ನಾಗರಿಕ ವಿಮಾನಯಾನ ನಿರ್ದೇಶನಾಲಯ ಏರ್ ಇಂಡಿಯಾಗೆ 80 ಲಕ್ಷ ರೂಪಾಯಿಗಳ ಭಾರಿ ದಂಡವನ್ನು ವಿಧಿಸಿದೆ. ವಿಮಾನ ಕರ್ತವ್ಯದ ಸಮಯ ನಿಯಮಗಳು (ಎಫ್ಡಿಟಿಎಲ್) ಮತ್ತು ಆಯಾಸ ನಿರ್ವಹಣಾ ವ್ಯವಸ್ಥೆ (ಎಫ್ಎಂಎಸ್) ಗೆ ಸಂಬಂಧಿಸಿದ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಈ ದಂಡ ವಿಧಿಸಲಾಗಿದೆ.
ಅಮಾಲಿಕ್ ತುಯ್ಯಬ್ ಎಂಬುವರು ಫ್ಲಿಪ್ಕಾರ್ಟ್ನಲ್ಲಿ ನಥಿಂಗ್ ಫೋನ್(2A) ಆರ್ಡರ್ ಮಾಡಿದ್ದರು. 2 ದಿನಗಳ ನಂತರ ಬಂದ ಪಾರ್ಸೆಲ್ ತೆರೆದು ನೋಡಿದಾಗ ಅವರಿಗೆ ಶಾಕ್ ಆಗಿತ್ತು. ಯಾಕೆಂದರೆ ನಥಿಂಗ್ ಫೋನ್ ಬದಲಿಗೆ ನಕಲಿ ಬ್ರ್ಯಾಂಡ್ನ (iKall) ಫೋನ್ ಕಂಡು ಅವಾಕ್ಕಾಗಿದ್ದಾರೆ.
Mangalore to New Delhi : ಮಂಗಳೂರಿನಿಂದ ನವದೆಹಲಿಗೂ ವಿಶೇಷ ರೈಲು ಬಿಡಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಹೋಳಿ ಹಬ್ಬದ ಆಚರಣೆ ಹಿನ್ನೆಲೆ ರೈಲ್ವೆ ಇಲಾಖೆ ನಿರ್ಧಾರ ಮಾಡಿದೆ. ಈ ರೈಲು ಹೊರಡುವ ಸಮಯ, ದಿನಾಂಕ ಹಾಗೂ ಟಿಕೆಟ್ ದರಗಳ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
Arvind Kejriwal Arrested: ದೆಹಲಿ ಮುಖ್ಯ ಕಾರ್ಯದರ್ಶಿ ನರೇಶ್ ಕುಮಾರ್ ಅವರು ಜುಲೈ 2022 ರಲ್ಲಿ ದೆಹಲಿ ಮದ್ಯ ಮಾರಾಟ ನೀತಿ ಸಮಸ್ಯೆಯ ಕುರಿತು ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರಿಗೆ ವರದಿಯನ್ನು ಸಲ್ಲಿಸಿದ್ದರು. ಈ ನೀತಿಯನ್ನು ರೂಪಿಸುವಲ್ಲಿ ಹಲವು ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದಿದ್ದ ಅವರು ಸಿಬಿಐ ತನಿಖೆಗೆ ಶಿಫಾರಸ್ಸು ಮಾಡಿದ್ದರು.
Pregnant Woman Suicide Case: 11 ತಿಂಗಳ ಹಿಂದಷ್ಟೇ ಲಕ್ಷ್ಮೀ ಮತ್ತು ಕಿರಣ್ ಮದುವೆಯಾಗಿದ್ದರು. ಆಕೆ ಗರ್ಭಿಣಿ ಅನ್ನೋ ಕಾರಣಕ್ಕೆ ಪತಿ ಆಕೆಗೆ ಓದದಂತೆ ನಿರ್ಬಂಧ ಹೇರಿದ್ದರಂತೆ. ಗರ್ಭಪಾತ ಮಾಡಿಸುವಂತೆ ಹೇಳಿದಾಗ ಅದಕ್ಕೆ ಮನೆಯವರು ಒಪ್ಪಿರಲಿಲ್ಲ ಎನ್ನಲಾಗಿದೆ.
ಮಾರ್ಚ್ 21, 2024: ರಾಕುಟೆನ್ ಗ್ರೂಪ್ ಇಂಕ್ ಸಂಸ್ಥೆಯ ಪ್ರಮುಖ ತಂತ್ರಜ್ಞಾನ ಮತ್ತು ಅಭಿವೃದ್ಧಿ ಕೇಂದ್ರವಾಗಿರುವ ರಾಕುಟೆನ್ ಇಂಡಿಯಾ ಎಂಟರ್ ಪ್ರೈಸ್ ಪ್ರೈವೇಟ್ ಲಿಮಿಟೆಡ್, ತನ್ನ ಬ್ರಾಂಡ್ ಬಳಸಿಕೊಂಡು "ಆರ್-ಒಲೆ" ((R-ole)) ಎಂಬ ಅನಧಿಕೃತ ಸಂಸ್ಥೆಯು ನಡೆಸುತ್ತಿರುವ ವಂಚನೆ ಬಗ್ಗೆ ಸಾರ್ವಜನಿಕರಿಗೆ ತುರ್ತು ಎಚ್ಚರಿಕೆ ನೀಡಿದೆ. ಮೋಸದ ಜಾಲವು ರಾಕುಟೆನ್ ಇಂಕ್ನ ಬ್ರಾಂಡ್ ಮತ್ತು ನಾಯಕತ್ವದ ಗುರುತನ್ನು ಬಳಸಿಕೊಂಡು ಸಾರ್ವಜನಿಕರ ಬಳಿಯಿಂದ ಹಣವನ್ನು ಸಂಗ್ರಹಿಸುತ್ತಿದ್ದು, ಅದಕ್ಕೆ ಬಲಿಬೀಳದಂತೆ ಮನವಿ ಮಾಡಿದೆ.
Building Collapses In Delhi: ದೆಹಲಿಯ ಕಬೀರ್ ನಗರದಲ್ಲಿ ಕಟ್ಟಡ ಕುಸಿತದ ಪರಿಣಾಮವಾಗಿ ಇಬ್ಬರು ಮೃತಪಟ್ಟಿದ್ದು, ಓರ್ವ ವ್ಯಕ್ತಿ ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯ ಪ್ರಗತಿಯಲ್ಲಿದೆ ಎಂದು ತಿಳಿದುಬಂದಿದೆ.
ಉತ್ತರ ಪ್ರದೇಶದಲ್ಲಿ ಆಘಾತಕಾರಿ ಘಟನೆಯೊಂದರಲ್ಲಿ, ವಿವಾಹಿತ ಮಹಿಳೆಯೊಬ್ಬರು ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಸಮೂಹಿಕ್ ವಿವಾಹ ಯೋಜನೆಯ ಮೂಲಕ ನಗದು ಮತ್ತು ಉಡುಗೊರೆಗಳನ್ನು ಪಡೆಯಲು ತನ್ನ ಸಹೋದರನೊಂದಿಗೆ ವಿವಾಹವಾದರು.
Lok Sabha Election 2024: ಲೋಕಸಭೆ ಚುನಾವಣೆಗೆ ಇಂದು ಚುನಾವಣಾ ಅಧಿಸೂಚನೆ ಬಿಡುಗಡೆ ಮಾಡಲಾಗಿದ್ದು, ಮೊದಲ ಹಂತದ ಚುನಾವಣೆ ನಡೆಯಲಿರುವ 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 102 ಸ್ಥಾನಗಳಿಗೆ ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದೆ.
Lok Sabha Election 2024: ಲೋಕಸಭಾ ಚುನಾವಣೆ 2024ಕ್ಕಾಗಿ ಎಐಎಡಿಎಂಕೆ ಪಕ್ಷ ತನ್ನ ಮೊದಲ ಪಟ್ಟಿಯನ್ನು ಪ್ರಕಟಿಸಿದೆ. ತಮಿಳುನಾಡು ಮಾಜಿ ಮುಖ್ಯಮಂತ್ರಿ ಮತ್ತು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ ಇಂದು ಪಕ್ಷದ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದರು.
ಆಮ್ ಆದ್ಮಿ ಪಕ್ಷದ ನಾಯಕ ಸಂಜಯ್ ಸಿಂಗ್ ಮಂಗಳವಾರ ಎರಡನೇ ಬಾರಿಗೆ ರಾಜ್ಯಸಭೆಯ ಸದಸ್ಯರಾದರು. ಸಭಾಪತಿ ಜಗದೀಪ್ ಧನಕರ್ ಅವರಿಗೆ ಪ್ರಮಾಣ ವಚನ ಬೋಧಿಸಿದರು.ದೆಹಲಿ ಅಬಕಾರಿ ಹಗರಣ ಪ್ರಕರಣದಲ್ಲಿ ಬಂಧಿತರಾಗಿರುವ ಸಿಂಗ್ ಅವರನ್ನು ನ್ಯಾಯಾಲಯದ ಆದೇಶದ ಮೇರೆಗೆ ಸಂಸತ್ತಿಗೆ ಕರೆತರಲಾಗಿತ್ತು. ಕಟ್ಟುನಿಟ್ಟಿನ ನಿರ್ಬಂಧಗಳ ನಡುವೆ ಸಿಂಗ್ ಪ್ರಮಾಣ ವಚನ ಸ್ವೀಕರಿಸಿದರು.
CAA Notification Update: ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯಿದೆ ಜಾರಿಗೆ ಕೇಂದ್ರ ಸರ್ಕಾರ ಹೊರಡಿಸಿರುವ ಅಧಿಸೂಚನೆಗೆ ತಡೆಯಾಜ್ಞೆ (Citizenship Amendment Act 2019) ನೀಡಲು ಸುಪ್ರೀಂ ತಿರಸ್ಕರಿಸಿದ್ದು, ಇದರಿಂದ ಕೇಂದ್ರ ಸರ್ಕಾರಕ್ಕೆ ಭಾರಿ ನೆಮ್ಮದಿ ಸಿಕ್ಕಂತಾಗಿದೆ. ಈ ಕುರಿತಾಗಿ ಬಂದ 236 ಅರ್ಜಿಗಳ ಪೈಕಿ ನಾವು ಎಷ್ಟು ಪ್ರಕರಣಗಳಲ್ಲಿ ನೋಟಿಸ್ ನೀಡಿದ್ದೇವೆ ಎಂದು ಪ್ರಶ್ನಿಸಿದ ಸುಪ್ರೀಂ ಉಳಿದ ಅರ್ಜಿಗಳಿಗೂ ಕೂಡ ನೋಟಿಸ್ ಜಾರಿ ಮಾಡಿ ದಿನಾಂಕ ನೀಡುತ್ತೇವೆ ಎಂದಿದೆ. ಇದರ ಜೊತೆಗೆ ಅಧಿಸೂಚನೆ ಜಾರಿ ನಿಷೇಧಿಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಗೆ ಪ್ರತಿಕ್ರಿಯೆ ನೀಡಲು ಕೇಂದ್ರ ಸರ್ಕಾರ ಕಾಲಾವಕಾಶ ಕೋರಿದ್ದು, ಅವರಿಗೆ ಕಾಲಾವಕಾಶ ನೀಡಲಾಗುವುದು ಎಂದು ಪೀಠ ಹೇಳಿದೆ. (National News In Kannada)
Lok Sabha Elections: ಕೇಂದ್ರ ಸಚಿವ ಮತ್ತು ಆರ್ಎಲ್ಜೆಪಿ ನಾಯಕ ಪಶುಪತಿ ಕುಮಾರ್ ಪಾರಸ್ ಕೇಂದ್ರ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದ್ದಾರೆ. ಇದರಿಂದಾಗಿ ರಾಷ್ಟ್ರೀಯ ಲೋಕ ಜನಶಕ್ತಿ ಪಕ್ಷವು ಎನ್ಡಿಎಯಿಂದ ಬೇರ್ಪಡಲಿದೆಯೇ ಎಂಬ ಅನುಮಾನಗಳು ಕೂಡ ವ್ಯಕ್ತವಾಗಿವೆ.
Weather Update: ಮಾರ್ಚ್ 19 ರಿಂದ 20 ರ ಅವಧಿಯಲ್ಲಿ ದೇಶದ ಹಲವೆಡೆ ಲಘು ಮಳೆಯಾಗುವ ಸಾಧ್ಯತೆ ಇದ್ದು, ಇನ್ನೂ ಕೆಲವು ಭಾಗಗಳಲ್ಲಿ ಆಲಿಕಲ್ಲು ಮಳೆಯಾಗುವ ಸಂಭವವಿದೆ ಎಂದು ಭಾರತೀಯ ಹವಾಮಾನ ಇಲಾಖೆ ಭವಿಷ್ಯ ನುಡಿದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.