ಲಡ್ಡು ಪ್ರಸಾದದಲ್ಲಿ ಪ್ರಾಣಿ ಕೊಬ್ಬು ಬಳಕೆಯಿಂದ ಪಾವಿತ್ರ್ಯತೆಗೆ ಧಕ್ಕೆ : ಬೆಂಗಳೂರು ಟಿಟಿಡಿಯಲ್ಲಿ ಇಂದಿನಿಂದ ಪವಿತ್ರೋತ್ಸವ

ತಿರುಪತಿ ತಿಮ್ಮಪ್ಪನ ಸನ್ನಿಧಾನದ ಲಡ್ಡು ಪ್ರಸಾದಕ್ಕೆ ಪ್ರಾಣಿಗಳ ಕೊಬ್ಬು ಬಳಕೆ  ಹಿನ್ನೆಲೆಯಲ್ಲಿ ಬೆಂಗಳೂರಿನ ಟಿಟಿಡಿಯಲ್ಲಿ ಇಂದು ಸಂಜೆಯಿಂದ  ಮೂರು ದಿನಗಳವರೆಗೆ ಪವಿತ್ರೋತ್ಸವ ನಡೆಯಲಿದೆ. 

Written by - Ranjitha R K | Last Updated : Sep 27, 2024, 12:17 PM IST
  • ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಬಳಕೆ ಹಿನೆಲೆಯಲ್ಲಿ ದೇಗುಲದ ಪಾವಿತ್ರ್ಯತೆಗೆ ಧಕ್ಕೆ
  • ನಗರದ ಟಿಟಿಡಿಯಲ್ಲಿ ಇಂದಿನಿಂದ ನಡೆಯಲಿದೆ ಪವಿತ್ರೋತ್ಸವ
  • ಪವಿತ್ರೋತ್ಸವ ಕಾರ್ಯ ಮೂರು ದಿನಗಳ ಕಾಲ ನಡೆಯಲಿದೆ.
ಲಡ್ಡು ಪ್ರಸಾದದಲ್ಲಿ ಪ್ರಾಣಿ ಕೊಬ್ಬು ಬಳಕೆಯಿಂದ ಪಾವಿತ್ರ್ಯತೆಗೆ ಧಕ್ಕೆ :  ಬೆಂಗಳೂರು ಟಿಟಿಡಿಯಲ್ಲಿ ಇಂದಿನಿಂದ ಪವಿತ್ರೋತ್ಸವ title=

ಬೆಂಗಳೂರು : ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಬಳಕೆ ಹಿನೆಲೆಯಲ್ಲಿ ದೇಗುಲದ ಪಾವಿತ್ರ್ಯತೆಗೆ ಧಕ್ಕೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ನಗರದ ಟಿಟಿಡಿಯಲ್ಲಿ ಇಂದಿನಿಂದ ನಡೆಯಲಿದೆ ಪವಿತ್ರೋತ್ಸವ ನಡೆಯಲಿದೆ. 
ಸಂಜೆ 6 ಗಂಟೆಯಿಂದ ಸೋಮವಾರದವರೆಗೆ ಶುದ್ದಿಕಾರ್ಯ ಜರುಗಲಿದೆ. ಈ ಪವಿತ್ರೋತ್ಸವ ಕಾರ್ಯ ಮೂರು ದಿನಗಳ ಕಾಲ ನಡೆಯಲಿದೆ. 

ತಿರುಪತಿ ತಿಮ್ಮಪ್ಪನ ಸನ್ನಿಧಾನದ ಲಡ್ಡು ಪ್ರಸಾದಕ್ಕೆ ಪ್ರಾಣಿಗಳ ಕೊಬ್ಬು ಬಳಕೆ ವಿಚಾರ ಇದೀಗ ಸಂಚಲನ ಉಂಟು ಮಾಡಿದೆ. ಭಕ್ತರ ಧಾರ್ಮಿಕ ಭಾವನೆಗೆ ಇದು ಧಕ್ಕೆ ತಂದಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಟಿಟಿಡಿಯಲ್ಲಿ ಇಂದು ಸಂಜೆಯಿಂದ 
ಮೂರು ದಿನಗಳವರೆಗೆ ಪವಿತ್ರೋತ್ಸವ ನಡೆಯಲಿದೆ. 

ಇದನ್ನೂ ಓದಿ : ಕುಮಾರ್‌ ಬಂಗಾರಪ್ಪ ನಿವಾಸದಲ್ಲಿ ಮೀಟಿಂಗ್

ಪವಿತ್ರೋತ್ಸವದ ಅಂಗವಾಗಿ ಮೊದಲ ದಿನ  ಆಚಾರ್ಯವರನಮ್, ಎರಡನೇ ದಿನ ಹೋಮ, ಮೂರನೇ ದಿನ ಪವಿತ್ರ ಸಮರ್ಪಣ ಹೋಮ ನಡೆಯಲಿದೆ. 

ಮೂರು ದಿನ ಪವಿತ್ರೋತ್ಸವ ಏನೆಲ್ಲ ನಡೆಯಲಿದೆ..?
ಮೊದಲ ದಿನ ಅಂದರೆ ಇಂದು ಸಂಜೆ 6:30 - ಆಚಾರ್ಯವರನಮ್
- ಸಂಜೆ 7:30 - ಅಂಕುಣಾರ್ಪಣಮ್
- ರಾತ್ರಿ 8:30 - ಏಕಾಂತ ಸೇವೆ

ಸೆಪ್ಟಂಬರ್ 28 ಶನಿವಾರ (ಎರಡನೇ ದಿನ )
- ಬೆಳಗ್ಗೆ 8:30- ಯಾಗಶಾಲ ವೈದಿಕ
- ಬೆಳಗ್ಗೆ 10:30-11:30 - ಸ್ನಾಪನ ತಿರುವಂಜನಮ್
- ಸಂಜೆ 6:30 - ಯಾಗಶಾಲ ವೈದಿಕ , ಪವಿತ್ರ ಪ್ರತಿಷ್ಟ
- ರಾತ್ರಿ 8:30 - ಏಕಾಂತ ಸೇವೆ

ಸೆಪ್ಟಂಬರ್ 29 ಭಾನುವಾರ (ಮೂರನೇ ದಿನ )
- ಬೆಳಗ್ಗೆ 8:30 - ಯಾಗಶಾಲ ವೈದಿಕ
- ಬೆಳಗ್ಗೆ 10:30-11:30 - ಸ್ನಾಪನ ತಿರುವಂಜನಮ್
- ಮಧ್ಯಾಹ್ನ 2:30-01:30 - ಪವಿತ್ರ ಸಮರ್ಪಣ
- ಸಂಜೆ  6:30 - ಯಾಗಶಾಲ ವೈದಿಕ

ಇದನ್ನೂ ಓದಿ : ಭವಿಷ್ಯದಲ್ಲಿ ಎದುರಾಗೋ ಕಾನೂನು ಸಂಕಷ್ಟದಿಂದ ರಕ್ಷಣೆ

ಈ ಪವಿತ್ರೋತ್ಸವಕ್ಕೆ ತಿರುಪತಿಯಿಂದ 10 ಅರ್ಚಕರ ತಂದ ಆಗಮಿಸಲಿದೆ. ಈ ಅರ್ಚಕರಿಂದ  ಮೂರು ದಿನದ‌ ಪೂಜೆ,ಹೋಮ,ಹವನ ನಡೆಯಲಿದೆ. ಇದರ  ಪೂರ್ವಭಾವಿಯಾಗಿ ಮಂಗಳವಾರ ದೇಗುಲದ ಶುದ್ಧಿಕಾರ್ಯ ನಡೆಸಲಾಗಿದೆ. ಪವಿತ್ರೋತ್ಸವ ಶುದ್ದಿಕಾರ್ಯದಲ್ಲಿ ಭಾಗಿಯಾಗಲು ಭಕ್ತರಿಗೂ ಅವಕಾಶ ಕಲ್ಪಿಸಲಾಗಿದೆ. ಇಬ್ಬರು 1 ಸಾವಿರ ರೂಪಾಯಿ ರಶೀದಿ ಪಡೆದು ಪೂಜೆಯಲ್ಲಿ ಭಾಗಿಯಾಗಲು ಅವಕಾಶ ನೀಡಲಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News