“AB de Villiers ಶ್ರೇಷ್ಠ ಆಟಗಾರನಲ್ಲ, ಚಿನ್ನಸ್ವಾಮಿಯಲ್ಲಿ ಯಾರು ಬೇಕಾದ್ರೂ ರನ್ ಗಳಿಸಬಹುದು…!” ಗಂಭೀರ ಹೇಳಿಕೆ

Gautam Gambhir Statement About AB De Villiers: ಅವರ ಈ ಕಾಮೆಂಟ್ ಕ್ರಿಕೆಟ್ ವಲಯದಲ್ಲಿ ಸಂಚಲನ ಮೂಡಿಸಿದೆ. ಗಂಭೀರ್ ಎಂತಹದ್ದೇ ಅಭಿಪ್ರಾಯ ಹೊಂದಿರಲಿ. ಅದನ್ನು ಬಹಿರಂಗವಾಗಿ ವ್ಯಕ್ತಪಡಿಸುತ್ತಾರೆ. ಈ ಕಾರಣದಿಂದಾಗಿ, ಅವರು ಅನೇಕ ಬಾರಿ ವಿವಾದಗಳಲ್ಲಿ ಸಿಲುಕಿಕೊಂಡಿದ್ದಾರೆ ಎನ್ನಬಹುದು. ಇದೀಗ ಐಪಿಎಲ್ 2023 ಸರಣಿಯ ಮುಂಚೆಯೇ ನೆಟಿಜನ್‌ಗಳಿಂದ ಟೀಕೆಗೆ ಒಳಗಾಗಿದ್ದಾರೆ

Written by - Bhavishya Shetty | Last Updated : Mar 6, 2023, 04:06 PM IST
    • “ಐಪಿಎಲ್‌ನಲ್ಲಿ ಡಿವಿಲಿಯರ್ಸ್ ಶ್ರೇಷ್ಠ ಆಟಗಾರನಲ್ಲ”
    • “ಚಿನ್ನಸ್ವಾಮಿ ಕ್ರೀಡಾಂಗಣದಂತಹ ಚಿಕ್ಕ ಕ್ರೀಡಾಂಗಣಗಳಲ್ಲಿ ಮಾತ್ರ ಎಲ್ಲ ಕಡೆಗೂ ಸ್ವಿಂಗ್ ಮಾಡುತ್ತಾರೆ”
    • ಟಿವಿ ಸಂದರ್ಶನವೊಂದರಲ್ಲಿ ಮಾತನಾಡಿದ ಗೌತಮ್ ಗಂಭೀರ್
“AB de Villiers ಶ್ರೇಷ್ಠ ಆಟಗಾರನಲ್ಲ, ಚಿನ್ನಸ್ವಾಮಿಯಲ್ಲಿ ಯಾರು ಬೇಕಾದ್ರೂ ರನ್ ಗಳಿಸಬಹುದು…!” ಗಂಭೀರ ಹೇಳಿಕೆ  title=
Gautam Gambhir

Gautam Gambhir Statement About AB De Villiers: IPL 2023 ಮಾರ್ಚ್ 31 ರಂದು ಪ್ರಾರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗಲಿವೆ. ಈ ಪಂದ್ಯವನ್ನು ವೀಕ್ಷಿಸಲು ಅಭಿಮಾನಿಗಳು ಭಾರೀ ನಿರೀಕ್ಷೆಯೊಂದಿಗೆ ಕಾಯುತ್ತಿದ್ದು, ಈಗಾಗಲೇ ಐಪಿಎಲ್ ಸರಣಿಗಾಗಿ ಎಲ್ಲಾ ತಂಡಗಳು ಅಭ್ಯಾಸ ಆರಂಭಿಸಿವೆ. ಈ ವೇಳೆ ಗೌತಮ್ ಗಂಭೀರ್ ಟಿವಿ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಎಬಿ ಡಿವಿಲಿಯರ್ಸ್ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ಈ ಹೇಳಿಕ ಕ್ರಿಕೆಟ್ ವಲಯದಲ್ಲಿ ಸಂಚಲನ ಮೂಡಿಸಿದೆ.

ಇದನ್ನೂ ಓದಿ: ಅಭ್ಯಾಸದಲ್ಲೇ ಧೋನಿ ಅಬ್ಬರ: ಚೆನ್ನೈ ಮೈದಾನದಲ್ಲಿ ಸಿಕ್ಸರ್ ಸುರಿಮಳೆಯ ವಿಡಿಯೋ ನೋಡಿ

ಆ ಸಂದರ್ಶನದಲ್ಲಿ ಮಾತನಾಡಿದ ಗೌತಮ್ ಗಂಭೀರ್, “ಐಪಿಎಲ್‌ನಲ್ಲಿ ಡಿವಿಲಿಯರ್ಸ್ ಶ್ರೇಷ್ಠ ಆಟಗಾರನಲ್ಲ. ಚಿನ್ನಸ್ವಾಮಿ ಕ್ರೀಡಾಂಗಣದಂತಹ ಚಿಕ್ಕ ಕ್ರೀಡಾಂಗಣಗಳಲ್ಲಿ ಮಾತ್ರ ಎಲ್ಲ ಕಡೆಗೂ ಸ್ವಿಂಗ್ ಮಾಡುತ್ತಾರೆ. ಅಲ್ಲಿ ಅವರು ಉನ್ನತ ಮಟ್ಟದ ನಿಲುವನ್ನು ಸಹ ಹೊಂದಿರುತ್ತಾರೆ. ಆದರೆ ಸುರೇಶ್ ರೈನಾ 4 ಐಪಿಎಲ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಡಿವಿಲಿಯರ್ಸ್ ವೈಯಕ್ತಿಕ ದಾಖಲೆಗಳನ್ನು ಮಾತ್ರ ಹೊಂದಿದ್ದಾರೆ. ಶೀರ್ಷಿಕೆ ಮುಖ್ಯ. ವೈಯಕ್ತಿಕ ಆಟಗಾರರ ದಾಖಲೆಗಳು ನಿಷ್ಪ್ರಯೋಜಕವಾಗಿವೆ” ಎಂದು ಹೇಳಿದ್ದಾರೆ.

ಅವರ ಈ ಕಾಮೆಂಟ್ ಕ್ರಿಕೆಟ್ ವಲಯದಲ್ಲಿ ಸಂಚಲನ ಮೂಡಿಸಿದೆ. ಗಂಭೀರ್ ಎಂತಹದ್ದೇ ಅಭಿಪ್ರಾಯ ಹೊಂದಿರಲಿ. ಅದನ್ನು ಬಹಿರಂಗವಾಗಿ ವ್ಯಕ್ತಪಡಿಸುತ್ತಾರೆ. ಈ ಕಾರಣದಿಂದಾಗಿ, ಅವರು ಅನೇಕ ಬಾರಿ ವಿವಾದಗಳಲ್ಲಿ ಸಿಲುಕಿಕೊಂಡಿದ್ದಾರೆ ಎನ್ನಬಹುದು. ಇದೀಗ ಐಪಿಎಲ್ 2023 ಸರಣಿಯ ಮುಂಚೆಯೇ ನೆಟಿಜನ್‌ಗಳಿಂದ ಟೀಕೆಗೆ ಒಳಗಾಗಿದ್ದಾರೆ.

ಇದನ್ನೂ ಓದಿ: IND vs PAK: ಭಾರತಕ್ಕೆ ಮತ್ತೆ ಪಾಕಿಸ್ತಾನ ಎಂಟ್ರಿ! ಮಹಾ ಸುಳಿವು ನೀಡಿದ ಪಾಕ್ ನಾಯಕ ಬಾಬರ್ ಅಜಂ

ಗಂಭೀರ್ ಐಪಿಎಲ್ ಸರಣಿಯಲ್ಲಿ ಲಕ್ನೋ ಸೂಪರ್‌ಜೈಂಟ್ಸ್ ತಂಡದ ವ್ಯವಸ್ಥಾಪಕ ನಿರ್ದೇಶಕರಾಗಿದ್ದು, ಆ ತಂಡದ ನಾಯಕ ಕೆಎಲ್ ರಾಹುಲ್ ಆಗಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News