BIG NEWS: ಕೊರೊನಾ ವ್ಯಾಕ್ಸಿನ್ ಮಾರುಕಟ್ಟೆಗೆ ಬರುವ ಕುರಿತು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದ್ದೇನು?

ದೇಶದಲ್ಲಿ ನಡೆಯುತ್ತಿರುವ ಲಸಿಕೆ ಪ್ರಯೋಗ ಮತ್ತು ಅದರ ಅಭಿವೃದ್ಧಿಯ ಬಗ್ಗೆಯೂ ಸಚಿವರು ಮಾಹಿತಿ ನೀಡಿದ್ದಾರೆ. ಸುರಕ್ಷಿತ ಹಾಗೂ ಪ್ರಬಲ ಲಸಿಕೆ ಪ್ರಾಕೃತಿಕ ಸೋಂಕಿನ ಹೋಲಿಕೆಯಲ್ಲಿ ತೀವ್ರಗತಿಯಲ್ಲಿ ಕೊವಿಡ್-19 ವಿರುದ್ಧ ರೋಗ ನಿರೋಧಕ ಶಕ್ತಿ ಸ್ಥಾಪಿಸುವಲ್ಲಿ ಸಹಕಾರಿಯಾಗಲಿದೆ ಎಂದೂ ಕೂಡ ಅವರು ಹೇಳಿದ್ದಾರೆ.

Last Updated : Sep 13, 2020, 09:21 PM IST
  • ಮುಂದಿನ ವರ್ಷದ ಆರಂಭದಲ್ಲಿ (2021) ಬರಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷ ವರ್ಧನ್ ಹೇಳಿದ್ದಾರೆ.
  • ಮೊದಲು ಈ ಲಸಿಕೆ ಅಗತ್ಯವಿರುವ ಜನರಿಗೆ ನೀಡಲಾಗುವುದು ಎಂದು ಡಾ. ಹರ್ಷವರ್ಧನ್ ಹೇಳಿದ್ದಾರೆ.
  • ಲಸಿಕೆಯ ಕುರಿತು ವಿಶ್ವಾಸ ಮೂಡಿಸಲು, ಲಸಿಕೆಯ ಮೊದಲ ಡೋಸ್ ಪಡೆಯುವುದು ಹೆಮ್ಮೆಯ ವಿಷಯ.
BIG NEWS: ಕೊರೊನಾ ವ್ಯಾಕ್ಸಿನ್ ಮಾರುಕಟ್ಟೆಗೆ ಬರುವ ಕುರಿತು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದ್ದೇನು? title=

ನವದೆಹಲಿ: ಕೊರೊನಾವೈರಸ್ (Coronavirus)ವಿರುದ್ಧ ಲಸಿಕೆ ಮುಂದಿನ ವರ್ಷದ ಆರಂಭದಲ್ಲಿ (2021) ಬರಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷ ವರ್ಧನ್ ಹೇಳಿದ್ದಾರೆ. ಈ ಕುರಿತು ಭಾನುವಾರ ಹೇಳಿಕೆ ನೀಡಿರುವ ಅವರು "ಇನ್ನೂ ಯಾವುದೇ ದಿನಾಂಕವನ್ನು ನಿಗದಿಪಡಿಸಲಾಗಿಲ್ಲವಾದರೂ, 2021 ರ ಆರಂಭದಲ್ಲಿ ಲಸಿಕೆ ಸಿದ್ಧವಾಗಲಿದೆ" ಎಂದು ಹೇಳಿದ್ದಾರೆ.

ವಿಸ್ತೃತವಾದ ತಂತ್ರ ಸಿದ್ಧಪಡಿಸಲಾಗುತ್ತಿದೆ
ಹಿರಿಯ ನಾಗರಿಕರು ಮತ್ತು ಹೆಚ್ಚಿನ ಅಪಾಯದ ಸ್ಥಳಗಳಲ್ಲಿ ಕೆಲಸ ಮಾಡುವ ಜನರಿಗೆ ಕೋವಿಡ್ -19 ಲಸಿಕೆ ನೀಡುವ ತುರ್ತು ಅಧಿಕಾರವನ್ನು ಸರ್ಕಾರ ಪರಿಗಣಿಸುತ್ತಿದೆ ಎಂದು ಹರ್ಷ್ ವರ್ಧನ್ ಹೇಳಿದ್ದಾರೆ. ಒಮ್ಮತ ಮೂಡಿದ ಬಳಿಕ ಇದನ್ನು ಮಾಡಲಾಗುವುದು ಎಂದು ಅವರು ಹೇಳಿದ್ದಾರೆ. ಕೋವಿಡ್ -19 ಗಾಗಿ ಲಸಿಕೆ ಆಡಳಿತ ರಾಷ್ಟ್ರೀಯ ತಜ್ಞರ ಗುಂಪು ಸಾಧ್ಯವಾದಷ್ಟು ಜನರಿಗೆ ಲಸಿಕೆ ಹಾಕುವ ಬಗ್ಗೆ ವಿವರವಾದ ಕಾರ್ಯತಂತ್ರವನ್ನು ಸಿದ್ಧಪಡಿಸುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಈ ವರ್ಷಗಳ ಮೇಲೆ ಗಂಭೀರ ಚರ್ಚೆ ನಡೆಸಲಾಗುತ್ತಿದೆ
ಭಾನುವಾರದ ಸಂವಾದ್' ಕಾರ್ಯಕ್ರಮದ ಸಂದರ್ಭದಲ್ಲಿ ಹರ್ಷ್ ವರ್ಧನ್ ತಮ್ಮ ಸೋಷಿಯಲ್ ಮೀಡಿಯಾ ಅನುಯಾಯಿಗಳೊಂದಿಗೆ ಸಂವಾದ ನಡೆಸಿ ಅವರ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಕೋವಿಡ್ ಲಸಿಕೆಯ ವಿಚಾರಣೆಯ ಸಮಯದಲ್ಲಿ ಸೂಕ್ತ ಕಾಳಜಿ ವಹಿಸಲಾಗುತ್ತಿದೆ ಎಂದು ಆರೋಗ್ಯ ಸಚಿವರು ಭರವಸೆ ನೀಡಿದ್ದಾರೆ. ಲಸಿಕೆ ಸುರಕ್ಷತೆ, ವೆಚ್ಚ, ಇಕ್ವಿಟಿ, ಕೋಲ್ಡ್-ಚೈನ್ ಅವಶ್ಯಕತೆಗಳು, ಉತ್ಪಾದನಾ ಗಡುವನ್ನು ಸಹ ಆಳವಾಗಿ ಚರ್ಚಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಎಲ್ಲಕ್ಕಿಂತ ಮೊದಲು ಇವರಿಗೆ ಲಸಿಕೆ ನೀಡಲಾಗುವುದು
ಮೊದಲು ಈ ಲಸಿಕೆ ಅಗತ್ಯವಿರುವ ಜನರಿಗೆ ನೀಡಲಾಗುವುದು ಎಂದು ಡಾ. ಹರ್ಷವರ್ಧನ್ ಹೇಳಿದ್ದಾರೆ. ಅಷ್ಟೇ ಅಲ್ಲ ಇದಕ್ಕಾಗಿ ಅವರು ಹಣ ಪಾವತಿಸಲಿ ಅಥವಾ ಹಣ ಪಾವತಿಸದೇ ಇರಲಿ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಲಸಿಕೆಯ ಮೊದಲ ಡೋಸ್ ಪಡೆಯುವುದು ಒಂದು ಖುಷಿಯ ವಿಚಾರ, ಏಕೆಂದರೆ ಲಸಿಕೆಯ ಕುರಿತು ವಿಶ್ವಾಸ ಮೂಡಿಸುವ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.

ತೀವ್ರವಾಗಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಇದು ಸಹಕಾರಿಯಾಗಲಿದೆ
ದೇಶಾದ್ಯಂತ ನಡೆಯುತ್ತಿರುವ ವ್ಯಾಕ್ಸಿನ್ ಟ್ರಯಲ್ ಹಾಗೂ ಅದರ ಅಭಿವೃದ್ಧಿ ಕುರಿತು ಸಚಿವರು ಮಾಹಿತಿ ನೀಡಿದ್ದಾರೆ. ಮುಂದಿನ ಕೆಲವು ತಿಂಗಳುಗಳಲ್ಲಿ ಸಮುದಾಯದಲ್ಲಿ ಹಾರ್ಡ್ ಇಮ್ಯೂನಿಟಿ ಮಟ್ಟದಲ್ಲಿ ಒಂದು ಸಾಮಾನ್ಯ ಅಭಿಮತ ಮೂಡಲಿದೆ ಎಂದು ಡಾ. ಹರ್ಷವರ್ಧನ್ ಹೇಳಿದ್ದಾರೆ.

Trending News