ಉತ್ತರ ಪ್ರದೇಶದ ಕೋವಿಡ್ ಪ್ರಕರಣಗಳಲ್ಲಿ ಭಾರಿ ಏರಿಕೆ..!

ಉತ್ತರ ಪ್ರದೇಶವು ಕೋವಿಡ್ ಪ್ರಕರಣಗಳಲ್ಲಿ ಭಾರಿ ಏರಿಕೆಯನ್ನು ವರದಿ ಮಾಡಿದೆ. ಕಳೆದ 24 ಗಂಟೆಗಳಲ್ಲಿ ವರದಿಯಾದ 7,695 ಹೊಸ ಪ್ರಕರಣಗಳು ಕಳೆದ ವಾರ ದಾಖಲಾಗಿದ್ದಕ್ಕಿಂತ 13 ಪಟ್ಟು ಹೆಚ್ಚು ಎನ್ನಲಾಗಿದೆ. ಕಳೆದ ಭಾನುವಾರ ರಾಜ್ಯದಲ್ಲಿ 552 ಹೊಸ ಪ್ರಕರಣಗಳು ದಾಖಲಾಗಿದ್ದವು.

Written by - Zee Kannada News Desk | Last Updated : Jan 9, 2022, 10:27 PM IST
  • ಉತ್ತರ ಪ್ರದೇಶವು ಕೋವಿಡ್ ಪ್ರಕರಣಗಳಲ್ಲಿ ಭಾರಿ ಏರಿಕೆಯನ್ನು ವರದಿ ಮಾಡಿದೆ.
  • ಕಳೆದ 24 ಗಂಟೆಗಳಲ್ಲಿ ವರದಿಯಾದ 7,695 ಹೊಸ ಪ್ರಕರಣಗಳು ಕಳೆದ ವಾರ ದಾಖಲಾಗಿದ್ದಕ್ಕಿಂತ 13 ಪಟ್ಟು ಹೆಚ್ಚು ಎನ್ನಲಾಗಿದೆ.
  • ಕಳೆದ ಭಾನುವಾರ ರಾಜ್ಯದಲ್ಲಿ 552 ಹೊಸ ಪ್ರಕರಣಗಳು ದಾಖಲಾಗಿದ್ದವು.
ಉತ್ತರ ಪ್ರದೇಶದ ಕೋವಿಡ್ ಪ್ರಕರಣಗಳಲ್ಲಿ ಭಾರಿ ಏರಿಕೆ..! title=
file photo

ನವದೆಹಲಿ: ಉತ್ತರ ಪ್ರದೇಶವು ಕೋವಿಡ್ ಪ್ರಕರಣಗಳಲ್ಲಿ ಭಾರಿ ಏರಿಕೆಯನ್ನು ವರದಿ ಮಾಡಿದೆ. ಕಳೆದ 24 ಗಂಟೆಗಳಲ್ಲಿ ವರದಿಯಾದ 7,695 ಹೊಸ ಪ್ರಕರಣಗಳು ಕಳೆದ ವಾರ ದಾಖಲಾಗಿದ್ದಕ್ಕಿಂತ 13 ಪಟ್ಟು ಹೆಚ್ಚು ಎನ್ನಲಾಗಿದೆ. ಕಳೆದ ಭಾನುವಾರ ರಾಜ್ಯದಲ್ಲಿ 552 ಹೊಸ ಪ್ರಕರಣಗಳು ದಾಖಲಾಗಿದ್ದವು.

ಅತಿದೊಡ್ಡ ಅಂಕಿ-ಅಂಶಗಳು ರಾಜ್ಯದ ರಾಜಧಾನಿ ಲಕ್ನೋ (1,115) ಮತ್ತು ದೆಹಲಿ ಬಳಿಯ ನೋಯ್ಡಾದಿಂದ (1149) ಬಂದಿವೆ.ರಾಜ್ಯವೂ ನಾಲ್ಕು ಸಾವುಗಳನ್ನು ದಾಖಲಿಸಿದೆ.ಸರ್ಕಾರವು ಪರೀಕ್ಷೆಗಳನ್ನು ಹೆಚ್ಚಿಸಿದ್ದರಿಂದಾಗಿ ಈ ಪ್ರಕರಣಗಳಲ್ಲಿ ಏರಿಕೆ ಕಂಡು ಬಂದಿದೆ ಎಂದು ಹೇಳಿದೆ. ಕಳೆದ 24 ಗಂಟೆಗಳಲ್ಲಿ 2.22 ಲಕ್ಷ ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದು ಹೇಳಿದೆ.

ಇದನ್ನೂ ಓದಿ: ಪಾದಯಾತ್ರೆ ತಡೆಗೆ ಕಾನೂನು ಕ್ರಮದ ಅಸ್ತ್ರ ಪ್ರಯೋಗಕ್ಕೆ ಸರ್ಕಾರ ತೀರ್ಮಾನ

ಇಲ್ಲಿಯವರೆಗೆ, ಜನವರಿ 16 ರವರೆಗೆ ಶಾಲೆ ಮುಚ್ಚುವಿಕೆಯನ್ನು ವಿಸ್ತರಿಸುವುದು ಮತ್ತು ರಾತ್ರಿ ಕರ್ಫ್ಯೂ ಮಾತ್ರ ಘೋಷಿಸಲಾಗಿದೆ.ಶಾಲೆಯ ಮುಚ್ಚುವಿಕೆಯು ದೈಹಿಕ ತರಗತಿಗಳಿಗೆ ಮಾತ್ರ ಅನ್ವಯಿಸುತ್ತದೆ. ಆನ್‌ಲೈನ್ ತರಗತಿಗಳು ನಿಗದಿತ ರೀತಿಯಲ್ಲಿ ಮುಂದುವರಿಯಲಿವೆ.

ಇಂದು ಹಿರಿಯ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆಯಲ್ಲಿ ರಾಜ್ಯಾದ್ಯಂತ ಕೋವಿಡ್ -19 ಪರಿಸ್ಥಿತಿಯನ್ನು ಪರಿಶೀಲಿಸುವಾಗ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮಾಧ್ಯಮಿಕ ಶಾಲೆಗಳಲ್ಲಿ ವಿಶೇಷ ಶಿಬಿರಗಳನ್ನು ಆಯೋಜಿಸಬೇಕು ಮತ್ತು 'ಶೇ 100 ರಷ್ಟು ಹದಿಹರೆಯದವರು ಈ ವಾರದ ಅಂತ್ಯದ ವೇಳೆಗೆ ತಮ್ಮ ಮೊದಲ ಡೋಸ್ ಪಡೆಯುವುದನ್ನು ಖಚಿತಪಡಿಸಿಕೊಳ್ಳಬೇಕು."ಎಂದು ಹೇಳಿದರು.

ಇದನ್ನೂ ಓದಿ: ಹಿರಿಯ ಜಾನಪದ ಕಲಾವಿದ, ಗಾಯಕ ಬಸಲಿಂಗಯ್ಯ ಹಿರೇಮಠ ನಿಧನ: ಸಿಎಂ ಸಂತಾಪ

ಚುನಾವಣೆಯ ಪೂರ್ವದಲ್ಲಿ ಕೋವಿಡ್ ಸಂಖ್ಯೆಯನ್ನು ಕಡಿಮೆ ಮಾಡುವುದು ರಾಜ್ಯಕ್ಕೆ ದೊಡ್ಡ ಸವಾಲಾಗಿದೆ, ಕೇವಲ ಶೇ 52 ರಷ್ಟು ವಯಸ್ಕರು ಮಾತ್ರ ತಮ್ಮ ಎರಡನೇ ಲಸಿಕೆ ಡೋಸ್ ಪಡೆದಿದ್ದಾರೆ.ಕೆಲವು ನಿರ್ಬಂಧಗಳಿಗೆ ಒಳಪಟ್ಟು ಸಾರ್ವಜನಿಕ ಸಭೆಗಳು ಮತ್ತು ಮನೆ-ಮನೆ ಪ್ರಚಾರಕ್ಕೆ ಅವಕಾಶವಿದ್ದರೂ, ಜನವರಿ 15 ರವರೆಗೆ ಚುನಾವಣೆ ನಡೆಯಲಿರುವ ಐದು ರಾಜ್ಯಗಳಲ್ಲಿ ಎಲ್ಲಾ ರಾಜಕೀಯ ರ್ಯಾಲಿಗಳನ್ನು ಚುನಾವಣಾ ಆಯೋಗ ನಿರ್ಬಂಧಿಸಿದೆ.

ಇದನ್ನೂ ಓದಿ: ಸಚಿವ ಎಸ್.ಟಿ.ಸೋಮಶೇಖರ್ ಪುತ್ರನ ನಕಲಿ ವಿಡಿಯೋ, ₹1 ಕೋಟಿ ಹಣಕ್ಕೆ ಬೇಡಿಕೆ... ಓರ್ವ ವಶಕ್ಕೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News