ಕೊರೊನಾ ಹೆಚ್ಚಳ ಆತಂಕದ ಹಿನ್ನೆಲೆ ಇಂದು ನಡೆಯಬೇಕಿದ್ದ ಸಭೆ ದಿಢೀರ್ ರದ್ದಾಗಿದೆ. ಇಂದು ಬೆಂಗಳೂರಿನ ವಿಧಾನಸೌಧದಲ್ಲಿ ಸಭೆಯನ್ನು ಆಯೋಜಿಸಲಾಗಿತ್ತು. ಇಂದು ಸರ್ಕಾರಿ ರಜೆ ಇದೆ. ಇನ್ನೊಂದು ಕಡೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಡಾ.ಕೆ. ಸುಧಾಕರ್ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಮತ್ತೊಂದು ಕಡೆ, ಆರೋಗ್ಯ ಇಲಾಖೆಯ ಅಧಿಕಾರಿಗಳು ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಭಾಗಿಯಾಗಿರುವ ಕಾರಣ ಸಭೆ ರದ್ದಾಗಿದೆ.
ನೆಸೆಲ್ ವ್ಯಾಕ್ಸಿನ್ ಬಗ್ಗೆ ಈಗಾಗಲೇ ಕೇಂದ್ರದಿಂದ ಅಪ್ರೂವಲ್ ಸಿಕ್ಕಿದೆ. ಪೊಲೀಯೊ ಡ್ರಾಫ್ ರೀತಿಯಲ್ಲೇ ಕ್ವಿಕ್ ಅಗಿ ಮಾಡಲು ಸಾಧ್ಯವೋ ಅದೇ ರೀತಿ ನೆಸೆಲ್ ಬಳಕೆಯಾಗುತ್ತೆ. ವಿಶ್ವದದಲ್ಲಿ ಮೊದಲ ಬಾರಿಗೆ ಈ ವ್ಯಾಕ್ಸಿನ್ ತಯಾರಿಸಲಾಗಿದೆ. ಜನರಿಗೂ ಕೂಡ ಮೂರು ವರ್ಷದಿಂದ ಕೋವಿಡ್ ಎದುರಿಸಿ ಗೊತ್ತಿದೆ. ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಅವರೇ ಕಾಪಾಡ್ತಾರೆ. ಸದ್ಯಕ್ಕೆ ಭಯಪಡುವ ಯಾವುದೇ ಅವಶ್ಯಕತೆ ಇಲ್ಲ ಎಂದು ಆರೋಗ್ಯ ಸಚಿವ ಸುಧಾಕರ್ ಅವರು ಹೇಳಿದರು.
ಕಂದಾಯ ಸಚಿವರ ಜೊತೆ ಮಾತಾಡ್ತೀನಿ, ಸಭೆ ಅವಶ್ಯಕತೆ ಇದ್ರೆ ಮಾಡೋಣಾ, ಕೋವಿಡ್ ಪರೀಕ್ಷೆಗಳನ್ನ ಹೆಚ್ಚಿಗೆ ಮಾಡುತ್ತಿದ್ದೇವೆ, ನಮ್ಮಲ್ಲಿ ಪಾಸಿಟೀವ್ ವಿಟಿ ರೇಟ್ ಕಡಿಮೆಯಿದೆ, ಬೆಂಗಳೂರಲ್ಲಿ ಪ್ರತ್ಯೇಕವಾಗಿ ಗೈಡ್ ಲೈನ್ ತರುವ ಸ್ಥಿತಿ ಇಲ್ಲ ಎಂದು ಸಚಿವ ಸುಧಾಕರ್ ಅವರು ಹೇಳಿದರು. ಅಲ್ಲದೆ, ನಾವು ಪರಿಸ್ಥಿತಿಯನ್ನ ಅವಲೋಕಿಸುತ್ತಿದ್ದೇವೆ ಅಗತ್ಯ ಬಿದ್ರೆ ನೋಡೋಣಾ, ಸದ್ಯ ಏನು ತೊಂದರೆ ಇಲ್ಲ. ಕೋವಿಡ್ ಲಸಿಕೆಯನ್ನ ನಾವು ತರಿಸಿಕೊಳ್ತೀವಿ ಎಂದರು.
ನಿನ್ನೆ ಅಂದರೆ ಜನವರಿ 2 ರಂದು ಹೊಸದಾಗಿ 10 'ಒಮಿಕ್ರಾನ್' ಪ್ರಕರಣಗಳು ರಾಜ್ಯದಲ್ಲಿ ಪತ್ತೆಯಾಗಿವೆ. ಈ ಪೈಕಿ ಬೆಂಗಳೂರಿನಲ್ಲೇ 8 ಕೇಸ್ ಕನ್ಫರ್ಮ್ ಆಗಿದ್ದು, ಧಾರವಾಡದಲ್ಲಿ ಹೊಸದಾಗಿ ಇಬ್ಬರಿಗೆ 'ಒಮಿಕ್ರಾನ್' (Omicron) ಅಟ್ಯಾಕ್ ಮಾಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.