ದೇಶದಲ್ಲಿ ದ್ವೇಷದ ರಾಜಕಾರಣಕ್ಕೆ ನಾಂದಿ ಹಾಡಿದ್ದು ಬಿಜೆಪಿ -ಶಶಿ ತರೂರ್

    

Last Updated : May 6, 2018, 09:03 PM IST
ದೇಶದಲ್ಲಿ ದ್ವೇಷದ ರಾಜಕಾರಣಕ್ಕೆ ನಾಂದಿ ಹಾಡಿದ್ದು ಬಿಜೆಪಿ -ಶಶಿ ತರೂರ್ title=

ಬೆಂಗಳೂರು: ಬೆಂಗಳೂರಿನ ಮಹದೇವಪುರ ಕ್ಷೇತ್ರದಲ್ಲಿ  ಕಾಂಗ್ರೆಸ್ ಅಭ್ಯರ್ಥಿ ಎ ಸಿ ಶ್ರೀನಿವಾಸ್ ಪರ ಚುನಾವಣಾ ಪ್ರಚಾರ ನಡೆಸಿದ ಮಾತನಾಡಿದ ಶಶಿ ತರೂರ್ ದೇಶದಲ್ಲಿ ಮೊದಲು ದ್ವೇಷದ ರಾಜಕಾರಣಕ್ಕೆ ನಾಂದಿ ಹಾಡಿದ್ದು ಬಿಜೆಪಿ ಎಂದು ಅಭಿಪ್ರಾಯಪಟ್ಟರು.

ಮೋದಿ ಸರ್ಕಾರದ ಮೇಲೆ ಟೀಕಾ ಪ್ರಹಾರ ನಡೆಸಿದ ಶಶಿ ತರೂರ್  ಕಳೆದ ನಾಲ್ಕು ವರ್ಷಗಳಲ್ಲಿ ಯಾವುದೇ ಹೇಳಿಕೊಳುವಂತಹ ಸಾಧನೆಯನ್ನು  ಮಾಡಿಲ್ಲ ಎಂದರು. ಆದರೆ ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಚುನಾವಣೆಗೂ ನೀಡಿದ ಭರವಸೆಗಳಲ್ಲಿ ಶೇ 95 ರಷ್ಟು ಭರವಸೆಗಳನ್ನು ಈಡೇರಿಸಿದೆ ಎಂದರು.

ಇದೇ ಸಂದರ್ಭದಲ್ಲಿ  ಬಿಜೆಪಿಯು ಕಾಂಗ್ರೆಸ್ ಯೋಜನೆಗಳನ್ನು ಕಳಪೆಯಾಗಿ ಜಾರಿಗೆ ತಂದಿದೆ ಅದರಲ್ಲಿ ಪ್ರಮುಖವಾಗಿ ಆಧಾರ್ ಮತ್ತು  ಜಿಎಸ್ಟಿ ಎಂದರು. ಈವರೆಗೆ ಬಿಜೆಪಿ ಮಾಡಿರುವ ಸಾಧನೆಗಳಲ್ಲಿ ಬಿಜೆಪಿಯ ಪ್ರಮುಖ ಸಾಧನೆ ಎಂದರೆ ದ್ವೇಷದ ರಾಜಕಾರಣ ಎಂದು ಕಿಡಿಕಾರಿದರು.

Trending News