ತಮಿಳುನಾಡಿಗೆ ಕಾವೇರಿ ನೀರು: ರಾಜಧಾನಿ ಬೆಂಗಳೂರಿಗೆ ಜಲಕಂಟಕ..!?

Kaveri River water dispute: KRS ಡ್ಯಾಂನಲ್ಲಿ 5 ಟಿಎಂಸಿ ನೀರು ಡೆಡ್‌ ಸ್ಟೋರೇಜ್ ಇದ್ದು, ಇನ್ನುಳಿದ 12 ಟಿಎಂಸಿ ನೀರು ಮಾತ್ರ ಕುಡಿಯಲು ಬಳಕೆಗೆ ಯೋಗ್ಯವಾಗಿರಲಿದೆ. ಕನಿಷ್ಠ ಮಟ್ಟದಲ್ಲಿರುವ ನೀರನ್ನು ತಮಿಳುನಾಡಿಗೆ ಹರಿಬಿಟ್ಟರೆ ಬೆಂಗಳೂರಿಗೆ ಕಾವೇರಿ ನೀರಿನ ಅಭಾವ ಫಿಕ್ಸ್ ಆಗಲಿದೆ.

Written by - Manjunath Hosahalli | Edited by - Puttaraj K Alur | Last Updated : Sep 6, 2023, 04:56 PM IST
  • ಸುಪ್ರೀಂಕೋರ್ಟ್ ಆದೇಶದಂತೆ ನೀರು ಬಿಟ್ಟರೆ ಬೆಂಗಳೂರಿಗೆ ಕುಡಿಯುವ ನೀರಿನ ಅಭಾವ
  • ಪ್ರತಿನಿತ್ಯ ತಮಿಳುನಾಡಿಗೆ 5 ಸಾವಿರ ಕ್ಯೂಸೆಕ್ಸ್ ನೀರು ಹರಿಯುತ್ತಿದೆ
  • KRS ಡ್ಯಾಂನಲ್ಲಿ ಸದ್ಯ 22 ಟಿಎಂಸಿ ನೀರು ಮಾತ್ರ ಶೇಖರಣೆ ಆಗಿದೆ
ತಮಿಳುನಾಡಿಗೆ ಕಾವೇರಿ ನೀರು: ರಾಜಧಾನಿ ಬೆಂಗಳೂರಿಗೆ ಜಲಕಂಟಕ..!? title=
ರಾಜಧಾನಿ ಬೆಂಗಳೂರಿಗೆ ಜಲಕಂಟಕ?

ಬೆಂಗಳೂರು: ರಾಜ್ಯದಲ್ಲಿ ಪ್ರತಿ ಮಳೆಗಾಲಕ್ಕೂ ಕಾವೇರಿ ನೀರಿನ ವಿಚಾರವಾಗಿ ತಮಿಳುನಾಡು ಖ್ಯಾತೆ ತೆಗಿತಾನೇ ಇರುತ್ತೆ. ಅಗತ್ಯಕ್ಕೆ ತಕ್ಕಂತೆ ಕಾವೇರಿ ನೀರು ಹರಿ ಬಿಟ್ಟರೂ ಇನ್ನೂ ಬೇಕು ಇನ್ನೂ ಬೇಕು ಅನ್ನೋ ದುರಾಸೆ ಮಾತ್ರ ತಮಿಳುನಾಡು ಸರ್ಕಾರಕ್ಕೆ ಹೋಗಲ್ಲ. ಈ ಬಾರಿ ರಾಜ್ಯದಲ್ಲಿ ನಿರೀಕ್ಷಿತ ಮಳೆ ಬರದಿರುವುದರಿಂದ ಕಾವೇರಿ ಜಲಾಶಯದಲ್ಲಿ ನೀರಿನ ಶೇಕರಣೆ ಪ್ರಮಾಣ ಈ ಸಲ ಬಾರಿ ಕಡಿಮೆ ಆಗಲಿದೆ. ಸುಪ್ರೀಂಕೋರ್ಟ್ ಆದೇಶದಂತೆ ಕಾವೇರಿ ಪ್ರಾಧಿಕಾರ ನೀರು ಬಿಟ್ಟರೆ ರಾಜಧಾನಿ ಬೆಂಗಳೂರಿಗೆ ಕುಡಿಯುವ ನೀರಿನ ಅಭಾವ ಎದುರಾಗಲಿದೆ.

ಯಾಕಂದ್ರೆ ಪ್ರತಿನಿತ್ಯ ತಮಿಳುನಾಡಿಗೆ 5 ಸಾವಿರ ಕ್ಯೂಸೆಕ್ಸ್ ನೀರು ಹರಿಯುತ್ತಿದೆ. ಆದರೆ KRS ಡ್ಯಾಂನಲ್ಲಿ ಸದ್ಯ 22 ಟಿಎಂಸಿ ನೀರು ಮಾತ್ರ ಶೇಖರಣೆ ಆಗಿದೆ. ಇನ್ನು 9 ದಿನ ತಮಿಳುನಾಡಿಗೆ ಸುಮಾರು 5 ಟಿಎಂಸಿ ನೀರು ಹರಿಯಲಿದ್ದು, 9 ದಿನಗಳ ಬಳಿಕ 17 ಟಿಎಂಸಿಗೆ ಇಳಿಯಲಿದೆ ಕಾವೇರಿ ಜಲಾಶಯದ ನೀರಿನ ಸಂಗ್ರಹದ ಮಟ್ಟ. ಇನ್ನು ಕೆಆರ್‍ಎಸ್ ಡ್ಯಾಂನಲ್ಲಿ 5 ಟಿಎಂಸಿ ನೀರು ಡೆಡ್‌ ಸ್ಟೋರೇಜ್ ಇದ್ದು, ಇನ್ನುಳಿದ 12 ಟಿಎಂಸಿ ನೀರು ಮಾತ್ರ ಕುಡಿಯಲು ಬಳಕೆಗೆ ಯೋಗ್ಯವಾಗಿರಲಿದೆ. ಇಷ್ಟು ಕನಿಷ್ಠ ಮಟ್ಟದಲ್ಲಿರುವ ನೀರನ್ನು ತಮಿಳುನಾಡಿಗೆ ಹರಿಬಿಟ್ಟರೆ ಬೆಂಗಳೂರಿಗೆ ಕಾವೇರಿ ನೀರಿನ ಅಭಾವ ಫಿಕ್ಸ್ ಆಗಲಿದೆ. ಕಾವೇರಿ ನದಿಯಲ್ಲಿ ದಿನೇ ದಿನೇ ನೀರಿನ ಮಟ್ಟ ಕುಸಿಯುತ್ತಿದ್ದು, ಬೆಂಗಳೂರು ಜಲಮಂಡಳಿಗೆ ತಲೆ ನೋವಾಗಿದೆ.

ಇದನ್ನೂ ಓದಿ: "ನಾನಿದ್ದರೆ ಬಿಜೆಪಿ ನಾಯಕರಿಗೆ ಆಂತಕ ಎದುರಾಗಲಿದೆ"-ಉಮಾಭಾರತಿ

ಕಾವೇರಿ ನೀರಾವರಿ ನಿಗಮಕ್ಕೆ ಮತ್ತೊಂದು ಪತ್ರ!  

ಬೆಂಗಳೂರಿನ ಜನತೆಗೆ ಕುಡಿಯುವ ನೀರು ಉಳಿಸುವಂತೆ ಬೆಂಗಳೂರು ಜಲಮಂಡಳಿ ಮನವಿ ಮಾಡಿದೆ. ಯಾಕಂದ್ರೆ ಕಾವೇರಿ ವಿವಾದದಿಂದ ಜಲಮಂಡಳಿಗೆ ಟೆನ್ಷನ್ ಶುರುವಾಗಿದ್ದು, ಬೆಂಗಳೂರಿಗೆ ಹೇಗಪ್ಪಾ ನೀರು ಪೂರೈಕೆ ಮಾಡೋದು ಅನ್ನೋ ಚಿಂತೆ ಕಾಡತೊಡಗಿದೆ. ಪ್ರತಿತಿಂಗಳು ಬೆಂಗಳೂರಿಗೆ 1.6 ಟಿಎಂಸಿ ನೀರು ಕುಡಿಯುವುದಕ್ಕಾಗಿಯೇ ಬೇಕಾಗಿದೆ. ಸದ್ಯ ಬರಗಾಲದ ಛಾಯೆ ಎದುರಾಗಿದ್ದು, ಆದ್ಯತೆ ಮೇರೆಗೆ ಮುಂದಿನ 6 ತಿಂಗಳಿಗೆ ನೀರು ಸಂಗ್ರಹಿಸಿಡುವಂತೆ ಮನವಿ ಪತ್ರ ಬರೆಯಲಾಗಿದೆ. ಸದ್ಯ ಇಲ್ಲಿಯವರೆಗೆ 3 ಬಾರಿ ಕಾವೇರಿ ಜಲಾಶಯ ಪ್ರಾಧಿಕಾರಕ್ಕೆ ಬೆಂಗಳೂರು ಜಲಮಂಡಳಿ ಪತ್ರ ಬರೆದಿದೆ. ಈ ಹಿಂದೆ ಮಳೆಯಾಗದೇ ಇದ್ದಾಗ ಅಂದ್ರೆ ಜೂನ್ ವೇಳೆ ಕೆ‌ಆರ್‍ಎಸ್ ನೀರಿನ ಪ್ರಮಾಣ ಕಡಿಮೆ ಇತ್ತು. ಆ ವೇಳೆಯೂ ಪತ್ರ ಬರೆಯಲಾಗಿತ್ತು‌. ಆಗಸ್ಟ್ ತಿಂಗಳಿನಲ್ಲಿ ಮತ್ತೊಮ್ಮೆ  ಕುಡಿಯುವ ನೀರು ಸಂಗ್ರಹಿಸುವಂತೆ ಪತ್ರ ಬರೆಯಲಾಗಿತ್ತು. ಇದೀಗ ಡೆಡ್ ಸ್ಟೋರೇಜ್ ಮಟ್ಟಕ್ಕೆ ನೀರು ಇಳಿಕೆ ಆಗುತ್ತಿರುವ ಕಾರಣ ಮತ್ತೊಂದು ಸುತ್ತಿನ ಪತ್ರವನ್ನು ಕಾವೇರಿ ನೀರಾವರಿ ನಿಗಮಕ್ಕೆ BWSSB ಪತ್ರ ಬರೆದಿದೆ. ಈ ಕುರಿತು ಜಲಮಂಡಳಿ ಹಿರಿಯ ಅಧಿಕಾರಿಯೊಬ್ಬರು ಜೀ ಕನ್ನಡ ನ್ಯೂಸ್‍ಗೆ ಅಧಿಕೃತ ಮಾಹಿತಿ ನೀಡಿದ್ದಾರೆ.

2012ರಲ್ಲಿ ಎದುರಾಗಿತ್ತು ಭೀಕರ ಜಲಕ್ಷಾಮ!

5 ವರ್ಷಕ್ಕೊಮ್ಮೆ ರಾಜ್ಯಕ್ಕೆ ಬರಗಾಲ ಫಿಕ್ಸ್ ಅನ್ನೋ ರೀತಿ ಆಗಾಗ, ಕಾವೇರಿ ಜಲಾಶಯದಲ್ಲಿ ನೀರಿನ ತಳಮಟ್ಟಕ್ಕೆ ಕುಸಿಯುತ್ತಲೇ ಇರುತ್ತದೆ. ಅದರಂತೆ 2012ರಲ್ಲಿ ಕಾವೇರಿ ಡ್ಯಾಂನಲ್ಲಿ ನೀರಿನ ಪ್ರಮಾಣ ಸಂಪೂರ್ಣ ಖಾಲಿಯಾಗಿ ಪ್ರಾಣಿ ಸಂಕುಲಕ್ಕೂ ನೀರು ಇಲ್ಲದಂತೆ ಬರಿದಾಗಿತ್ತು. ಇದಾದ ಬಳಿಕ 2015ರಲ್ಲೂ ಕೆಆರ್‍ಎಸ್ ಡ್ಯಾಂ ಖಾಲಿ ಖಾಲಿಯಾಗಿ ಬರಡು ಭೂಮಿಯಂತೆ ಜಲಾಶಯ ಕಾಣುತ್ತಿತ್ತು. ಹೀಗಾಗಿ ಹೇಮಾವತಿ ಜಲಾಶಯದಿಂದ ಬೆಂಗಳೂರಿಗೆ ನೀರು ಪೂರೈಕೆ ಮಾಡಿಕೊಳ್ಳಲಾಗಿತ್ತು.

ಇದನ್ನೂ ಓದಿ: ಸೆ.12 ರವರೆಗೆ ಈ ಭಾಗಗಳಲ್ಲಿ ನಿರಂತರ ವರ್ಷಧಾರೆ: ಗುಡುಗು-ಸಿಡಿಲು ಸಹಿತ ಭಾರೀ ಗಾಳಿ ಮುನ್ಸೂಚನೆ

ಕೆ.ಆರ್.ಸಾಗರ ಅಣೆಕಟ್ಟೆಯ ಪ್ರಸ್ತುತ ನೀರಿನ ಪ್ರಮಾಣ:

ನೀರಿನ ಮಟ್ಟ: 99.06 ಅಡಿ

ಒಳಹರಿವು : 3988 ಕ್ಯೂಸೆಕ್ಸ್

ಹೊರಹರಿವು : 6180 ಕ್ಯೂಸೆಕ್ಸ್

ಸಂಗ್ರಹ  : 22.082 ಟಿಎಂಸಿ

ಜಲಾಶಯದ ನೀರಿನ ಸಂಗ್ರಹದ ಕ್ಯಾಪಾಸಿಟಿ- 124.80 ಅಡಿ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.

Trending News