"ನನಗೆ ನನ್ನ ಮಗಳಷ್ಟೆ ಮುಖ್ಯ..." ಆರಾಧ್ಯ ಬಚ್ಚನ್‌ ಬಗ್ಗೆ ಮಾತನಾಡುತ್ತ ಭಾವುಕರಗಿದ್ದೇಕೆ ಐಶ್ವರ್ಯ?

Aishwarya rais statement: ಮಗಳು ಆರಾಧ್ಯ ಬಚ್ಚನ್ ಆರೈಕೆಯಲ್ಲಿ ಐಶ್ ಬ್ಯುಸಿಯಾಗಿದ್ದಾರೆ. ಅಭಿಷೇಕ್ ಮತ್ತು ಐಶ್ವರ್ಯಾ ಅವರ ದಾಂಪತ್ಯಕ್ಕೆ ಸಾಕ್ಷಿಯಾಗಿ ಆರಾಧ್ಯ 2011 ರಲ್ಲಿ ಜನಿಸಿದರು. ಪುಟ್ಟ ಬಾಲಕಿ ಇದ್ದಾಗಿನಿಂದಲೂ ಆರಾಧ್ಯ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಲ್ಲಿರುತ್ತಾರೆ.  ಐಶ್ವರ್ಯಾ ಎಲ್ಲಿ ಹೋದರೂ ತನ್ನ ಮಗಳನ್ನು ಜೊತೆಯಲ್ಲಿಯೇ ಕರೆದುಕೊಂಡು ಹೋಗುತ್ತಾರೆ. ಆರಾಧ್ಯ ಹುಟ್ಟಿದ ನಂತರ ಜೀವನ ಬದಲಾಯಿತು ಎಂದು ಐಶ್ವರ್ಯಾ ರೈ ಹಲವಾರು ಸಂದರ್ಭಗಳಲ್ಲಿ ಹೇಳಿದ್ದಾರೆ.

Written by - Zee Kannada News Desk | Last Updated : Sep 11, 2024, 01:06 PM IST
  • ಮಗಳು ಆರಾಧ್ಯ ಬಚ್ಚನ್ ಆರೈಕೆಯಲ್ಲಿ ಐಶ್ ಬ್ಯುಸಿಯಾಗಿದ್ದಾರೆ.
  • ಐಶ್ವರ್ಯಾ ರೈ ಬಚ್ಚನ್ ಈಗ ತಾಯಿಯಾಗಿ ತಮ್ಮ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ.
  • ಆರಾಧ್ಯ ಹುಟ್ಟಿದ ನಂತರ ಜೀವನ ಬದಲಾಯಿತು ಎಂದು ಐಶ್ವರ್ಯಾ ರೈ ಹಲವು ಬಾರಿ ಹೇಳಿಕೊಂಡಿದ್ದಾರೆ.
"ನನಗೆ ನನ್ನ ಮಗಳಷ್ಟೆ ಮುಖ್ಯ..." ಆರಾಧ್ಯ ಬಚ್ಚನ್‌ ಬಗ್ಗೆ ಮಾತನಾಡುತ್ತ ಭಾವುಕರಗಿದ್ದೇಕೆ ಐಶ್ವರ್ಯ?  title=

Aishwarya rais statement: ಮಗಳು ಆರಾಧ್ಯ ಬಚ್ಚನ್ ಆರೈಕೆಯಲ್ಲಿ ಐಶ್ ಬ್ಯುಸಿಯಾಗಿದ್ದಾರೆ. ಅಭಿಷೇಕ್ ಮತ್ತು ಐಶ್ವರ್ಯಾ ಅವರ ದಾಂಪತ್ಯಕ್ಕೆ ಸಾಕ್ಷಿಯಾಗಿ ಆರಾಧ್ಯ 2011 ರಲ್ಲಿ ಜನಿಸಿದರು. ಪುಟ್ಟ ಬಾಲಕಿ ಇದ್ದಾಗಿನಿಂದಲೂ ಆರಾಧ್ಯ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಲ್ಲಿರುತ್ತಾರೆ.  ಐಶ್ವರ್ಯಾ ಎಲ್ಲಿ ಹೋದರೂ ತನ್ನ ಮಗಳನ್ನು ಜೊತೆಯಲ್ಲಿಯೇ ಕರೆದುಕೊಂಡು ಹೋಗುತ್ತಾರೆ. ಆರಾಧ್ಯ ಹುಟ್ಟಿದ ನಂತರ ಜೀವನ ಬದಲಾಯಿತು ಎಂದು ಐಶ್ವರ್ಯಾ ರೈ ಹಲವಾರು ಸಂದರ್ಭಗಳಲ್ಲಿ ಹೇಳಿದ್ದಾರೆ.

ಐಶ್ವರ್ಯಾ ರೈ ಬಚ್ಚನ್ ಈಗ ತಾಯಿಯಾಗಿ ತಮ್ಮ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ. ಕೆಲ ದಿನಗಳಿಂದ ಸಿನಿಮಾದಿಂದ ದೂರ ಉಳಿದಿದ್ದ ಅವರು ತಮ್ಮ ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದಾರೆ. ಮಗಳು ಆರಾಧ್ಯ ಬಚ್ಚನ್ ಆರೈಕೆಯಲ್ಲಿ ಐಶ್ ಬ್ಯುಸಿಯಾಗಿದ್ದಾರೆ. ಅಭಿಷೇಕ್ ಮತ್ತು ಐಶ್ವರ್ಯಾ ಅವರ ದಾಂಪತ್ಯಕ್ಕೆ ಸಾಕ್ಷಿಯಾಗಿ ಆರಾಧ್ಯ 2011 ರಲ್ಲಿ ಜನಿಸಿದರು. ಐಶ್ವರ್ಯಾ ಎಲ್ಲಿ ಹೋದರೂ ಆರಾಧ್ಯಳನ್ನು ಕರೆದುಕೊಂಡು ಹೋಗುತ್ತಾಳೆ. ಆರಾಧ್ಯ ಹುಟ್ಟಿದ ನಂತರ ಜೀವನ ಬದಲಾಯಿತು ಎಂದು ಐಶ್ವರ್ಯಾ ರೈ ಹಲವು ಬಾರಿ ಹೇಳಿಕೊಂಡಿದ್ದಾರೆ. ಈ ನಡುವೆ ಐಶ್ವರ್ಯಾ ಮತ್ತು ಅಭಿಷೇಕ್ ವಿಚ್ಛೇದನದ ಸುದ್ದಿ ಚರ್ಚೆಗೆ ಗ್ರಾಸವಾಗಿದೆ. ಐಶ್ವರ್ಯಾ ರೈ ಹಾಗೂ  ಅಭಿಷೇಕ್ ಬಚ್ಚನ್‌ ದೂರವಾಗಲಿದ್ದಾರೆ ಎನ್ನುವ ಸುದ್ದಿ ಇತ್ತೀಚೆಗೆ ಭಾರಿ ಸದ್ದು ಮಾಡುತ್ತಿದೆ. ಈ ಬಗ್ಗೆ ಐಶ್ ಆಗಲಿ, ಅಭಿಷೇಕ್ ಆಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇದನ್ನೂ ಓದಿ: ದೀಪಿಕಾ-ರಣವೀರ್‌ ಮಗಳ ಫೋಟೋ ವೈರಲ್‌! ಅಬ್ಬಬ್ಬಾ...ಎಷ್ಟು ಕ್ಯೂಟ್‌ ಇದ್ದಾಳೆ ಗೊತ್ತಾ ಮಿನಿ ದಿಪ್ಪಿ?

ಈ ನಡುವೆ ಐಶ್ವರ್ಯಾ ಅವರ ಹಳೆಯ ಸಂದರ್ಶನ ಇದೀಗ ವೈರಲ್ ಆಗಿದೆ. 18 ನೇ ವಯಸ್ಸಿನಲ್ಲಿ, ನಾನು ಅನೇಕ ಜವಾಬ್ದಾರಿಗಳನ್ನು ತೆಗೆದುಕೊಂಡೆ. ನಾನು ಬೆಳಿಗ್ಗೆ 5:30 ಕ್ಕೆ ಎದ್ದೇಳುತ್ತಿದ್ದೆ. ಆ ದಿನಗಳು ನನಗೆ ಇನ್ನೂ ನೆನಪಿದೆ. ಆದರೆ, ಆರಾಧ್ಯ ಹುಟ್ಟಿದ ನಂತರ ನನ್ನ ಆದ್ಯತೆಗಳು ಸಂಪೂರ್ಣ ಬದಲಾದವು. ನನಗೆ ಅವಳೇ ಮುಖ್ಯ.. ಅವಳ ನಂತರ ಯಾರಾದ್ರು' ಎಂದು ಐಶ್‌ ಹೇಳಿದ್ದಾರೆ.

'ಆರಾಧ್ಯ ಯಾವಾಗಲೂ ಹಾಡುತ್ತಾ ಕುಣಿಯುತ್ತಿರುತ್ತಾಳೆ. ಕೆಲವೊಮ್ಮೆ ನನ್ನ ಸಿನಿಮಾ ಹಾಡು, ಕೆಲವೊಮ್ಮೆ ಅಪ್ಪನ ಹಾಡು, ಕೆಲವೊಮ್ಮೆ ಅಜ್ಜನ ಸಿನಿಮಾ ಹಾಡುಗಳನ್ನು ಹಾಡುತ್ತಾಳೆ. ಆರಾಧ್ಯ ಸಾಮಾನ್ಯ ಜೀವನ ನಡೆಸಲು ಆದ್ಯತೆ ನೀಡುತ್ತಾಳೆ' ಎಂದು ಐಶ್ವರ್ಯಾ ಹೇಳಿದ್ದಾರೆ. ಮೇಲಾಗಿ ತನ್ನ ಮಗಳಿಗಿಂತ ಯಾರೂ ಮುಖ್ಯರಲ್ಲ ಎನ್ನುತ್ತಾರೆ ಐಶ್.

ಇದನ್ನೂ ಓದಿ: Video: ಗಣಪತಿ ವಿಸರ್ಜನೆಯ ವೇಳೆ ಸಲ್ಮಾನ್‌ ಖಾನ್‌ ಮಾಡಿದ್ದೇನು ಗೊತ್ತಾ..? ವಿಡಿಯೋ ನೋಡಿ ಶಾಕ್‌ ಆಗ್ತೀರ!

ಆರಾಧ್ಯಗೆ ಏನು ಬೇಕು, ನಾನು ಅದನ್ನು ಮಾಡಬೇಕು ಎಂದು ನಾನು ಭಾವಿಸುತ್ತೇನೆ. ಆದರೆ, ಬಿಡುವಿಲ್ಲದ ವೇಳಾಪಟ್ಟಿಯಿಂದ ಸಾಧ್ಯವಾಗುತ್ತಿಲ್ಲ. ಆದರೆ ನನಗೆ ಬೆಂಬಲ ನೀಡುವ ಗಂಡನಿದ್ದಾನೆ. ಅದಕ್ಕಾಗಿ ನಾನು ತುಂಬಾ ಅದೃಷ್ಟಶಾಲಿ. ಆರಾಧ್ಯ ನನಗೆ ಮುಖ್ಯ, ಅವಳಿಗಿಂತ ಬೇರೆ ಯಾರೂ ಮುಖ್ಯರಲ್ಲ' ಎಂದು ಐಶ್ವರ್ಯಾ ಹೇಳಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News