/kannada/photo-gallery/shikanji-buttermilk-is-helpful-in-dissolving-stubborn-obesity-around-the-waist-249358 ಒಂದು ಗ್ಲಾಸ್‌ ಮಜ್ಜಿಗೆಗೆ ಈ ಪದಾರ್ಥ ಬೆರೆಸಿ ಕುಡಿಯಿರಿ ಸಾಕು: ಸೊಂಟದ ಸುತ್ತ ತುಂಬಿರುವ ಹಠಮಾರಿ ಬೊಜ್ಜು ಮಂಜು ಕರಗಿದಂತೆ ಕರಗುತ್ತೆ! ಒಂದು ಗ್ಲಾಸ್‌ ಮಜ್ಜಿಗೆಗೆ ಈ ಪದಾರ್ಥ ಬೆರೆಸಿ ಕುಡಿಯಿರಿ ಸಾಕು: ಸೊಂಟದ ಸುತ್ತ ತುಂಬಿರುವ ಹಠಮಾರಿ ಬೊಜ್ಜು ಮಂಜು ಕರಗಿದಂತೆ ಕರಗುತ್ತೆ! 249358

ಅನೈತಿಕ ಸಂಬಂಧಕ್ಕೆ ಅಡ್ಡಿ: ಪ್ರಿಯಕರನೊಂದಿಗೆ ಸೇರಿ ಗಂಡನನ್ನೇ ಕೊಲೆ ಮಾಡಿದ ಪತ್ನಿ‌ ಸೇರಿ ಮೂವರು ಅರೆಸ್ಟ್

Crime News: ಬಾಗಲಕೋಟೆ ಮೂಲದ ರಾಜ್ ಸಾಬ್ ಕೊಲೆಯಾದ ವ್ಯಕ್ತಿಯಾದರೆ ಈತನ ಹೆಂಡತಿ ರಜಮಾ ಹಾಗೂ ಇವಳ ಪ್ರಿಯಕರ ಪರಶುರಾಮ ಮತ್ತು ಇವನ ದೊಡ್ಡಮ್ಮನ ಮಕ್ಕಳಾದ ರವಿ ಮತ್ತು ಬಸವರಾಜ ಕೊಲೆ ಮಾಡಿದ ಆರೋಪಿಗಳಾಗಿದ್ದಾರೆ.

Written by - Yashaswini V | Last Updated : Oct 5, 2023, 06:42 AM IST
  • ಅನೈತಿಕ ಸಂಬಂಧಕ್ಕೆ ಅಡ್ಡಿ
  • ಪ್ರಿಯಕರನೊಂದಿಗೆ ಸೇರಿ ಗಂಡನಿಗೆ ಸ್ಕೆಚ್ ಹಾಕಿದ ಹೆಂಡತಿ
  • ಗಂಡನಿಗೆ ಕೊಲೆ ಮಾಡಲು ಪ್ರಿಯಕರನಿಗೆ 10 ಸಾವಿರ ನೀಡಿದ್ದ ಕೊಲೆ ಪಾತಕಿ
ಅನೈತಿಕ ಸಂಬಂಧಕ್ಕೆ ಅಡ್ಡಿ:  ಪ್ರಿಯಕರನೊಂದಿಗೆ ಸೇರಿ ಗಂಡನನ್ನೇ ಕೊಲೆ ಮಾಡಿದ ಪತ್ನಿ‌ ಸೇರಿ ಮೂವರು ಅರೆಸ್ಟ್ title=

Crime News: ಅನೈತಿಕ ಸಂಬಂಧಕ್ಕೆ ಅಡ್ಡಿ ಪಡಿಸಿದ ಹಿನ್ನೆಲೆ ಪತ್ನಿ ತನ್ನ ಪ್ರಿಯಕರನೊಂದಿಗೆ ಸೇರಿ  ಗಂಡನನ್ನೆ ಕೊಲೆ ಮಾಡಿಸಿ ಇದೀಗ ಪ್ರಿಯಕರನೊಂದಿಗೆ ಪೋಲಿಸರಿಗೆ ಅತಿಥಿಯಾಗಿದ್ದಾಳೆ.
 
ಬಾಗಲಕೋಟೆ ಮೂಲದ ರಾಜ್ ಸಾಬ್ ಕೊಲೆಯಾದ ವ್ಯಕ್ತಿಯಾದರೆ ಈತನ ಹೆಂಡತಿ ರಜಮಾ ಹಾಗೂ ಇವಳ ಪ್ರಿಯಕರ ಪರಶುರಾಮ ಮತ್ತು ಇವನ ದೊಡ್ಡಮ್ಮನ ಮಕ್ಕಳಾದ ರವಿ ಮತ್ತು ಬಸವರಾಜ ಕೊಲೆ ಮಾಡಿದ ಆರೋಪಿಗಳಾಗಿದ್ದಾರೆ.

ಇದನ್ನೂ ಓದಿ- ಸಾಲ ಮಾಡಿ ನರ್ಸಿಂಗ್ ಓದಿಸಿದ ಪತಿ; ಪ್ರಿಯಕರನ ಜೊತೆ ಓಡಿ ಹೋದ ಪತ್ನಿ!

ರಜಮಾ ತನ್ನ ಗಂಡನನ್ನು ಕೊಲೆ ಮಾಡಲು ಪ್ರಿಯಕರನಿಗೆ 10 ಸಾವಿರ ನೀಡಿದ್ದಳು. ಪರಶುರಾಮ ತನ್ನ ದೊಡ್ಡಮ್ಮನ ಮಕ್ಕಳೊಂದಿಗೆ ಬಶೀರನನ್ನು ದೇವಿಮನೆ ಘಟ್ಟದ ದೇವಸ್ಥಾನದ ಹಿಂದಿನ ಕಾಡಿಗೆ ಕರೆದುಕೊಂಡು ಬಂದು ಸರಾಯಿ ಕುಡಿಸಿ ಕೊಲೆಮಾಡಿದ್ದಾರೆನ್ನಲಾಗಿದೆ.

ಇದನ್ನೂ ಓದಿ- ಉಗ್ರರ ಅಡಗುತಾಣವಾಗುತ್ತಿದೆಯೇ ಅವಳಿ ನಗರ ಹುಬ್ಬಳಿ-ಧಾರವಾಡ?

ಬಶೀರ್ ಸಾಬ್ ಕಳೆದೊಂದು ವಾರದ ಹಿಂದೆ ದೇವಿಮನೆ ಘಟ್ಟದ ದೇವಸ್ಥಾನದ ಹಿಂದಿನ ಕಾಡಿನಲ್ಲಿ  ಕೊಲೆಯಾಗಿದ್ದನು. ಇದರ ತನಿಖೆ ನಡೆಸಿದ ಕುಮಟಾ ಪೋಲಿಸರು ಕೊಲೆ ಪಾತಕಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು ಆರೋಪಿಗಳನ್ನು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಪಿಎಸ್ಆಯ್ ನವೀನ್ ನಾಯ್ಕ್, ಪೋಲಿಸ್ ನಿರೀಕ್ಷಕ ತಿಮ್ಮಪ್ಪ ನಾಯ್ಕ ಹಾಗೂ ಪಿಎಸ್ಆಯ್ ಸಂಪತ್ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.