ಪಾಕಿಸ್ತಾನ ಪರ ಬೇಹುಗಾರಿಕೆ ನಡೆಸಿದ ಶಂಕಿತ ರಾಜಸ್ತಾನದ ವ್ಯಕ್ತಿ ಬಂಧಿಸಿದ ದೆಹಲಿ ಪೋಲಿಸ್

ಪಾಕಿಸ್ತಾನದ ಗುಪ್ತಚರ ಸಂಸ್ಥೆ ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‌ಐ) ಗಾಗಿ ಗೂಢಚರ್ಯೆ ನಡೆಸಿದ ಶಂಕಿತನನ್ನು ದೆಹಲಿ ಪೊಲೀಸರ ಅಪರಾಧ ವಿಭಾಗವು ರಾಜಸ್ಥಾನದ ಪೊಕಾರನ್ ನಿಂದ ವಶಕ್ಕೆ ಪಡೆದಿದೆ. 

Written by - Zee Kannada News Desk | Last Updated : Jul 15, 2021, 03:59 AM IST
  • ಪಾಕಿಸ್ತಾನದ ಗುಪ್ತಚರ ಸಂಸ್ಥೆ ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‌ಐ) ಗಾಗಿ ಗೂಢಚರ್ಯೆ ನಡೆಸಿದ ಶಂಕಿತನನ್ನು ದೆಹಲಿ ಪೊಲೀಸರ ಅಪರಾಧ ವಿಭಾಗವು ರಾಜಸ್ಥಾನದ ಪೊಕಾರನ್ ನಿಂದ ವಶಕ್ಕೆ ಪಡೆದಿದೆ.
  • ವರದಿಗಳ ಪ್ರಕಾರ, ಆರೋಪಿ ಬಿಕಾನೆರ್ ಮೂಲದವನು ಮತ್ತು ಭಾರತೀಯ ಸೇನೆಗೆ ತರಕಾರಿಗಳನ್ನು ಪೂರೈಸುತ್ತಿದ್ದನು. ಅವರು ಈ ವೃತ್ತಿಯಲ್ಲಿ ದೀರ್ಘಕಾಲ ತೊಡಗಿಸಿಕೊಂಡಿದ್ದರು ಎನ್ನಲಾಗಿದೆ.
 ಪಾಕಿಸ್ತಾನ ಪರ ಬೇಹುಗಾರಿಕೆ ನಡೆಸಿದ ಶಂಕಿತ ರಾಜಸ್ತಾನದ ವ್ಯಕ್ತಿ ಬಂಧಿಸಿದ ದೆಹಲಿ ಪೋಲಿಸ್  title=
file photo

ನವದೆಹಲಿ: ಪಾಕಿಸ್ತಾನದ ಗುಪ್ತಚರ ಸಂಸ್ಥೆ ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‌ಐ) ಗಾಗಿ ಗೂಢಚರ್ಯೆ ನಡೆಸಿದ ಶಂಕಿತನನ್ನು ದೆಹಲಿ ಪೊಲೀಸರ ಅಪರಾಧ ವಿಭಾಗವು ರಾಜಸ್ಥಾನದ ಪೊಕಾರನ್ ನಿಂದ ವಶಕ್ಕೆ ಪಡೆದಿದೆ. 

ವರದಿಗಳ ಪ್ರಕಾರ, ಆರೋಪಿ ಬಿಕಾನೆರ್ ಮೂಲದವನು ಮತ್ತು ಭಾರತೀಯ ಸೇನೆಗೆ ತರಕಾರಿಗಳನ್ನು ಪೂರೈಸುತ್ತಿದ್ದನು. ಅವರು ಈ ವೃತ್ತಿಯಲ್ಲಿ ದೀರ್ಘಕಾಲ ತೊಡಗಿಸಿಕೊಂಡಿದ್ದರು ಎನ್ನಲಾಗಿದೆ.

ಇದನ್ನೂ ಓದಿ: Pakistan: ಪಾಕಿಸ್ತಾನಕ್ಕೆ ದೊಡ್ಡ ಹೊಡೆತ ನೀಡಿದ ಬ್ರಿಟನ್

ಸ್ವೀಕರಿಸಿದ ಮಾಹಿತಿಯ ಪ್ರಕಾರ, ಹಬೀಬ್ ಖಾನ್ ಎಂದು ಗುರುತಿಸಲ್ಪಟ್ಟ ಆರೋಪಿ ಪಾಕಿಸ್ತಾನ (Pakistan) ದ ಗುಪ್ತಚರ ಸಂಸ್ಥೆ ಐಎಸ್‌ಐನೊಂದಿಗೆ ಪರೋಕ್ಷವಾಗಿ ಸಂಬಂಧ ಹೊಂದಿದ್ದ ಮತ್ತು ಅವರಿಗೆ ನಿರ್ಣಾಯಕ ಮಾಹಿತಿಯನ್ನು ಸೋರಿಕೆ ಮಾಡಿದ್ದಾನೆ ಎನ್ನಲಾಗಿದೆ.ಹಬೀಬ್ ಖಾನ್ ಸೈನ್ಯಕ್ಕೆ ಸಂಬಂಧಿಸಿದ ಪ್ರಮುಖ ಮಾಹಿತಿಯನ್ನು ಸಂಗ್ರಹಿಸಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐಗೆ ನೀಡುವ ಪ್ರಕ್ರಿಯೆಯಲ್ಲಿದ್ದರು ಎಂದು ನಂಬಲಾಗಿದೆ.

ಇದನ್ನೂ ಓದಿ: Imran Khan On Modi Government: 'ಮೋದಿ ಜಾಗದಲ್ಲಿ ಬೇರೆ ಯಾರಿದ್ದರೂ ಕೂಡ ಭಾರತದ ಜೊತೆಗೆ ಸಂಬಂಧ ಸರಿಯಾಗಿರುತ್ತಿತ್ತು'

ದೆಹಲಿ ಪೊಲೀಸ್ ಅಪರಾಧ ವಿಭಾಗವು ಹಬೀಬ್ ಖಾನ್ ಮೇಲೆ ಸ್ವಲ್ಪ ಸಮಯದವರೆಗೆ ಕಣ್ಣಿಟ್ಟಿತ್ತು. ಬುಧವಾರ (ಜುಲೈ 14) ಅವರನ್ನು ವಶಕ್ಕೆ ತೆಗೆದುಕೊಂಡ ಒಂದು ದಿನದ ನಂತರ ದೆಹಲಿಗೆ ಕರೆತರಲಾಯಿತು. ದೆಹಲಿ ಪೊಲೀಸ್ ಮತ್ತು ಗುಪ್ತಚರ ದಳದ ತಂಡ ಪ್ರಸ್ತುತ ಆತನನ್ನು ವಿಚಾರಣೆ ನಡೆಸುತ್ತಿದೆ.ಅಲ್ ಖೈದಾ ಸಂಬಂಧಿತ ಅನ್ಸಾರ್ ಘಜ್ವಾತುಲ್ ಹಿಂದ್ - ಮಿನ್ಹಾಜ್ ಅಹ್ಮದ್ ಮತ್ತು ಮುಶೀರುದ್ದೀನ್ ಎಂಬ ಇಬ್ಬರು ಭಯೋತ್ಪಾದಕರನ್ನು ಯುಪಿ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಬಂಧಿಸಿದ ಕೆಲವೇ ದಿನಗಳಲ್ಲಿ ಈ ಬೆಳವಣಿಗೆ ಸಂಭವಿಸಿದೆ. 

ಇದನ್ನೂ ಓದಿ: Big Blow To Pakistan: ಮತ್ತೊಮ್ಮೆ FATF ಬೂದು ಪಟ್ಟಿಯಲ್ಲಿಯೇ ಉಳಿದ ಪಾಕಿಸ್ತಾನ

ಉತ್ತರ ಪ್ರದೇಶದ ಹಲವಾರು ಸ್ಥಳಗಳಲ್ಲಿ 'ಮಾನವ ಬಾಂಬ್‌ಗಳನ್ನು' ಬಳಸುವುದು ಸೇರಿದಂತೆ ಸ್ಫೋಟಗಳನ್ನು ಯೋಜಿಸುತ್ತಿರುವುದಾಗಿ ಎಟಿಎಸ್ ಹೇಳಿಕೊಂಡಿತ್ತು. "ಅವರು ಪ್ರಮುಖ ಸ್ಥಳಗಳು, ಸ್ಮಾರಕಗಳು ಮತ್ತು ಕಿಕ್ಕಿರಿದ ಸ್ಥಳಗಳಲ್ಲಿ ಸ್ಫೋಟಗಳನ್ನು ಯೋಜಿಸುತ್ತಿದ್ದರು ಮತ್ತು ಮಾನವ ಬಾಂಬುಗಳನ್ನು ಸಹ ಬಳಸುತ್ತಿದ್ದರು. ಇದಕ್ಕಾಗಿ ಅವರು ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳನ್ನು ಸಂಗ್ರಹಿಸುತ್ತಿದ್ದರು" ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ : Mask: ಬಟ್ಟೆ / N95 ಮಾಸ್ಕ್ ಇವುಗಳಲ್ಲಿ ಯಾವುದು ಕರೋನಾದಿಂದ ರಕ್ಷಿಸುತ್ತೆ? ಇಲ್ಲಿದೆ ತಜ್ಞರ ಅಭಿಪ್ರಾಯ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News