ಐಶ್ವರ್ಯ ಅಭಿಷೇಕ್ ಮನಸ್ತಾಪಕ್ಕೆ ಈ ನಟಿಯೇ ಕಾರಣವಂತೆ !ಜಯಾ ಬಚ್ಚನ್ ಗೂ ಇದೆ ಇದರ ಸಂಪೂರ್ಣ ಮಾಹಿತಿ

ವಿಶ್ವದ ಗಮನವೇ ಸೆಳೆದಿದ್ದ ಈ ಜೋಡಿ ಮಧ್ಯೆ ಬಿರುಕು ಮೂಡಿದ್ದಾದರೂ ಯಾಕೆ ಎನ್ನುವ ಪ್ರಶ್ನೆ ಇಲ್ಲಿ ಕಾಡಿಯೇ ಕಾಡುತ್ತದೆ. ಆದರೆ ಇದೆಲ್ಲದಕ್ಕೂ ಕಾರಣ ಒಬ್ಬ ನಟಿ ಎಂದು ಹೇಳಲಾಗುತ್ತದೆ.  

Written by - Ranjitha R K | Last Updated : Jul 18, 2024, 04:39 PM IST
  • ಐಶ್ವರ್ಯ ಅಭಿಷೇಕ್ ಮನಸ್ತಾಪದ ಬಗ್ಗೆ ಇದೀಗ ಎಲ್ಲೆಡೆ ಚರ್ಚೆಯಾಗುತ್ತಿದೆ.
  • ಈ ಜೋಡಿ ಮಧ್ಯೆ ಎಲ್ಲವೂ ಸರೀಲ್ಲ ಎಂದೇ ಹೇಳಲಾಗುತ್ತಿದೆ.
  • ಈ ದೃಶ್ಯ ಅನಂತ್ ಅಂಬಾನಿ ಮದುವೆಯಲ್ಲಿಯೂ ಕಂಡು ಬಂದಿದೆ
ಐಶ್ವರ್ಯ ಅಭಿಷೇಕ್ ಮನಸ್ತಾಪಕ್ಕೆ ಈ ನಟಿಯೇ ಕಾರಣವಂತೆ !ಜಯಾ ಬಚ್ಚನ್ ಗೂ ಇದೆ ಇದರ ಸಂಪೂರ್ಣ ಮಾಹಿತಿ   title=

Aishwarya Rai : ಐಶ್ವರ್ಯ ಅಭಿಷೇಕ್ ಮನಸ್ತಾಪದ ಬಗ್ಗೆ ಇದೀಗ ಎಲ್ಲೆಡೆ ಚರ್ಚೆಯಾಗುತ್ತಿದೆ.ಈ ಜೋಡಿ ಮಧ್ಯೆ ಎಲ್ಲವೂ ಸರೀಲ್ಲ ಎಂದೇ ಹೇಳಲಾಗುತ್ತಿದೆ. ಇದಕ್ಕೆ ಪೂರಕ ಎಂಬಂತೆ ಇವರಿಬ್ಬರೂ ಎಲ್ಲಿಯೂ ಜೊತೆಯಾಗಿ ಕಾಣಿಸಿಕೊಳ್ಳುವುದಿಲ್ಲ. ಅಭಿಷೇಕ್ ಇಡೀ ಕುಟುಂಬವೆ ಜೊತೆಗಿದ್ದರೂ ಅಲ್ಲಿ ಪತ್ನಿ ಐಶ್ವರ್ಯ ರೈ ಮತ್ತು ಮಗಳು ಆರಾಧ್ಯ ಇರುವುದಿಲ್ಲ. 

ಈ ದೃಶ್ಯ ಅನಂತ್ ಅಂಬಾನಿ ಮದುವೆಯಲ್ಲಿಯೂ ಕಂಡು ಬಂದಿದೆ. ಅಭಿಷೇಕ್ ತನ್ನ ಸಹೋದರಿ ಮತ್ತವರ ಮಕ್ಕಳು, ತಂದೆ ಅಮಿತಾಬ್, ತಾಯಿ ಜಯಾ ಬಚ್ಚನ್ ಜೊತೆ ಬಂದಿದ್ದರೆ, ಸುಮಾರು ಗಂಟೆಗಳ ನಂತರ ಐಶ್ವರ್ಯ ಮತ್ತು ಆರಾಧ್ಯ ಸಮಾರಂಭಕ್ಕೆ ಎಂಟ್ರಿ ಕೊಡುತ್ತಾರೆ.

ಇದನ್ನೂ ಓದಿ : Amruthadhare serial: ಅಮೃತಧಾರೆ ಮಲ್ಲಿ ನಿಜಕ್ಕೂ ಯಾರು ಗೊತ್ತಾ? ಈಕೆ ಬರೀ ನಟಿ ಮಾತ್ರವಲ್ಲ!!

ವಿಶ್ವದ ಗಮನವೇ ಸೆಳೆದಿದ್ದ ಈ ಜೋಡಿ ಮಧ್ಯೆ ಬಿರುಕು ಮೂಡಿದ್ದಾದರೂ ಯಾಕೆ ಎನ್ನುವ ಪ್ರಶ್ನೆ ಇಲ್ಲಿ ಕಾಡಿಯೇ ಕಾಡುತ್ತದೆ. ಆದರೆ ಇದೆಲ್ಲದಕ್ಕೂ ಕಾರಣ ಒಬ್ಬ ನಟಿ ಎಂದು ಹೇಳಲಾಗುತ್ತದೆ.  

ಅಂದ ಹಾಗೆ ಐಶ್ವರ್ಯ ನಟಿ ರೇಖಾ ಜೊತೆ ಬಹಳ ಸಲಿಗೆಯಿಂದ ಇರುತ್ತಾರೆ. ಯಾವುದೇ ಸಭೆ ಸಮಾರಂಭ ಇರಲಿ ಎಲ್ಲೇ ಇರಲಿ ಇವರಿಬ್ಬರ ನಡುವಿನ ಬಾಂಧವ್ಯ ಅಲ್ಲಿ ಕಾಣಸಿಗುತ್ತದೆ. ಆದರೆ ಜಯಾಬಚ್ಚನ್ ಗಾಗಲೀ, ಬಚ್ಚನ್ ಪರಿವಾರಕ್ಕಾಗಲೀ ಇದು ಇಷ್ಟವಿಲ್ಲವಂತೆ. ಬಚ್ಚನ್ ಪರಿವಾರ ನಟಿ ರೇಖಾ ಜೊತೆ ಅಂತರ ಕಾಯ್ದುಕೊಂಡೆ ಬಂದಿದೆ. ಆದರೆ ಐಶ್ವರ್ಯ ಅದಕ್ಕೆ ತಯಾರಿಲ್ಲ ಎನ್ನಲಾಗಿದೆ. 

ಇದನ್ನೂ ಓದಿ : 2023ರ ಸೈಮಾ ನಾಮಿನೇಷನ್: ರೇಸ್ ನಲ್ಲಿ ಕಾಟೇರ, ಸಪ್ತ ಸಾಗರದಾಚೆ ಎಲ್ಲೋ ಸೈಡ್-ಎ!

ಇನ್ನು ಐಶ್ವರ್ಯ ಈ ವರ್ತನೆಗೆ ಅಭಿಷೇಕ್ ಸಹೋದರಿ ಶ್ವೇತಾ ಕಾರಣ ಎನ್ನುವ ಮಾತು ಕೂಡಾ ಇದೆ. ಅಭಿಷೇಕ್ ಬಚ್ಚನ್ ಮತ್ತು ಕರಿಷ್ಮಾ ಕಪೂರ್ ನಿಶ್ಚಿತಾರ್ಥ ಮುರಿದು ಬಿದ್ದದ್ದು ಜಗತ್ತಿಗೆ ಗೊತ್ತಿರುವ ವಿಚಾರ. ಇದರ ಮಧ್ಯೆ, ಐಶ್ವರ್ಯ ತನ್ನ ಅತ್ತಿಗೆ ರೂಪದಲ್ಲಿ ಬರುವುದು ಶ್ವೇತಾಗೆ ಸುತಾರಾಂ ಇಷ್ಟವಿರಲಿಲ್ಲವಂತೆ. ಶ್ವೇತಾ ಈಗಲೂ ಕರೀಷ್ಮಾ ಜೊತೆ ತನ್ನ ಸ್ನೇಹವನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಇದು ಐಶ್ವರ್ಯಾ ಅವರನ್ನು ಕೆರಳಿಸುತ್ತದೆ. 

ಒಟ್ಟಿನಲ್ಲಿ ಸಣ್ಣ ಸಣ್ಣ ವಿಚಾರ ದೊಡ್ಡದಾಗಿ ಚೆಂದದ ಸಂಸಾರದಲ್ಲಿ ಬಿರುಕು ಮೂಡಿದೆ ಎನ್ನುವ ಮಾತು ಬಾಲಿವುಡ್ ಅಂಗಳದಿಂದ ಕೇಳಿ ಬರುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

 

Trending News