Kantara 1 Updates: ಸಾಕಷ್ಟು ಪ್ರಸಿದ್ಧಿ ಪಡೆದು ವಿವಾದಗಳನ್ನೂ ಹೊತ್ತುಕೊಂಡಿದ್ದ ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾದ ಮುಂದಿನ ಅಧ್ಯಾಯದ ಚಿತ್ರೀಕರಣಕ್ಕೆ ಮತ್ತೊಂದು ಹೊಸ ಕಂಟಕ ಶುರುವಾಗಿದೆ..
Durga Mata in Kantara Theme: ಕಾಂತಾರ ಸಿನಿಮಾ ಪ್ರಭಾರ ಜೋರಾಗಿಯೇ ಆಗಿದೆ. ಕಾಂತಾರ ಚಿತ್ರ ಬಿಡುಗಡೆಯಾಗಿ ಒಂದು ವರ್ಷ ಕಳೆದರು, ಇನ್ನು ಆ ಸಿನಿಮಾ ಹವಾ ಕಡಿಮೆಯಾಗಿಲ್ಲ. ಕಾಂತಾರದ ಚಿತ್ರದ ಪಂಜುರ್ಲಿ ದೈವದ ಪ್ರೇರಣೆಯಿಂದ ದೇವರ ಪೂಜೆಯು ನಡೆಯುತ್ತಿದೆ. ಸದ್ಯ ಇದರ ಪ್ರೇರಣೆಯಿಂದ ದುರ್ಗಾ ಪೂಜೆಯು ನಡೆಯುತ್ತಿದೆ.
Low Budget Hit Movie Kantara : ಕಳೆದ ವರ್ಷ ಅಂದರೆ 2022 ರಲ್ಲಿ ಸೆಪ್ಟೆಂಬರ್ನಲ್ಲಿ ಬಿಡುಗಡೆಯಾದ 'ಕಾಂತಾರ' ಹಲವು ದಾಖಲೆಗಳನ್ನು ಬರೆಯಿತು. ಈ ಚಿತ್ರದ ಬಜೆಟ್ ತುಂಬಾ ಕಡಿಮೆಯಾಗಿತ್ತು ಮತ್ತು ಕಥೆಯು ತುಂಬಾ ವಿಶಿಷ್ಟವಾಗಿತ್ತು.
ಹೊಂಬಾಳೆ ಫಿಲಂಸ್ ನಿರ್ಮಾಣದ ಹಾಗೂ ರಿಷಭ್ ಶೆಟ್ಟಿ ನಟಿಸಿ, ನಿರ್ದಶಿಸಿರುವ ʼಕಾಂತಾರʼ ಚಿತ್ರ ಈಗಾಗಲೇ ವಿಶ್ವದಾದ್ಯಂತ ಜನಮನ್ನಣೆ ಪಡೆದಿದೆ. ಸ್ವಿಜರ್ಲ್ಯಾಂಡ್ನ ಜಿನಿವಾ ನಗರದಲ್ಲಿ ಕಳೆದ ಕೆಲವು ದಿನಗಳಿಂದ ವಿಶ್ವಸಂಸ್ಥೆಯ ವಾರ್ಷಿಕ ಸಭೆ ನಡೆಯುತ್ತಿದೆ. ಇದರಲ್ಲಿ ಪಾಲ್ಗೊಂಡಿರುವ ರಿಷಭ್ ಶೆಟ್ಟಿ ಅವರು ಈಗಾಗಲೇ ಕೆಲವು ಉಪಯುಕ್ತ ವಿಷಯಗಳ ಬಗ್ಗೆ ಅಲ್ಲಿ ಮಾತನಾಡಿದ್ದಾರೆ.
ದೇಶಾದ್ಯಂತ ಕಾಂತಾರ ಚಿತ್ರಮಂದಿರಗಳಲ್ಲಿ ಅಬ್ಬರಿಸಿ ಓಟಿಟಿಯಲ್ಲಿಯೂ ಸಹ ಉತ್ತಮ ವೀಕ್ಷಣೆ ಪಡೆದಿದೆ. ರಿಷಬ್ ಶೆಟ್ಟಿ ಸಿನಿಮಾಗೆ ಭಾರತೀಯ ಸಿನಿ ಪ್ರೇಕ್ಷಕ ಫಿದಾ ಆಗಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಅಲ್ಲದೆ, ಈ ಚಿತ್ರದಲ್ಲಿನ ಉತ್ತಮ ನಟನೆ ಮತ್ತು ನಿರ್ದೇಶನಕ್ಕಾಗಿ ರಿಷಬ್ ಶೆಟ್ಟಿಯವರಿಗೆ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಗೌರವ ಸಹ ಲಭಿಸಿದೆ. ಇದೀಗ ಕಾಂತಾರದ ಸಿನಿಮಾದ ದೃಶ್ಯ ಒಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.
ದೇಶಾದ್ಯಂತ ತುಳುನಾಡ ಸಂಸ್ಕೃತಿಯನ್ನು ಪಸರಿಸಿದ ಸಿನಿಮಾ ಕಾಂತಾರ. ಕಾಂತಾರ ಸಿನಿಮಾ ನೋಡಿ ಅನೇಕರು ಹಾಡಿ ಹೊಗಳಿದ್ದಾರೆ. ರಿಷಬ್ ಶೆಟ್ಟಿಯ ನಟನೆ ಮತ್ತು ನಿರ್ದೇಶನಕ್ಕೆ ಮಾರುಹೋಗಿದ್ದಾರೆ. ಇದೀಗ ಈ ಸಿನಿಮಾ ಬಗ್ಗೆ ಬಿಗ್ ಬಾಸ್ ಕನ್ನಡ ಓಟಿಟಿ ಸ್ಪರ್ಧಿ ಸೋನು ಶ್ರೀನಿವಾಸ ಗೌಡ ಮಾತನಾಡಿದ್ದಾರೆ.
Vinay Biddappa Life story : ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿದ ಕಾಂತಾರ ಸಿನಿಮಾ ಸದ್ಯ ಆಸ್ಕರ್ ಅಂಗಳದಲ್ಲಿದೆ. ಕಾಂತಾರ ಸಿನಿಮಾದಲ್ಲಿ ರಾಜನ ಪಾತ್ರ ಮಾಡಿದ ನಟ ವಿನಯ್ ಬಿದ್ದಪ್ಪ ಲೈಫ್ ಜರ್ನಿಯೇ ರೋಚಕವಾಗಿದೆ. ಕನ್ನಡದ ಪ್ರಮುಖ ಸೈಡ್ ಆ್ಯಕ್ಟರ್ಗಳಲ್ಲಿ ವಿನಯ್ ಬಿದ್ದಪ್ಪ ಸಹ ಒಬ್ಬರು.
ದಿ ಡಿವೈನ್ ಬ್ಲಾಕ್ಬಸ್ಟರ್ ಸಿನಿಮಾ ʼಕಾಂತಾರʼ ಇಂದಿಗೆ ಬರೋಬ್ಬರಿ 100 ದಿನಗಳನ್ನು ಪೂರೈಸಿದೆ. ಬಿಡುಗಡೆಯಾದ ಮೊದಲ ದಿನದಿಂದ ಅಬ್ಬರಿಸಲು ಪ್ರಾರಂಭಿಸಿದ ಕನ್ನಡಿಗನ ಸಿನಿಮಾ ದೇಶಾದ್ಯಂತ ಹಬ್ಬಿ ಚಿತ್ರಮಂದಿಗಳನ್ನು ದೇಗುಲವನ್ನಾಗಿಸಿತ್ತು. ಅಲ್ಲದೆ, ಗಡಿ ಮೀರಿ ಸಿನಿ ಪ್ರೇಮಿಗಳ ಮನಗೆದ್ದ ಚಿತ್ರಕ್ಕೆ ಭಾರತೀಯ ಸಿನಿರಂಗ ತಲೆಬಾಗಿತ್ತು. ಹಲವಾರು ದಾಖಲೆಗಳನ್ನು ಮೆಟ್ಟಿನಿಂತ ರಿಷಬ್ ಶೆಟ್ಟಿ ಸಿನಿಮಾ ಇಂದು ಶತದಿನವನ್ನು ಪೂರೈಸಿದೆ.
Similar Incident to Kantara Cinema: ಇದೀಗ ಕಾಂತಾರ ಸಿನಿಮಾದಲ್ಲಿ ಕಂಡುಬಂದ ದೃಶ್ಯವೊಂದು ನಿಜವಾಗಿದ್ದು, ಈ ಸುದ್ದಿ ಭಾರೀ ವೈರಲ್ ಆಗುತ್ತಿದೆ. ಕಾಂತಾರ ಸಿನಿಮಾದಲ್ಲಿ ಅನಾವರಣಗೊಂಡ ದೈವ ಮತ್ತು ಕೋರ್ಟ್ ನ ಸನ್ನಿವೇಶದ ಕಥೆ ಉಡುಪಿಯಲ್ಲಿ ನಡೆದಿದೆ. ದೈವದ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ವ್ಯಕ್ತಿ ಆಕಸ್ಮಿಕವಾಗಿ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ
ದಿ ಡಿವೈನ್ ಬ್ಲಾಕ್ಬಸ್ಟರ್ ಸಿನಿಮಾ ಕಾಂತಾರ ದೇಶಾದ್ಯಂತ ಸಿನಿ ರಸಿಕರಿಂದ ಅದ್ಬುತ ಪ್ರತಿಕ್ರಿಯೆ ಕನ್ನಡಿಗನ ಚಿತ್ರ. ಇತ್ತೀಚಿಗೆ ಕಾಂತಾರ ಸಿನಿಮಾದಲ್ಲಿ ತೋರಿಸಲಾದ ದೈವದ ಕುರಿತು ಅವಹೇಳನಕಾರಿ ರೀಲ್ಸ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡಲಾಗುತ್ತಿದೆ. ರಿಷಬ್ ಶೆಟ್ಟಿ ನಟನೆಯನ್ನು ಅನುಕರಣೆ ಮಾಡಿ ದೈವವನ್ನು ಅವಹೇಳನ ಮಾಡಲಾಗುತ್ತಿದೆ. ಇದೀಗ ಸಂತಾಕ್ಲಾಸ್ ವೇಷಧಾರಿ ಒಬ್ಬ ಕಾಂತಾರ ಸಿನಿಮಾದ ಕ್ಲೈಮ್ಯಾಕ್ಸ್ ಅನುಕರಣೆ ಮಾಡಿರುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಕಾಂತಾರ ಸಿನಿಮಾ ನೋಡಲು ಥಿಯೇಟರ್ಗೆ ಹೋಗಿದ್ದ ಮುಸ್ಲಿಂ ಸಮುದಾಯದ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯನ್ನು ಮುಸ್ಲಿಂ ಯುವಕರು ತರಾಟೆಗೆ ತೆಗೆದುಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ನಡೆದಿದೆ.
ಪ್ರಾದೇಶಿಕ ಕಥೆಗಳು ಹೆಚ್ಚು ಜನರಿಗೆ ತಲುಪುತ್ತವೆ ಎಂಬುದು ನನ್ನ ಅಭಿಪ್ರಾಯ. ಕಾಂತಾರ ಸಿನಿಮಾದ ಕಥೆ ಬರೆಯಲು ಆರಂಭಿಸಿದ್ದು ಕೋವಿಡ್ ಸಮಯದಲ್ಲಿ ಅಂತಾ ನಿರ್ದೇಶಕ ರಿಷಬ್ ಶೆಟ್ಟಿ ಹೇಳಿದ್ದಾರೆ.
ದೇಶಾದ್ಯಂತ ಅಬ್ಬರಿಸಿದ ಕನ್ನಡಿಗನ ದಿ ಡಿವೈನ್ ಬ್ಲಾಕ್ಬಸ್ಟರ್ ಸಿನಿಮಾ ʼಕಾಂತಾರʼ ಇದೀಗ ಓಟಿಟಿಯಲ್ಲಿ ದಾಖಲೆಗಳನ್ನು ಧೂಳಿಪಟ ಮಾಡಲು ಸಿದ್ದವಾಗಿದೆ. ನಾಳೆ ಅಂದ್ರೆ ನ.24 ರಂದು ಕಾಂತಾರ ಸಿನಿಮಾ ಅಮೆಜಾನ್ ಪ್ರೈಮ್ನಲ್ಲಿ ಬಿಡುಗಡೆಯಾಗಲಿದ್ದು, ಈ ಕುರಿತು ಸ್ವತಃ ಓಟಿಟಿ ಅಮೆಜಾನ್ ಪ್ರೈಮ್ ಇಂಡಿಯಾ ಅಧಿಕೃತವಾಗಿ ಮಾಹಿತಿ ನೀಡಿದೆ.
ಕಾಪಿರೈಟ್ ವಿವಾದ ಬೆನ್ನಲ್ಲೆ ಕಾಂತಾರ ಚಿತ್ರತಂಡ ನ್ಯಾಯಾಲಯದ ಆದೇಶದ ಮೇರೆಗೆ ಯೂಟ್ಯೂಬ್ ಮತ್ತು ಮ್ಯೂಸಿಕ್ ಆಪ್ಗಳಿಂದ ವರಾಹ ರೂಪಂ ಹಾಡನ್ನು ಡಿಲೀಟ್ ಮಾಡಿದೆ. ತೈಕ್ಕುಡಂ ಬ್ರಿಡ್ಜ್ ತಮ್ಮ ʼನವರಸಂʼ ಹಾಡಿನ ಟ್ಯೂನ್ನನ್ನು ಕಾಂತಾರ ಚಿತ್ರತಂಡ ʼವರಾಹ ರೂಪಂʼಗೆ ಬಳಕೆ ಮಾಡಿದೆ ಎಂದು ನ್ಯಾಯಾಲಯದ ಮೇಟ್ಟಿಲೇರಿದ್ದರು.
ಕಾಂತಾರ ಸಿನಿಮಾ ದೇಶಾದ್ಯಂತ ಸಂಚಲನ ಮೂಡಿಸಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಚಿತ್ರ ಇಂದಿಗೂ ಯಶಸ್ವಿಯಾಗಿ ಓಡುತ್ತಿದೆ. ಉತ್ತರ, ದಕ್ಷಿಣ ಎಂಬ ಭೇದವಿಲ್ಲದೆ ಎಲ್ಲ ಪ್ರೇಕ್ಷಕರು ಈ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಕೇವಲ ಹದಿನೈದು ಕೋಟಿಯಲ್ಲಿ ತಯಾರಾದ ಈ ಚಿತ್ರ ಈಗ ನಾನೂರು ಕೋಟಿ ಕ್ಲಬ್ ಸೇರಿದೆ. ಕಾಂತಾರ ಈ ಸಿನಿಮಾಗೆ ರೇಂಜ್ಗೆ ಯಶಸ್ವಿಯಾಗಲು ಕಾರಣ ರಿಷಬ್ ಶೆಟ್ಟಿ ಹಾಗೂ ಅವರ ನಟನೆ ಮತ್ತು ನಿರ್ದೇಶನ.
ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಕಾಂತಾರ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಅಬ್ಬರಿಸಿ ಬಾಕ್ಸಾಫೀಸ್ ಲೂಟಿ ಮಾಡುತ್ತಿದೆ. ಇನ್ನೊಂದು ಕಡೆ ಸಿನಿಮಂದಿ ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾ ಯಾವುದು ಅಂತ ಬಕ ಪಕ್ಷಿಗಳ ಹಾಗೆ ಎದುರು ನೋಡುತ್ತಿದ್ದಾರೆ. ಈ ನಡುವೆ ಯಶ್ ಕಾಂತಾರ ಸಿನಿಮಾ ತಮ್ಮದೇ ಎಂದು ಹೇಳಿಕೊಂಡಿದ್ದಾರೆ. ಆದ್ರೆ ರಾಕಿಭಾಯ್ ಈ ಮಾತು ಏಕೆ ಹೇಳಿದ್ರು ಅಂತ ನಿಮಗೆ ಗೊತ್ತಾದ್ರೆ ನೀವು ಖುಷಿಯಾಗೊಂದತೂ ಕಂಡಿತ.
Nirmala Sitharaman watched Kantara : ಸದ್ಯ ಎಲ್ಲೆಲ್ಲೂ ಕಾಂತಾರ ಸಿನಿಮಾ ಭಾರೀ ಸದ್ದು ಮಾಡುತ್ತಿದೆ. ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ಕಾಂತಾರ ಕ್ರೇಜ್ ಕ್ರಿಯೇಟ್ ಮಾಡಿದೆ.
ಬೆಣ್ಣೆನಗರಿ ದಾವಣಗೆರೆಯಲ್ಲೂ ಕಾಂತಾರ ಹವಾ ಜೋರಾಗಿದೆ. ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಹಾಗೂ ಎಸ್ ಪಿ ಸಿಬಿ ರಿಷ್ಯಂತ್ ಪೊಲೀಸ್ ಸಿಬ್ಬಂದಿ ಇಡೀ ಶೋ ಅನ್ನು ಬುಕ್ ಮಾಡಿಕೊಂಡು ಕುಟುಂಬ ಸಮೇತರಾಗಿ ಕಾಂತಾರ ಸಿನಿಮಾ ನೋಡಿ ಖುಷಿಪಟ್ಟಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.