ಎದೆ ಮೇಲೆ ಲವ್ವರ್ ಫೋಟೋ, ಹೆಸರು ಟ್ಯಾಟೋ : ಪ್ರಿಯತಮೆ ಕೊಂದು ಪೀಸ್ ಪೀಸ್ ಮಾಡ್ಬೇಕು ಎಂದುಕೊಂಡಿದ್ದ..! 

ಬರ್ತ್‌ ಡೇ ಮಾಡಿ ಪ್ರಿಯತಮೆಯನ್ನೇ ಕತ್ತು ಕೊಯ್ದು ಕೊಂದಿರುವ ಪಾಪಿಯ ವಿಚಾರಣೆ ವೇಳೆ ಪ್ರಿಯತಮೆ ನವ್ಯಾ ಆತ ಮೇಲೆ ಪ್ರಾಣವನ್ನೇ ಇಟ್ಟುಕೊಂಡಿದ್ದ ಅನ್ನೋದು ಗೊತ್ತಾಗಿದೆ. ಆತನ ಎಡಗಡೆಯ ಎದೆ ಮೇಲೆ ಪ್ರೇಯಸಿ ನವ್ಯಾ ಭಾವಚಿತ್ರದ ಟ್ಯಾಟೂ ಹಾಕಿಸಿಕೊಂಡಿದ್ರೆ, ಬಲ ಎದೆಯ ಮೇಲೆ ನವ್ಯ ಅಂತಾ ಹಚ್ಚೆ ಹಾಕಿಸಿಕೊಂಡಿದ್ದಾನೆ.

Written by - VISHWANATH HARIHARA | Edited by - Krishna N K | Last Updated : Apr 16, 2023, 09:01 AM IST
  • ತಾನೂ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿ ಮಾಡ್ತಿದ್ದ ಪ್ರಿಯತಮೆಯನ್ನೇ ಕೊಂದ ಪ್ರೇಮಿ.
  • ವಿಚಾರಣೆ ವೇಳೆ ಹೊರಬಂತು ಪ್ರೇಮ ಕಹಾನಿಯ ಶಾಕ್ಕಿಂಗ್‌ ಸುದ್ದಿ.
  • ಲವರ್‌ನನ್ನು ಕೊಂದು ಪೀಸ್‌ ಪೀಸ್‌ ಮಾಡ್ಬೇಕು ಎಂದುಕೊಂಡಿದ್ದ ಆರೋಪಿ.
ಎದೆ ಮೇಲೆ ಲವ್ವರ್ ಫೋಟೋ, ಹೆಸರು ಟ್ಯಾಟೋ : ಪ್ರಿಯತಮೆ ಕೊಂದು ಪೀಸ್ ಪೀಸ್ ಮಾಡ್ಬೇಕು ಎಂದುಕೊಂಡಿದ್ದ..!  title=

ಬೆಂಗಳೂರು : ಆತ ಆಕೆಯ ಮೇಲೆ ಪ್ರಾಣವನ್ನೇ ಇಟ್ಕೊಂಡಿದ್ದ. ಎದೆ ಮೇಲೆ ಪ್ರೇಯಸಿಯ ಫೋಟೋ ಹಚ್ಚೆ ಹಾಕಿಸಿಕೊಂಡಿದ್ದ. ಆದ್ರೆ ಅನುಮಾನವೆಂಬ ಭೂತ ಪ್ರೀತಿಯ ಕೋಟೆಯನ್ನೇ ಛಿದ್ರ ಮಾಡಿಬಿಟ್ಟಿತ್ತು. ರಾಜಗೋಪಾಲನಗರದಲ್ಲಿ ನಡೆದ ಪ್ರೇಯಸಿ ಭೀಕರ ಕೊಲೆ ಕೇಸ್ ನ ಮತ್ತಷ್ಟು ಭಯಾನಕ ಸತ್ಯ ವಿಚಾರಣೆ ವೇಳೆ ಬಯಲಾಗ್ತಿದೆ.

ಅದು ಏಪ್ರಿಲ್ 14ರ ಸಂಜೆ. ರಾಜಗೋಪಾಲನಗರದ ಲಗ್ಗೆರೆ ಏರಿಯಾ. ರೂಮ್‌ನಲ್ಲಿ ಪ್ರೇಯಸಿ ನವ್ಯಾ ಬರ್ತ್‌ಡೇ ಮಾಡಿದ್ದ ಪ್ರಿಯಕರ ಪ್ರಶಾಂತ್ ಆಕೆಯ ಉಸಿರನ್ನೇ ನಿಲ್ಲಿಸಿ ಬಿಟ್ಟಿದ್ದ. ನಂತರ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದ. ಆರೋಪಿ ವಶಕ್ಕೆ ಪಡೆದು ರಾಜಗೋಪಾಲನಗರ ಠಾಣೆ ಪೊಲೀಸರು ವಿಚಾರಣೆ ನಡೆಸುತ್ತಿದ್ದು ಬೆಚ್ಚಿಬೀಳೊ ಸಂಗತಿಗಳಿ ಹೊರಬಿದ್ದಿದೆ.

ಇದನ್ನೂ ಓದಿ:ಬರ್ತ್‌ಡೇ ಪಾರ್ಟಿ ವೇಳೆ ಪ್ರಿಯತಮೆ ಚಾಟಿಂಗ್ : ಕೊಂದು ಡೆಡ್ ಬಾಡಿ ಜೊತೆ 5 ತಾಸು ಕಳೆದ ಪ್ರೇಮಿ..! 

ತಾನೂ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿ ಮಾಡ್ತಿದ್ದ ಪ್ರಿಯತಮೆಯನ್ನೇ ಕತ್ತು ಕೊಯ್ದು ಕೊಂದಿರುವ ಪಾಪಿಯ ವಿಚಾರಣೆ ವೇಳೆ ಪ್ರಿಯತಮೆ ನವ್ಯಾ ಆತ ಮೇಲೆ ಪ್ರಾಣವನ್ನೇ ಇಟ್ಟುಕೊಂಡಿದ್ದ ಅನ್ನೋದು ಗೊತ್ತಾಗಿದೆ. ಆತನ ಎಡಗಡೆಯ ಎದೆ ಮೇಲೆ ಪ್ರೇಯಸಿ ನವ್ಯಾ ಭಾವಚಿತ್ರದ ಟ್ಯಾಟೂ ಹಾಕಿಸಿಕೊಂಡಿದ್ರೆ, ಬಲ ಎದೆಯ ಮೇಲೆ ನವ್ಯ ಅಂತಾ ಹಚ್ಚೆ ಹಾಕಿಸಿಕೊಂಡಿದ್ದಾನೆ.

ನವ್ಯಾ ಮತ್ತು ಪ್ರಶಾಂತ್ ದೂರದ ಸಂಬಂಧಿಗಳಾಗಿದ್ರು. ಇವರಿಬ್ಬರ ಪ್ರೀತಿಗೆ ನವ್ಯಾ ಕುಟುಂಬಸ್ಥರು ಅಡ್ಡವಾಗಿದ್ರು. ಪ್ರಶಾಂತ್ ಪದೇ ಪದೇ ಕಿರುಕುಳ‌ ಕೊಡ್ತಿದ್ದಾನೆ ಅಂತಾ ಯುವತಿ ತಾಯಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ರು.‌ ಕೋರಮಂಗಲ‌ ಪೊಲೀಸ್ ಠಾಣೆಯಲ್ಲಿ ಎನ್‌ಸಿಆರ್ ಕೂಡ ದಾಖಲಾಗಿದ್ದು, ಪ್ರಶಾಂತ್‌ನನ್ನ ಕರೆದು ನವ್ಯಾ ತಂಟೆಗೆ ಹೋಗದಂತೆ ಪೊಲೀಸರು ಬುದ್ಧಿವಾದ ಹೇಳಿದ್ರು. ಆತ ಕೂಡ ನಾನು ಆಕೆಯ ಸಹವಾಸಕ್ಕೆ ಹೋಗೋದಿಲ್ಲ ಅಂತಾ ಬರೆದು ಕೊಟ್ಟಿದ್ದ. ಅದಾಗಿಯೂ ಇಬ್ಬರು ಪರಸ್ಪರ ದೂರವಾಗಿರ್ಲಿಲ್ಲ. ಮತ್ತೆ ಮಾತನಾಡೋಕೆ ಶುರು ಮಾಡಿಕೊಂಡಿದ್ರು. ಆಗಾಗ ಭೇಟಿ ಕೂಡ ಆಗ್ತಿದ್ರು. ಅದೇ ರೀತಿ ಬರ್ತ್ ಡೇ ಆಚರಣೆಗೆ ಅಂತಾ ಕರೆದುಕೊಂಡು ಬಂದು ಈಗ ನವ್ಯಾಳನ್ನು ಹತ್ಯೆ ಮಾಡಿದ್ದಾನೆ.

ಇದನ್ನೂ ಓದಿ:ಬೆಂಬಲ ಬೆಲೆಯಡಿ ಕಡಲೆ ಖರೀದಿ: ಹಣ ಪಾವತಿಯಲ್ಲಿ ವಿಳಂಬ

ಇನ್ನು ನವ್ಯಾ ಕೊಂದು ಐದು ಗಂಟೆ ಮೃತದೇಹದ ಜೊತೆಗೆ ಇದ್ದ ಆರೋಪಿ ಪ್ರಶಾಂತ್ ಕೊಲೆ ಬಳಿಕ ನವ್ಯಾ ಮೃತದೇಹ ಪೀಸ್ ಪೀಸ್ ಮಾಡಿ ಒಂದೊಂದೇ ಭಾಗವನ್ನು ಎಸೆಯುವ ಪ್ಲಾನ್ ಮಾಡಿದ್ದ. ಅಷ್ಟೇ ಅಲ್ಲ ತಾನೂ ಕೂಡ ಆತ್ಮಹತ್ಯೆ ಮಾಡಿಕೊಳ್ಳೋ ಯೋಚನೆ ಮಾಡಿದ್ದ. ಆದರೆ ಅದ್ಯಾವುದನ್ನೂ ಮಾಡದ ಪರಮ ಪಾಪಿ ರಾಜಗೋಪಾಲನಗರ ಠಾಣೆಗೆ ಹೋಗಿ ಶರಣಾಗಿದ್ದ.

ಇದಕ್ಕೂ ಮುನ್ನ ಯುವತಿ ಮೊಬೈಲ್ ಜೊತೆಗೆ ರೆಸ್ಟ್ ರೂಮ್‌ಗೆ ಹೋಗಿದ್ದಾಗ ಈತನಿಗೆ ಅನುಮಾನ ಶುರುವಾಗಿತ್ತು. ಹೊರ ಬಂದಿದ್ದೇ ಮೊಬೈಲ್ ಕೇಳಿದ್ದ. ಕೊಡದಿದ್ದಕ್ಕೆ ಚಾಕು ತೆಗೆದುಕೊಂಡು ತಾನೇ ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಬೆದರಿಸಿದ್ದ. ಆದರೆ ಅದೇನಾಯ್ತೋ ಏನೋ. ನವ್ಯಾಳ ಕತ್ತನ್ನೇ ಕೊಯ್ದು ಅಟ್ಟಹಾಸ ಮೆರೆದಿದ್ದ.
ಅದೇನೇ ಹೇಳಿ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿ ಮಾಡ್ತಿದ್ದವನು ಪ್ರೇಯಸಿಯನ್ನೇ ಕೊಂದಿದ್ದಾನೆ. ಅನುಮಾನ ಇದ್ದಿದ್ದರೆ ಮಾತಾಡಿ ಸಮಸ್ಯೆ ಬಗೆಹರಿಸಿಕೊಳ್ಳಬಹುದಿತ್ತು. ಆದರೆ ಒಂದು ಜೀವವೇ ಹೋದ್ರೆ ಏನೂ ಗತಿ. ಈತನು ಕೂಡ ಪೊಲೀಸರ ವಶದಲ್ಲಿದ್ದಾನೆ..ವಿಚಾರಣೆ ವೇಳೆ ಮತ್ಯಾವ ಭಯಾನಕ ಸತ್ಯ ಬಯಲಾಗುತ್ತೋ ಕಾದುನೋಡಬೇಕಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News