ಮನೆ ಮುಂದೆ ನಿಲ್ಲಿಸಿದ್ದ ವಾಹನಗಳೇ ಇವರ ಟಾರ್ಗೆಟ್‌.. ಕೊನೆಗೂ ಸಿಕ್ಕಿಬಿದ್ದ ಕುಖ್ಯಾತ ಬೈಕ್ ಕಳ್ಳರು

ಮನೆ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನ ಕೆ.ಪಿ ಅಗ್ರಹಾರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಮುಸ್ತಾನ್ ಹಾಗೂ ಕಾನೂನು ಸಂಘರ್ಷಕ್ಕೆ ಒಳಪಟ್ಟ ಮತ್ತೊಬ್ಬ ಬಾಲಕ ಬಂಧಿತ ಆರೋಪಿಯಾಗಿದ್ದಾರೆ.

Written by - VISHWANATH HARIHARA | Edited by - Chetana Devarmani | Last Updated : Jun 11, 2022, 03:42 PM IST
  • ಮನೆ ಮುಂದೆ ನಿಲ್ಲಿಸಿದ್ದ ವಾಹನಗಳೇ ಇವರ ಟಾರ್ಗೆಟ್‌
  • ಕೊನೆಗೂ ಸಿಕ್ಕಿಬಿದ್ದ ಕುಖ್ಯಾತ ಬೈಕ್ ಕಳ್ಳರು
ಮನೆ ಮುಂದೆ ನಿಲ್ಲಿಸಿದ್ದ ವಾಹನಗಳೇ ಇವರ ಟಾರ್ಗೆಟ್‌.. ಕೊನೆಗೂ ಸಿಕ್ಕಿಬಿದ್ದ ಕುಖ್ಯಾತ ಬೈಕ್ ಕಳ್ಳರು title=
ಕುಖ್ಯಾತ ಬೈಕ್ ಕಳ್ಳರು

ಬೆಂಗಳೂರು : ಮನೆ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನ ಕೆ.ಪಿ ಅಗ್ರಹಾರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಮುಸ್ತಾನ್ ಹಾಗೂ ಕಾನೂನು ಸಂಘರ್ಷಕ್ಕೆ ಒಳಪಟ್ಟ ಮತ್ತೊಬ್ಬ ಬಾಲಕ ಬಂಧಿತ ಆರೋಪಿಯಾಗಿದ್ದಾರೆ.

ಇದನ್ನೂ ಓದಿ: ಇನ್ಮುಂದೆ ಅಮೆರಿಕಾ ಪ್ರಯಾಣ ಸುಲಭ: ಕೊರೊನಾ ಟೆಸ್ಟ್‌ ಅಗತ್ಯವಿಲ್ಲ ಎಂದ ಯುಎಸ್‌

ಜೆ.ಜೆ ನಗರ, ಕೆ.ಜಿ ಹಳ್ಳಿ, ವಿಜಯನಗರ, ರಾಮಮೂರ್ತಿನಗರ ಸೇರಿದಂತೆ ನಗರದ ಹಲವು ಠಾಣಾ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನಗಳನ್ನ ಕಳುವು ಮಾಡಿದ್ದರು. ಮೇ 25 ರಂದು ಕೆ.ಪಿ.ಅಗ್ರಹಾರ ಠಾಣಾ ವ್ಯಾಪ್ತಿಯ ಚೋಳೂರು ಪಾಳ್ಯದಲ್ಲಿ ಮಹಮ್ಮದ್ ಖುರ್ಷಿದ್ ಆಲಂ ಎಂಬುವವರ ದ್ವಿಚಕ್ರ ವಾಹನ ಕದ್ದಿದ್ದರು. ಈ ಸಂಬಂಧ ದೂರು‌ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು.

ಇದೀಗ ಕೆ.ಪಿ.ಅಗ್ರಹಾರ ಠಾಣಾ ಪೊಲೀಸರು ಆರೋಪಿಗಳನ್ನ ಬಂಧಿಸಿ 5 ಲಕ್ಷ ಬೆಲೆ ಬಾಳುವ 11 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: ಬಿಜೆಪಿ ಸೇರಲು ಸಿದ್ಧತೆ ನಡೆಸಿದ್ರಾ ಮಾಜಿ ಸಂಸದ ಶಿವರಾಮೇಗೌಡ!?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News