾಂತಿ ಮತ್ತು ಸಮೃದ್ಧಿಗೆ ದಾರಿ ಮಾಡಿಕೊಡುತ್ತದೆ. ಗೋಡೆಯ ಮೇಲೆ ಮೀನಿನ  ವರ್ಣಚಿತ್ರವನ್ನು ಸಹ  ಹಾಕಬಹುದು. 

(  ಸೂಚನೆ : ಇಲ್ಲಿ ನೀಡಲಾದ ಲೇಖನವು  ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News