ಪವಿತ್ರಾ ಗೌಡ ಆಪ್ತಳನ್ನು ಭೇಟಿ ಮಾಡಿದ ನಟ ದರ್ಶನ್ ಆಪ್ತ ಸ್ನೇಹಿತನ ಭೇಟಿಗೆ ನಿರಾಕರಣೆ

ಕೊಲೆ ಆರೋಪದಲ್ಲಿ ಜೈಲು ಸೇರಿರುವ ನಟ ದರ್ಶನ್ ಸಮತಾ ಎಂಬ ಮಹಿಳೆ ಜೈಲಿನಲ್ಲಿ ಭೇಟಿ ಮಾಡಿ ಅಚ್ಚರಿ‌ ಮೂಡಿಸಿದ್ದಾರೆ. 

Written by - Zee Kannada News Desk | Last Updated : Jul 2, 2024, 06:13 PM IST
  • ಸ್ನೇಹಿತರ ಭೇಟಿಗೆ ದರ್ಶನ್ ನಕಾರ
  • ಪವಿತ್ರಾ ಗೌಡ ಆಪ್ತ ಸ್ನೇಹಿತೆಯನ್ನು ಭೇಟಿ ಮಾಡಿದ ನಟ
ಪವಿತ್ರಾ ಗೌಡ ಆಪ್ತಳನ್ನು ಭೇಟಿ ಮಾಡಿದ ನಟ ದರ್ಶನ್ ಆಪ್ತ ಸ್ನೇಹಿತನ ಭೇಟಿಗೆ ನಿರಾಕರಣೆ title=

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ ತನ್ನ ಆಪ್ತರನ್ನು ಕಡೆಗಣಿಸಿದ್ದಾರೆ ಎನ್ನಲಾಗಿದೆ.ನಟ ದರ್ಶನ್ ನೋಡಲು ಬಂದ ಬಾಲ್ಯದ ಸ್ನೇಹಿತ ನಿರ್ಮಾಪಕ ಶಿವಕುಮಾರ್ ಮತ್ತು ತನ್ನ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ನಟ ಧನ್ವಿರ್ ಭೇಟಿಗೆ ನಿರಾಕರಣೆ ಮಾಡಿದ್ದಾರೆ.ಆದರೆ ಪವಿತ್ರಾ ಗೌಡ ಆಪ್ತ ಸ್ನೇಹಿತೆಯನ್ನು ನಟ ದರ್ಶನ್ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಕೊಲೆ ಆರೋಪದಲ್ಲಿ ಜೈಲು ಸೇರಿರುವ ನಟ ದರ್ಶನ್ ಸಮತಾ ಎಂಬ ಮಹಿಳೆ ಜೈಲಿನಲ್ಲಿ ಭೇಟಿ ಮಾಡಿ ಅಚ್ಚರಿ‌ ಮೂಡಿಸಿದ್ದಾರೆ. ಅಂದಹಾಗೆ ಇಂದು ನಟ ದರ್ಶನ್ ಆಪ್ತ ನಟ ಧನ್ವಿರ್ ಜೈಲಿಗೆ ಭೇಟಿ ನೀಡಿ ನಟ ದರ್ಶನ್ ಗೆ ಸಾಂತ್ವನ ಹೇಳುತ್ತಾರೆ ಎನ್ನಲಾಗಿತ್ತು. ಆದರೆ ನಟ ದರ್ಶನ್ ಭೇಟಿಗೆ ಅವಕಾಶ ಸಿಗದೆ ಬೇಸರದಲ್ಲಿಯೇ ನಟ ಧನ್ವಿರ್ ತೆರಳಿದ್ದಾರೆ. ಆದರೆ ಜೈಲು ಬಳಿ ಮಾಧ್ಯಮದ ಬಳಿ ಧನ್ವಿರ್ ನಟ ದರ್ಶನ್ ಭೇಟಿಯಾಗಿದ್ದೆ, ಹೆಚ್ಚು ಹೊತ್ತು ಮಾತನಾಡಲಾಗಲಿಲ್ಲ ಹಾಗಾಗಿ ವಾಪಸ್ ಹೋಗುತ್ತಿದ್ದೆನೆ  ಎಂದು ಹೇಳಿದ್ದಾರೆ. ಆದರೆ ಧ್ವನೀರ್ ನನ್ನು ದರ್ಶನ್ ಭೇಟಿ ಮಾಡಲೇ ಇಲ್ಲ ಎನ್ನಲಾಗಿದೆ. 

ಇದನ್ನೂ ಓದಿ : ಯುವ ರಾಜ್‌ಕುಮಾರ್ ಆ ನಟಿಯ ಜೊತೆಗೆ ಸಿಕ್ಕಿಬಿದ್ದ ಸಾಕ್ಷಿ ಇದೆಯಾ!? ಶ್ರೀದೇವಿ ಪರ ವಕೀಲರು ಹೇಳಿದ್ದೇನು?

ಇನ್ನೂ ನಟ ಧನ್ವಿರ್ ಅಲ್ಲದೆ ನಟ ದರ್ಶನ್ ಬಾಲ್ಯದ ಆಪ್ತ ಸ್ನೇಹಿತ ಸದಾ ಕಾಲ ದರ್ಶನ್ ಜೊತೆ ಒಡನಾಟವಿದ್ದ ರಾಜ ಮಾರ್ತಾಂಡ ಸಿನಿಮಾದ ನಿರ್ಮಾಪಕ ಶಿವಕುಮಾರ್ ಸಹ ಇಂದು ಪರಪ್ಪನ ಅಗ್ರಹಾರ ಜೈಲಿನ ಬಳಿ ಆಗಮಿಸಿದ್ದರು. ನಟ ದರ್ಶನ್ ಭೇಟಿಗೆ ಯತ್ನ ನಡೆಸಿದ್ದರು.ಆದರೆ ನಟ ದರ್ಶನ್ ಬಾಲ್ಯದ ಸ್ನೇಹಿತನ ಭೇಟಿಗೆ ಗ್ರೀನ್ ಸಿಗ್ನಲ್ ನೀಡಿರಲಿಲ್ಲ. ಇದರಿಂದ ಬೇಸರಗೊಂಡ ಶಿವಕುಮಾರ್ ನಿರಾಸೆಯಿಂದ ವಾಪಸ್ ಆಗಿದ್ದರು. 

ಆದರೆ ರೇಣುಕಾಸ್ವಾಮಿ ಕೊಲೆ ಪ್ರಕರಣದ A1 ಆರೋಪಿ ಪವಿತ್ರಾ ಗೌಡ ಆಪ್ತ ಸ್ನೇಹಿತೆ ಸಮತಾಗೆ ಭೇಟಿಗೆ ನಟ ದರ್ಶನ್ ಅವಕಾಶ ನೀಡಿದ್ದಾರೆ.ಮಾತ್ರವಲ್ಲದೆ 15 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ.ಜೈಲಿನಲ್ಲಿ ಬಂಧಿಯಾಗಿ ಬೇರೆ ಬೇರೆಯಾಗಿರುವ ನಟ ದರ್ಶನ್ ಮತ್ತು ಪವಿತ್ರಾ ಗೌಡ ನಡುವೆ ಸೇತುವೆಯಾಗಿ ಸಮತಾ ಕೆಲಸ ಮಾಡುತ್ತಿದ್ದಾಳೆ ಎನ್ನಲಾಗಿದೆ.

ಇದನ್ನೂ ಓದಿ : ತುಂಡು ಬಟ್ಟೆ ಬಿಟ್ಟು ಸೀರೆಯಲ್ಲಿ ಮಿಂಚಿದ ದೀಪಿಕಾ! ಆಹಾ.. ಕನ್ನಡತಿ ಎಂದ ಫ್ಯಾನ್ಸ್

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News