Vastu Tips: ಶ್ರೀಮಂತರಾಗಲು ಈ ವಸ್ತುಗಳನ್ನು ಇಂದೇ ನಿಮ್ಮ ಪರ್ಸ್‌ನಲ್ಲಿಡಿ

Vastu Tips: ಕೆಲವು ವಸ್ತುಗಳನ್ನು ಪರ್ಸ್‌ನಲ್ಲಿ ಇಡುವುದರಿಂದ ತಾಯಿ ಲಕ್ಷ್ಮಿ ದೇವಿಯ ಆಶೀರ್ವಾದ ಸಿಗುತ್ತದೆ. ಎಂದಿಗೂ ಹಣದ ಕೊರತೆ ಆಗುವುದಿಲ್ಲ ಎಂದು ಹೇಳಲಾಗುತ್ತದೆ. 

Written by - Yashaswini V | Last Updated : Aug 16, 2022, 11:02 AM IST
  • ಅರಳಿ ಎಲೆಯಲ್ಲಿ ಭಗವಾನ್ ವಿಷ್ಣು ನೆಲೆಸಿದ್ದಾನೆ ಎಂದು ನಂಬಲಾಗಿದೆ
  • ಭಗವಾನ್ ವಿಷ್ಣುವು ಪ್ರಸನ್ನನಾಗಿದ್ದರೆ, ತಾಯಿ ಲಕ್ಷ್ಮಿಯ ಆಶೀರ್ವಾದವೂ ಸಿಗುತ್ತದೆ
  • ವಾಸ್ತು ಸಲಹೆಗಳ ಪ್ರಕಾರ, ಪರ್ಸ್‌ನಲ್ಲಿ ಯಾವಾಗಲೂ ಅರಳಿ ಎಲೆಯನ್ನು ಇಡುವುದು ತುಂಬಾ ಶುಭ ಎಂದು ನಂಬಲಾಗಿದೆ.
Vastu Tips: ಶ್ರೀಮಂತರಾಗಲು ಈ ವಸ್ತುಗಳನ್ನು ಇಂದೇ ನಿಮ್ಮ  ಪರ್ಸ್‌ನಲ್ಲಿಡಿ title=
Vastu Tips for money

ಹಣಕ್ಕಾಗಿ ವಾಸ್ತು ಟಿಪ್ಸ್:  ಜೀವನದಲ್ಲಿ ಶ್ರೀಮಂತರಾಗಿರಬೇಕು, ಐಶಾರಾಮಿ ಜೀವನವನ್ನು ಆನಂದಿಸಬೇಕು ಎಂದು ಬಯಸದ ವ್ಯಕ್ತಿ ಯಾರೂ ಇರುವುದಿಲ್ಲ. ಕೆಲವು ವಾಸ್ತು ಸಲಹೆಗಳನ್ನು ಅಳವಡಿಸಿಕೊಂಡರೆ, ಆರ್ಥಿಕ ಮುಗ್ಗಟ್ಟಿನಿಂದ ಪಾರಾಗಬಹುದು ಎಂದು ಹೇಳಲಾಗುತ್ತದೆ.   ವಾಸ್ತು ಸಲಹೆಗಳ ಪ್ರಕಾರ, ನೀವು ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ತೊಡೆದುಹಾಕಲು ಬಯಸಿದರೆ, ಖಂಡಿತವಾಗಿಯೂ ನಿಮ್ಮ ಪರ್ಸ್‌ನಲ್ಲಿ ಕೆಲವು ವಸ್ತುಗಳನ್ನು ಇಟ್ಟುಕೊಳ್ಳಿ. ಇದರಿಂದ ಸದಾ ನಿಮ್ಮ ಪರ್ಸ್ ತುಂಬಿರುತ್ತದೆ ಮತ್ತು ಹಣಕಾಸಿನ ಸಮಸ್ಯೆ ಎಂದಿಗೂ ಇರುವುದಿಲ್ಲ ಎಂಬ ನಂಬಿಕೆ ಇದೆ. 

ಯಾವ ವಸ್ತುಗಳನ್ನು ಪರ್ಸ್‌ನಲ್ಲಿ ಇಡುವುದರಿಂದ ತಾಯಿ ಲಕ್ಷ್ಮಿಯ ಆಶೀರ್ವಾದ ಸಿಗಲಿದೆ ಎಂದು ತಿಳಿಯೋಣ.
ಅರಳಿ ಎಲೆ: 

ಅರಳಿ ಎಲೆಯಲ್ಲಿ ಭಗವಾನ್ ವಿಷ್ಣು ನೆಲೆಸಿದ್ದಾನೆ ಎಂದು ನಂಬಲಾಗಿದೆ ಮತ್ತು ಭಗವಾನ್ ವಿಷ್ಣುವು ಪ್ರಸನ್ನನಾಗಿದ್ದರೆ, ತಾಯಿ ಲಕ್ಷ್ಮಿಯ ಆಶೀರ್ವಾದವೂ ಸಿಗುತ್ತದೆ ಎಂದು ಹೇಳಲಾಗುತ್ತದೆ. ವಾಸ್ತು ಸಲಹೆಗಳ ಪ್ರಕಾರ, ಪರ್ಸ್‌ನಲ್ಲಿ ಯಾವಾಗಲೂ ಅರಳಿ ಎಲೆಯನ್ನು ಇಟ್ಟುಕೊಳ್ಳಬೇಕು. ಅರಳಿ ಎಲೆಯನ್ನು ಇಡುವ ಮೊದಲು, ಅದನ್ನು ಗಂಗಾಜಲದಿಂದ ತೊಳೆದು ನಂತರ ಅದರ ಮೇಲೆ ಶ್ರೀ ಎಂದು ಬರೆಯಿರಿ. ಆದರೆ, ನೆನಪಿಡಿ ಯಾರಿಗೂ ಕಾಣದ ರೀತಿಯಲ್ಲಿ ಈ ಅರಳಿ ಎಲೆಯನ್ನು ಪರ್ಸ್‌ನಲ್ಲಿ ಇಡಬೇಕು.
 
ಇದನ್ನೂ ಓದಿ- ಮನೆಯಲ್ಲಿ ಮನಿ ಪ್ಲಾಂಟ್ ನೆಡುವ ಮೊದಲು ಈ ವಾಸ್ತು ಸಲಹೆಗಳನ್ನು ತಿಳಿಯಿರಿ

ಶ್ರೀ ಯಂತ್ರ:
ವಾಸ್ತು ಸಲಹೆಗಳ ಪ್ರಕಾರ, ಶ್ರೀ ಯಂತ್ರವನ್ನು ಪರ್ಸ್‌ನಲ್ಲಿ ಇಟ್ಟುಕೊಳ್ಳುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ ಮತ್ತು ಅದನ್ನು ಪರ್ಸ್‌ನಲ್ಲಿ ಇಡುವುದರಿಂದ ವ್ಯಕ್ತಿಯು ಧನಾತ್ಮಕತೆಯನ್ನು ಅನುಭವಿಸುತ್ತಾನೆ.  ಅದು ಅವರ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ಹೇಳಲಾಗುತ್ತದೆ. 

ಇದನ್ನೂ ಓದಿ- ಮುಂದಿನ ನಾಲ್ಕು ತಿಂಗಳು ಈ ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನ

ಕಮಲದ ಬೀಜ:
ಕಮಲ ಲಕ್ಷ್ಮಿದೇವಿಗೆ ಪ್ರಿಯವಾದ ಪುಷ್ಪ. ಆದ್ದರಿಂದ ಅವಳನ್ನು ಪೂಜಿಸುವಾಗ ಕಮಲದ ಹೂವನ್ನು ತಪ್ಪದೇ ಬಳಸಲಾಗುತ್ತದೆ. ಅಷ್ಟೇ ಅಲ್ಲ,  ವಾಸ್ತು ಶಾಸ್ತ್ರದ ಪ್ರಕಾರ, ಕಮಲದ ಬೀಜವು ಆರ್ಥಿಕ ಬಿಕ್ಕಟ್ಟಿನಿಂದ ನಿಮ್ಮನ್ನು ಹೊರತರಲು ಸಹಾಯಕವಾಗಿದೆ ಎಂದು ಹೇಳಲಾಗುತ್ತದೆ. ಹಾಗಾಗಿ, ಪರ್ಸ್‌ನಲ್ಲಿ ಕಮಲದ ಬೀಜಗಳನ್ನು ಇಡುವುದರಿಂದ ಎಂದಿಗೂ ಸಹ ಹಣದ ಕೊರತೆ ಉಂಟಾಗುವುದಿಲ್ಲ ಎಂಬ ನಂಬಿಕೆ ಇದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News