ಮದುವೆ ಮಾಡಿಸಿದ ಪೂಜಾರಿಗೆ ಅಂಬಾನಿ ನೀಡಿದ ದಕ್ಷಿಣೆ ಎಷ್ಟು ಗೊತ್ತೆ..? ಬೆಚ್ಚಿಬೀಳ್ತೀರಾ...!!

Anant Radhika marriage : ಏಷ್ಯಾದ ಶ್ರೀಮಂತ ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಅವರ ವಿವಾಹ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಅದ್ಧೂರಿಯಾಗಿ ನಡೆಯಿತು. ಈ ಮದುವೆ ಸಮಾರಂಭದಲ್ಲಿ ಜಗತ್ತಿನಾದ್ಯಂತ ಅನೇಕ ಸೆಲೆಬ್ರಿಟಿಗಳು ಭಾಗವಹಿಸಿದ್ದರು. ಇದೀಗ ಅನಂತ್‌ ರಾಧಿಕಾ ಮದುವೆ ಮಾಡಿಸಿದ ಪೂಜಾರಿ ವಿಚಾರವಾಗಿ ಚರ್ಚೆ ನಡೆಯುತ್ತಿದೆ..   

Written by - Krishna N K | Last Updated : Jul 14, 2024, 08:51 PM IST
    • ಅನಂತ್ ಅಂಬಾನಿ ಅವರ ವಿವಾಹ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಅದ್ಧೂರಿಯಾಗಿ ನಡೆಯಿತು.
    • ಈ ಮದುವೆ ಸಮಾರಂಭದಲ್ಲಿ ಜಗತ್ತಿನಾದ್ಯಂತ ಅನೇಕ ಸೆಲೆಬ್ರಿಟಿಗಳು ಭಾಗವಹಿಸಿದ್ದರು.
    • ಅನಂತ್‌ ರಾಧಿಕಾ ಮದುವೆ ಮಾಡಿಸಿದ ಪೂಜಾರಿ ವಿಚಾರವಾಗಿ ಚರ್ಚೆ ನಡೆಯುತ್ತಿದೆ..
ಮದುವೆ ಮಾಡಿಸಿದ ಪೂಜಾರಿಗೆ ಅಂಬಾನಿ ನೀಡಿದ ದಕ್ಷಿಣೆ ಎಷ್ಟು ಗೊತ್ತೆ..? ಬೆಚ್ಚಿಬೀಳ್ತೀರಾ...!! title=
anant ambani marriage

Pandit Chandrashekhar sharma : ಮುಖೇಶ್-ನೀತಾ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಅವರ ವಿವಾಹವು ಶತಮಾನಗಳ ಕಾಲ ನೆನಪಿನಲ್ಲಿ ಉಳಿಯುವ ರೀತಿಯಲ್ಲಿ ಅದ್ಧೂರಿಯಾಗಿ ನೆರವೇರಿತು. ಈ ಮದುವೆ ಸಮಾರಂಭದಲ್ಲಿ ವಿದೇಶದ ಅನೇಕ ಸೆಲೆಬ್ರಿಟಿಗಳು ಭಾಗಿಯಾಗಿದ್ದರು. ಈ ವಿವಾಹ ಮಹೋತ್ಸವಕ್ಕೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿದ ಅಂಬಾನಿ ಕುಟುಂಬ, ಅತಿಥಿಗಳಿಗೆ ಅಷ್ಟೇ ಮೊತ್ತದ ಉಡುಗೊರೆ ನೀಡಿದೆ. 

ಇದೀಗ ಅನಂತ್‌ ಮತ್ತು ರಾಧಿಕಾ ಮದುವೆ ಮಾಡಿಸಿದ ಪೂಜಾರಿಯವರ ಬಗ್ಗೆ ಈಗ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಆ ಪೂಜಾರಿ ಯಾರು? ಈತನಿಗೆ ಎಷ್ಟು ದಕ್ಷಿಗೆ ನೀಡಿದ್ದಾರೆ..? ಎಂಬ ಪ್ರಶ್ನೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಖ್ಯಾತ ಜ್ಯೋತಿಷಿ, ಪುರೋಹಿತ, ಪಂಡಿತ್ ಚಂದ್ರಶೇಖರ್ ಶರ್ಮಾ ಅವರು ಅನಂತ್ ಅಂಬಾನಿ ಮದುವೆ ಮಾಡಿಸಿದ್ದಾರೆ. 

ಇದನ್ನೂ ಓದಿ:ಮೋಡಿ ಮಾಡುತ್ತಿದೆ ನಭಾ ಗ್ಲಾಮರಸ್ ಲುಕ್‌..! ಫೋಟೋಸ್‌ ಮರೆಯದೇ ನೋಡಿ..

ಚಂದ್ರಶೇಖರ್ ಶರ್ಮಾ ಅವರು ಅಂಬಾನಿ ಕುಟುಂಬದಲ್ಲಿನ ಜರುಗುವ ಅನೇಕ ಪೂಜಾ ಕಾರ್ಯಕ್ರಮಗಳು ಮತ್ತು ಶುಭ ಕಾರ್ಯಗಳನ್ನು ಮಾಡಿಕೊಡುತ್ತಾರೆ. ಗುಜರಾತ್‌ನ ಜಮಾನಗರದಲ್ಲಿ ನಡೆದ ಅನಂತ್ ಅಂಬಾನಿ ಅವರ ವಿವಾಹ ಪೂರ್ವ ಸಮಾರಂಭದಲ್ಲಿ ಚಂದ್ರಶೇಖರ ಶರ್ಮಾ ಉಪಸ್ಥಿತರಿದ್ದರು. 

ಗಣೇಶ ಚತುರ್ಥಿ ಆಚರಣೆ ಸೇರಿದಂತೆ ಅಂಬಾನಿ ಕುಟುಂಬದ ಪ್ರತಿ ಸಂಭ್ರಮಾಚರಣೆಯಲ್ಲಿ ಈ ಗುರೂಜಿ ಇರುತ್ತಾರೆ. ಕೆಲವು ದಿನಗಳ ಹಿಂದೆ ಮುಂಬೈ ಇಂಡಿಯನ್ಸ್ ತಂಡದೊಂದಿಗೆ ಕಾಣಿಸಿಕೊಂಡಿದ್ದರು. ಈ ಫೋಟೋದಲ್ಲಿ ನೀತಾ ಅಂಬಾನಿ, ರಾಧಿಕಾ ಮರ್ಚೆಂಟ್ ಮತ್ತು ಆಕಾಶ್ ಅಂಬಾನಿ ಕೂಡ ಇದ್ದರು. 

ಇದನ್ನೂ ಓದಿ: ಅಂಬಾನಿ ಮದುವೆ ಸಂಭ್ರಮ ಹೆಚ್ಚಿಸಿದ ಸಾರಾ ಸೌಂದರ್ಯ..! ಸಚಿನ್‌ ಪುತ್ರಿಯ ಫೋಟೋಸ್‌ ಇಲ್ಲಿವೆ

ಸಾಮಾನ್ಯವಾಗಿ ಪಂಡಿತ್ ಚಂದ್ರಶೇಖರ ಶರ್ಮಾ ಅವರು ರೂ. 25,000 ಶುಲ್ಕ ಪಡೆಯುತ್ತಾರೆ. ಆದರೆ, ಅನಂತ್ ಅಂಬಾನಿ ಅವರ ವಿವಾಹ ಮಹೋತ್ಸವಕ್ಕೆ ಇವರಿಗೆ ಲಕ್ಷಗಟ್ಟಲೇ ದಕ್ಷಿಣೆ ನೀಡಲಾಗಿದೆ ಎಂದು ವರದಿಯಾಗಿದೆ. ಜೊತೆಗೆ ಅವರಿಗೆ ಐಷಾರಾಮಿ ವಸತಿ ಹಾಗೂ ದುಬಾರಿ ಉಡುಗೊರೆಗಳನ್ನು ನೀಡಲಾಗಿತ್ತು ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ. ಆದರೆ ಇದು ಅಧಿಕೃತವಲ್ಲ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News