ಕಠಿಣ ಶ್ರಮ ಬುದ್ದಿವಂತಿಕೆಯಿಂದ ತಮ್ಮ ಅದೃಷ್ಟವನ್ನೇ ಬದಲಿಸುತ್ತಾರೆ ಈ ರಾಶಿಯವರು

ಜ್ಯೋತಿಷ್ಯಶಾಸ್ತ್ರದ (Astrology) ಪ್ರಕಾರ, ಈ ವಿಷಯವು ಕೆಲವರಿಗೆ  ಸಂಪೂರ್ಣವಾಗಿ ಹೊಂದಿಕೊಳ್ಳುತ್ತದೆ. ಈ ಜನರು ತುಂಬಾ ಭಾವೋದ್ರಿಕ್ತರಾಗಿರುತ್ತಾರೆ. 

Written by - Ranjitha R K | Last Updated : Jan 20, 2022, 12:28 PM IST
  • ಈ ರಾಶಿಯವರು ಸವಾಲುಗಳಿಗೆ ಹೆದರುವುದಿಲ್ಲ
  • ಕಠಿಣ ಪರಿಶ್ರಮದಿಂದ ಅದೃಷ್ಟವನ್ನೇ ಬದಲಿಸುತ್ತಾರೆ
  • ತಾವು ಬಯಸಿದ ಸ್ಥಾನವನ್ನು ಪಡೆದೆ ತೀರುತ್ತಾರೆ
ಕಠಿಣ ಶ್ರಮ ಬುದ್ದಿವಂತಿಕೆಯಿಂದ ತಮ್ಮ ಅದೃಷ್ಟವನ್ನೇ ಬದಲಿಸುತ್ತಾರೆ ಈ ರಾಶಿಯವರು  title=
ಈ ರಾಶಿಯವರು ಸವಾಲುಗಳಿಗೆ ಹೆದರುವುದಿಲ್ಲ (file photo)

ನವದೆಹಲಿ : ಕಠಿಣ ಪರಿಶ್ರಮ ಮತ್ತು ಧೈರ್ಯದಿಂದ ವ್ಯಕ್ತಿ ತನ್ನ ಭವಿಷ್ಯವನ್ನೇ ಬದಲಾಯಿಸಬಹುದು ಎಂದು ಹೇಳಲಾಗುತ್ತದೆ. ಜ್ಯೋತಿಷ್ಯಶಾಸ್ತ್ರದ (Astrology) ಪ್ರಕಾರ, ಈ ವಿಷಯವು ಕೆಲವರಿಗೆ  ಸಂಪೂರ್ಣವಾಗಿ ಹೊಂದಿಕೊಳ್ಳುತ್ತದೆ. ಈ ಜನರು ತುಂಬಾ ಭಾವೋದ್ರಿಕ್ತರಾಗಿರುತ್ತಾರೆ. ಅವರು ಜೀವನದಲ್ಲಿ ಎದುರಾಗುವ ಯಾವುದೇ ಸವಾಲುಗಳಿಗೆ ಹೆದರುವುದಿಲ್ಲ. ತಮ್ಮ ಕಠಿಣ ಪರಿಶ್ರಮದಿಂದ ತಮ್ಮ ಅದೃಷ್ಟವನ್ನೇ ಬದಲಿಸುತ್ತಾರೆ.  ಪರಿಸ್ಥಿತಿ ಏನೇ ಇದ್ದರೂ, ತಾವು ಬಯಸಿದ ಸ್ಥಾನವನ್ನು ಪಡೆದೆ ತೀರುತ್ತಾರೆ. 

ಮೇಷ ರಾಶಿ :
ಮೇಷ ರಾಶಿಯ (Aries) ಜನರು ತುಂಬಾ ಶ್ರಮಜೀವಿಗಳು. ದಣಿಯುವುದು ಎಂಬ ಪದ ಅವರ ನಿಘಂಟಿನಲ್ಲಿ ಇಲ್ಲವೆಂದೇ ಹೇಳಬಹುದು. ಜೊತೆಗೆ, ಇವರು ಹಠಮಾರಿ ಸ್ವಭಾವದವರು. ಈ ರಾಶಿಯವರು (Zodiac sign) ತಾವು ಏನು ಮಾಡಬೇಕೆಂದು ಬಯಸುತ್ತರೆಯೋ, ಆ ಕಾರ್ಯವನ್ನು ಮಾಡಿಯೇ ಮುಗಿಸುತ್ತಾರೆ. 

ಇದನ್ನೂ ಓದಿ : Budh Rashi Parivartan: ಈ 3 ರಾಶಿಯವರಿಗೆ ಮುಂದಿನ 45 ದಿನ ಬಹಳ ವಿಶೇಷ, ಸುರಿಯಲಿದೆ ಹಣದ ಮಳೆ

ವೃಷಭ ರಾಶಿ
ವೃಷಭ ರಾಶಿಯ (Taraus) ಜನರು ಕಠಿಣ ಪರಿಶ್ರಮದಿಂದ ಯಶಸ್ಸು ಪಡೆಯುತ್ತಾರೆ. ಜೀವನದಲ್ಲಿ ಏನೇ ಸವಾಲುಗಳು ಬಂದರೂ, ತಮ್ಮ ಗುರಿಯನ್ನು ಸಾಧಿಸುವುದರಿಂದ ಹಿಂದೆ ಸರಿಯುವುದಿಲ್ಲ. ಈ ರಾಶಿಯವರು ತಮ್ಮ ಜೀವನದ ಎರಡನೇ ಹಂತದಲ್ಲಿ ತಮ್ಮ ಶ್ರಮದ ಫಲವನ್ನು ಪಡೆಯುತ್ತಾರೆ.  

 ಸಿಂಹ :
ಸಿಂಹ ರಾಶಿಯ (Leo) ಜನರು ಜೀವನೋತ್ಸಾಹದಿಂದ ಕೂಡಿರುತ್ತಾರೆ.   ಪ್ರತಿ ಕೆಲಸದಲ್ಲಿ ಯಶಸ್ಸು ಸಿಕ್ಕರೂ, ಸಿಗದಿದ್ದರೂ ಇವರು ಎದೆಗುಂದುವುದಿಲ್ಲ. ತಾವು ಕೈಗೆತ್ತಿಕೊಂಡ ಕೆಲಸದಲ್ಲಿ ಗೆಲುವು ಸಾಧಿಸಿದ ನಂತರವೇ ನಿಟ್ಟುಸಿರು ಬಿಡುತ್ತಾರೆ.  

ವೃಶ್ಚಿಕ ರಾಶಿ :
ವೃಶ್ಚಿಕ ರಾಶಿಯ (Scorpio) ಜನರು ಕಠಿಣ ಪರಿಶ್ರಮ ಹಾಗೂ ಬುದ್ಧಿವಂತಿಕೆಯಿಂದ ಎಲ್ಲವನ್ನೂ ಪಡೆಯುತ್ತಾರೆ. ಅವರಲ್ಲಿ ಗೆಲ್ಲುವ ಉತ್ಸಾಹವಿರುತ್ತದೆ. ಈ ರಾಶಿಯವರು ಬಯಸಿದ್ದನ್ನು ಪಡೆದ ನಂತರವೇ, ನಿರಾಳರಾಗುತ್ತಾರೆ. ವೃಶ್ಚಿಕ ರಾಶಿಯವರು ತಮ್ಮ ಅದೃಷ್ಟವನ್ನು ಬದಲಾಯಿಸುವ ಶಕ್ತಿಯನ್ನು ಹೊಂದಿರುತ್ತಾರೆ.  

ಇದನ್ನೂ ಓದಿ : Vasant Panchami 2022: ವಸಂತ ಪಂಚಮಿ ಯಾವ ದಿನ? ಇಲ್ಲಿದೆ ಪೂಜಾ ವಿಧಾನ ಮತ್ತು ಮಹತ್ವ..!

ಮಕರ ರಾಶಿ :
ಶನಿಯು (Shani ) ಮಕರ ರಾಶಿಯ (Capricorn) ಅಧಿಪತಿಯಾಗಿದ್ದು, ಈ ರಾಶಿಯವರು ಹುಟ್ಟಿನಿಂದಲೇ ಶ್ರಮಜೀವಿಗಳು. ಅವರು ಅದೃಷ್ಟಕ್ಕಿಂತ ಹೆಚ್ಚಾಗಿ ಕಾರ್ಯಗಳನ್ನು ಮಾಡಿ ಮುಗಿಸುವುದರಲ್ಲಿ ನಂಬಿಕೆಯಿಟ್ಟಿರುತ್ತಾರೆ.   ಯಾವಾಗಲೂ ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಈ ಜನರು ತಮ್ಮ ಕಠಿಣ ಪರಿಶ್ರಮದಿಂದ ಉನ್ನತ ಸ್ಥಾನಮಾನವನ್ನು ಪಡೆಯುತ್ತಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News