ಬಿಂದ್ರಾಗೆ ಬಾಕ್ಸಿಂಗ್‌ ಬಗ್ಗೆ ಏನೂ ಗೊತ್ತಿಲ್ಲ, ಆದ್ದರಿಂದ ಸುಮ್ಮನಿರುವುದು ಒಳ್ಳೆಯದು- ಮೇರಿ ಕೋಮ್

ಮುಂದಿನ ವರ್ಷದ ಟೋಕಿಯೊ ಅರ್ಹತಾ ಪಂದ್ಯಗಳಿಗಾಗಿ ಮೇರಿ ಕೋಮ್ ವಿರುದ್ಧದ ಟ್ರಯಲ್ ಪಂದ್ಯಕ್ಕಾಗಿ ನಿಖತ್ ಜರೀನ್ ಅವರನ್ನು ಬೆಂಬಲಿಸಿದ್ದಕಾಗಿ ಒಲಿಂಪಿಕ್ ಚಿನ್ನದ ಪದಕ ವಿಜೇತ ಅಭಿನವ್ ಬಿಂದ್ರಾ ವಿರುದ್ಧ ಮೇರಿ ಕೋಮ್ ವಾಗ್ದಾಳಿ ನಡೆಸಿದ್ದಾರೆ.

Last Updated : Oct 19, 2019, 06:11 PM IST
ಬಿಂದ್ರಾಗೆ ಬಾಕ್ಸಿಂಗ್‌ ಬಗ್ಗೆ ಏನೂ ಗೊತ್ತಿಲ್ಲ, ಆದ್ದರಿಂದ ಸುಮ್ಮನಿರುವುದು ಒಳ್ಳೆಯದು- ಮೇರಿ ಕೋಮ್  title=
file photo

ನವದೆಹಲಿ: ಮುಂದಿನ ವರ್ಷದ ಟೋಕಿಯೊ ಅರ್ಹತಾ ಪಂದ್ಯಗಳಿಗಾಗಿ ಮೇರಿ ಕೋಮ್ ವಿರುದ್ಧದ ಟ್ರಯಲ್ ಪಂದ್ಯಕ್ಕಾಗಿ ನಿಖತ್ ಜರೀನ್ ಅವರನ್ನು ಬೆಂಬಲಿಸಿದ್ದಕಾಗಿ ಒಲಿಂಪಿಕ್ ಚಿನ್ನದ ಪದಕ ವಿಜೇತ ಅಭಿನವ್ ಬಿಂದ್ರಾ ವಿರುದ್ಧ ಮೇರಿ ಕೋಮ್ ವಾಗ್ದಾಳಿ ನಡೆಸಿದ್ದಾರೆ.

ಮೇರಿ ಕೋಮ್ ಮಾತನಾಡಿ 'ಬಿಂದ್ರಾ ಒಲಿಂಪಿಕ್ ಚಿನ್ನದ ಪದಕ ವಿಜೇತ, ಆದರೆ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ನನಗೂ ಚಿನ್ನದ ಪದಕವಿದೆ. ಬಾಕ್ಸಿಂಗ್‌ನಲ್ಲಿ ತೊಡಗಿಸಿಕೊಳ್ಳುವುದು, ಹಸ್ತಕ್ಷೇಪ ಮಾಡುವುದು ಅವನ ಕೆಲಸವಲ್ಲ. ನಾನು ಶೂಟಿಂಗ್ ಬಗ್ಗೆ ಮಾತನಾಡುವುದಿಲ್ಲ, ಆದ್ದರಿಂದ ಅವರು ಬಾಕ್ಸಿಂಗ್‌ ಕುರಿತಾಗಿ ಮಾತನಾಡದೆ ಸುಮ್ಮನಿರುವುದು ಉತ್ತಮ, ಬಾಕ್ಸಿಂಗ್‌ನ ನಿಖರವಾದ ನಿಯಮಗಳು ಅವರಿಗೆ ತಿಳಿದಿಲ್ಲ ಎಂದರು. ಇನ್ನು ಮುಂದುವರೆದು 'ಪ್ರತಿ ಶೂಟಿಂಗ್ ಪಂದ್ಯಾವಳಿಯ ಮೊದಲು ಅಭಿನವ್ ಸಹ ಪ್ರಯೋಗಗಳಿಗೆ ಹೋಗುತ್ತಾನೆ ಎಂದು ನಾನು ಭಾವಿಸುವುದಿಲ್ಲ' ಎಂದು ಹೇಳಿ ಕಿಡಿ ಕಾರಿದರು.

ಮುಂದಿನ ವರ್ಷದ ಒಲಿಂಪಿಕ್ ಕ್ವಾಲಿಫೈಯರ್ಸ್‌ಗಾಗಿ ಭಾರತದ ತಂಡವನ್ನು ನಿರ್ಧರಿಸುವ ಮೊದಲು ಆರು ಬಾರಿ ವಿಶ್ವ ಚಾಂಪಿಯನ್ ವಿರುದ್ಧದ ಟ್ರಯಲ್ ಪಂದ್ಯದ ಜರೀನ್ ಅವರ ಬೇಡಿಕೆಯನ್ನು ಬಿಂದ್ರಾ ಬೆಂಬಲಿಸಿದರು. ಮುಂದಿನ ವರ್ಷದ ಫೆಬ್ರವರಿಯಲ್ಲಿ ನಡೆಯಲಿರುವ ಒಲಿಂಪಿಕ್ ಅರ್ಹತಾ ಪಂದ್ಯಗಳಿಗೆ ತಂಡದಲ್ಲಿ ಸ್ಥಾನ ಪಡೆಯಲು ನ್ಯಾಯಯುತ ಅವಕಾಶ ಕೋರಿ ಮಾಜಿ ಕಿರಿಯ ವಿಶ್ವ ಚಾಂಪಿಯನ್ ಬಾಕ್ಸರ್ ಕ್ರೀಡಾ ಸಚಿವ ಕಿರೆನ್ ರಿಜಿಜು ಅವರಿಗೆ ಪತ್ರ ಬರೆದ ನಂತರ ಈ ಬೆಳವಣಿಗೆ ಕಂಡುಬಂದಿದೆ.

ವರದಿಯ ಪ್ರಕಾರ ಚಿನ್ನ ಮತ್ತು ಬೆಳ್ಳಿ ವಿಜೇತರಿಗೆ ಮಾತ್ರ ನೇರ ಪ್ರವೇಶವನ್ನು ನೀಡುವ ಹಿಂದಿನ ನಿರ್ಧಾರದ ಬದಲಾಗಿ ಚೀನಾದಲ್ಲಿ ಒಲಿಂಪಿಕ್ ಅರ್ಹತಾ ಪಂದ್ಯಗಳಿಗೆ ಮೇರಿಯನ್ನು ಕಳುಹಿಸಲು ಬಿಎಫ್‌ಐ ನಿರ್ಧರಿಸಿದೆ ಎನ್ನಲಾಗಿದೆ. 

Trending News