ʼವಿನಯ್‌ ಎಲಿಮಿನೇಟ್‌ ಆಗಬೇಕಿತ್ತು ಎಂದು ಕಾದ್ದಿದೆʼ: ಸಂಗೀತಾಗೆ ಯಾಕಿಷ್ಟು ಕೋಪ?

Bigg Boss: ಬಿಗ್‌ಬಾಸ್‌ ಮನೆಯ 3ನೇ ವಾರದ ರಕ್ಷಕ್ ಮತ್ತು ವಿನಯ್ ಗೌಡ ಅವರು ಎಲಿಮಿನೇಷನ್‌ ಅಂಗಳಕ್ಕೆ ಎಂಟ್ರಿ ಕೊಟ್ಟಿದ್ದರು. ಅದರಲ್ಲಿ ವಿನಯ್‌ ಜಸ್ಟ್ ಮಿಸ್ ಪಾರಾಗಿ ಮತ್ತೆ ಬಿಗ್ ಬಾಸ್ ಮನೆ ಸೇರಿಕೊಂಡಿದ್ದಾರೆ. ಆದರೆ ವಿನಯ್‌ಗೆ ಇಂಥ ಸ್ಥಿತಿ ಬಂದಿದ್ದು ಸಂಗೀತಾಗೆ ತುಂಬ ಇಷ್ಟವಾಗಿತ್ತಂತೆ.

Written by - Zee Kannada News Desk | Last Updated : Nov 6, 2023, 06:05 PM IST
  • ಬಿಗ್‌ಬಾಸ್‌ ಮನೆಯ 3ನೇ ವಾರದ ರಕ್ಷಕ್ ಮತ್ತು ವಿನಯ್ ಗೌಡ ಅವರು ಎಲಿಮಿನೇಷನ್‌ ಅಂಗಳಕ್ಕೆ ಎಂಟ್ರಿ ಕೊಟ್ಟಿದ್ದರು.
  • ವಿನಯ್ ಗೌಡ ಎಲಿಮಿನೇಷನ್‌ ಅಂಚಿಗೆ ಬಂದು ಕುಳಿತಿದ್ದು, ಬಿಗ್‌ಬಾಸ್ ಮನೆಯಲ್ಲಿ ಬಹುತೇಕ ಸ್ಪರ್ಧಿಗಳಿಗೆ ಶಾಕ್ ನೀಡಿತ್ತು ಶಾಕ್ ಅನಿಸಿತ್ತು.
  • ವಿನಯ್‌ ಹಾಗೂ ರಕ್ಷಕ್‌ ಮನೆಯ ಆಕ್ಟಿವಿಟಿ ರೂಮ್‌ಗೆ ಹೋಗುವ ಮುನ್ನ ನಾನು ಮಾತನಾಡಿರುವ ಮಾತುಗಳಿಗೆ ಕ್ಷಮೆ ಕೇಳಿದರು.
ʼವಿನಯ್‌ ಎಲಿಮಿನೇಟ್‌ ಆಗಬೇಕಿತ್ತು ಎಂದು ಕಾದ್ದಿದೆʼ: ಸಂಗೀತಾಗೆ ಯಾಕಿಷ್ಟು ಕೋಪ? title=

Bigg Boss Kannada 10 Elimination: ಬಿಗ್‌ಬಾಸ್‌ ಮನೆಯಲ್ಲಿ ಮೂರನೇ ಎಲಿಮಿನೇಷನ್‌ ಪ್ರಕ್ರಿಯೆ ನಡೆದಿದ್ದು, ಕಳೆದ ವಾರ 9 ಮಂದಿ ನಾಮಿನೇಟ್ ಆಗಿದ್ದರು. ಅದರಲ್ಲಿ 7 ಮಂದಿ ಸೇಫ್ ಆಗಿ, ಕೊನೆಯಲ್ಲಿ ವಿನಯ್ ಗೌಡ ಮತ್ತು ರಕ್ಷಕ್‌  ಎಲಿಮಿನೇಷನ್‌ ಅಂಗಳದಲ್ಲಿದ್ದರು. ಬಿಗ್ ಬಾಸ್‌ ಕಠಿಣ ಸ್ಪರ್ಧಿ ಎನಿಸಿಕೊಂಡಿದ್ದ ವಿನಯ್‌ಗೆ ಇಂಥ ಸ್ಥಿತಿ ಬಂದಿದ್ದು, ಇತರೆ ಸ್ಪರ್ಧಿಗಳಿಗೂ ಶಾಕ್ ನೀಡಿದ್ದು,'ಈ ಸ್ಥಿತಿಯಲ್ಲಿ ವಿನಯ್ ಕುಳಿತಿರುವುದು ಯಾರಿಗೆಲ್ಲ ಇಷ್ಟವಾಗುತ್ತಿದೆ' ಎಂದು ಸುದೀಪ್ ಕೇಳಿದರು. ಅದಕ್ಕೆ ಸಂಗೀತಾ ಶೃಂಗೇರಿ ನಮಗೆ ಇಷ್ಟವಾಗಿದೆ ಎಂಬರ್ಥದಲ್ಲಿ ಕೈಎತ್ತಿದರು.

ಆ ಬಗ್ಗೆ ಪ್ರತಿಕ್ರಿಯೆ ನೀಡಿದ ಸಂಗೀತಾ, "ವಿನಯ್ ಗೌಡ ಹೇಳಿರುವಂತಹ ಮಾತು ತುಂಬ ಕಠಿಣವಾಗಿತ್ತು, ತುಂಬ ಒರಟಾಗಿತ್ತು. ಅದಕ್ಕಾಗಿ ಅವರು ಈ ಪರಿಸ್ಥಿತಿಯಲ್ಲಿ ಕುಳಿತಿರುವುದು ಖಂಡಿತ ನನಗೆ ತುಂಬ ಖುಷಿಯೇ ಇದೆ. ಅವರಾಗಿರಲಿ, ಬೇರೆ ಯಾರೇ ಆಗಿರಲಿ ಇಂಥ ಮಾತುಗಳನ್ನು ಹೇಳಿದ್ದಕ್ಕಾಗಿ ಅವರು ಅಲ್ಲಿ ಕೂರಲೇಬೇಕು" ಎಂದು ಸಂಗೀತಾ ಶೃಂಗೇರಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ತನಿಷಾ ಅವರಿಗೂ ಈ ಬಗ್ಗೆ ಸುದೀಪ್ ಕೇಳಿದಕ್ಕೆ, ಸಂಗೀತಾ ಹೇಳಿದ ಮಾತಿಗೆ ನಂದು ಸಹಮತ ಇದೆ ಅನ್ನೋ ಥರ ತನಿಷಾ ಸೂಚಿಸಿದರು.

ಇದನ್ನು ಓದಿ: Drone Prathap: "ಓವರ್‌ನೈಟ್ ಹೀರೋ ಆಗ್ಬಿಟ್ರಲ್ಲಾ ಸರ್‌"... ಡ್ರೋನ್ ಬುದ್ಧಿವಂತಿಕೆಗೆ ಕಿಚ್ಚನ ಮೆಚ್ಚುಗೆ!

ವಿನಯ್ ಗೌಡ ತುಂಬ ಸ್ಟ್ರಾಂಗ್ ಸ್ಪರ್ಧಿ ಅಂತಲೇ ಬಿಂಬಿಸಲಾಗಿದೆ. ಅಲ್ಲದೆ, ಅವರನ್ನು ಬಿಗ್ ಬಾಸ್ ಮನೆಯ ಆನೆ ಅಂತೆಲ್ಲ ವರ್ಣಿಸಲಾಗಿದೆ. ಅಂತಹ ಸ್ಪರ್ಧಿ ಎಲಿಮಿನೇಷನ್‌ ಅಂಚಿಗೆ ಬಂದು ಕುಳಿತಿದ್ದು, ಬಿಗ್‌ಬಾಸ್ ಮನೆಯಲ್ಲಿ ರಕ್ಷಕ್, ಭಾಗ್ಯಶ್ರೀ, ತನಿಷಾಗೆ ಬಿಟ್ಟು  ಬಹುತೇಕ ಸ್ಪರ್ಧಿಗಳಿಗೆ ಶಾಕ್ ನೀಡಿತ್ತು ಶಾಕ್ ಅನಿಸಿತ್ತು.

ಬಳಿಕ ವಿನಯ್‌ ಹಾಗೂ ರಕ್ಷಕ್‌ ಮನೆಯ ಆಕ್ಟಿವಿಟಿ ರೂಮ್‌ಗೆ ಹೋಗುವ ಮುನ್ನ ನಾನು ಮಾತನಾಡಿರುವ ಮಾತುಗಳಿಗೆ ಕ್ಷಮೆ ಇರಲಿ. ಅದಕ್ಕೆ ಗೊತ್ತಿಲ್ಲದೇ ಆಗಿದ್ದು. ನಾನು ನನ್ನ ಆಟವನ್ನು ಚೆನ್ನಾಗಿ ಆಡಿದ್ದೇನೆ.." ಎಂದು ವಿನಯ್ ಹೇಳಿದರು. ಆನಂತರ ಎಲಿಮಿನೇಷನ್‌ನಿಂದ ಬಚಾವ್ ಆಗಿ ಮನೆಯೊಳಗೆ ವಾಪಸ್‌ ಬಂದ ವಿನಯ್‌, ಸಂಗೀತಾ ಅವರಿಗೆ, "ಉತ್ತಮವಾಗಿ ಆಡಿದ್ರಿ, ನನ್ನನ್ನು ಕ್ಷಮಿಸಿ.." ಎಂದು ಶೇಕ್‌ಹ್ಯಾಂಡ್ ನೀಡಿದರು. ಆದರೆ ಸಂಗೀತಾ ಮುಖದಲ್ಲಿ ಯಾವುದೇ ಖುಷಿ ಕಾಣಿಸಲಿಲ್ಲ. ವಿನಯ್‌ ಮರಳಿ ಬಂದಿದ್ದು ಸಂಗೀತಾ ಬೇಸರಕ್ಕೆ ಕಾರಣವಾಗಿತ್ತು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News