ಬೇಡ ಅಂದ್ರು ಹಿಂದೆ ಬಿದ್ದ, ಮದುವೆಗೆ ಒಲ್ಲೆ ಎಂದ : ಜೈಲಿಂದಲೇ ಕರೆ ಮಾಡಿ ಕೊಲೆ ಬೆದರಿಕೆ ಹಾಕಿದ

ಅಮಲಾ ಎಂಬಾಕೆಗೆ ಪ್ರೀತಿಸುವಂತೆ ಈ ಪಾಗಲ್ ಪ್ರೇಮಿ ಶ್ರೀನಿವಾಸ್ ಹಿಂದೆ ಬಿದ್ದಿದ್ದ. ಪ್ರೀತಿಸು ಇಲ್ಲಾ ಆಸಿಡ್ ಹಾಕ್ತೀನಿ ಅಂತಾ ಹೆದರಿಸದ್ದನಂತೆ. ಈಗಾಗಲೇ ಮದುವೆಯಾಗಿ ಗಂಡನಿಂದ ದೂರವಾಗಿದ್ದ ಮಹಿಳೆ, ಈತನ ಹುಚ್ಚುತನಕ್ಕೆ ಮನಸೋತು ಪ್ರೀತಿ ಬಲೆಗೆ ಬಿದ್ದಿದ್ದರು. 

Written by - VISHWANATH HARIHARA | Edited by - Krishna N K | Last Updated : Sep 10, 2023, 03:56 PM IST
  • ಮದುವೆಯಾಗಿ ಗಂಡನಿಂದ ದೂರವಾಗಿದ್ದ ಮಹಿಳೆ ಹಿಂದೆ ಬಿದ್ದ ಪಾಗಲ್‌ ಪ್ರೇಮಿ.
  • ಮಹಿಳೆ ಈತನ ಹುಚ್ಚುತನಕ್ಕೆ ಮನಸೋತು ಪ್ರೀತಿ ಬಲೆಗೆ ಬಿದ್ದಿದ್ದರು.
  • ಪ್ರೀತಿಸಿ ಮದುವೆ ಬೇಡ ಅಂದವನಿಗೆ ಪ್ರಿಯತಮೆ ಜೈಲಿಗೆ ಬಾಗಿಲು ತೋರಿಸಿದ್ದಾಳೆ.
ಬೇಡ ಅಂದ್ರು ಹಿಂದೆ ಬಿದ್ದ, ಮದುವೆಗೆ ಒಲ್ಲೆ ಎಂದ : ಜೈಲಿಂದಲೇ ಕರೆ ಮಾಡಿ ಕೊಲೆ ಬೆದರಿಕೆ ಹಾಕಿದ title=

ಬೆಂಗಳೂರು : ಮದುವೆಯಾಗಿ ಗಂಡನಿಂದ ದೂರವಾಗಿದ್ದ ಮಹಿಳೆ ಹಿಂದೆ ಬಿದ್ದು ಪ್ರೀತಿಸಿ ಮದುವೆ ಬೇಡ ಅಂದವನಿಗೆ ಪ್ರಿಯತಮೆ ಜೈಲಿಗೆ ಬಾಗಿಲು ತೋರಿಸಿದ್ದಾಳೆ. ಆದರೆ ಪಾಗಲ್ ಪ್ರಿಯತಮ ಮಾತ್ರ ಇದೇ ದ್ವೇಷಕ್ಕೆ ಜೈಲಿನಿಂದಲೇ ಪ್ರಿಯತಮೆಗೆ ಕರೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾನಂತೆ.  ಇದರಿಂದ ಗೊತ್ತಾಗೋದು  ಪರಪ್ಪ ಅಗ್ರಹಾರ ಅಕ್ರಮಗಳ ಅಡ್ಡೆ ಅನ್ನೊದು.

ಪತಿಯಿಂದ ದೂರವಾಗಿದ್ದ ಅಮಲಾ ಎಂಬಾಕೆಗೆ ಪ್ರೀತಿಸುವಂತೆ ಈ ಪಾಗಲ್ ಪ್ರೇಮಿ ಶ್ರೀನಿವಾಸ್ ಹಿಂದೆ ಬಿದ್ದಿದ್ದ. ಪ್ರೀತಿಸು ಇಲ್ಲಾ ಆಸಿಡ್ ಹಾಕ್ತೀನಿ ಅಂತಾ ಹೆದರಿಸದ್ದನಂತೆ. ಈಗಾಗಲೇ ಮದುವೆಯಾಗಿ ಗಂಡನಿಂದ ದೂರವಾಗಿದ್ದ ಮಹಿಳೆ, ಈತನ ಹುಚ್ಚುತನಕ್ಕೆ ಮನಸೋತು ಪ್ರೀತಿ ಬಲೆಗೆ ಬಿದ್ದಿದ್ದರು. 

ಇದನ್ನೂ ಓದಿ: ರಾಯಚೂರು ಡೆಪ್ಯೂಟಿ ತಹಶೀಲ್ದಾರ್‌ ಲಂಚ ಪ್ರಕರಣ : ಕಚೇರಿಗೆ ಬಾರದ ಅಧಿಕಾರಿ

ಕೆಲಕಾಲ ಇಬ್ಬರು ಪ್ರೀತಿಯ ಗುಂಗಲ್ಲಿ ತೇಲಾಡಿದ ಮೇಲೆ ಮದುವೆ ಆಗು ಅಂತಾ ಅಮಲಾ ಕೇಳಿದ್ದಕ್ಕೆ ಶ್ರೀನಿವಾಸ ಉಲ್ಟಾ ಹೊಡೆದಿದ್ದ. ನಿನ್ನನ್ನ ಮದುವೆ ಆಗಲ್ಲ ಜೊತೆಯಲ್ಲೇ ಇರು ಸಾಕು ಎಂದಿದ್ದನಂತೆ. ಅಲ್ಲದೇ ಶ್ರೀನಿವಾಸ ಮತ್ತು ಆತನ ತಾಯಿ ಸೇರಿ ಅಮಲಾ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಮಹಿಳೆ ದೂರು ದಾಖಲಿಸಿದ್ದರಿಂದ ಶ್ರೀನಿವಾಸನಿಗೆ ಪರಪ್ಪನ ಅಗ್ರಹಾರ ಜೈಲು ಸೇರಿದ್ದ.

ಜೈಲು ಸೇರಿದ್ದ ಶ್ರೀನಿವಾಸ ಈಗ ಸುಮ್ಮನೆ ಕುಳಿತಿಲ್ಲ. ಜೈಲಿನಿಂದ ಕರೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾನೆ ಅಂತಾ ಮಹಿಳೆ ಆರೋಪ ಮಾಡುತ್ತಿದ್ದಾರೆ. ಜೈಲು ಸೇರಿದರೂ ಬುದ್ಧಿ ಕಲಿಯದ ಶ್ರೀನಿವಾಸ್, ಜೈಲಿನಿಂದಲೇ ಅಮಲಾಗೆ ವಾಟ್ಸಾಪ್ ಕರೆ ಮಾಡಿ ತನ್ನನ್ನ ನೋಡಲು ಜೈಲಿಗೆ ಬರಬೇಕು ಅಂತಾ ಧಮ್ಕಿ ಹಾಕಿದ್ದಾನಂತೆ.

ಇದನ್ನೂ ಓದಿ: ಭಾರತೀಯ ರೈಲ್ವೆಯಿಂದ ಸ್ಪೆಷಲ್‌ ಆಫರ್‌ : ಕಡಿಮೆ ದರದಲ್ಲಿ ತೀರ್ಥ ಕ್ಷೇತ್ರಗಳ ಪ್ರವಾಸ

ನನ್ನನ್ನ ಜೈಲಿಗೆ ಹಾಕಿಸಿದೆ ಅಲ್ವಾ, ಜೈಲಿಗೆ ಬಾ ಜೈಲಿನಲ್ಲಿ ನನ್ನೊಟ್ಟಿಗೆ ಇರು. ಬರಲಿಲ್ಲ ಅಂದರೆ ಹೊರಗೆ ಬಂದು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನಂತೆ. ಹೀಗಾಗಿ ಮತ್ತೆ ಆರೋಪಿ ವಿರುದ್ಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಸಂತ್ರಸ್ಥೆ ದೂರು ದಾಖಲಿಸಿದ್ದಾರೆ. ಇದರಿಂದ ಜೈಲಿನಲ್ಲಿ ಖೈದಿಗಳಿಗೆ ಮೊಬೈಲ್ ಆರಾಮಾಗಿ ಸಿಗುತ್ತಿದೆ. ಅಕ್ರಮಗಳು ಎಗ್ಗಿಲ್ಲದೇ ಸಾಗುತ್ತಿವೆ ಎಂಬುದಕ್ಕೆ ಮತ್ತೆ ಉದಾಹರಣೆ ಸಿಕ್ಕಂತಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News