ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ನಾಯಕ ಹಾರ್ದಿಕ್ ಪಾಂಡ್ಯ ಈ ಆಟಗಾರನಿಗೆ ವಿಲನ್ ಆಗು ಕಾಡುತ್ತಿದ್ದಾನೆ, ಆದರೆ ಈಗ ಶಿಖರ್ ಧವನ್ ಕೂಡ ಈ ಆಟಗಾರನಿಗೆ ವಿಲನ್ ಆಗಲಿದ್ದಾರೆ. ಹೇಗೆ ಇಲ್ಲಿದೆ ನೋಡಿ..
ಭಾರತ ಕ್ರಿಕೆಟ್ ತಂಡದ ಮಾಜಿ ಕೋಚ್ ರವಿಶಾಸ್ತ್ರಿ ದೊಡ್ಡ ಹೇಳಿಕೆಯ ಮೂಲಕ ಇದ್ದಕ್ಕಿದ್ದಂತೆ ಸಂಚಲನ ಮೂಡಿಸಿದ್ದಾರೆ. ರವಿಶಾಸ್ತ್ರಿ ಪ್ರಕಾರ, ಪ್ರಸ್ತುತ ಹಾರ್ದಿಕ್ ಪಾಂಡ್ಯ ನಾಯಕತ್ವದ ಟಿ-20 ತಂಡವು ರೋಹಿತ್ ಶರ್ಮಾ ನಾಯಕತ್ವದ ಹಿರಿಯ ಟೀಂ ಇಂಡಿಯಾಕ್ಕಿಂತ ಉತ್ತಮವಾಗಿದೆಯಂತೆ.
SuryaKumar Yadav, IND vs NZ: ಟಿ20 ವಿಶ್ವಕಪ್ನ ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಎದುರಿಸಿದ ಸೋಲಿನ ನಂತರ, ನ್ಯೂಜಿಲೆಂಡ್ನ ಆತಿಥ್ಯದಲ್ಲಿ ಭಾರತವು ಈ ಸ್ವರೂಪದಲ್ಲಿ ಅದ್ಭುತ ಪುನರಾಗಮನವನ್ನು ಮಾಡಿದೆ. ನಿಯಮಿತ ನಾಯಕ ರೋಹಿತ್ ಶರ್ಮಾ, ಡ್ಯಾಶಿಂಗ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಮತ್ತು ವೇಗಿ ಜಸ್ಪ್ರೀತ್ ಬುಮ್ರಾ ಅವರಂತಹ ಆಟಗಾರರ ಅನುಪಸ್ಥಿತಿಯಲ್ಲಿ ಯುವ ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಈ ಟಿ 20 ಸರಣಿಗೆ ಹಾರ್ದಿಕ್ ಪಾಂಡ್ಯ ಅವರಿಗೆ ತಂಡದ ನಾಯಕತ್ವವನ್ನು ನೀಡಲಾಗಿತ್ತು.
IND vs NZ 2nd T20I: ಸೂರ್ಯಕುಮಾರ್ ಯಾದವ್ ಅವರ ಈ ಇನ್ನಿಂಗ್ಸ್ ಈ ಬ್ಯಾಟ್ಸ್ಮನ್ನ ಸ್ಥಾನಮಾನ ಮತ್ತು ಅಭಿಮಾನಿಗಳ ಅನುಸರಣೆಯನ್ನು ಹೆಚ್ಚಿಸಿರಬಹುದು ಆದರೆ ಕಿವೀಸ್ ತಂಡದ ಹಿರಿಯ ಮತ್ತು ಅನುಭವಿ ವೇಗದ ಬೌಲರ್ ಟಿಮ್ ಸೌಥಿ ಅವರು ಸೂರ್ಯಕುಮಾರ್ ಯಾದವ್ ಇನ್ನೂ ವಿಶ್ವದ ಅತ್ಯುತ್ತಮ ಬ್ಯಾಟ್ಸ್ಮನ್ ಆಗಿಲ್ಲ ಎಂದು ನಂಬುತ್ತಾರೆ.
ನ್ಯೂಜಿಲೆಂಡ್ ವಿರುದ್ಧದ ಸರಣಿಯ ಎರಡನೇ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಸೂರ್ಯಕುಮಾರ್ 111 ರನ್ಗಳ ಅಜೇಯ ಇನ್ನಿಂಗ್ಸ್ ಆಡಿದರು. ಅವರ ಇನಿಂಗ್ಸ್ನಿಂದಾಗಿ ಟೀಂ ಇಂಡಿಯಾ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 191 ರನ್ ಗಳಿಸಿತು. ಓಪನರ್ ಇಶಾನ್ ಕಿಶನ್ 36 ರನ್ ಕೊಡುಗೆ ನೀಡಿದರು. ವೇಗಿ ಟೀಂ ಸೌಥಿ ನ್ಯೂಜಿಲೆಂಡ್ ಪರ ಅತಿ ಹೆಚ್ಚು 3 ವಿಕೆಟ್ ಕಬಳಿಸಿದ್ದಾರೆ.
ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಭಾರತ ತಂಡವು ಮೌಂಟ್ ಮೌಂಗನುಯಿಯಲ್ಲಿ ಸರಣಿಯ 2ನೇ T20 ಪಂದ್ಯ ಆಡಬೇಕಿದೆ. ಇದಕ್ಕಾಗಿ ತೌರಂಗ ನಗರಕ್ಕೆ ಆಗಮಿಸಿದ ತಂಡವನ್ನು ಅದ್ಧೂರಿಯಾಗಿ ಸ್ವಾಗತಿಸಲಾಗಿದೆ.
ನಿಯಮಿತ ನಾಯಕ ರೋಹಿತ್ ಶರ್ಮಾ ಬದಲಿಗೆ ಮೂರು ಪಂದ್ಯಗಳ ಟಿ 20 ಸರಣಿಯಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸುತ್ತಿರುವ ಹಾರ್ದಿಕ್ ಪಾಂಡ್ಯ, ಹಿಂದಿನ ಫಲಿತಾಂಶಗಳ ಬಗ್ಗೆ ಯೋಚಿಸುವುದರಲ್ಲಿ ಭಾರತ ತಂಡಕ್ಕೆ ನಂಬಿಕೆ ಇಲ್ಲ ಎಂದು ಹೇಳಿದ್ದಾರೆ.
India-New Zealand First T20I: ಹಾರ್ದಿಕ್ ಪಾಂಡ್ಯ ನಾಯಕ ಮತ್ತು ರಿಷಬ್ ಪಂತ್ ಉಪನಾಯಕರಾಗಿರುತ್ತಾರೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಅವರಂತಹ ಪ್ರಮುಖ ಆಟಗಾರರಿಲ್ಲದೆ ಭಾರತ ಈ ಸರಣಿಯನ್ನು ಆಡಲಿದೆ. ರಾಹುಲ್ ದ್ರಾವಿಡ್ ಬದಲಿಗೆ ವಿವಿಎಸ್ ಲಕ್ಷ್ಮಣ್ ಕೋಚ್ ಆಗಲಿದ್ದಾರೆ.
Team India: 2021ರ ಟಿ 20 ವಿಶ್ವಕಪ್ನಲ್ಲಿ ಸೂಪರ್ 12 ಹಂತದಲ್ಲಿ ಪಂದ್ಯಾವಳಿಯಿಂದ ಹೊರಗುಳಿದ ನಂತರ, ಭಾರತವು ಬ್ಯಾಟಿಂಗ್ ನಲ್ಲಿ ಆಕ್ರಮಣಕಾರಿ ವಿಧಾನವನ್ನು ಅಳವಡಿಸಿಕೊಂಡಿದೆ. ಇದು ದ್ವಿಪಕ್ಷೀಯ ಸರಣಿಗಳಲ್ಲಿ ಉತ್ತಮ ಫಲಿತಾಂಶಗಳನ್ನು ತಂದುಕೊಟ್ಟಿದೆ. ಆದರೆ ಟಿ 20 ವಿಶ್ವಕಪ್ 2022 ರ ಹೊತ್ತಿಗೆ ಆಸ್ಟ್ರೇಲಿಯಾದಲ್ಲಿ ಬ್ಯಾಟಿಂಗ್ ಉತ್ತಮವಾಗಿದ್ದರೂ ಸಹ ಫೀಲ್ಡಿಂಗ್ ಉತ್ತಮವಾಗಿರಲಿಲ್ಲ.
ರೋಹಿತ್ ಶರ್ಮಾ ನೇತೃತ್ವದಲ್ಲಿ ಟೀಮ್ ಇಂಡಿಯಾ ನಿರೀಕ್ಷಿತ ಪ್ರದರ್ಶನ ನೀಡದ ಹಿನ್ನೆಲೆಯಲ್ಲಿ ಈಗ ತಂಡಕ್ಕೆ ಹೊಸ ನಾಯಕನ ಅಗತ್ಯವಿದೆ ಈ ಸಂದರ್ಭದಲ್ಲಿ ನೂತನ ನಾಯಕನ ಹೆಸರು ಹಾರ್ದಿಕ್ ಪಾಂಡ್ಯ ಆಗಿದ್ದಲ್ಲಿ ನಮಗೆ ಯಾವುದೇ ಸಮಸ್ಯೆ ಇಲ್ಲ ಎಂದು ಟೀಮ್ ಇಂಡಿಯಾದ ಮಾಜಿ ಕೋಚ್ ರವಿ ಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.
Hardik Pandya vs Michael Vaughan: ಟೀಂ ಇಂಡಿಯಾವನ್ನು ತೆಗಳುವ ಸಂದರ್ಭದಲ್ಲಿ, “ನಾನು ಭಾರತೀಯ ಕ್ರಿಕೆಟ್ ಅನ್ನು ನಡೆಸುತ್ತಿದ್ದರೆ, ನನ್ನ ಹೆಮ್ಮೆಯನ್ನು ಬಿಟ್ಟು ಇಂಗ್ಲೆಂಡ್ ತಂಡದಿಂದ ಕಲಿಯಲು ಪ್ರಯತ್ನಿಸುತ್ತೇನೆ” ಎಂದು ಮೈಕೆಲ್ ವಾನ್ ಹೇಳಿದ್ದರು. “ಹೆಮ್ಮೆ ಬಿಟ್ಟು ಐಸಿಸಿ ಟೂರ್ನಿಗಳನ್ನು ಗೆಲ್ಲುವುದು ಹೇಗೆ ಎಂಬುದನ್ನು ಇಂಗ್ಲೆಂಡ್ನಿಂದ ಬಿಸಿಸಿಐ ಕಲಿಯಬೇಕು” ಎಂದು ಮೈಕಲ್ ವಾನ್ ಹೇಳಿದ್ದರು. ಇದೀಗ ಮೈಕಲ್ ವಾನ್ ಅವರ ಈ ಕಾಮೆಂಟ್ ಗೆ ಹಾರ್ದಿಕ್ ಪಾಂಡ್ಯ ತಕ್ಕ ಉತ್ತರ ನೀಡಿದ್ದಾರೆ.
Hardik Pandya: ಇದೀಗ ಮೊದಲ T20ಗೂ ಮುನ್ನ, ಹಾರ್ದಿಕ್ ಪಾಂಡ್ಯ ಮತ್ತು ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಬೀದಿಗಳಲ್ಲಿ ಸೈಕಲ್ ಓಡಿಸುತ್ತಿದ್ದಾರೆ. ಈ ವಿಡಿಯೋ ಸದ್ಯ ವೈರಲ್ ಆಗಿದೆ. ಉಭಯ ತಂಡಗಳ ನಾಯಕರು ಕ್ರೊಕೊಡೈಲ್ ಬೈಕ್ ನಲ್ಲಿ ಕುಳಿತುಕೊಂಡು ಮಾತನಾಡುತ್ತಿದ್ದಾರೆ.
Rohit Sharma: ಮುಂಬರುವ ಟಿ 20 ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು, ಬಿಸಿಸಿಐ ಈಗಿನಿಂದ ಶುದ್ಧೀಕರಣವನ್ನು ಪ್ರಾರಂಭಿಸಲು ಯೋಜಿಸುತ್ತಿದೆ. 2024ರಲ್ಲಿ ವಿಶ್ವಕಪ್ ನ್ನು ವೆಸ್ಟ್ ಇಂಡೀಸ್ ಮತ್ತು ಅಮೇರಿಕಾ ಜಂಟಿಯಾಗಿ ಆಯೋಜಿಸುತ್ತದೆ. ಈ ಹಿನ್ನೆಲೆಯಲ್ಲಿ ರೋಹಿತ್ ಶರ್ಮಾ ವಯಸ್ಸು ಸದ್ಯ 35 ವರ್ಷ.ಮುಂದಿನ ವಿಶ್ವಕಪ್ ವೇಳೆಗೆ 37 ವರ್ಷ ತಲುಪಲಿದ್ದಾರೆ. ನಾಯಕನಾಗಿ ಮುಂದುವರಿಯುವ ಸಾಧ್ಯತೆ ಇಲ್ಲ ಎಂಬುದು ತಜ್ಞರ ಅಭಿಪ್ರಾಯ.
ದೀಗ ಭಾರತದ ಮಾಜಿ ಸ್ಫೋಟಕ ಆರಂಭಿಕ ಆಟಗಾರ ಕೃಷ್ಣಮಾಚಾರಿ ಶ್ರೀಕಾಂತ್ ಅವರು ಈ ಸ್ಟಾರ್ ಆಟಗಾರನನ್ನು 2024 ರ ವಿಶ್ವಕಪ್ಗೆ ಟಿ20 ತಂಡದ ಕ್ಯಾಪ್ಟನ್ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಹಾಗಿದ್ರೆ ಆ ಆಟಗಾರ ಯಾರು? ಇಲ್ಲಿದೆ ನೋಡಿ...
Venkatesh Iyer: ಮುಂಬರುವ ಕಿವೀಸ್ ವಿರುದ್ಧದ ಏಕದಿನ ಹಾಗೂ ಟಿ20 ಸರಣಿಗೆ ಟೀಂ ಇಂಡಿಯಾ ಸಿದ್ಧತೆ ಆರಂಭಿಸಿದೆ. ಈ ಪ್ರವಾಸಕ್ಕಾಗಿ ಭಾರತದ ಆಟಗಾರರು ನ್ಯೂಜಿಲೆಂಡ್ ತಲುಪಿದ್ದಾರೆ. ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಟಿ20 ತಂಡದ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಗಾಯದಿಂದ ಚೇತರಿಸಿಕೊಂಡ ನಂತರ ಪಾಂಡ್ಯ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅದರಲ್ಲೂ ಈ ವರ್ಷದ ಐಪಿಎಲ್ನಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ನಾಯಕನಾಗಿ ಮುನ್ನಡೆಸಿ ಕಪ್ ಕೊಡುಗೆಯಾಗಿ ನೀಡಿದ್ದರು.
ಭಾರತದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಮಾತನಾಡಿದ್ದು, ಶೀಘ್ರವೇ ಹಲವು ಕ್ರಿಕೆಟಿಗರು ನಿವೃತ್ತಿಯಾಗುವ ಸಾಧ್ಯತೆ ಇದ್ದು, ತಂಡಕ್ಕೆ ಹೊಸ ನಾಯಕನ ಎಂಟ್ರಿಯಾಗಲಿದೆ ಎಂದು ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.