ಧನ್ವೀರ್ ಗೆ ಜೈಲಲ್ಲಿ ಸಿಗಲಿಲ್ಲ ದಾಸನ ದರ್ಶನ: ಇದಕ್ಕೆಲ್ಲಾ ಕಾರಣ ಪವಿತ್ರಾ ಗೌಡ ಗೆಳತಿ..!

ಜೈಲಿಗೆ ನಟ ದರ್ಶನ್ ನೋಡಲು ಹೋದ ಧನ್ವೀರ್ ಗೆ ದಾಸನ ದರ್ಶನ ಸಾಧ್ಯವಾಗದೇ ಇರಲು ಧನ್ವೀರ್  ಬರುವ ಮೊದಲೇ ದರ್ಶನ್ ಭೇಟಿಯಾಗಿದ್ದ ಆ ಮಹಿಳೆ ಕಾರಣ.   

Written by - VISHWANATH HARIHARA | Last Updated : Jul 3, 2024, 12:49 PM IST
  • ದರ್ಶನ್ ನೋಡಲು ಜೈಲಿಗೆ ಬಂದ ನಟ ಧನ್ವೀರ್ ಗೆ ದಾಸನ ದರ್ಶನ ಆಗಿಲ್ಲ..!
  • ಇದಕ್ಕೆಲ್ಲಾ ಕಾರಣ ಆಗಿದ್ದು ಆ ಲೇಡಿ..
  • ಯಾರೀ ಲೇಡಿ, ಆಕೆಯಿಂದಾಗಿ ದರ್ಶನ್ ಧನ್ವೀರ್ ಅವರನ್ನು ಏಕೆ ಭೇಟಿಯಾಗಿಲ್ಲ...
ಧನ್ವೀರ್ ಗೆ ಜೈಲಲ್ಲಿ ಸಿಗಲಿಲ್ಲ ದಾಸನ ದರ್ಶನ: ಇದಕ್ಕೆಲ್ಲಾ  ಕಾರಣ ಪವಿತ್ರಾ ಗೌಡ ಗೆಳತಿ..! title=

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ  ಜೈಲು ಸೇರಿರುವ ನಟ ದರ್ಶನ್ ನೋಡಲು ಅನೇಕ ಮಂದಿ  ಪರಪ್ಪನ ಅಗ್ರಹಾರ ಜೈಲಿಗೆ ಹೋಗುತ್ತಿದ್ದಾರೆ. ಅಂತಯೇ   ನಿನ್ನೆ  ನಟ ಧನ್ವೀರ್ ಸಹ ದರ್ಶನ್ ನೋಡಲು ಹೋಗಿದ್ದರು. ಆದರೆ, ಧನ್ವೀರ್ ಗೆ ದಾಸನ ದರ್ಶನ ಸಾಧ್ಯವಾಗಿಲ್ಲ. ಇದಕ್ಕೆಲ್ಲಾ  ಕಾರಣ ಆಗಿದ್ದು ಆ ಲೇಡಿ..!

ಹೌದು, ಜೈಲಿಗೆ ನಟ ದರ್ಶನ್ (Actor Darshan) ನೋಡಲು ಹೋದ ಧನ್ವೀರ್ ಗೆ ದಾಸನ ದರ್ಶನ ಸಾಧ್ಯವಾಗದೇ ಇರಲು ಧನ್ವೀರ್  ಬರುವ ಮೊದಲೇ ದರ್ಶನ್ ಭೇಟಿಯಾಗಿದ್ದ ಆ ಮಹಿಳೆ ಕಾರಣ. 

ಇದನ್ನೂ ಓದಿ- ರೇಣುಕಾ ಕೊಲೆ ಕೇಸ್‌ಗೆ ಪ್ರಬಲ ಸಾಕ್ಷ್ಯ: ದರ್ಶನ್‌ ಗ್ಯಾಂಗ್‌ ವಿರುದ್ಧ 21 ಮಹತ್ವದ ಎವಿಡೆನ್ಸ್‌!

ನಟ ಧನ್ವೀರ್ (Actor Dhanveer) ದರ್ಶನ್ ಭೇಟಿಗೆ ಬರುವ ಮುನ್ನವೇ ಸಮತಾ @ ಸ್ಯಾಮ್ ಎಂಟ್ರಿ ಹಾಕಿಸಿ ಜೈಲಲ್ಲಿ ದರ್ಶನ್ ಭೇಟಿ ಮಾಡಿದ್ದಾರೆ. ಈ ಸಮತಾ @ ಸ್ಯಾಮ್  ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ೧ ಆರೋಪಿಯಾಗಿರುವ ಪವಿತ್ರಗೌಡಳ ಆಪ್ತ ಗೆಳತಿಯಾಗಿದ್ದಾರೆ. ಒಂದೇ ಆತ್ಮ ಎರಡು ದೇಹದಂತಿರುವ ಪವಿತ್ರಗೌಡ ಹಾಗೂ ಸಮತಾ ಅನೇಕ ವರ್ಷಗಳಿಂದ ಗೆಳತಿಯರು. ಪವಿತ್ರಾ ಗೌಡಳನ್ನ (Pavithra Gowda) ಭೇಟಿಯಾಗುತ್ತಿದ್ದ ಸಮತಾ ಇದೀಗ  ದರ್ಶನ್ ಭೇಟಿಯಾಗಿದ್ದಾರೆ‌. 

ಇದನ್ನೂ ಓದಿ- ಇವರಿಬ್ಬರು ಇಲ್ಲದೇ ಹೋಗಿದ್ದರೆ ದರ್ಶನ್ ಅರೆಸ್ಟ್ ಸಾಧ್ಯವಿರುತ್ತಲೇ ಇರಲಿಲ್ಲ :ಡೆವಿಲ್ ಹೆಡೆಮುರಿ ಕಟ್ಟಿದ ಡೈನಾಮಿಕ್ ಅಧಿಕಾರಿಗಳಿವರು

ಜೈಲಿನ ನಿಯಮದ ಪ್ರಕಾರ ವಾರಕ್ಕೆ ಇಬ್ಬರಿಗೆ ಮಾತ್ರ ವಿಚಾರಣಾಧೀನ ಖೈದಿಯನ್ನು ಭೇಟಿಯಾಗಲು ಅವಕಾಶ ಇರುತ್ತದೆ. ಈಗಾಗಲೇ ಅನೇಕ ಮಂದಿ ದರ್ಶನ್ ಭೇಟಿಯಾಗಿದ್ದಾರೆ. ನಿನ್ನೆ ದರ್ಶನ್ ರನ್ನು ಸಮತಾ ಭೇಟಿಯಾದ ಕಾರಣ ಧನ್ವೀರ್ ಗೆ ದರ್ಶನ್ ಭೇಟಿ ಮಾಡಲು ಅವಕಾಶ ಸಿಕ್ಕಿಲ್ಲ. 

ಸಮತಾ ದರ್ಶನ್ ಭೇಟಿಗೆ ಕುಟುಂಬದಿಂದ ಆಕ್ಷೇಪ: 
ಪವಿತ್ರಾಗೌಡ ಸ್ನೇಹಿತೆ ಸಮತಾ ದರ್ಶನ್ ಭೇಟಿಯಾಗಿರೋದಕ್ಕೆ ಕುಟುಂಬದಿಂದ ಆಕ್ಷೇಪ ವ್ಯಕ್ತವಾಗಿದೆ. ಕುಟುಂಬದ ಕಲಹ ಸರಿಹೋಗುವ ಹೊತ್ತಿನಲ್ಲಿ ಈಕೆ ಯಾಕೆ ಜೈಲಿಗೆ ಹೋಗಿದ್ದು ಅಂತಾ ಆಕ್ಷೇಪ ವ್ಯಕ್ತಪಡಿಸಲಾಗಿದೆ.  ಸಮತಾ ಪವಿತ್ರಗೌಡ ಗೆಳತಿಯಾಗಿದ್ರೆ ಆಕೆಯನ್ನ ಮಾತ್ರ ನೋಡ್ಕೊಂಡ್ ಹೋಗಬೇಕಿತ್ತು. ಈಕೆ ದರ್ಶನ್ ಭೇಟಿ ಮಾಡಿರೋದು ಕುಟುಂಬದಲ್ಲಿ ಒಡುಕು ತರುವ ಕೆಲಸ ಅಂತಾ ಪರೋಕ್ಷವಾಗಿ ಕುಟುಂಬ ಆಕ್ಷೇಪ ವ್ಯಕ್ತಪಡಿಸಿರುವುದಾಗಿ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News