ಲೈಟರ್ ವಿಚಾರಕ್ಕೆ ಲಾಂಗ್ ಬೀಸಿದ್ದವನಿಗ ಪೊಲೀಸರ ಅತಿಥಿ

ಲೈಟರ್ ವಾಪಸ್ ಕೊಡಲಿಲ್ಲ ಅಂದಿದ್ದಕ್ಕೆ ಲಾಂಗ್ ಬೀಸಿದ್ದ ಆರೋಪಿಯನ್ನ ಬಸವೇಶ್ವರ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಮಹಾದೇವ ಸ್ವಾಮಿ ಬಂಧಿತ ಆರೋಪಿ. 

Written by - VISHWANATH HARIHARA | Edited by - Zee Kannada News Desk | Last Updated : Jun 18, 2022, 04:15 PM IST
  • ಲೈಟರ್ ವಾಪಸ್ ಕೊಡಲಿಲ್ಲ ಅಂದಿದ್ದಕ್ಕೆ ಲಾಂಗ್ ಬೀಸಿದ್ದ ಆರೋಪಿ
  • ಪರಿಣಾಮ ಜನಾರ್ಧನ್ ತಲೆಗೆ ಗಾಯವಾಗಿತ್ತು
  • ಬಸವೇಶ್ವರ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ
ಲೈಟರ್ ವಿಚಾರಕ್ಕೆ ಲಾಂಗ್ ಬೀಸಿದ್ದವನಿಗ ಪೊಲೀಸರ ಅತಿಥಿ title=
ಲಾಂಗ್ ಬೀಸಿದ್ದ ಆರೋಪಿ

ಬೆಂಗಳೂರು: ಲೈಟರ್ ವಾಪಸ್ ಕೊಡಲಿಲ್ಲ ಅಂದಿದ್ದಕ್ಕೆ ಲಾಂಗ್ ಬೀಸಿದ್ದ ಆರೋಪಿಯನ್ನ ಬಸವೇಶ್ವರ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಮಹಾದೇವ ಸ್ವಾಮಿ ಬಂಧಿತ ಆರೋಪಿ. 

ಜೂನ್ 05 ರಂದು ರಾತ್ರಿ ಬಸವೇಶ್ವರ ನಗರದ ನವ್ಯಾ ಬಾರ್ ಆ್ಯಂಡ್ ರೆಸ್ಟೋರೆಂಟ್ ನಲ್ಲಿ ಕುಳಿತು ಕುಡಿಯುತ್ತಿದ್ದ ಆರೋಪಿಯಿಂದ ಜನಾರ್ದನ್ ಎಂಬಾತ ಸಿಗರೇಟ್ ಲೈಟರ್ ಪಡೆದಿದ್ದ‌. ಆದರೆ ಎಣ್ಣೆ ನಶೆಯಲ್ಲಿ‌ದ್ದ ಜನಾರ್ಧನ್ ಲೈಟರ್ ವಾಪಸ್ ಕೊಡಲ್ಲ ಎಂದಾಗ ಇಬ್ಬರ ನಡುವೆ ಬಾರ್ ನಲ್ಲಿ ವಾಗ್ವಾದವಾಗಿತ್ತು. 

ಇದನ್ನೂ ಓದಿ: ಸ್ಯಾಂಡಲ್‌ವುಡ್‌ ಯುವ ನಟನ ಬರ್ಬರ ಹತ್ಯೆ.. ಭಾಮೈದುನನಿಂದಲೇ ಕೊಲೆ ಶಂಕೆ!

ಗಲಾಟೆಯಾಗುತ್ತಿರುವುದನ್ನ ಗಮನಿಸಿದ ಅಕ್ಕಪಕ್ಕದ ಅಂಗಡಿಯವರು ಲೈಟರ್ ವಿಚಾರಕ್ಕೆ ಯಾಕೆ ಗಲಾಟೆ ಮಾಡಿಕೊಳ್ತಿದ್ದೀರಿ ಅಂತಾ ಬೈದು ಬುದ್ಧಿವಾದ ಹೇಳಿ ಕಳಿಸಿದ್ದರು. ಆದರೆ ಸ್ವಲ್ಪ ಸಮಯದಲ್ಲೇ ಮಾರಕಾಸ್ತ್ರದ ಸಮೇತ ವಾಪಸಾಗಿದ್ದ ಮಹಾದೇವ, ಬಾರ್ ಒಳಗೆ ನುಗ್ಗಿ‌ ಜನಾರ್ಧನ್ ಮೇಲೆ ಲಾಂಗ್ ಬೀಸಿದ್ದ. 

ಪರಿಣಾಮ ಜನಾರ್ಧನ್ ತಲೆಗೆ ಗಾಯವಾಗಿತ್ತು. ಜನಾರ್ಧನ್ ಜೊತೆಗಿದ್ದ ಸ್ನೇಹಿತ ನೀಡಿದ್ದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿದ್ದ ಬಸವೇಶ್ವರ ನಗರ ಠಾಣಾ ಪೊಲೀಸರು ಸದ್ಯ ಆರೋಪಿ ಮಹಾದೇವನನ್ನ ಬಂಧಿಸಿ‌ ಜೈಲಿಗಟ್ಟಿದ್ದಾರೆ.

ಇದನ್ನೂ ಓದಿ: Rajinikanth: ರಜನಿಕಾಂತ್‌ ನಟನೆಯ 169 ನೇ ಚಿತ್ರದ ಟೈಟಲ್ ರಿವೀಲ್, ಕುತೂಹಲ ಕೆರಳಿಸಿದ ಪೋಸ್ಟರ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News