Tulsi Puja Niyam: ನಿಯಮಿತ ತುಳಸಿ ಪೂಜೆಯಿಂದ ಸಿಗುತ್ತೆ ಲಕ್ಷ್ಮೀ ದೇವಿ ಆಶೀರ್ವಾದ, ಆದರೆ ಈ ನಿಯಮಗಳನ್ನು ನಿರ್ಲಕ್ಷಿಸಬೇಡಿ

Tulsi Puja Rules: ಹಿಂದೂ ಧರ್ಮದಲ್ಲಿ ತುಳಸಿಗೆ ಪವಿತ್ರ ಸ್ಥಾನವಿದೆ. ತುಳಸಿಯಲ್ಲಿ ಲಕ್ಷ್ಮಿ ದೇವಿ ನೆಲೆಸಿದ್ದಾಳೆ ಎಂದು ನಂಬಲಾಗಿದೆ. ತುಳಸಿ ಗಿಡವನ್ನು ಮನೆಯಲ್ಲಿ ನೆಟ್ಟು ನಿತ್ಯ ಪೂಜಿಸುವುದರಿಂದ ಜೀವನದಲ್ಲಿ ಸುಖ, ಸಮೃದ್ಧಿ, ಶಾಂತಿ ನೆಲೆಸುತ್ತದೆ.

Written by - Yashaswini V | Last Updated : May 14, 2022, 06:25 AM IST
  • ಮನೆಯಲ್ಲಿ ನೆಟ್ಟ ತುಳಸಿ ಗಿಡವು ಧನಾತ್ಮಕ ಶಕ್ತಿಯನ್ನು ರವಾನಿಸುತ್ತದೆ.
  • ಆದರೆ ತುಳಸಿ ಗಿಡದ ಪೂಜೆಯ ಸಮಯದಲ್ಲಿ ಮಾಡುವ ತಪ್ಪುಗಳಿಂದ ನೀವು ವ್ಯತಿರಿಕ್ತ ಫಲಿತಾಂಶಗಳನ್ನು ಎದುರಿಸಬೇಕಾಗಬಹುದು.
  • ತುಳಸಿ ಪೂಜೆಯ ಸಮಯದಲ್ಲಿ ಯಾವ ವಿಷಯಗಳನ್ನು ನೆನಪಿನಲ್ಲಿಡುವುದು ಬಹಳ ಮುಖ್ಯ ಎಂದು ತಿಳಿಯೋಣ
Tulsi Puja Niyam: ನಿಯಮಿತ ತುಳಸಿ ಪೂಜೆಯಿಂದ ಸಿಗುತ್ತೆ ಲಕ್ಷ್ಮೀ ದೇವಿ ಆಶೀರ್ವಾದ, ಆದರೆ ಈ ನಿಯಮಗಳನ್ನು ನಿರ್ಲಕ್ಷಿಸಬೇಡಿ title=
Tulsi puja niyam

ತುಳಸಿ ಪೂಜೆ:  ಹಿಂದೂ ಧರ್ಮದಲ್ಲಿ, ಹಲವು ಗಿಡ-ಮರಗಳಲ್ಲಿ ದೇವರು ಮತ್ತು ದೇವತೆಗಳು ವಾಸಿಸುತ್ತಾರೆ ಎಂದು ನಂಬಲಾಗಿದೆ. ಇವುಗಳಲ್ಲಿ ತುಳಸಿ ಗಿಡವೂ ಒಂದು. ತುಳಸಿ ಗಿಡಕ್ಕೆ ಪೂಜೆಯ ಸ್ಥಾನ ಸಿಕ್ಕಿದೆ. ನಿಯಮಿತವಾದ ತುಳಸಿ ಪೂಜೆಯಿಂದ ಲಕ್ಷ್ಮಿ ದೇವಿಯ ಆಶೀರ್ವಾದವು ಪ್ರಾಪ್ತಿಯಾಗುತ್ತದೆ ಮತ್ತು ಅಂತಹ ಮನೆಯಲ್ಲಿ ಸುಖ- ಸಂತೋಷ, ಸಮೃದ್ಧಿ ಮತ್ತು ಶಾಂತಿ ಇರುತ್ತದೆ ಎಂದು ನಂಬಲಾಗಿದೆ. ವಿಷ್ಣು ದೇವರಿಗೂ ತುಳಸಿ ತುಂಬಾ ಪ್ರಿಯ. ತುಳಸಿ ಗಿಡವಿರುವ ಮನೆಯಲ್ಲಿ ತಾಯಿ ಲಕ್ಷ್ಮಿ ನೆಲೆಸುತ್ತಾಳೆ ಮತ್ತು ಆಕೆಯನ್ನು ನಿತ್ಯವೂ ವಿಧಿ ವಿಧಾನಗಳ ಪ್ರಕಾರ ಪೂಜಿಸುವ ಮನೆಯಲ್ಲಿ ಸಂಪತ್ತಿಗೆ ಕೊರತೆ ಆಗುವುದಿಲ್ಲ ಎಂದು ಹೇಳಲಾಗುತ್ತದೆ.

ಮನೆಯಲ್ಲಿ ನೆಟ್ಟ ತುಳಸಿ ಗಿಡವು ಧನಾತ್ಮಕ ಶಕ್ತಿಯನ್ನು ರವಾನಿಸುತ್ತದೆ. ಆದರೆ ತುಳಸಿ ಗಿಡದ ಪೂಜೆಯ ಸಮಯದಲ್ಲಿ ಮಾಡುವ ತಪ್ಪುಗಳಿಂದ ನೀವು ವ್ಯತಿರಿಕ್ತ ಫಲಿತಾಂಶಗಳನ್ನು ಎದುರಿಸಬೇಕಾಗಬಹುದು. ತುಳಸಿ ಪೂಜೆಯ ಸಮಯದಲ್ಲಿ ಯಾವ ವಿಷಯಗಳನ್ನು ನೆನಪಿನಲ್ಲಿಡುವುದು ಬಹಳ ಮುಖ್ಯ ಎಂದು ತಿಳಿಯೋಣ. 

ಇದನ್ನೂ  ಓದಿ- ಶನಿಯ ಕುಂಭ ರಾಶಿ ಪ್ರವೇಶದೊಂದಿಗೆ ರೂಪುಗೊಂಡಿದೆ ಪಂಚ ಮಹಾಪುರುಷ ಯೋಗ, ಈ ಎರಡು ರಾಶಿಯವರ ಮೇಲೆ ಬೀರಲಿದೆ ಪ್ರಭಾವ

ತುಳಸಿ ಪೂಜೆ ಮಾಡುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ:- 
ತುಳಸಿ ಗಿಡಕ್ಕೆ ನಿತ್ಯವೂ ನೀರು ಮತ್ತು ಪೂಜೆ ಸಲ್ಲಿಸುವುದು ಶ್ರೇಯಸ್ಕರ ಎಂದು ನಂಬಲಾಗಿದೆ. ಆದರೆ ಶಾಸ್ತ್ರಗಳಲ್ಲಿ ಭಾನುವಾರ ಮತ್ತು ಏಕಾದಶಿಯಂದು ತುಳಸಿ ಗಿಡಕ್ಕೆ ನೀರು ಹಾಕುವುದನ್ನು ನಿಷೇಧಿಸಲಾಗಿದೆ. ಈ ದಿನ ಸಂಜೆ ತುಳಸಿ ಬಳಿ ದೀಪ ಹಚ್ಚಬೇಡಿ. ಅಲ್ಲದೆ, ಸೂರ್ಯಗ್ರಹಣ ಮತ್ತು ಚಂದ್ರಗ್ರಹಣದ ದಿನವೂ ತುಳಸಿ ಗಿಡಕ್ಕೆ ನೀರು ನೀಡುವುದನ್ನು ನಿಷೇಧಿಸಲಾಗಿದೆ. 

ತುಳಸಿ ಎಲೆಗಳು ಎಂದಿಗೂ ಹಾಳಾಗುವುದಿಲ್ಲ ಅಥವಾ ಹಳೆಯದಾಗುವುದಿಲ್ಲ, ಆದ್ದರಿಂದ ಅದರ ಎಲೆಗಳನ್ನು ಎಸೆಯಬಾರದು. ಇದನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಬದಲಿಗೆ ಈ ಎಲೆಗಳನ್ನು ಪೂಜೆಯಲ್ಲಿಯೂ ಬಳಸಬಹುದು.  

ಭೋಗ್‌ನಲ್ಲಿ ಬಳಸಲು ತುಳಸಿ ಎಲೆಗಳನ್ನು ಎಂದಿಗೂ ಕೀಳಬಾರದು ಎಂಬ ಧಾರ್ಮಿಕ ನಂಬಿಕೆ ಇದೆ. ಹಾಗೆ ಮಾಡುವುದರಿಂದ ವ್ಯಕ್ತಿಯ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ.

ಇದನ್ನೂ  ಓದಿ- Shani Grah Upay: ಶನಿಯ ಕೋಪದಿಂದ ಮುಕ್ತಿ ಪಡೆಯಲು ಸರಳ ವಿಧಾನ

ತುಳಸಿಯ ಬಳಿ ನಿಯಮಿತವಾಗಿ ತುಪ್ಪದ ದೀಪವನ್ನು ಬೆಳಗಿಸುವುದರಿಂದ ಮನೆಯಲ್ಲಿ ಸಂತೋಷ ಮತ್ತು ಅದೃಷ್ಟ ಬರುತ್ತದೆ ಎಂದು ನಂಬಲಾಗಿದೆ. 

ತುಳಸಿ ಗಿಡವನ್ನು ದಕ್ಷಿಣ ದಿಕ್ಕಿನಲ್ಲಿ ನೆಡಬಾರದು ಎಂಬ ನಂಬಿಕೆಯೂ ಇದೆ. ಈ ರೀತಿ ಮಾಡುವುದರಿಂದ ಕುಟುಂಬದ ಸದಸ್ಯರು ಆರ್ಥಿಕ ನಷ್ಟವನ್ನು ಎದುರಿಸಬೇಕಾಗುತ್ತದೆ. 

ಅದೇ ಸಮಯದಲ್ಲಿ, ಮನೆಯ ಉತ್ತರ ದಿಕ್ಕಿನಲ್ಲಿ ತುಳಸಿ ಗಿಡವನ್ನು ನೆಟ್ಟರೆ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ಹೇಳಲಾಗುತ್ತದೆ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News