Shivanna's Daughter New Film: ಚಿತ್ರ ನಿರ್ಮಾಣದಲ್ಲಿ ಶಿವಣ್ಣನ ಪುತ್ರಿ: ನಿವೇದಿತಾಳ ಹೊಸ ಸಿನಿಮಾ ಯಾವುದು ಗೊತ್ತಾ..?

Shiva Rajkumar Daughter: ಡಾ ರಾಜ್‌ ಕುಮಾರ್‌ ಕಾಲದಿಂದ ದೊಡ್ಮನೆಯಿಂದ ಕನ್ನಡ ಚಿತ್ರರಂಗಕ್ಕೆ ಕೊಡುಗೆಗಳ ಸುರಿಮಳೆ ಸುರಿಸಿದ್ದಾರೆ. ಇದರ ಸಾಲಿನಲ್ಲಿ ಇದೀಗ ದೊಡ್ಮನೆ ಕುಡಿಯಾಗಿರುವ ಶಿವಣ್ಣನ ಪುತ್ರಿ ನಿವೇದಿತಾ ಚಿತ್ರ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. 

Written by - Zee Kannada News Desk | Last Updated : May 2, 2023, 12:52 PM IST
  • ಡಾ. ರಾಜ್ ಕುಮಾರ್‌ ಕುಟುಂಬದಿಂದ ಕನ್ನಡ ಚಿತ್ರರಂಗಕ್ಕೆ ಕೊಡುಗೆಗಳ ಸುರಿಮಳೆ
  • ಇದೀಗ ದೊಡ್ಮನೆ ಕುಡಿಯಾಗಿರುವ ಶಿವಣ್ಣನ ಪುತ್ರಿ ನಿವೇದಿತಾ ಚಿತ್ರ ನಿರ್ಮಾಣ
  • ಶ್ರೀ ಮುತ್ತು ಸಿನಿ ಸರ್ವಿಸ್ ನಡಿ ಹೊಸ ಪ್ರತಿಭೆಗಳಿ ಪ್ರೋತ್ಸಾಹ ನೀಡಲು ಮುಂದಾಗಿರುವ ಶಿವಣ್ಣನ ಪುತ್ರಿ
Shivanna's Daughter New Film: ಚಿತ್ರ ನಿರ್ಮಾಣದಲ್ಲಿ ಶಿವಣ್ಣನ ಪುತ್ರಿ: ನಿವೇದಿತಾಳ ಹೊಸ ಸಿನಿಮಾ ಯಾವುದು ಗೊತ್ತಾ..? title=

ಬೆಂಗಳೂರು: ದೊಡ್ಮನೆಯಿಂದ ಸಿನಿ ಪ್ರಿಯರಿಗೆ ಏನಾದರೂ ಒಂದು ಗುಡ್‌ ನ್ಯೂಸ್‌ ನೀಡುತ್ತಲೇ ಇರುತ್ತಾರೆ. ಡಾ ರಾಜ್‌ ಕುಮಾರ್‌ ಕಾಲದಿಂದ ಪಾರ್ವತಮ್ಮ ರಾಜ್ ಕುಮಾರ್‌ ಸಿನಿಮಾ ನಿರ್ಮಾಣ ಮಾಡಿ ಹಲವಾರು ಹೊಸ ಮುಖಗಳನ್ನು ಸ್ಯಾಂಡಲ್ವುಡ್‌ ಪರಿಚಯಿಸಿದ್ದಾರೆ.  ಹೀಗೆ ಹೇಳುತ್ತಾಹೋದರೆ ಡಾ. ರಾಜ್ ಕುಮಾರ್‌ ಕುಟುಂಬದಿಂದ ಕನ್ನಡ ಚಿತ್ರರಂಗಕ್ಕೆ ಕೊಡುಗೆಗಳ ಸುರಿಮಳೆ ಸುರಿಸಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್ ‌ರಾಜ್ ಕುಮಾರ್, ರಾಘವೇಂದ್ರ ‌ರಾಜ್ ಕುಮಾರ್, ಪುನೀತ್‌ ರಾಜ್‌ ಕುಮಾರ್‌ ಇವರ ನಟನೆ ಹಾಗೂ ಸಿನಿಮಾ ನಿರ್ಮಾಣದಿಂದ ಕನ್ನಡಿಗರ ಮನದಲ್ಲಿ ಅಚ್ಚುಳಿದಿದ್ದಾರೆ.

ಇದನ್ನೂ ಓದಿ: Bhairati Rangal : ಕಬ್ಜ ಯಶಸ್ಸಿನ ಬೆನ್ನಲ್ಲೇ ಭೈರತಿ ರಣಗಲ್ ಗೆ ಸಜ್ಜಾದ ಶಿವಣ್ಣ: ಮುಂದಿನ ಚಿತ್ರದ ಸುಳಿವು ನೀಡಿದ ಮುತ್ತಣ್ಣ!

ಈಗಾಗಲೇ ಅಣ್ಣಾವ್ರು ತೆರೆಮೇಲೆ ರಾರಾಜಿಸುತ್ತಿದ್ದರೆ, ತೆರೆಹಿಂದೆ ಅವರ ಬೆನ್ನೆಲುಬಾಗಿ ನಿರ್ಮಾಣ ಸಂಸ್ಥೆಯಡಿ ದುಡಿಯುತ್ತಿದ್ದ ಪಾರ್ವತಮ್ಮ ಪೂರ್ಣಿಮಾ ಎಂಟರ್ ಪ್ರೈಸ್‌, ಗೀತಾ ಪಿಕ್ಚರ್ಸ್ ನಡಿ ಗೀತಾ ಶಿವರಾಜ್ ಕುಮಾರ್, ಪಿಆರ್ ಕೆ ಪ್ರೊಡಕ್ಷನ್ ನಡಿ ಅಶ್ವಿನಿ ಪುನೀತ್ ರಾಜ್ ಕನ್ನಡ ಸಿನಿಮಾರಂಗಕ್ಕೆ ಕೊಡುಗೆ ನೀಡುತ್ತಿದ್ದಾರೆ. ಇದರ ಸಾಲಿನಲ್ಲಿ ಇದೀಗ ದೊಡ್ಮನೆ ಕುಡಿಯಾಗಿರುವ ಶಿವಣ್ಣನ ಪುತ್ರಿ ನಿವೇದಿತಾ ಚಿತ್ರ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. 

ಶ್ರೀ ಮುತ್ತು ಸಿನಿ ಸರ್ವಿಸ್ ನಡಿ ಹೊಸ ಪ್ರತಿಭೆಗಳಿ ಪ್ರೋತ್ಸಾಹ ನೀಡಲು ಮುಂದಾಗಿದ್ದಾರೆ. ಈ ಸಂಸ್ಥೆಯಡಿ ಈಗಾಗಲೇ ಧಾರಾವಾಹಿ ಹಾಗೂ ಮೂರು ವೆಬ್ ಸೀರೀಸ್ ಗಳು ಹೊರಬಂದಿವೆ. ಈಗ ಇದೇ ಬ್ಯಾನರ್ ನಡಿ ನಿವೇದಿತಾ ಶಿವರಾಜ್ ಕುಮಾರ್ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಈಗಾಗಲೇ  ಪೋಸ್ಟರ್ ಮೂಲಕ ಹೊಸ ಹೆಜ್ಜೆ ಇಟ್ಟಿದ್ದಾರೆ. 

ಇದನ್ನೂ ಓದಿ: Weekend With Ramesh: ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಚಂದ್ರುರವರ ಕಥೆ ಹೇಗಿತ್ತು.. ಸಿಹಿಯೋ ಕಹಿಯೋ? 

ನಿವೇದಿತಾ ಶಿವರಾಜ್ ಕುಮಾರ್ ಒಡೆತನದ ಶ್ರೀ ಮುತ್ತು ಸಿನಿ ಸರ್ವಿಸ್ ನಡಿ ಮೂಡಿ ಬರ್ತಿರುವ ಚೊಚ್ಚಲ ಸಿನಿಮಾಗೆ ವಂಶಿ ಸಾರಥಿಯಾಗಲಿದ್ದಾರೆ. ಇವರು ಒಂದಷ್ಟು ಕಿರುಚಿತ್ರ ನಿರ್ದೇಶಿಸಿ, PRK ನಿರ್ಮಾಣ ಸಂಸ್ಥೆಯಡಿ ಬಂದ ಮಯಾಬಜಾರ್ ಸಿನಿಮಾದಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸಮಾಡಿದ್ದಾರೆ.  ವಂಶಿಯವರು ಇತ್ತೀಚೆಗೆ ತೆರೆಗೆ ಬಂದ ಐದು ಕಥೆಗಳ ಪೆಂಟಗನ್ ಸಿನಿಮಾದ ಕಿರಣ್ ಕುಮಾರ್ ನಿರ್ದೇಶಕದ ಕಥೆಯಲ್ಲಿ ಪ್ರಮುಖ ಪಾತ್ರವಾಗಿ ನಟಿಸಿದ್ದಾರೆ. ನಿವೇದಿತಾ ಬಂಡವಾಳ ಹಾಕುತ್ತಿರುವ ಮೊದಲ ಚಿತ್ರಕ್ಕೆ ವಂಶಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಹಾಗೂ ಈ ಸಿನಿಮಾಕ್ಕೆ ಲೈಫ್ ಡ್ರಾಮಾ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಬಾನ ದಾರಿಯಲಿ ಸಿನಿಮಾದ ಛಾಯಾಗ್ರಹಕ ಅಭಿಲಾಷ್ ಕಲ್ಲಟ್ಟಿ ಕ್ಯಾಮೆರಾ ಸೆರೆಹಿಡಿಯಲಿದ್ದು, ಚರಣ್ ರಾಜ್ ಸಂಗೀತ, ರಘು ನಿಡುವಳ್ಳಿ ಸಂಭಾಷಣೆ ನೀಡಿದ್ದು, ಜಯ್ ರಾಮ್ ಕೋ ಡೈರೆಕ್ಟರ್ ಆಗಿ  ನಿವೇದಿತಾ ಶಿವರಾಜ್ ಕುಮಾರ್ ಈ ಮೂಲಕ ಸಾಥ್‌ ನೀಡಲಿದ್ದಾರೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News