Holi 2021: ಹೋಳಿ ಹಬ್ಬದಂದು ಈ ಕೆಲಸ ಮಾಡಿದ್ರೆ ಹಣಕಾಸಿನ ಸಮಸ್ಯೆಗಳಿಂದ ಮುಕ್ತಿ!

ಕಾಮನ ದಹನದ ದಿನ, ಬಟಾಣಿ, ಗೋಧಿ ಮತ್ತು ಕಡಲೆಯನ್ನು ಬೆಂಕಿಯಲ್ಲಿ ಸುರಿದರೆ ಹಣದ ಅಡಚಣೆಯನ್ನು ನಿವಾರಿಸಬಹುದು. 

Last Updated : Mar 27, 2021, 04:11 PM IST
  • ಈ ವರ್ಷದ ಬಣ್ಣಗಳ ಹಬ್ಬವಾದ ಹೋಳಿ ಮಾರ್ಚ್ 29 ಸೋಮವಾರ ಬರುತ್ತದೆ.
  • ಹಿಂದೂ ಧರ್ಮದಲ್ಲಿ ಪ್ರತಿಯೊಂದೂ ಹಬ್ಬಕ್ಕೂ ವಿಶೇಷ ಮಹತ್ವವಿದೆ ಮತ್ತು ಜ್ಯೋತಿಷ್ಯಶಾಸ್ತ್ರದಲ್ಲಿ ಕೆಲವೊಂದು ಕ್ರಮ
  • ಕಾಮನ ದಹನದ ದಿನ, ಬಟಾಣಿ, ಗೋಧಿ ಮತ್ತು ಕಡಲೆಯನ್ನು ಬೆಂಕಿಯಲ್ಲಿ ಸುರಿದರೆ ಹಣದ ಅಡಚಣೆಯನ್ನು ನಿವಾರಿಸಬಹುದು.
Holi 2021: ಹೋಳಿ ಹಬ್ಬದಂದು ಈ ಕೆಲಸ ಮಾಡಿದ್ರೆ ಹಣಕಾಸಿನ ಸಮಸ್ಯೆಗಳಿಂದ ಮುಕ್ತಿ! title=

ಈ ವರ್ಷದ ಬಣ್ಣಗಳ ಹಬ್ಬವಾದ ಹೋಳಿ ಮಾರ್ಚ್ 29 ಸೋಮವಾರ ಬರುತ್ತದೆ. ಒಂದು ದಿನ ಮೊದಲು ಅಂದರೆ ಮಾರ್ಚ್ 28ರ ಭಾನುವಾರ ರಾತ್ರಿ ಹೋಳಿಕಾ ದಹನವು ನಡೆಯಲಿದೆ. ಹಿಂದೂ ಧರ್ಮದಲ್ಲಿ ಪ್ರತಿಯೊಂದೂ ಹಬ್ಬಕ್ಕೂ ವಿಶೇಷ ಮಹತ್ವವಿದೆ ಮತ್ತು ಜ್ಯೋತಿಷ್ಯಶಾಸ್ತ್ರದಲ್ಲಿ ಕೆಲವೊಂದು ಕ್ರಮಗಳನ್ನು ಅನುಸರಿಸಲಾಗಿದೆ. 

ಅವುಗಳನ್ನು ಅಳವಡಿಸಿಕೊಳ್ಳುವ ಮೂಲಕ, ವ್ಯಕ್ತಿಯು ತನ್ನ ಸಮಸ್ಯೆಗಳಿಂದ ಸ್ವಲ್ಪ ಮಟ್ಟಿಗೆ ಹೊರ ಬರಬಹುದು ಎಂದು ನಂಬಲಾಗಿದೆ. ಇಲ್ಲಿ ಹೋಳಿ ದಿನ(Holi Day) ಮಾಡಬಹುದಾದ ಕೆಲವೊಂದು ಕ್ರಮಗಳನ್ನು ನೀಡಲಾಗಿದೆ.

ಹೋಳಿ ದಿನ ಈ ತಪ್ಪನ್ನು ಮಾಡಿದರೆ ವರ್ಷ ಪೂರ್ತಿ ಹಣದ ಸಮಸ್ಯೆ ಎದುರಾಗಬಹುದು

ಕಾಮನ ದಹನದ ದಿನ, ಬಟಾಣಿ, ಗೋಧಿ ಮತ್ತು ಕಡಲೆಯನ್ನು ಬೆಂಕಿಯಲ್ಲಿ ಸುರಿದರೆ ಹಣದ ಅಡಚಣೆ(Money Problem)ಯನ್ನು ನಿವಾರಿಸಬಹುದು. 

Corona ಸಮಯದಲ್ಲಿ ಹೋಳಿ ಆಚರಣೆ, ಇವುಗಳ ಬಗ್ಗೆ ಇರಲಿ ಎಚ್ಚರ

ಹೋಳಿಯ ದಿನ ಶ್ರೀಯಂತ್ರವನ್ನು ಅಂಗಡಿ(Shop) ಅಥವಾ ಮನೆಯ ಲಾಕರ್ನಲ್ಲಿ ಇಡುವುದರಿಂದ ಸಂಪತ್ತು ಹೆಚ್ಚುತ್ತದೆ. 

ಇದು ಶನಿ ದೇವನ ವಕ್ರ ದೃಷ್ಟಿಯಿಂದ ತಪ್ಪಿಸಿಕೊಳ್ಳುವ ಸರಳ ವಿಧಾನ

ಹೋಳಿ ದಿನ, ಶುದ್ಧವಾದ ಸ್ಥಳದಲ್ಲಿ ಅಥವಾ ಮನೆ(Home)ಯ ಪೂಜಾ ಸ್ಥಳದಲ್ಲಿ ಏಳು ಮುತ್ತುಗಳ ಶಂಖವನ್ನಿಟ್ಟರೆ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ ಮತ್ತು ಆರೋಗ್ಯವೂ ಸುಧಾರಿಸುತ್ತದೆ.

ಹೋಳಿಯ ರಾತ್ರಿ, ಅಶ್ವಥ ಮರದ ಕೆಳಗೆ ತುಪ್ಪದ ದೀಪವನ್ನು ಉರಿಸಿ ಏಳು ಬಾರಿ ಪ್ರದಕ್ಷಿಣೆ ಹಾಕುವುದರಿಂದ ಎಲ್ಲಾ ರೀತಿಯ ಆರ್ಥಿಕ ಬಿಕ್ಕಟ್ಟುಗಳು ನಿರಣೆಯಾಗುತ್ತದೆ. 

Holi 2021: ಹೋಳಿಯಲ್ಲಿ ಆಂಜನೇಯನನ್ನು ಈ ರೀತಿ ಪೂಜಿಸಿ ನಿಮ್ಮ ಸಮಸ್ಯೆ ನಿವಾರಿಸಿ

ಸಾಲದಿಂದ ಮುಕ್ತರಬೇಕಾದರೆ ಅಥವಾ ಆರ್ಥಿಕ ಪರಿಸ್ಥಿತಿ ಸುಧಾರಿಸಬೇಕೆಂದರೆ ಕಾಮನ ದಹನದ ರಾತ್ರಿ ಶಿವಲಿಂಗದ ಮೇಲೆ 21 ಗೋಮ್ತಿ ಚಕ್ರವನ್ನು ಅರ್ಪಿಸಿ. ನಂತರ ಹೋಳಿಯ ಮುಂಜಾನೆ ಅವುಗಳನ್ನು ತೆಗೆದುಕೊಂಡು ವಾಲ್ಟ್ ಅಥವಾ ಲಾಕರ್‌ನಲ್ಲಿ ಇರಿಸಿ.

ಹೋಳಿ ದಿನ ಒಂದು ಕಣ್ಣಿನ ತೆಂಗಿನಕಾಯಿ(Coconut)ಯನ್ನು ಪೂಜಿಸಿದಲ್ಲಿ ಮನೆಯಲ್ಲಿ ಲಕ್ಷ್ಮಿ ದೇವಿಯ ಅನುಗ್ರಹವಾಗಿ, ಹಣದ ಸಮಸ್ಯೆ ದೂರವಾಗುತ್ತದೆ.

Daily Horoscope: ದಿನಭವಿಷ್ಯ 27-03-2021 Today astrology

ಹೋಳಿಕಾವನ್ನು ದಹನದ ಸಮಯದಲ್ಲಿ ಬೆಂಕಿಯಲ್ಲಿ ಸುರಿಯುವುದು ಮತ್ತು ಲಕ್ಷ್ಮಿತಾಯಿಯನ್ನು ನೆನೆಯುವುದು ಜೀವನದಲ್ಲಿ ಹಣದ ತೊಂದರೆಯನ್ನು ನಿವಾರಿಸುತ್ತದೆ. ಶುಭ ಹಾರೈಕೆಗಳು ಕೂಡ ಹೆಚ್ಚಾಗುತ್ತವೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ... 
Android Link -
 https://bit.ly/3hDyh4G 
Apple Link - https://apple.co/3loQYe  
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ. 

Trending News