ಹಣಕಾಸಿನ ಮುಗ್ಗಟ್ಟಿನಿಂದ ಪಾರಾಗಬೇಕೆ? ಈ ನಾಲ್ಕು ಸಂಗತಿಗಳಿಂದ ದೂರ ಉಳಿಯಿರಿ

ತಾಯಿ ಲಕುಮಿಯನ್ನು ಪ್ರಸನ್ನಗೊಳಿಸಲು ಎಲ್ಲರು ಪ್ರಯತ್ನಿಸುತ್ತಾರೆ. ಆದರೆ, ಕೆಲವು ಕಾರಣಗಳು ಮಾತೆ ಲಕ್ಷ್ಮಿಯ ಕೋಪಕ್ಕೆ ಕಾರಣವಾಗುತ್ತವೆ.

Last Updated : Jul 31, 2020, 07:45 PM IST
ಹಣಕಾಸಿನ ಮುಗ್ಗಟ್ಟಿನಿಂದ ಪಾರಾಗಬೇಕೆ? ಈ ನಾಲ್ಕು ಸಂಗತಿಗಳಿಂದ ದೂರ ಉಳಿಯಿರಿ title=

ನವದೆಹಲಿ: ತಾಯಿ ಲಕ್ಷ್ಮಿ ಯಾವುದೇ ಒಂದು ಸ್ಥಳ ಅಥವಾ ವ್ಯಕ್ತಿಯ ಬಳಿ ಎಂದಿಗೂ ಇರುವುದಿಲ್ಲ ಎಂಬ ಧಾರ್ಮಿಕ ನಂಬಿಕೆ ಇದೆ. ತಾಯಿ ಲಕ್ಷ್ಮಿಯ ಎಲ್ಲಿ ವಾಸಿಸುವುದಿಲ್ಲವೋ ಅಲ್ಲಿ ಬಡತನ ಇರುತ್ತದೆ ಎನ್ನಲಾಗುತ್ತದೆ. ಎಲ್ಲರೂ ತಾಯಿ ಲಕ್ಷ್ಮಿಯನ್ನು ಮೆಚ್ಚಿಸಲು ಪ್ರಯತ್ನಿಸುತ್ತಾರೆ, ಆದರೆ ತಾಯಿ ಲಕ್ಷ್ಮಿ ನಮ್ಮ ಮೇಲೆ ಕೋಪಗೊಳ್ಳಲು ಕೆಲವು ಕಾರಣಗಳಿವೆ. ಈ ಕಾರಣಗಳ ಬಗ್ಗೆ ಇಂದು ನಾವು ನಿಮಗೆ ಹೇಳುತ್ತಿದ್ದೇವೆ.

ಸ್ವಚ್ಚತೆ ಇರುವಲ್ಲಿ ತಾಯಿ ಲಕ್ಷ್ಮಿ ನೆಲೆಸಿರುತ್ತಾಳೆ. ತಾಯಿ ಲಕ್ಷ್ಮಿ ಸ್ವಚ್ಚವಲ್ಲದ ಮನೆಗಳಲ್ಲಿ ವಾಸಿಸುವುದಿಲ್ಲ. ನಾವು ನಮ್ಮ ಮನೆ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛವಾಗಿಡಬೇಕು. ಇದರೊಂದಿಗೆ ಮನಸ್ಸನ್ನು ಸಹ ಸ್ವಚ್ಛವಾಗಿಡಬೇಕು ಮತ್ತು ಕೆಟ್ಟ ಆಲೋಚನೆಗಳನ್ನು ಮನಸ್ಸಿನಿಂದ ದೂರವಿಡಬೇಕು. ಇತರರ ಪ್ರತಿ ವೈರತ್ವ ಭಾವನೆಯನ್ನು ಹೊಂದಬೇಡಿ.

ಮಹಿಳೆಯರನ್ನು ಗೌರವಿಸದಿದ್ದಲ್ಲಿ ಬಡತನವೂ ಉಳಿದಿದೆ. ಮಹಿಳೆಯರನ್ನು ಅನ್ನಪೂರ್ಣ ಮತ್ತು ತಾಯಿ ಲಕ್ಷ್ಮಿಯ ರೂಪವೆಂದು ಪರಿಗಣಿಸಲಾಗುತ್ತದೆ. ತಾಯಿ ಲಕ್ಷ್ಮಿ ತನ್ನ ಹೆತ್ತವರನ್ನು, ಹಿರಿಯರನ್ನು ಗೌರವಿಸದೆ ಇರುವವರ ಮೇಲೆ ಕೋಪಗೊಳ್ಳುತ್ತಾಳೆ. ಅಂತಹ ಜನರ ಮನೆಯಲ್ಲಿ ಯಾವಾಗಲೂ ಆರ್ಥಿಕ ಬಿಕ್ಕಟ್ಟು ನೆಲೆಸಿರುತ್ತದೆ.

ಪೂಜೆಯನ್ನು ಮಾಡುವಾಗ, ಯಾವುದೇ ಪೂಜಾ ವಸ್ತುಗಳನ್ನು ನೆಲದ ಮೇಲೆ ಇಡಬೇಡಿ. ಪೂಜಾ ಸಾಮಗ್ರಿಗಳನ್ನು ಯಾವಾಗಲೂ ಪೂಜಾ ತಟ್ಟೆಯಲ್ಲಿ ಇರಿಸಿ. ಪೂಜಾ ಸಾಮಗ್ರಿಗಳನ್ನು ಮೊದಲು ನೆಲದ ಮೇಲೆ ಇರಿಸಿ, ನಂತರ ಅದೇ ಸಾಮಗ್ರಿಗಳೊಂದಿಗೆ ಜನರು ಪೂಜಿಸಿ ತಪ್ಪನ್ನು ಎಸಗುತ್ತಾರೆ. ಈ ತಪ್ಪನ್ನು ಎಂದಿಗೂ ಮಾಡಬೇಡಿ.

Trending News