Samantha: ನಾಗ ಚೈತನ್ಯ ಒಳ್ಳೆ ಗಂಡನಲ್ಲ, ಟಾರ್ಚರ್‌ ಕೊಟ್ಟ, ಅಬಾರ್ಷನ್ ಆಯ್ತು! ಸಿನಿರಂಗವನ್ನೇ ಬಿಚ್ಚಿ ಬೀಳಿಸಿದೆ ಈ ಟ್ವೀಟ್‌

Naga Chaitanya and Samantha : ಸಾಮಾನ್ಯವಾಗಿ ಸಿನಿಮಾ ಇಂಡಸ್ಟ್ರಿಯಲ್ಲಿ ಡೇಟಿಂಗ್, ಲವ್ ಟ್ರ್ಯಾಕ್, ಲವ್ ಮ್ಯಾರೇಜ್ ಮತ್ತು ಬ್ರೇಕಪ್ ಹೈಲೈಟ್ ಆಗುತ್ತೆ. ಇತ್ತೀಚಿನ ದಿನಗಳಲ್ಲಿ ಇಂತಹ ವಿಚಾರಗಳು ಕೊಂಚ ಹೆಚ್ಚಾಗುತ್ತಿವೆ. ಅದರಲ್ಲಿ ಟಾಲಿವುಡ್ ನ ಅಕ್ಕಿನೇನಿ ನಾಗ ಚೈತನ್ಯ ಮತ್ತು ಸಮಂತಾ ರುತ್ ಪ್ರಭು ಜೋಡಿಯ ವಿಚ್ಛೇದನವಂತೂ ಭಾರೀ ಸದ್ದು ಮಾಡಿತು. 

Written by - Chetana Devarmani | Last Updated : Mar 14, 2023, 11:38 AM IST
  • ನಾಗ ಚೈತನ್ಯ ಒಳ್ಳೆ ಗಂಡನಲ್ಲ
  • ಟಾರ್ಚರ್‌ ಕೊಟ್ಟ, ಅಬಾರ್ಷನ್ ಆಯ್ತು!
  • ಸಿನಿರಂಗವನ್ನೇ ಬಿಚ್ಚಿ ಬೀಳಿಸಿದೆ ಈ ಟ್ವೀಟ್‌
Samantha: ನಾಗ ಚೈತನ್ಯ ಒಳ್ಳೆ ಗಂಡನಲ್ಲ, ಟಾರ್ಚರ್‌ ಕೊಟ್ಟ, ಅಬಾರ್ಷನ್ ಆಯ್ತು! ಸಿನಿರಂಗವನ್ನೇ ಬಿಚ್ಚಿ ಬೀಳಿಸಿದೆ ಈ ಟ್ವೀಟ್‌  title=
Naga Chaitanya and Samantha

Naga Chaitanya and Samantha : ಸಾಮಾನ್ಯವಾಗಿ ಸಿನಿಮಾ ಇಂಡಸ್ಟ್ರಿಯಲ್ಲಿ ಡೇಟಿಂಗ್, ಲವ್ ಟ್ರ್ಯಾಕ್, ಲವ್ ಮ್ಯಾರೇಜ್ ಮತ್ತು ಬ್ರೇಕಪ್ ಹೈಲೈಟ್ ಆಗುತ್ತೆ. ಇತ್ತೀಚಿನ ದಿನಗಳಲ್ಲಿ ಇಂತಹ ವಿಚಾರಗಳು ಕೊಂಚ ಹೆಚ್ಚಾಗುತ್ತಿವೆ. ಅದರಲ್ಲಿ ಟಾಲಿವುಡ್ ನ ಅಕ್ಕಿನೇನಿ ನಾಗ ಚೈತನ್ಯ ಮತ್ತು ಸಮಂತಾ ರುತ್ ಪ್ರಭು ಜೋಡಿಯ ವಿಚ್ಛೇದನವಂತೂ ಭಾರೀ ಸದ್ದು ಮಾಡಿತು. ಮದುವೆಯಾಗಿ ಬಹಳ ವರ್ಷಗಳಾದ ಬಳಿಕ ಎರಡು ವರ್ಷಗಳ ಹಿಂದೆ ಇಬ್ಬರೂ ವಿಚ್ಛೇದನ ಪಡೆದರು. ಅಂದಿನಿಂದ, ಅವರ ಬಗ್ಗೆ ಸಾಕಷ್ಟು ವದಂತಿಗಳಿವೆ. ಈ ಅನುಕ್ರಮದಲ್ಲಿ, ಇತ್ತೀಚೆಗೆ ಸಮಂತಾಗೆ ನಾಗ ಚೈತನ್ಯ ಚಿತ್ರಹಿಂಸೆ ನೀಡಿದ್ದಾರೆ ಎಂದು ಒಬ್ಬರು ಟ್ವೀಟ್ ಮಾಡಿದ್ದಾರೆ. 

ಅಕ್ಕಿನೇನಿ ನಾಗ ಚೈತನ್ಯ ಮತ್ತು ಸಮಂತಾ ರುತ್ ಪ್ರಭು ಒಟ್ಟಿಗೆ 'ಈಮಾಯ ಚೆಸಾವೆ' ಸಿನಿಮಾ ಮಾಡಿದ್ದಾರೆ. ಈ ಸಿನಿಮಾದ ವೇಳೆ ಒಳ್ಳೆಯ ಗೆಳೆಯರಾಗಿದ್ದ ಇವರಿಬ್ಬರೂ ಬಳಿಕ ಪ್ರೀತಿಯಲ್ಲಿ ಬಿದ್ದರು. ಅಂದಿನಿಂದ ಅವರು ದೀರ್ಘಕಾಲ ರಹಸ್ಯವಾಗಿ ಪ್ರೀತಿಸಿ, ನಂತರ ವಿವಾಹವಾದರು.

ಇದನ್ನೂ ಓದಿ : Vijay Devarakonda - Samantha : ರಶ್ಮಿಕಾ ಜೊತೆ ಬ್ರೇಕಪ್.. ಸಮಂತಾ ಜತೆ ವಿಜಯ್ ದೇವರಕೊಂಡ.! ಒಂದೇ ರೂಮಿನಲ್ಲಿ..?

ಮದುವೆಯಾದ ನಂತರ ಸಮಂತಾ ಮತ್ತು ನಾಗ ಚೈತನ್ಯ ಇಬ್ಬರ ಜೋಡಿಯನ್ನು ಎಲ್ಲರೂ ತುಂಬಾ ಮೆಚ್ಚಿಕೊಂಡರು. ಇಬ್ಬರೂ ಆಗಾಗ್ಗೆ ಪಾರ್ಟಿಗಳು ಮತ್ತು ರಜೆಯ ಪ್ರವಾಸಗಳನ್ನು ಆನಂದಿಸುತ್ತಿದ್ದರು. ಈ ವೇಳೆ ತಮ್ಮ ವೈಯಕ್ತಿಕ ವಿಚಾರಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದರು. ಅದೇ ಸಮಯದಲ್ಲಿ, ಅವರು ತಮ್ಮ ಚಿತ್ರಗಳಲ್ಲಿ ನಿರತರಾಗಿದ್ದರು ಮತ್ತು ಅನೇಕ ಯಶಸ್ಸನ್ನು ಪಡೆದರು.

ಭಾರತದ ಅತ್ಯುತ್ತಮ ಸಿನಿಮಾ ಜೋಡಿ ಎಂದು ವಿಶೇಷ ಮನ್ನಣೆ ಪಡೆದ ನಾಗ ಚೈತನ್ಯ - ಸಮಂತಾ ನಂತರದ ದಿನಗಳಲ್ಲಿ ವಿಚ್ಛೇದನ ಪಡೆದರು. ಆ ಮೂಲಕ ನಾಲ್ಕು ವರ್ಷಗಳ ದಾಂಪತ್ಯಕ್ಕೆ ಬ್ರೇಕ್ ಹಾಕಿದರು. ಇದನ್ನು ಅಧಿಕೃತವಾಗಿ ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ ಪ್ರಕಟಿಸಲಾಗಿದೆ. 

ಇದನ್ನೂ ಓದಿ : Kichcha Sudeep: ಪ್ರಕೃತಿ ಕಂದಮ್ಮಗಳ ದಾಹ ನೀಗಿಸಲು ಹೊರಡಿದೆ ‘ಕಿಚ್ಚನ ಅಭಿಮಾನ’ದ ಮೆರವಣಿಗೆ..!

ಅಕ್ಕಿನೇನಿ ನಾಗ ಚೈತನ್ಯ - ಸಮಂತಾ ರುತ್ ಪ್ರಭು ವಿಚ್ಛೇದನ ಇನ್ನೂ ಸಾಕಷ್ಟು ಬಾರಿ ಮುನ್ನೆಲೆಗೆ ಬರುತ್ತದೆ. ಈ ಅನುಕ್ರಮದಲ್ಲಿ ಜನಪ್ರಿಯ ಚಿತ್ರ ವಿಮರ್ಶಕ ಉಮೈರ್ ಸಂಧು ಅವರ ಇತ್ತೀಚಿನ ಟ್ವೀಟ್ ಸಂಚಲನ ಮೂಡಿಸುತ್ತಿದೆ. ಅದರಲ್ಲಿ ಸಮಂತಾಗೆ ನಾಗ ಚೈತನ್ಯ ಟಾರ್ಚರ್ ನೀಡಿದ್ದಾರೆ ಎಂದು ಸೆನ್ಸೇಷನಲ್ ಕಾಮೆಂಟ್ ಮಾಡಿದ್ದಾರೆ. ಇದರೊಂದಿಗೆ ಈ ಸುದ್ದಿ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ.

 

 

ಉಮೈರ್ ಸಂಧು ಮಾಡಿರುವ ಟ್ವೀಟ್ ನಲ್ಲಿ, "ನಾಗ ಚೈತನ್ಯ ಒಬ್ಬ ಕೆಟ್ಟ ಗಂಡ. ಅವರು ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ನೀಡಿದ್ದಾರೆ. ಮೇಲಾಗಿ, ಗರ್ಭಿಣಿಯಾಗಿದ್ದರೂ, ಅವನಿಂದಾಗಿ ಗರ್ಭಪಾತಕ್ಕೆ ಒಳಗಾಗಬೇಕಾಯಿತು. ಅವನ ಕಿರುಕುಳ ಸಹಿಸಲಾಗದೆ ಬೇರ್ಪಟ್ಟೆ. ಹೀಗೇ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಸಿನಿಮಾ ವಿಮರ್ಶಕ ಹಾಗೂ ಸೆನ್ಸಾರ್ ಸದಸ್ಯ ಎಂದು ಹೇಳುವ ಉಮೈರ್ ಸಂಧು ಆಗಾಗ ಹೀಗೆ ಟ್ವೀಟ್ ಮಾಡುತ್ತಾರೆ. ಅದರಲ್ಲೂ ಸೆಲೆಬ್ರಿಟಿಗಳ ಪರ್ಸನಲ್ ವಿಷಯಗಳ ಬಗ್ಗೆ ಪೋಸ್ಟ್ ಮಾಡುತ್ತಿರುತ್ತಾರೆ. ಈ ಅನುಕ್ರಮದಲ್ಲಿ ಇದೀಗ ಸಮಂತಾ ಹಾಗೂ ನಾಗ ಚೈತನ್ಯ ಬಗ್ಗೆ ಟ್ವೀಟ್ ಮಾಡಿದ್ದಾರೆ. ಆದರೆ, ಫೇಮಸ್ ಆಗಲು ಈತ ಇಂತಹ ಟ್ರಿಕ್ಸ್ ಆಡುತ್ತಾರೆ ಎಂಬುದು ಹಲವರ ಅಭಿಪ್ರಾಯ ಕೂಡ ಆಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News