ತಾಳಿ ಕಟ್ಟುವ ವೇಳೆ ವಧು ಹೈಡ್ರಾಮ.. ಮದುವೆ ಗಂಡಿಗೆ ಪಂಗನಾಮ..!

Nelamangala Taluk Viral News : ಅದೊಂದು ಸುಂದರ ಸಂಭ್ರಮ ಮದ ಕ್ಷಣ. ಮದುವೆಯ ಖುಷಿಯಲ್ಲಿದ್ದ ಕಲ್ಯಾಣ ಮಂಟಪಕ್ಕೆ ವ್ಯಕ್ತಿಯೊಬ್ಬನ ಆಗಮನವಾಗಿತ್ತು. ಇನ್ನೇನು ಗಂಡು ತಾಳಿ ಕಟ್ಟಬೇಕಿತ್ತು. ಆ ವ್ಯಕ್ತಿಯನ್ನು ನೋಡಿದ ವಧು ಕಣ್ಣೀರುತ್ತಾ ಹಸೆಮಣೆಯಿಂದ ಎದ್ದು ಓಡಿದಳು. ಪಕ್ಕ ಸಿನಿಮಾ ಸ್ಟೈಲಿನಿಂತಿದ್ದ ಆ ಸ್ಥಳಕ್ಕೆ ಬಂದಿದ್ದು ಹೀರೋನ ವಿಲನ್ ಮುಂದೇನಾಯ್ತು?

Written by - Savita M B | Last Updated : Aug 27, 2023, 08:00 PM IST
  • ಮದುವೆ ಮಂಟಪದಲ್ಲಿ ಮೂಲೆ ಮೂಲೆಯಲ್ಲೂ ಗುಂಪು ಗುಂಪು ಜನ
  • ಸಂಭ್ರಮದ ಮದುವೆ ಮನೆಯಲ್ಲಿ ನೀರವ ಮೌನ ಆವರಿಸಿದೆ
  • ಥೇಟ್ ಸಿನಿಮಾ ಸ್ಟೈಲ್ ನಂತೆ ಮದುವೆ ಮಂಟಪದಲ್ಲಿ ಘಟನೆಯೊಂದು ನಡೆದಿದೆ..
ತಾಳಿ ಕಟ್ಟುವ ವೇಳೆ ವಧು ಹೈಡ್ರಾಮ.. ಮದುವೆ ಗಂಡಿಗೆ ಪಂಗನಾಮ..! title=

Nelamangala Taluk : ಗೊಂದಲ ಗೊಂದಲ ಗೊಂದಲ... ಮದುವೆ ಮಂಟಪದಲ್ಲಿ ಮೂಲೆ ಮೂಲೆಯಲ್ಲೂ ಗುಂಪು ಗುಂಪು ಜನ. ಎಲ್ಲರಲ್ಲೂ ಆತಂಕ.. ಮುಂದೇನೂ ಅನ್ನೋ ಗಂಭೀರ ಚರ್ಚೆ.. ಗುಸು.ಗುಸು.. ಮಾಡಿದ ಅಡುಗೆ ಹಾಗೆ ಇದೆ... ಸಂಭ್ರಮದ ಮದುವೆ ಮನೆಯಲ್ಲಿ ನೀರವ ಮೌನ ಆವರಿಸಿದೆ..ಥೇಟ್ ಸಿನಿಮಾ ಸ್ಟೈಲ್ ನಂತೆ ಮದುವೆ ಮಂಟಪದಲ್ಲಿ ಘಟನೆಯೊಂದು ನಡೆದಿದೆ..

ಕೊನೆ ಕ್ಷಣದ ಕ್ಲೈಮಾಕ್ಸ್ ಗೆ ಇಡೀ ಮದುವೆ ಮಂಟಪ ಶಾಕ್ ಗೆ ಗುರಿಯಾಗಿತ್ತು.. ಮುಂದೇನು ಅನ್ನೋ ಎದೆ ಬಡಿತ ಜೋರಾಗಿಸಿತ್ತು... ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಕೋಳಾಲದಲ್ಲಿರುವ ಕೆ.ಸಿ.ಎನ್. ಕನ್ವೆನ್ಷನ್ ಹಾಲ್ ನಲ್ಲಿ ದೊಡ್ಡಬಳ್ಳಾಪುರದ ತಾಲೂಕಿನ ಮೂಡ್ಲಕಾಳೇನಹಳ್ಳಿಯ ಸಿದ್ದಮ್ಮ ಮತ್ತು ಗೋವಿಂದರಾಜು ಪುತ್ರ ವೆಂಕಟೇಶ್ ಹಾಗೂ ನೆಲಮಂಗಲ ತಾಲೂಕಿನ ದೊಡ್ಡೆಬೆಲೆ ಗ್ರಾಮದ ಅಂಜನಮ್ಮ ನರಸಿಂಹಮೂರ್ತಿ ಪುತ್ರಿ ದಿವ್ಯಾ ಅವರ ಮದುವೆ ಫಿಕ್ಸ್ ಆಗಿತ್ತು.

 ರಾತ್ರಿ ರಿಸೆಪ್ಷನ್ ನಲ್ಲಿ ನಗುನಗುತ್ತಲೇ ವರ ವೆಂಕಟೇಶ್ ಜೊತೆ ಫೋಟೋಗೆ ಪೋಸ್ ಕೊಟ್ಟಿದ್ದ ದಿವ್ಯಾ ಆರಾಮಾಗಿ ಇದ್ಲು.. ಬೆಳಗ್ಗೆ ಮುಹೂರ್ತಕ್ಕೆ ಬರುತ್ತಿದ್ದಂತೆ ಮದುವೆ ಬೇಡ ಎಂದ ದಿವ್ಯಾ ಹಸೆಮಣೆಯಿಂದ ಎದ್ದು ನಿಂತಳು.. ಹುಡುಗಿ ಉಲ್ಟಾ ಹೊಡೆಯುತ್ತಿದ್ದಂತೆ ಕಲ್ಯಾಣ ಮಂಟಪದಲ್ಲಿ ಗದ್ದಲ ಗೂಡಾಗಿತ್ತು..

ಹುಡುಗಿನ ನಿರ್ಧಾರದಿಂದ ಎರಡು ಕಡೆಯವರಿಂದ ಮಾತಿನ ಚಕಮಕಿ ನಡೆಯಿತು. ಕೊಳಾಲ ಪೊಲೀಸ್ ಠಾಣೆಯಲ್ಲಿ ಮೆಟ್ಟಿಲು ಹತಿತ್ತು ಮದುವೆ ಮನೆಯ ಹೈ ಡ್ರಾಮಾ. ಹುಡುಗಿ ಜೊತೆ ಮದುವೆ ಸಂಬಂದ ಮುಂದುವರಸಲು ನಿರಾಕರಿಸಿದ ವರ ಹಾಗೂ ಕುಟುಂಬಸ್ಥರು. 

ಇದನ್ನೂ ಓದಿ-ಪ್ರಧಾನಿ ರೋಡ್ ಶೋ ಸಂದರ್ಭದಲ್ಲಿ ಬಿಜೆಪಿ ನಾಯಕರ ಮಾದರಿ ನಡೆ: ಬಸವರಾಜ ಬೊಮ್ಮಾಯಿ

ಪೊಲೀಸರ ಸಮ್ಮುಖದಲ್ಲಿ ರಾಜೀ ಸಂಧಾನಕ್ಕೆ ಮುಂದಾದರು. ಮದುವೆ ಖರ್ಚು ಎಂದು ಒಂದು ಲಕ್ಷ ಹಣ ವರನ ಕಡೆಯವರಿಗೆ ನೀಡಲು ಒಪ್ಪಿ ವಧುವಿನ ತಂದೆ ಬಳಿಕ ಮದುವೆಗೆ ನೀಡಿದ ಚಿನ್ನಾಭರಣ ಕೂಡ ವಾಪಸ್ ನೀಡಿದ್ದರು. ಈ ನಡುವೆ ಮದುವೆ ಮಠಪದಿಂದ ಪೊಲೀಸ್ ಠಾಣೆಗೆ ಹೋಗಿದ್ದ ವಧುವಿನ ಪ್ರಿಯಕರ ನಾಗೇಶ್ ನಿನ್ನೆ ರಾತ್ರಿಯಿಂದಲೇ ಕಲ್ಯಾಣ ಮಂಟಪದಲ್ಲಿ ಕಾಣಿಸಿಕೊಂಡಿದ್ದಾಗಿ ಹೇಳಿಕೊಂಡಿದ್ದಾನೆ. ಪ್ರೀಯಕರನ್ನ ಕಂಡು ದಿವ್ಯಾ ಕೂಡ ಮದುವೆಗೆ ನಿರಾಕರಿಸಿದಳು.

ಕಳೆದ ಆರು ವರ್ಷಗಳಿಂದ ದಿವ್ಯಾ ಹಾಗೂ ನಾಗೇಶ್ ಪರಸ್ಪರ ಪ್ರೀತಿಯಲ್ಲಿ ಮುಳುಗಿದರು. ಮೂರು ತಿಂಗಳ ಹಿಂದೆ ನಿಶ್ಚಿತಾರ್ಥ ಕೂಡ ವೆಂಕಟೇಶ್ ಜೊತೆ ಮಾಡಿಕೊಂಡಿದ್ಲು.. ಮಗಳ ಪ್ರೀತಿ ವಿಷಯ ಮುಚ್ಚಿಟ್ಟು ಮದುವೆ ಮಾಡಲು ಮುಂದಾಗಿದ್ದರು ದಿವ್ಯಾ ಪೋಷಕರು.. ಮದುವೆಯ ದಿನವೆ ಎಸ್ಕೇಪ್ ಆಗುವ ಪ್ಲಾನ್ನಲ್ಲಿದ್ದಳ ವಧು..? ಏನು ಆಗಿಲ್ಲವೆಂಬಂತೆ ಪೊಲೀಸ್ ಠಾಣೆಯಲ್ಲಿ ಓಡಾಡಿಕೊಂಡಿದ್ದಳು. 

ವರನ ಕಡೆಯವರಿಗೆ ವಿಚಾರ ಗೊತ್ತಾಗದಂತೆ ಎಚ್ಚರ ವಹಿಸಿದ್ರು ಪೊಷಕರು. ಇದು ಯಾವುದು ಗೊತ್ತಿಲ್ಲದ ವರ ವೆಂಕಟೇಶ್ ಮದುವೆ ಖರ್ಚನ್ನು ತಾವೆ ಬರಿಸಿದ್ದ. ವೆಂಕಟೇಶ್ ಹಾಗೂ ದಿವ್ಯಾ ದೂರದ ಸಂಬಂದಿಗಳಾಗಿದ್ದರು.

ಮದುವೆ ಹಿನ್ನೆಲೆ ವಧುವಿಗೆ ಸುಮಾರು ೪ ಲಕ್ಷ ಮೌಲ್ಯದ ಒಡವೆ ಹಾಕಿದ್ದ ವರ. ಮದುವೆ ಸಂಭ್ರಮ ವಿಲ್ಲದೇ ಕಲ್ಯಾಣ ಮಂಟಪ ಖಾಲಿ ಖಾಲಿಯಾಗಿದೆ.ಹಸೆಮಣೆ ಮೇಲೆ ಮದುವೆ ಮುರಿದು ಬಿದ್ದ ಹಿನ್ನಲೆ, ಮದುವೆಗೆ ತಯಾರಿಸಿದ್ದ ಅಡುಗೆ ವ್ಯರ್ಥವಾಗಿದೆ..ವಧು ಒಪ್ಪಿದ್ರು ನಮಗೆ ಮದುವೆ ಬೇಡ ಎಂದಿದ್ದಾರೆ ವರನ ಕಡೆಯವರು.

 ಈ ಎಲ್ಲಾ ಬೆಳಣಿಗೆ ನಡುವೆ ಪೊಲೀಸ್ ಠಾಣೆಯಿಂದ ಪ್ರಿಯಕರ ನಾಗೇಶ್ ಜೊತೆ ದಿವ್ಯಾ ಹೆಜ್ಜೆ ಹಾಕಿ ಹೊರ ಬಂದಿದ್ದಾಳೆ.. ಇತ್ತು ವರ ವೆಂಕಟೇಶ್ ಹಾಗೂ ಸಂಬಂಧಿಕರು ಬೇಸರಿಂದ ಮನೆಗೆ ಹೋಗಬೇಕಾಯಿತು..

ಇದನ್ನೂ ಓದಿ-ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರಕರ್ತರು ಎಂದರೆ ಭಯ : ಸಚಿವ ಲಾಡ್‌

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News