Putrada Ekadashi: ಇಂದು ಈ ಕೆಲಸ ಮಾಡುವುದರಿಂದ ಮಕ್ಕಳಿಗೆ ಸಂಬಂಧಿಸಿದ ನಿಮ್ಮ ಪ್ರತಿ ಆಸೆಯೂ ಈಡೇರುತ್ತೆ

Putrada Ekadashi: ಸಂಸ್ಕಾರವಂತ, ಯಶಸ್ವೀ ಮಗುವನ್ನು ಹೊಂದಬೇಕೆಂಬ ಆಸೆ ಪ್ರತಿಯೊಬ್ಬ ಪೋಷಕರ ಮನಸ್ಸಿನಲ್ಲಿದೆ, ಆದರೆ ಎಲ್ಲರ ಆಸೆ ಈಡೇರುವುದಿಲ್ಲ. ಈ ಬಯಕೆಯನ್ನು ಈಡೇರಿಸಲು ಪುತ್ರಾದ ಏಕಾದಶಿಯ ದಿನವು ಬಹಳ ವಿಶೇಷವಾಗಿದೆ. 

Written by - Yashaswini V | Last Updated : Jan 13, 2022, 08:41 AM IST
  • ಇಂದು ಪುತ್ರದಾ ಏಕಾದಶಿ ಉಪವಾಸ
  • ಮಕ್ಕಳನ್ನು ಪಡೆಯಲು ಮತ್ತು ಅವರ ಉತ್ತಮ ಭವಿಷ್ಯಕ್ಕಾಗಿ ಈ ದಿನ ತುಂಬಾ ಒಳ್ಳೆಯದು
  • ಇಂದು ಈ ರೀತಿ ಉಪವಾಸ ಮಾಡುವುದರಿಂದ ಮಕ್ಕಳಿಗೆ ಸಂಬಂಧಿಸಿದಂತೆ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂದು ಹೇಳಲಾಗುತ್ತದೆ
Putrada Ekadashi: ಇಂದು ಈ ಕೆಲಸ ಮಾಡುವುದರಿಂದ ಮಕ್ಕಳಿಗೆ ಸಂಬಂಧಿಸಿದ ನಿಮ್ಮ ಪ್ರತಿ ಆಸೆಯೂ ಈಡೇರುತ್ತೆ title=
Putrada Ekadashi 2022

Putrada Ekadashi: ಮಕ್ಕಳನ್ನು ಹೊಂದಬೇಕು ಮತ್ತು ನಮ್ಮ ಮಕ್ಕಳು ಸಂಸ್ಕಾರವಂತರಾಗಬೇಕು ಎಂಬುದು ಪ್ರತಿಯೊಬ್ಬ ಪೋಷಕರ ಆಸೆಯಾಗಿದೆ. ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಪೋಷಕರು ಹಲವು ಪ್ರಯತ್ನಗಳನ್ನು ಮಾಡುತ್ತಾರೆ. ಹಿಂದೂ ಧರ್ಮದಲ್ಲಿ, ಮಗುವಿನ ಸಂತೋಷವು ಕೆಲವು ದಿನಗಳೊಂದಿಗೆ ಸಂಬಂಧ ಹೊಂದಿದೆ. ಇದರಲ್ಲಿ ಪುತ್ರದಾ ಏಕಾದಶಿ (Putrada Ekadashi) ಬಹಳ ಮುಖ್ಯ. ಪ್ರತಿ ತಿಂಗಳಲ್ಲಿ ಎರಡು ಬಾರಿ ಏಕಾದಶಿ ಬರುತ್ತದೆಯಾದರೂ, ಪೌಷ ಮಾಸದ ಏಕಾದಶಿಯನ್ನು ಪುತ್ರದಾ ಏಕಾದಶಿ ಎಂದು ಕರೆಯಲಾಗುತ್ತದೆ. ಈ ವರ್ಷ ಇದನ್ನು ಇಂದು ಅಂದರೆ ಜನವರಿ 13 ರಂದು ಆಚರಿಸಲಾಗುತ್ತದೆ. 

ಸಂತಾನ ಸುಖಕ್ಕಾಗಿ ಈ ಉಪವಾಸ ವಿಶೇಷವಾಗಿದೆ:
ಸಂತಾನ ಸುಖ ಸಿಗದ ದಂಪತಿಗಳಿಗೆ ಪುತ್ರಾದ ಏಕಾದಶಿ (Putrada Ekadashi) ವ್ರತ ಅತ್ಯಂತ ವಿಶೇಷ. ಈ ವ್ರತವನ್ನು ಆಚರಿಸುವುದರಿಂದ ಸಂತಾನ ಪ್ರಾಪ್ತಿಯಾಗುವ ಬಯಕೆಯು ನೆರವೇರುತ್ತದೆ. ಮತ್ತೊಂದೆಡೆ, ಮಕ್ಕಳನ್ನು ಹೊಂದಿರುವವರು, ಅವರು ಈ ಉಪವಾಸವನ್ನು ಆಚರಿಸಿದರೆ, ಅವರ ಮಕ್ಕಳು ಸುಸಂಸ್ಕೃತರಾಗುತ್ತಾರೆ, ವಿಧೇಯರಾಗುತ್ತಾರೆ. ಜೊತೆಗೆ ಜೀವನದಲ್ಲಿ ಸಾಕಷ್ಟು ಯಶಸ್ಸು ಸಿಗುತ್ತದೆ ಎಂಬ ನಂಬಿಕೆ ಇದೆ. ಆದ್ದರಿಂದ, ತಾಯಂದಿರಿಗೆ ಈ ಉಪವಾಸವನ್ನು ಇಡುವುದು ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ನೀವು ಉಪವಾಸವನ್ನು ಆಚರಿಸಲು ಸಾಧ್ಯವಾಗದಿದ್ದರೂ ಸಹ, ಈ ದಿನದಂದು ಭಗವಾನ್ ವಿಷ್ಣು ಮತ್ತು ಲಕ್ಷ್ಮಿ ದೇವಿಯನ್ನು ನೇಮ ನಿಷ್ಠೆಯಿಂದ ಪೂಜಿಸಿ ಮತ್ತು ಮಕ್ಕಳಿಗೆ ಸಂಬಂಧಿಸಿದ ನಿಮ್ಮ ಆಸೆಯನ್ನು ಪೂರೈಸಲು ಪ್ರಾರ್ಥಿಸಿ. ಈ ರೀತಿ ಮಾಡುವುದರಿಂದ ದೇವರು ಪ್ರಸನ್ನನಾಗಿ ನಿಮ್ಮ ಇಷ್ಟಾರ್ಥಗಳನ್ನು ಪೂರೈಸುತ್ತಾನೆ.  

ಇದನ್ನೂ ಓದಿ- Ast Shani: 13 ದಿನಗಳ ನಂತರ ಈ ರಾಶಿಯವರ ಮೇಲೆ ಶನಿ ಕೃಪೆ, ಪ್ರಗತಿ ಪ್ರಾಪ್ತಿ

ಪುತ್ರದಾ ಏಕಾದಶಿ ಮುಹೂರ್ತ ಮತ್ತು ವಿಧಾನ :
ಪುತ್ರಾದ ಏಕಾದಶಿ (Ekadashi)  ತಿಥಿಯು ಜನವರಿ 12 ರಂದು (ಬುಧವಾರ) ಸಂಜೆ 04:49 ರಿಂದ ಪ್ರಾರಂಭವಾಗಿದೆ ಮತ್ತು ಇಂದು ಅಂದರೆ ಜನವರಿ 13 (ಗುರುವಾರ) ರಾತ್ರಿ 07:32 ರವರೆಗೆ ಇರುತ್ತದೆ. ಆದರೆ, ಈ ಉಪವಾಸ ನಾಳೆ ಅಂದರೆ ಜನವರಿ 14ರಂದು ಮುರಿಯಲಿದೆ. ಶುಕ್ರವಾರ ಬೆಳಿಗ್ಗೆ 07:05 ರಿಂದ 09:21 ರವರೆಗೆ ಪಾರಾಯಣ ಸಮಯವಿರುತ್ತದೆ. 

Vaikunta Ekadashi: ಪೂರ್ಣ ಲಸಿಕೆ ಪಡೆದಿದ್ದರೆ ಮಾತ್ರ ವೈಕುಂಠ ಏಕಾದಶಿ ಹಬ್ಬದಂದು ದೇವಸ್ಥಾನಕ್ಕೆ ಪ್ರವೇಶ

ಇದನ್ನೂ ಓದಿ- Romantic People: ತುಂಬಾ ರೋಮ್ಯಾಂಟಿಕ್ ಆಗಿರುತ್ತಾರೆ ಈ 5 ರಾಶಿಯ ಜನ

ಈ ವ್ರತವನ್ನು ಉಳಿಸಿಕೊಳ್ಳಲು ಬೆಳಗ್ಗೆ ಸ್ನಾನ ಮಾಡಿ ಮನೆಯ ದೇವಸ್ಥಾನದಲ್ಲಿ ದೀಪ ಹಚ್ಚಿ ಉಪವಾಸ ವ್ರತ ಕೈಗೊಳ್ಳಬೇಕು. ಇದರ ನಂತರ, ವಿಷ್ಣುವಿಗೆ ಗಂಗಾಜಲದಿಂದ ಅಭಿಷೇಕ ಮಾಡಿ. ಅವನಿಗೆ ಹೂವುಗಳು ಮತ್ತು ತುಳಸಿ ದಳವನ್ನು ಅರ್ಪಿಸಿ. ದೇವರಿಗೆ ಆರತಿ ಮಾಡಿ ಸಾತ್ವಿಕ ಆಹಾರವನ್ನು ಅರ್ಪಿಸಿ. ವಿಷ್ಣುವಿನ ಜೊತೆಗೆ ಲಕ್ಷ್ಮಿ ದೇವಿಯನ್ನು ಪೂಜಿಸಿ, ಸಂತೋಷ ಮತ್ತು ಸಮೃದ್ಧಿಗಾಗಿ ಅವಳನ್ನು ಪ್ರಾರ್ಥಿಸಿ. ಈ ರೀತಿಯಾಗಿ ಇಂದು ವಿಷ್ಣು ಮತ್ತು ಲಕ್ಷ್ಮೀದೇವಿಯನ್ನು ಆರಾಧಿಸುವುದರಿಂದ ನಿಮ್ಮ ಸಕಲ ಇಷ್ಟಾರ್ಥಗಳು ನೆರವೇರುತ್ತದೆ ಎಂದು ಹೇಳಲಾಗುತ್ತದೆ.

ಈ ಉಪವಾಸ ಆಚರಿಸುವುದರಿಂದ ಅನೇಕ ಪ್ರಯೋಜನಗಳಿವೆ: ಮೋಕ್ಷ ಪ್ರಾಪ್ತಿಗಾಗಿ ಪೂಜೆಯ ವಿಧಾನ ತಿಳಿಯಿರಿ
     
ಸೂಚನೆ:
ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News