ಇನ್ನು 13 ದಿನಗಳಲ್ಲಿ ಈ ರಾಶಿಯವರ ಜಾತಕದಲ್ಲಿ ರೂಪುಗೊಳ್ಳುವುದು ಕೋಟ್ಯಾಧಿಪತಿ ಯೋಗ!ಕಷ್ಟ ಕಳೆದು ಸುಖದ ಸುಪ್ಪತ್ತಿಗೆಯಲ್ಲಿ ಇರಿಸುವನು ಶನಿ ಮಹಾತ್ಮ !

ಇನ್ನು 13 ದಿನಗಳಲ್ಲಿ ಕೆಲವು ರಾಶಿಯವರ ಜಾತಕದಲ್ಲಿ ಕೋಟ್ಯಾಧಿಪತಿ ಯೋಗ ರೂಪುಗೊಳ್ಳಲಿದೆ. ಈ ಮೂಲಕ ಅವರ ಕಷ್ಟಗಳೆಲ್ಲಾ ಸರಿದು ನೆಮ್ಮದಿಯ ಬದುಕು ಕಾಣುವುದು ಸಾಧ್ಯವಾಗುವುದು.  

Written by - Ranjitha R K | Last Updated : Aug 6, 2024, 02:32 PM IST
  • ಶನಿಯು ಶುಭಸ್ಥಾನದಲ್ಲಿದ್ದರೆ, ಆ ರಾಶಿಯವರಿಗೆ ರಾಜಾಧಿಕಾರ
  • ಶನಿದೆಸೆಯ ಸಮಯದಲ್ಲಿ ವ್ಯಕ್ತಿಯ ಜೀವನದಲ್ಲಿ ಬಿರುಗಾಳಿ
  • ಶನಿಯು ತನ್ನ ನಕ್ಷತ್ರವನ್ನು ಬದಲಾಯಿಸಲಿದ್ದಾನೆ.
 ಇನ್ನು 13 ದಿನಗಳಲ್ಲಿ ಈ ರಾಶಿಯವರ ಜಾತಕದಲ್ಲಿ ರೂಪುಗೊಳ್ಳುವುದು  ಕೋಟ್ಯಾಧಿಪತಿ ಯೋಗ!ಕಷ್ಟ ಕಳೆದು ಸುಖದ ಸುಪ್ಪತ್ತಿಗೆಯಲ್ಲಿ ಇರಿಸುವನು  ಶನಿ ಮಹಾತ್ಮ !   title=

ಬೆಂಗಳೂರು : ಒಬ್ಬರ ರಾಶಿಯಲ್ಲಿ ಶನಿಯು ಶುಭಸ್ಥಾನದಲ್ಲಿದ್ದರೆ, ಆ ರಾಶಿಯವರಿಗೆ ರಾಜಾಧಿಕಾರ ದೊರೆಯುತ್ತದೆ ಎನ್ನುವುದು ಜ್ಯೋತಿಷ್ಯ ಶಾಸ್ತ್ರದ ನಂಬಿಕೆ.ಆದರೆ ಏಳೂವರೆ ಶನಿದೆಸೆಯ ಸಮಯದಲ್ಲಿ ವ್ಯಕ್ತಿಯ ಜೀವನದಲ್ಲಿ ಬಿರುಗಾಳಿ ಏಳುವುದನ್ನು ಕೂಡಾ ನಾವು ಗಮನಿಸಿರುತ್ತೇವೆ.ಶನಿ ಗ್ರಹವು ಅತ್ಯಂತ ನಿಧಾನವಾಗಿ ಚಲಿಸುವ ಗ್ರಹ. ಇದು ಒಂದು ರಾಶಿಯಿಂದ ಇನ್ನೊಂದು ರಾಶಿಯನ್ನು ಪ್ರವೇಶಿಸಲು ಎರಡೂವರೆ ವರ್ಷವನ್ನೇ ತೆಗೆದುಕೊಳ್ಳುತ್ತಾನೆ.  

ಈ ನಡುವೆ ಶನಿಯು ತನ್ನ ನಕ್ಷತ್ರವನ್ನು ಬದಲಾಯಿಸಲಿದ್ದಾನೆ.ಆಗಸ್ಟ್ 18,ಅಂದರೆ  ಇನ್ನು 13 ದಿನಗಳಲ್ಲಿ ಪೂರ್ವಪಾಲ್ಗುನಿ ನಕ್ಷತ್ರದ ಮೊದಲ ಪಾದವನ್ನು ಪ್ರವೇಶಿಸಲಿದ್ದಾನೆ.ಇದೀಗ ಗುರುವಿನ ನಕ್ಷತ್ರದಲ್ಲಿ ಶನಿಯ ಸಂಕ್ರಮಣವು ಕೆಲವು ರಾಶಿಯವರಿಗೆ ಕೋಟ್ಯಾಧಿಪತಿ ಯೋಗವನ್ನು ತಂದು ಕೊಡುತ್ತದೆ. 

ಇದನ್ನೂ ಓದಿ : ಶುಕ್ರದೆಸೆಯ ಜೊತೆಗೆ ಈ ರಾಶಿಯಲ್ಲಿ ಕುಬೇರ ರಾಜ ಯೋಗ !ಸರ್ವಸುಖವೂ ನಿಮ್ಮದಾಗುವ ಕಾಲ !ಉಕ್ಕಿ ಬರುವುದು ಸಿರಿ ಸಂಪತ್ತು

ಕನ್ಯಾ ರಾಶಿ : ಶನಿಯ ಸಂಚಾರವು ಕನ್ಯಾ ರಾಶಿಯವರಿಗೆ ಅನುಕೂಲಕರ ಫಲಿತಾಂಶಗಳನ್ನು ತರುತ್ತದೆ.ವ್ಯಾಪಾರದಲ್ಲಿ ಲಾಭವು ಹೆಚ್ಚಾಗುತ್ತದೆ.ನಿತ್ಯವೂ ಶುಭ ಸುದ್ದಿಗಳನ್ನೇ ಕೇಳುವಿರಿ.ಕೆಲಸದ ನಿಮಿತ್ತ ವಿದೇಶ ಪ್ರವಾಸ ಮಾಡಬೇಕಾಗಬಹುದು. ಹೊಸ ಕೆಲಸ ಆರಂಭಿಸಲು ಸರಿಯಾದ ಸಮಯ.  

ವೃಶ್ಚಿಕ ರಾಶಿ :ವೃಶ್ಚಿಕ ರಾಶಿಯವರಿಗೆ ಶನಿ ಸಂಕ್ರಮಣ ಲಾಭದಾಯಕ.ಹಲವು ವರ್ಷಗಳಿಂದ ಪೂರ್ಣಗೊಳ್ಳದೆ ಇದ್ದ ಕೆಲಸ ಕಾರ್ಯಗಳು ಶೀಘ್ರ ಪೂರ್ಣಗೊಳ್ಳಲಿವೆ. ಸಂಪತ್ತು,ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗಬಹುದು.ತಾಯಿಯ ಆರೋಗ್ಯ ಸುಧಾರಿಸಲಿದೆ.ಶನಿಯ ಈ ಸಂಕ್ರಮಣ ಅವಧಿಯು ವ್ಯಾಪಾರಿಗಳಿಗೆ ತುಂಬಾ ಅನುಕೂಲಕರವಾಗಿರುತ್ತದೆ.ಹೂಡಿಕೆಯಿಂದ ಲಾಭ ಗಳಿಸಬಹುದು. 

ಇದನ್ನೂ ಓದಿ : Surya Gochar 2024: ಸ್ವ ರಾಶಿಗೆ ಗ್ರಹಗಳ ರಾಜನ ಪ್ರವೇಶ, ಸೂರ್ಯನಂತೆಯೇ ಉಜ್ವಲಿಸಲಿದೆ ಈ ರಾಶಿಯವರ ಭವಿಷ್ಯ

ಕುಂಭ ರಾಶಿ : ಕುಂಭ ರಾಶಿಯವರಿಗೆ ಶನಿ ಸಂಚಾರವು ಅದೃಷ್ಟವನ್ನು ತರುತ್ತದೆ.   ಪೂರ್ವಜರ ಆಸ್ತಿಯಲ್ಲಿ ಪಾಲು ಸಿಗಬಹುದು.ಶನಿಯ ಕೃಪೆಯಿಂದ ಬಡ್ತಿ ಮತ್ತು ಖ್ಯಾತಿಯನ್ನು ಪಡೆಯುವಿರಿ.ವ್ಯಾಪಾರದ ಮೂಲಕ ಆರ್ಥಿಕ ಲಾಭವಾಗುವುದು.  ಹಣದ ಸಮಸ್ಯೆ ಬಗೆಹರಿಯಲಿದೆ. 

(ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News