Vastu Shastra: ಅಪ್ಪಿತಪ್ಪಿಯೂ ನಿಮ್ಮ ಪರ್ಸ್‌ನಲ್ಲಿ ಈ ವಸ್ತುಗಳನ್ನು ಇಡಲೇಬೇಡಿ, ಇಲ್ಲವೇ ಆರ್ಥಿಕ ನಷ್ಟ

Vastu Shastra: ವಾಸ್ತು ಶಾಸ್ತ್ರದ ಪ್ರಕಾರ,  ಹಣವನ್ನು ಇಟ್ಟುಕೊಳ್ಳುವ ವಿಧಾನವು ಹಣವು ಉಳಿಯುತ್ತದೆಯೇ ಅಥವಾ ಇಲ್ಲವೇ ಎಂಬುದರ ಮೇಲೆ ಪರಿಣಾಮ ಬೀರುತ್ತದೆ. ಹಣದ ನಿರ್ವಹಣೆಯು ಆರ್ಥಿಕ ಸ್ಥಿತಿಯನ್ನು ಬಲಪಡಿಸುವಲ್ಲಿ ಸಹಾಯಕವೆಂದು ಪರಿಗಣಿಸಲಾಗಿದೆ. 

Written by - Yashaswini V | Last Updated : Mar 24, 2022, 12:25 PM IST
  • ಆರ್ಥಿಕ ನಷ್ಟ ಸಂಭವಿಸುತ್ತದೆ
  • ಹಣವು ಕೈಯಲ್ಲಿ ಉಳಿಯುವುದಿಲ್ಲ
  • ರಾಹುವಿನ ಪ್ರಭಾವ ಹೆಚ್ಚುತ್ತದೆ
Vastu Shastra: ಅಪ್ಪಿತಪ್ಪಿಯೂ ನಿಮ್ಮ ಪರ್ಸ್‌ನಲ್ಲಿ ಈ ವಸ್ತುಗಳನ್ನು ಇಡಲೇಬೇಡಿ, ಇಲ್ಲವೇ ಆರ್ಥಿಕ ನಷ್ಟ  title=
Vastu Shastra for Purse

Vastu Shastra: ಪ್ರತಿಯೊಬ್ಬ ವ್ಯಕ್ತಿಯು ಆರ್ಥಿಕ ಸಮೃದ್ಧಿಯನ್ನು ಬಯಸುತ್ತಾನೆ. ಅದೇ ಸಮಯದಲ್ಲಿ, ಪ್ರತಿಯೊಬ್ಬರೂ ತಮ್ಮ ಜೇಬಿನಲ್ಲಿ ಯಾವಾಗಲೂ ಹಣದಿಂದ ತುಂಬಿರಬೇಕೆಂದು ಬಯಸುತ್ತಾರೆ. ಆದರೆ, ಯಾರ ಜೀವನದಲ್ಲಿಯೂ ಆರ್ಥಿಕ ಪರಿಸ್ಥಿತಿ ಯಾವಾಗಲೂ ಒಂದೇ ರೀತಿ ಇರುವುದಿಲ್ಲ. ವಾಸ್ತು ಶಾಸ್ತ್ರದ ಪ್ರಕಾರ, ಹಣ ಮತ್ತು ಹಣವನ್ನು ಇಟ್ಟುಕೊಳ್ಳುವ ವಿಧಾನವು ಹಣವು ಉಳಿಯುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಬಹಳ ಮಟ್ಟಿಗೆ ಹೇಳುತ್ತದೆ. ಹಣವನ್ನು ಸರಿಯಾದ ರೀತಿಯಲ್ಲಿ ಇಟ್ಟುಕೊಳ್ಳುವುದರಿಂದ ಆರ್ಥಿಕ ಪರಿಸ್ಥಿತಿಯನ್ನು ಬಲಪಡಿಸಬಹುದು. ಮತ್ತೊಂದೆಡೆ, ಹಣವನ್ನು ಸರಿಯಾಗಿ ನಿರ್ವಹಿಸದಿದ್ದರೆ, ಆರ್ಥಿಕ ಜೀವನದಲ್ಲಿ ಅನೇಕ ತೊಂದರೆಗಳನ್ನು ಎದುರಿಸಬೇಕಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ಆರ್ಥಿಕ ವಿಚಾರಕ್ಕೆ ಸಂಬಂಧಿಸಿದಂತೆ ವಾಸ್ತುವಿನ ವಿಶೇಷ ನಿಯಮಗಳನ್ನು ತಿಳಿದುಕೊಳ್ಳಿ.

ವಾಸ್ತು ಶಾಸ್ತ್ರದ ಪ್ರಕಾರ ಹಣವನ್ನು ಹೀಗೆ ಇಡಬೇಕು:
ವಾಸ್ತು ಶಾಸ್ತ್ರದ (Vastu Shastra) ಪ್ರಕಾರ, ಕೆಲವು ವಸ್ತುಗಳನ್ನು ಪರ್ಸ್‌ನಲ್ಲಿ ಇಡುವುದು ತುಂಬಾ ಅಶುಭ. ಈ ಕಾರಣದಿಂದಾಗಿ, ಹಣವು ಕೈಯಲ್ಲಿ ಉಳಿಯುವುದಿಲ್ಲ. ಇದರೊಂದಿಗೆ ವೆಚ್ಚವೂ ಹೆಚ್ಚಾಗತೊಡಗುತ್ತದೆ. ಹಾಗಾಗಿಯೇ  ಪರ್ಸ್‌ನಲ್ಲಿ ಎಂದಿಗೂ ಸಹ ಹಳೆಯ ಪೇಪರ್ ಬಿಲ್ ಗಳು, ರಸೀದಿಗಳು, ಜಂಕ್ ಗಳನ್ನು ಇಡಬಾರದು. ವಾಸ್ತವವಾಗಿ ಈ ವಸ್ತುಗಳನ್ನು ಪರ್ಸ್‌ನಲ್ಲಿ ಇಟ್ಟುಕೊಳ್ಳುವುದು ರಾಹುವಿನ ಪ್ರಭಾವವನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಖರ್ಚಿನ ಮೇಲೆ ನಿಯಂತ್ರಣವಿರುವುದಿಲ್ಲ ಎಂದು ಹೇಳಲಾಗುತ್ತದೆ.

ವಾಸ್ತು ಪ್ರಕಾರ ಕಬ್ಬಿಣದ ವಸ್ತುಗಳು, ಹರಿತವಾದ ವಸ್ತುಗಳು, ಚಾಕುಗಳು, ಬ್ಲೇಡ್‌ಗಳು ಇತ್ಯಾದಿಗಳನ್ನು ಪರ್ಸ್‌ನಲ್ಲಿ ಇಡಬಾರದು. ಇದರ ಹೊರತಾಗಿ ಔಷಧಗಳನ್ನು ಪರ್ಸ್‌ನಲ್ಲಿ ಇಡಬಾರದು. ಈ ವಸ್ತುಗಳನ್ನು ಪರ್ಸ್‌ನಲ್ಲಿ ಇಟ್ಟುಕೊಂಡರೆ ಜೇಬಿನಲ್ಲಿ ಹಣ ನಿಲ್ಲುವುದಿಲ್ಲ ಎಂದು ನಂಬಲಾಗಿದೆ. 

ಇದನ್ನೂ ಓದಿ- ಇಂದಿನಿಂದ 15 ದಿನಗಳವರೆಗೆ ಈ ರಾಶಿಯವರಿಗೆ ವರದಾನ..! ರೂಪುಗೊಳ್ಳಲಿದೆ ಧನ ಲಾಭದ ಪ್ರಬಲ ಯೋಗ

ವಾಸ್ತು ತತ್ವದ ಪ್ರಕಾರ, ಪರ್ಸ್ ಎಂದಿಗೂ ಹರಿದು ಹೋಗಬಾರದು. ವಾಸ್ತವವಾಗಿ ಹರಿದ ಪರ್ಸ್ ಆರ್ಥಿಕ ಬಿಕ್ಕಟ್ಟನ್ನು (Financial Crisis) ಸೃಷ್ಟಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಪರ್ಸ್ ಹರಿದರೆ ಅದನ್ನು ತಕ್ಷಣವೇ ಬದಲಾಯಿಸಬೇಕು.  

ಇದಲ್ಲದೆ, ಪರ್ಸ್‌ನಿಂದ ನಾಣ್ಯಗಳ ಶಬ್ದವು ಬರಬಾರದು ಎಂದು ವಾಸ್ತು ಶಾಸ್ತ್ರದ ತಜ್ಞರು ನಂಬುತ್ತಾರೆ. ಆದಾಗ್ಯೂ, ಸಂಪತ್ತಿನ ಪ್ರತೀಕವಾದ ಪರ್ಸ್‌ನಲ್ಲಿ ದೇವಿ ಲಕ್ಷ್ಮಿಯ ಚಿತ್ರವನ್ನು ಇಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಇದು ಹಣದ ಒಳಹರಿವನ್ನು ಹೆಚ್ಚಿಸುತ್ತದೆ ಎನ್ನಲಾಗುವುದು.

ಇದನ್ನೂ ಓದಿ-  Vastu Shastra: ಶನಿ-ಮಂಗಳನ ದೋಷ ನಿವಾರಿಸಲು ಪರಿಣಾಮಕಾರಿ ಈ ಸಸ್ಯ

ವಾಸ್ತು ಶಾಸ್ತ್ರದ ಪ್ರಕಾರ ಹಣವನ್ನು ಪರ್ಸ್ ನಲ್ಲಿ ವ್ಯವಸ್ಥಿತವಾಗಿ ಇಡಬೇಕು. ವಾಸ್ತು ಪ್ರಕಾರ ನಾಣ್ಯಗಳು ಅಲ್ಲೊಂದು ಇಲ್ಲೊಂದು ಬಿದ್ದರೆ ಸಾಲದ ಸಮಸ್ಯೆ ಹೆಚ್ಚಾಗಬಹುದು. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News