Horoscope Today: ಈ ರಾಶಿಯವರಿಗೆ ಇಂದು ಉತ್ತಮ ದಿನ, ಅದೃಷ್ಟವು ಹೊಳೆಯಲಿದೆ

Horoscope Today(08-09-2022): ಮಿಥುನ ರಾಶಿಯವರು ಸಹೋದ್ಯೋಗಿಗಳೊಂದಿಗೆ ಸಾಮರಸ್ಯದಿಂದ ಕೆಲಸ ಮಾಡಬೇಕು. ಕನ್ಯಾ ರಾಶಿಯ ಜನರು ಕಚೇರಿಯಲ್ಲಿ ಹಿರಿಯ ಅಧಿಕಾರಿಗಳ ಬೆಂಬಲವನ್ನು ಪಡೆಯುತ್ತಾರೆ. ಗುರುವಾರದ ನಿಮ್ಮ ರಾಶಿಭವಿಷ್ಯ ಹೇಗಿದೆ ಎಂದು ತಿಳಿಯಿರಿ.

Written by - Zee Kannada News Desk | Last Updated : Sep 8, 2022, 07:08 AM IST
  • ಮೇಷ ರಾಶಿಯ ದೊಡ್ಡ ಉದ್ಯಮಿಗಳಿಗೆ ಭರ್ಜರಿ ಲಾಭವಾಗಲಿದೆ
  • ವೃಷಭ ರಾಶಿಯ ಮಹಿಳೆಯರು ಆರೋಗ್ಯದ ವಿಷಯದಲ್ಲಿ ಜಾಗರೂಕರಾಗಿರಬೇಕು
  • ವೃಶ್ಚಿಕ ರಾಶಿಯವರಿಗೆ ಪಾಲುದಾರಿಕೆಯ ವ್ಯವಹಾರದಲ್ಲಿ ಉತ್ತಮ ಲಾಭ ದೊರೆಯುತ್ತದೆ
Horoscope Today: ಈ ರಾಶಿಯವರಿಗೆ ಇಂದು ಉತ್ತಮ ದಿನ, ಅದೃಷ್ಟವು ಹೊಳೆಯಲಿದೆ title=
Horoscope Today (08-09-2022)

Horoscope Today (08-09-2022): ಕರ್ಕ ರಾಶಿಯ ಜನರಿಗೆ ಗುರುವಾರ ಉತ್ತಮ ದಿನವಾಗಿರುತ್ತದೆ. ಅದೇ ರೀತಿ ಮಕರ ರಾಶಿಯವರು ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಮಿಥುನ ರಾಶಿಯವರು ಸಹೋದ್ಯೋಗಿಗಳೊಂದಿಗೆ ಸಾಮರಸ್ಯದಿಂದ ಕೆಲಸ ಮಾಡಬೇಕು. ಗುರುವಾರದ ನಿಮ್ಮ ರಾಶಿಭವಿಷ್ಯ ಹೇಗಿದೆ ಎಂದು ತಿಳಿಯಿರಿ.

ಮೇಷ ರಾಶಿ: ಈ ರಾಶಿಯ ಜನರು ಕಚೇರಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ. ದೊಡ್ಡ ಉದ್ಯಮಿಗಳಿಗೆ ಭರ್ಜರಿ ಲಾಭವಾಗಲಿದೆ. ಹಳೆಯ ಯೋಜನೆಗಳು ಸಹ ಯಶಸ್ವಿಯಾಗಬಹುದು. ಇಂದು ನಿಮಗೆ ಉತ್ತಮ ದಿನವಾಗಿರುತ್ತದೆ. ಯುವಕರು ಕಠಿಣ ಪರಿಶ್ರಮದ ಫಲಿತಾಂಶ ಪಡೆಯಬಹುದು. ಪ್ರೀತಿಪಾತ್ರರ ಸಲಹೆಗೆ ನೀವು ಹೆಚ್ಚು ಗಮನ ಹರಿಸಬೇಕು. ಆರೋಗ್ಯದ ಕಡೆಗೆ ಉತ್ತಮ ಹೆಜ್ಜೆಗಳನ್ನು ಇಡುವುದು ಉತ್ತಮ. ಯೋಗ ಮತ್ತು ವ್ಯಾಯಾಮದಂತಹ ದೈಹಿಕ ಕಸರತ್ತುಗಳನ್ನು ಮಾಡಿ.

ವೃಷಭ ರಾಶಿ: ವೃಷಭ ರಾಶಿಯವರು ಮೇಲಧಿಕಾರಿಯನ್ನು ಮೆಚ್ಚಿಸಲು ಕಚೇರಿಯ ಎಲ್ಲಾ ನಿಯಮಗಳನ್ನು ಸರಿಯಾಗಿ ಪಾಲಿಸಬೇಕು. ವ್ಯಾಪಾರಸ್ಥರು ವ್ಯವಹಾರದಲ್ಲಿ ಸಾಕಷ್ಟು ಲಾಭ ಗಳಿಸುತ್ತಾರೆ. ಕುಟುಂಬದ ವಿಷಯಗಳನ್ನು ಬಹಿರಂಗಗೊಳಿಸದೆ, ರಹಸ್ಯ ಕಾಪಾಡಬೇಕು. ಮಹಿಳೆಯರು ಆರೋಗ್ಯದ ವಿಷಯದಲ್ಲಿ ಜಾಗರೂಕರಾಗಿರಬೇಕು. ಹೂಡಿಕೆಗೆ ಈ ಸಮಯ ಸೂಕ್ತವಾಗಿದೆ, ಆದರೆ ಹೂಡಿಕೆ ಮಾಡುವ ಮೊದಲು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು.

ಮಿಥುನ ರಾಶಿ: ಈ ರಾಶಿಯವರು ತಮ್ಮ ಸಹೋದ್ಯೋಗಿಗಳೊಂದಿಗೆ ಸಾಮರಸ್ಯದಿಂದ ಕೆಲಸ ಮಾಡಬೇಕು. ಯುವಕರು ಸಮಯಕ್ಕೆ ತಕ್ಕಂತೆ ತಮ್ಮಲ್ಲಿ ಬದಲಾವಣೆಗಳನ್ನು ತಂದುಕೊಳ್ಳಬೇಕು. ಮನೆಯ ಬಾಕಿ ಕೆಲಸಗಳನ್ನು ಮುಗಿಸಲು ಯೋಜನೆ ರೂಪಿಸಿ. ಶುಗರ್ ರೋಗಿಗಳು ನಿರ್ಲಕ್ಷ್ಯ ಮಾಡದೆ ವೈದ್ಯರಿಂದ ತಪಾಸಣೆ ಮಾಡಿಸಿಕೊಳ್ಳಬೇಕು. ಕಷ್ಟದಲ್ಲಿರುವವರ ಸೇವೆ ಮಾಡುವ ಅವಕಾಶ ಸಿಕ್ಕರೆ ನಿಮಗೆ ಪುಣ್ಯ, ಇಂತಹ ಸಂದರ್ಭದಲ್ಲಿ ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಸಹಕರಿಸಬೇಕು.

ಕರ್ಕ ರಾಶಿ: ಕರ್ಕಾಟಕ ರಾಶಿಯ ಜನರಿಗೆ ಇಂದು ಸೂಕ್ತ ದಿನವಾಗಿದೆ. ನಿಮ್ಮ ಕೆಲಸವನ್ನು ಪ್ರಶಂಸಿಸಲಾಗುತ್ತದೆ. ನಿಮ್ಮ ಪ್ರಭಾವ ಹೆಚ್ಚಾಗಲಿದ್ದು, ನೀವು ಉತ್ತಮ ಉದ್ಯಮಿಯಾಗಿ ಗುರುತಿಸಿಕೊಳ್ಳಬಹುದು. ಯುವಕರು ಅನಗತ್ಯವಾಗಿ ಆಳವಾದ ಚಿಂತನೆಯಲ್ಲಿ ಮುಳುಗಬಾರದು, ಜನರೊಂದಿಗೆ ಬೆರೆಯಬೇಕು. ಆರೋಗ್ಯದ ಬಗ್ಗೆ ನೀವು ಹೆಚ್ಚು ಗಮನಹರಿಸಬೇಕು. 

ಇದನ್ನೂ ಓದಿ: ಸೆಪ್ಟೆಂಬರ್ 17 ರಿಂದ ಈ ರಾಶಿಯವರಿಗೆ ಅದೃಷ್ಟ, ಕೈ ಹಾಕಿರುವ ಕೆಲಸದಲ್ಲಿ ಯಶಸ್ಸು ನೀಡಲಿದ್ದಾರೆ ಸೂರ್ಯ ಮತ್ತು ಬುಧ

ಸಿಂಹ ರಾಶಿ: ಈ ರಾಶಿಯವರಿಗೆ ಪರಿಸ್ಥಿತಿಗಳು ಸಹಜವಾಗಿರುತ್ತದೆ. ಕೆಲಸದಲ್ಲಿ ಎಂದಿಗೂ ಸೋಮಾರಿತನ ತೋರಬೇಡಿ. ಉದ್ಯಮಿಗಳ ಪ್ರಮುಖ ಕೆಲಸವನ್ನು ಪೂರ್ಣಗೊಳಿಸಿದರೆ ಉತ್ತಮ ಲಾಭ ದೊರೆಯುತ್ತದೆ. ಯಾವುದೇ ಹೆಜ್ಜೆ ಇಡುವ ಮುನ್ನ ಯುವಕರು ತಮ್ಮ ಹಿರಿಯರೊಂದಿಗೆ ಚರ್ಚಿಸಬೇಕು. ನಿಮ್ಮ ಸಂಗಾತಿಯೊಂದಿಗೆ ನೀವು ಉತ್ತಮ ಬಾಂಧವ್ಯ ಹೊಂದಲಿದ್ದೀರಿ. ನೀವೂ ಸಹ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು.

ಕನ್ಯಾ ರಾಶಿ: ಕನ್ಯಾ ರಾಶಿಯ ಜನರು ಕಚೇರಿಯಲ್ಲಿ ಹಿರಿಯ ಅಧಿಕಾರಿಗಳ ಬೆಂಬಲವನ್ನು ಪಡೆಯುತ್ತಾರೆ. ಇದರಿಂದಾಗಿ ಅವರು ತಮ್ಮ ಕೆಲಸವನ್ನು ಸುಲಭವಾಗಿ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಬಟ್ಟೆ ವ್ಯಾಪಾರದಲ್ಲಿ ಉತ್ತಮ ಲಾಭವಿರುತ್ತದೆ. ಯುವಕರು ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು. ನಿಮ್ಮ ಆರೋಗ್ಯವನ್ನು ನೋಡಿಕೊಳ್ಳಿ ಮತ್ತು ಯೋಗ, ಧ್ಯಾನ, ಪ್ರಾಣಾಯಾಮ ಮಾಡುವ ಮೂಲಕ ಫಿಟ್ ಆಗಿರಿ. ನೀವು ನೀಡಿರುವ ಸಾಲದ ಹಣ ವಾಪಸ್ ಬರಬಹುದು.

ತುಲಾ ರಾಶಿ: ಈ ರಾಶಿಯ ಜನರು ತಮ್ಮ ಹೊಸ ಯೋಜನೆಯ ಬಗ್ಗೆ ಯಾರೊಂದಿಗೂ ಹಂಚಿಕೊಳ್ಳಬೇಡಿ. ವ್ಯಾಪಾರ ವಿಷಯಗಳಲ್ಲಿ ನಿಮ್ಮ ನಡವಳಿಕೆಯೇ ನಿಮ್ಮ ಹೆಗ್ಗುರುತಾಗಿರುತ್ತದೆ, ಆದ್ದರಿಂದ ಅದನ್ನು ಕಾಪಾಡಿಕೊಳ್ಳಿ ಮತ್ತು ಯಾವಾಗಲೂ ನಡವಳಿಕೆಯನ್ನು ಸರಿಯಾಗಿ ಇರಿಸಿಕೊಳ್ಳಿ. ಯುವಕರು ಯಾವುದೇ ನಿರ್ಧಾರವನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕು. ಸಂಸಾರದ ಸುಖ-ದುಃಖಗಳಲ್ಲಿ ಭಾಗಿಯಾಗಬೇಕು, ಕುಟುಂಬಕ್ಕೆ ಸಮಯ ಮೀಸಲಿಡಬೇಕು.

ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೆ ಪಾಲುದಾರಿಕೆ ವ್ಯವಹಾರದಲ್ಲಿ ಲಾಭಗಳಿರಬಹುದು. ಯುವಕರು ತಮ್ಮ ಮಾತಿನ ಮೇಲೆ ಹಿಡಿತ ಸಾಧಿಸಬೇಕು. ಮಕ್ಕಳ ಮೇಲೆ ನಿಗಾ ಇಡಬೇಕು, ಅವರಿಗೆ ಉತ್ತಮ ನಡವಳಿಕೆ ಮತ್ತು ಸಂಸ್ಕಾರಗಳನ್ನು ಕಲಿಸಬೇಕು. ನಿಮ್ಮ ಗುರಿಗಳ ಬಗ್ಗೆ ಗಮನಹರಿಸಬೇಕು. ಮನಸ್ಸಿನ ಗೊಂದಲಗಳು ನಿಮ್ಮನ್ನು ಕಾಡಬಹುದು. ಹೀಗಾಗಿ ಯೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು.

ಇದನ್ನೂ ಓದಿ: Dream Predictions: ಈ ರೀತಿಯ ಕನಸು ಬಿದ್ದರೆ, ಪ್ರಮೋಶನ, ಘನತೆ-ಗೌರವ ವೃದ್ಧಿ ಗ್ಯಾರಂಟಿ!

ಧನು ರಾಶಿ: ಈ ರಾಶಿಯ ಜನರು ಆಧುನಿಕ ತಂತ್ರಜ್ಞಾನವನ್ನು ಸಂಪೂರ್ಣವಾಗಿ ಬಳಸಬೇಕು. ಚಿಲ್ಲರೆ ವ್ಯಾಪಾರಿಗಳು ತಮ್ಮ ವ್ಯವಹಾರದಲ್ಲಿ ಸ್ವಲ್ಪ ಬಂಡವಾಳ ಹೂಡಿಕೆ ಮಾಡಬೇಕಾಗುತ್ತದೆ. ನಿಮ್ಮ ಭವಿಷ್ಯದ ಯೋಜನೆಗಳು ಯಶಸ್ವಿಯಾಗುತ್ತವೆ. ಪೂರ್ವಜರ ಆಸ್ತಿಗೆ ಸಂಬಂಧಿಸಿದ ವಿವಾದಗಳಲ್ಲಿ ಪರಿಹಾ ಸಿಗುತ್ತದೆ. ಆರೋಗ್ಯದಲ್ಲಿ ಹಠಾತ್ ಹದಗೆಡುವ ಸಾಧ್ಯತೆಯಿದೆ, ಜಾಗರೂಕರಾಗಿರಿ. ಹಣ ನಷ್ಟವಾಗುವ ಸಂಭವವಿದ್ದು, ಎಚ್ಚರಿಕೆ ವಹಿಸಿ.  ಮಕರ ರಾಶಿ: ಮಕರ ರಾಶಿಯವರಿಗೆ ಬಡ್ತಿ ಸಿಗುವ ಸಾಧ್ಯತೆ ಇದೆ. ಚಿಲ್ಲರೆ ವ್ಯಾಪಾರಿಗಳಿಗೆ ಇಂದು ಭರ್ಜರಿ ಲಾಭವಾಗಲಿದೆ. ಯುವಕರು ಬುದ್ಧಿವಂತಿಕೆಯ ಲಾಭ ಪಡೆದುಕೊಳ್ಳಬೇಕು. ದೂರದ ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ತಾಯಿಯ ಆರೋಗ್ಯ ಹದಗೆಡುವ ಸಂಭವವಿದ್ದು, ವಿಶೇಷ ಕಾಳಜಿ ವಹಿಸಬೇಕು. ನೀವು ಹೃದ್ರೋಗದಿಂದ ಬಳಲುತ್ತಿದ್ದರೆ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು.

ಕುಂಭ ರಾಶಿ: ಈ ರಾಶಿಯ ಜನರು ಎಲ್ಲಾ ಕೆಲಸಗಳಲ್ಲಿ ತಾಳ್ಮೆಯಿಂದಿರಬೇಕು, ಇಲ್ಲದಿದ್ದರೆ ಕೆಲಸವು ಹಾಳಾಗಬಹುದು. ನೀವು ಹೊಸ ವ್ಯವಹಾರದಲ್ಲಿ ಪಾಲುದಾರರನ್ನು ಸೇರಿಸಬಯಸಿದರೆ, ಯೋಚಿಸಿ ನಿರ್ಧಾರ ಕೈಗೊಳ್ಳಬೇಕು. ಯುವಕರು ಆತ್ಮವಿಶ್ವಾಸ, ಉತ್ಸಾಹ ಹೆಚ್ಚಿಸಿಕೊಂಡು ಅಧ್ಯಯನ ನಡೆಸಬೇಕು. ನಿಮ್ಮ ಮೇಲೆ ಮನೆಯ ಜವಾಬ್ದಾರಿ ಹೆಚ್ಚುತ್ತದೆ, ಇಂತಹ ಪರಿಸ್ಥಿತಿಯಲ್ಲಿ ಎಲ್ಲರನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗುವುದರಿಂದ ಕೌಟುಂಬಿಕ ವಾತಾವರಣ ಸುಧಾರಿಸುತ್ತದೆ. ಮನಸ್ಸಿನ ಚಿಂತೆಯು ನಿದ್ರಾಹೀನತೆಯ ಸುಳಿಯಲ್ಲಿ ಸಿಲುಕಿ ಕೆಲಸವನ್ನು ಹಾಳುಮಾಡುತ್ತದೆ, ಆದ್ದರಿಂದ ಅನಗತ್ಯವಾಗಿ ಚಿಂತಿಸಬೇಡಿ.

ಮೀನ ರಾಶಿ: ಮೀನ ರಾಶಿಯವರು ಕೆಲಸದ ತಂತ್ರ ಬದಲಾಯಿಸುವ ಮೂಲಕ ಉತ್ತಮ ಯೋಜನೆಗಳನ್ನು ಮಾಡುವಲ್ಲಿ ಯಶಸ್ಸು ಪಡೆಯುತ್ತಾರೆ. ಇಂಜಿನಿಯರಿಂಗ್ ವೃತ್ತಿಗೆ ಸಂಬಂಧಿಸಿದ ಜನರು ಲಾಭವನ್ನು ಪಡೆಯುತ್ತಾರೆ. ಚಾರ್ಟರ್ಡ್ ಅಕೌಂಟೆಂಟ್‌ಗಳು ಮತ್ತು ವಕೀಲರು ಇಂದು ಉತ್ತಮ ಕಕ್ಷಿದಾರರನ್ನು ಪಡೆಯುತ್ತಾರೆ. ಕುಟುಂಬದಲ್ಲಿ ನಿಮ್ಮ ಸಲಹೆಗೆ ಪ್ರಾಮುಖ್ಯತೆ ನೀಡಲಾಗುವುದು. ಸಣ್ಣಪುಟ್ಟ ಖಾಯಿಲೆಗಳ ಬಗ್ಗೆ ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News