ಈ ದಿನ ಕಪ್ಪು ಶ್ವಾನಕ್ಕೆ ಆಹಾರ ನೀಡಿದರೆ ನಿಮ್ಮೆಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾನೆ ಶನಿ ದೇವ

ಜೀವನದಲ್ಲಿ ಮೇಲಿಂದ ಮೇಲೆ ಸಮಸ್ಯೆಗಳು ಬರುತ್ತಲೇ ಇದ್ದರೆ ಶನಿ ಕಾಟ ಎಂದು ಗೊಣಗುವವರನ್ನು ನೀವು ನೋಡಿರಬಹುದು. ಅಷ್ಟೇ ಅಲ್ಲ, ನ್ಯಾಯದ ದೇವರು ಎಂದು ಪರಿಗಣಿಸಲ್ಪಡುವ ಶನಿ ಮಹಾತ್ಮನನ್ನು ನಿಮ್ಮ ಜಾತಕದಲ್ಲಿ ಅಶುಭ ಸ್ಥಾನದಲ್ಲಿದ್ದರೆ ನೀವು ಹಲವು ರೀತಿಯ ಸಮಸ್ಯೆಗಳ ಸುಳಿಯಲ್ಲಿ ಸಿಲುಕಬಹುದು. ಆದರೆ, ಒಂದು ವಿಶಿಷ್ಟ ದಿನದಂದು ಕಪ್ಪು ಶ್ವಾನಕ್ಕೆ ಆಹಾರ ನೀಡುವುದರಿಂದ ನಿಮ್ಮೆಲ್ಲಾ ಸಮಸ್ಯೆಗಳಿಂದಲೂ ಪರಿಹಾರ ಪಡೆಯಬಹುದು ಎಂದು ಹೇಳಲಾಗುತ್ತದೆ. 

Written by - Yashaswini V | Last Updated : Apr 18, 2023, 03:01 PM IST
  • ಶನಿವಾರದಂದು ಶನಿಮಹಾತ್ಮನನ್ನು ಸಂತುಷ್ಟಗೊಳಿಸಲು ಹಲವು ಕ್ರಮಗಳನ್ನು ಕೈಗೊಳ್ಳುವುದು ತುಂಬಾ ಲಾಭದಾಯಕ ಎಂದು ನಂಬಲಾಗಿದೆ.
  • ಅದರಲ್ಲೂ ವಿಶೇಷವಾಗಿ ಶನಿವಾರದಂದು ಕಪ್ಪು ಶ್ವಾನಕ್ಕೆ ಆಹಾರ ನೀಡುವುದರಿಂದ ಜೀವನದ ನಾನಾ ರೀತಿಯ ಸಂಕಷ್ಟಗಳಿಂದ ಹೊರಬರಬಹುದು.
  • ಶನಿ ದೇವನ ಕೃಪೆಗೆ ಪಾತ್ರರಾಗಬಹುದು ಎಂದು ಹೇಳಲಾಗುತ್ತದೆ.
ಈ ದಿನ ಕಪ್ಪು ಶ್ವಾನಕ್ಕೆ ಆಹಾರ ನೀಡಿದರೆ ನಿಮ್ಮೆಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾನೆ ಶನಿ ದೇವ  title=

Shani Deva: ಹಿಂದೂ ಧರ್ಮದಲ್ಲಿ ಪ್ರತಿ ದಿನಕ್ಕೂ ಒಂದೊಂದು ವಿಶೇಷತೆ ಇದೆ. ಪ್ರತಿ ವಾರವೂ ಒಂದೊಂದು ದೇವರಿಗೆ ಮೀಸಲಾಗಿದೆ. ಅಂತೆಯೇ ಶನಿವಾರವನ್ನು ಶನಿ ಮಹಾತ್ಮನಿಗೆ ಮೀಸಲಿಡಲಾಗಿದೆ. ಶನಿವಾರದಂದು ಶನಿಮಹಾತ್ಮನನ್ನು 
ಸಂತುಷ್ಟಗೊಳಿಸಲು ಹಲವು ಕ್ರಮಗಳನ್ನು ಕೈಗೊಳ್ಳುವುದು ತುಂಬಾ ಲಾಭದಾಯಕ ಎಂದು ನಂಬಲಾಗಿದೆ. ಅದರಲ್ಲೂ ವಿಶೇಷವಾಗಿ ಶನಿವಾರದಂದು ಕಪ್ಪು ಶ್ವಾನಕ್ಕೆ ಆಹಾರ ನೀಡುವುದರಿಂದ ಜೀವನದ ನಾನಾ ರೀತಿಯ ಸಂಕಷ್ಟಗಳಿಂದ ಹೊರಬರಬಹುದು. ಶನಿ ದೇವನ ಕೃಪೆಗೆ ಪಾತ್ರರಾಗಬಹುದು ಎಂದು ಹೇಳಲಾಗುತ್ತದೆ. 

ಶನಿವಾರದಂದು ಕಪ್ಪು ಶ್ವಾನಕ್ಕೆ ಆಹಾರ ನೀಡಿದರೆ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ: 
* ಶನಿ ಮಹಾತ್ಮನ ವಾಹನವೆಂತಲೂ ಪರಿಗಣಿಸಲ್ಪಟ್ಟಿರುವ ಕಪ್ಪು ಶ್ವಾನಕ್ಕೆ ಶನಿವಾರದ ದಿನ ಆಹಾರ ನೀಡುವುದರಿಂದ ಶನಿ ದೇವ ಬಹಳ ಬೇಗ ಸಂತುಷ್ಟನಾಗುತ್ತಾನೆ ಎಂಬ ನಂಬಿಕೆ ಇದೆ. 

* ಶನಿ ದೇವ ಮಾತ್ರವಲ್ಲ, ಕಾಲ ಭೈರವನಿಗೂ ಕೂಡ ಕಪ್ಪು ನಾಯಿಯನ್ನು ವಾಹನ ಎಂದು ಹೇಳಲಾಗುತ್ತದೆ. ಹಾಗಾಗಿ, ಕಪ್ಪು ಶ್ವಾನಕ್ಕೆ ಆಹಾರ ನೀಡುತ್ತಾ ಬಂದರೆ ಅಪಘಾತಗಳಂತಹ ದುರ್ಘಟನೆಗಳನ್ನು ತಪ್ಪಿಸಬಹುದು ಎಂದು ಹೇಳಲಾಗುತ್ತದೆ. 

ಇದನ್ನೂ ಓದಿ- ಕುಂಡಲಿಯಲ್ಲಿ ಈ 2 ಗ್ರಹಗಳ ಪ್ರಭಾವದಿಂದಲೂ ಹೆಚ್ಚಾಗುತ್ತಂತೆ ತೂಕ
 
* ಕಪ್ಪು ಶ್ವಾನಕ್ಕೆ ಆಹಾರ ನೀಡುವುದರಿಂದ ಅಂತಹ ಮನೆಗೆ ನಕಾರಾತ್ಮಕ ಶಕ್ತಿಯ ಪ್ರವೇಶವಾಗುವುದಿಲ್ಲ. 

* ಶನಿವಾರ ಕಪ್ಪು ನಾಯಿಗೆ ರೊಟ್ಟಿ ನೀಡುವುದರಿಂದ ಸ್ಥಗಿತಗೊಂಡಿರುವ ಕೆಲಸಗಳು ವೇಗವನ್ನು ಪಡೆಯುತ್ತದೆ. 

* ಜಾತಕದಲ್ಲಿ ರಾಹು-ಕೇತು ದೋಷವಿದ್ದರೆ ಶನಿವಾರದಂದು ಸಾಸಿವೆ ಎಣ್ಣೆಯಿಂದ ತಯಾರಿಸಿದ ಆಹಾರವನ್ನು ಕಪ್ಪು ನಾಯಿಗೆ ತಿನ್ನಿಸಿ. ಇದರಿಂದ ರಾಹು-ಕೇತು ದೋಷದಿಂದ ಪರಿಹಾರ ದೊರೆಯುತ್ತದೆ 

ಇದನ್ನೂ ಓದಿ- ಸೂರ್ಯ ಗ್ರಹಣದಂದು ಮಂಗಳ-ಬುಧರ ಖತರ್ನಾಕ್ ಸಂಯೋಗ, ಈ ರಾಶಿಯವರಿಗೆ ಸಂಕಷ್ಟ

*  ಶನಿವಾರದ ದಿನ ಕಪ್ಪುಶ್ವಾನಕ್ಕೆ ಆಹಾರ ನೀಡುವುದರಿಂದ ಆರ್ಥಿಕ ಸಂಕಷ್ಟ, ಸಾಲ ಬಾಧೆ, ವೃತ್ತಿ ವ್ಯವಹಾರದಲ್ಲಿನ ತೊಂದರೆ ನಿವಾರಣೆಯಾಗುವುದಲ್ಲದೆ, ಶನಿ ದೋಷ, ಸಾಡೇಸಾತಿ ಶನಿ, ಶನಿ ಧೈಯಾ ಪ್ರಭಾವದಿಂದಲೂ ಮುಕ್ತಿ ಪಡೆಯಬಹುದು ಎಂಬ ನಂಬಿಕೆ ಇದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News