Vastu Tips: ಸಂಜೆ ಈ ದಿಕ್ಕಿನಲ್ಲಿ ದೀಪ ಹಚ್ಚಿ, ಲಕ್ಷ್ಮಿಯ ಕೃಪೆಯಿಂದ ಸುಖ ಸಂಪತ್ತು ಸಿಗುವುದು!

Vastu Tips: ನಿತ್ಯವೂ ಸಂಜೆ ಹೊತ್ತು ಮುಖ್ಯ ಬಾಗಿಲಿಗೆ ದೀಪವನ್ನು ಹಚ್ಚುವುದರಿಂದ ಲಕ್ಷ್ಮಿಯು ಮನೆಗೆ ಬರುತ್ತಾಳೆ ಎಂಬ ನಂಬಿಕೆಯಿದೆ. ಇದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಸುತ್ತದೆ ಎನ್ನಲಾಗುತ್ತದೆ.  

Written by - Chetana Devarmani | Last Updated : Jun 12, 2023, 06:32 PM IST
  • ನಿತ್ಯವೂ ಸಂಜೆ ಹೊತ್ತು ಮುಖ್ಯ ಬಾಗಿಲಿಗೆ ದೀಪವನ್ನು ಹಚ್ಚಬೇಕು
  • ಇದರಿಂದ ಕ್ಷ್ಮಿಯು ಮನೆಗೆ ಬರುತ್ತಾಳೆ ಎಂಬ ನಂಬಿಕೆಯಿದೆ
  • ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಸುತ್ತದೆ ಎನ್ನಲಾಗುತ್ತದೆ
Vastu Tips: ಸಂಜೆ ಈ ದಿಕ್ಕಿನಲ್ಲಿ ದೀಪ ಹಚ್ಚಿ, ಲಕ್ಷ್ಮಿಯ ಕೃಪೆಯಿಂದ ಸುಖ ಸಂಪತ್ತು ಸಿಗುವುದು!  title=

Vastu Tips: ಹಿಂದೂ ಧರ್ಮದಲ್ಲಿ ದೀಪವನ್ನು ಬೆಳಗಿಸುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ದೀಪವಿಲ್ಲದ ಪೂಜೆ ಅಪೂರ್ಣ ಎಂದು ಶಾಸ್ತ್ರಗಳಲ್ಲಿಯೂ ಹೇಳಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ನಿತ್ಯವೂ ದೀಪವನ್ನು ಹಚ್ಚುವುದರಿಂದ ಸುಖ, ಸಮೃದ್ಧಿ, ಶಾಂತಿ ನೆಲೆಸುತ್ತದೆ. ಇದರೊಂದಿಗೆ ಸಂಪತ್ತಿನ ಅಧಿದೇವತೆಯಾದ ಲಕ್ಷ್ಮೀ ದೇವಿಯೂ ಪ್ರಸನ್ನಳಾಗುತ್ತಾಳೆ. ದೀಪವನ್ನು ಬೆಳಗಿಸುವುದರಿಂದ ಮನೆಯಿಂದ ನಕಾರಾತ್ಮಕ ಶಕ್ತಿಗಳು ದೂರ ಹೋಗುತ್ತವೆ ಎಂಬ ನಂಬಿಕೆಗಳಿವೆ.

ಇದನ್ನೂ ಓದಿ: Vastu Tips: ಮಣ್ಣಿನಿಂದ ಮಾಡಿದ ಈ 6 ವಸ್ತುಗಳನ್ನು ಮನೆಗೆ ತನ್ನಿ, ಲಕ್ಷ್ಮಿಯ ಕೃಪೆಯಿಂದ ಸಂತೋಷ - ಸಂಪತ್ತು ವೃದ್ಧಿ! 

ಮನೆಯ ಮುಖ್ಯ ಬಾಗಿಲಲ್ಲಿ ದೀಪವನ್ನು ಬೆಳಗಿಸುವುದರಿಂದ ರಾಹು ಗ್ರಹದ ದುಷ್ಪರಿಣಾಮಗಳು ದೂರವಾಗುತ್ತವೆ ಎಂದು ಹೇಳುತ್ತಾರೆ. ಸಂಜೆ ಮುಖ್ಯ ದ್ವಾರದಲ್ಲಿ ದೀಪವನ್ನು ಬೆಳಗಿಸಿದರೆ ಲಕ್ಷ್ಮಿ ಮನೆಗೆ ಆಗಮಿಸುತ್ತಾಳೆ. ಇದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಇರುತ್ತದೆ. ಸಂಪತ್ತು ವೃದ್ಧಿಸುತ್ತದೆ. ಆದರೆ ಈ ಸಮಯದಲ್ಲಿ ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.  

ಸಂಜೆ ದೀಪವನ್ನು ಹಚ್ಚುವುದು ತುಂಬಾ ಮಂಗಳಕರ. ನೀವು ಮನೆಯ ಬಾಗಿಲಲ್ಲಿ ದೀಪವನ್ನು ಬೆಳಗಿಸಿದರೆ, ಜೀವನದಲ್ಲಿ ಮುಂಬರುವ ಅಡೆತಡೆಗಳು ದೂರವಾಗುತ್ತವೆ. ಲಕ್ಷ್ಮಿ ದೇವಿಯು ಆಗಮಿಸುವುದರಿಂದ ಇಷ್ಟಾರ್ಥ ಸಿದ್ಧಿಯಾಗುತ್ತದೆ. ಅಷ್ಟೈಶ್ವರ್ಯಗಳು ದೊರೆಯುತ್ತವೆ. ಆ ಮನೆಯಲ್ಲಿ ಸಕಾರಾಥ್ಮಕ ಶಕ್ತಿ ಹೆಚ್ಚಾಗುತ್ತದೆ. 

ಇದನ್ನೂ ಓದಿ: ಭದ್ರಾ ರಾಜ ಯೋಗದಿಂದ ಖುಲಾಯಿಸಲಿದೆ ಈ ರಾಶಿಗಳ ಅದೃಷ್ಟ, ಹೆಚ್ಚಾಗುವುದು ಧನ ಸಂಪತ್ತು!

ವಾಸ್ತು ಶಾಸ್ತ್ರದ ಪ್ರಕಾರ, ನೀವು ಹೊರಗೆ ಬಂದಾಗ ದೀಪವು ಬಲಭಾಗದಲ್ಲಿ ಇರುವಂತೆ ದೀಪವನ್ನು ಬೆಳಗಿಸಿ. ದೀಪದ ಬೆಳಕು ಉತ್ತರ ಅಥವಾ ಪೂರ್ವದ ಕಡೆಗೆ ಇರಬೇಕು. ಪಶ್ಚಿಮ ದಿಕ್ಕಿನಲ್ಲಿ ಎಂದೂ ದೀಪವನ್ನು ಹಚ್ಚಬೇಡಿ. 

ಮನೆಯ ಮುಖ್ಯ ಬಾಗಿಲಿಗೆ ದೀಪವನ್ನು ಹಚ್ಚುವುದರಿಂದ ರಾಹು ದೋಷದ ಪ್ರಭಾವ ದೂರವಾಗುತ್ತದೆ. ನಿಮಗೆ ರಾಹುದೋಷವಿದ್ದರೆ ಯಾವುದೇ ದೇವಸ್ಥಾನ ಅಥವಾ ತುಳಸಿ ಕಟ್ಟೆ ಬಳಿ ದೀಪ ಹಚ್ಚಬಹುದು. ಇದನ್ನು ಮಾಡುವುದರಿಂದ ನೀವು ಸಕಾರಾತ್ಮಕ ಫಲಗಳನ್ನು ಪಡೆಯುವಿರಿ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ವಿಚಾರಗಳನ್ನು ಆಧರಿಸಿದೆ. ZEE KANNADA NEWS ಅದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News