'ಇಂತಹ ವಿಷಯಗಳು ರಾಷ್ಟ್ರೀಯ ಹಿತಾಸಕ್ತಿಗೆ ಧಕ್ಕೆ ತರುತ್ತವೆ': ರಾಹುಲ್ ಬಜಾಜ್‌ಗೆ ನಿರ್ಮಲಾ ಸೀತಾರಾಮನ್

ಇಂತಹ ವಿಷಯಗಳು ರಾಷ್ಟ್ರೀಯ ಹಿತಾಸಕ್ತಿಗೆ ಧಕ್ಕೆ ತರುತ್ತವೆ. ತನ್ನ ನಂಬಿಕೆಯನ್ನು ಹರಡುವ ಬದಲು ಉತ್ತರಗಳನ್ನು ಪಡೆಯುವ ಉತ್ತಮ ಮಾರ್ಗಗಳಿವೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. 

Last Updated : Dec 2, 2019, 09:42 AM IST
'ಇಂತಹ ವಿಷಯಗಳು ರಾಷ್ಟ್ರೀಯ ಹಿತಾಸಕ್ತಿಗೆ ಧಕ್ಕೆ ತರುತ್ತವೆ': ರಾಹುಲ್ ಬಜಾಜ್‌ಗೆ ನಿರ್ಮಲಾ ಸೀತಾರಾಮನ್ title=

ನವದೆಹಲಿ: ಕಾರ್ಯಕ್ರಮವೊಂದರಲ್ಲಿ ಕೈಗಾರಿಕೋದ್ಯಮಿ ರಾಹುಲ್ ಬಜಾಜ್ ನೀಡಿದ ಹೇಳಿಕೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(Nirmala Sitharaman) ಸೂಕ್ತ ಉತ್ತರ ನೀಡಿದ್ದಾರೆ. ಇಂತಹ ವಿಷಯಗಳು ದೇಶದ ಹಿತಾಸಕ್ತಿಗೆ ಧಕ್ಕೆ ತರುತ್ತವೆ ಎಂದು ತಿಳಿಸಿರುವ ವಿತ್ತ ಸಚಿವರು, ತಮ್ಮ ನಂಬಿಕೆಗಳನ್ನು ಹರಡುವ ಬದಲು, ಉತ್ತರಗಳನ್ನು ಪಡೆಯಲು ಇನ್ನೂ ಉತ್ತಮವಾದ ಮಾರ್ಗಗಳಿವೆ. ಆದರೆ ಅಂತಹ ಹೇಳಿಕೆಗಳು ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾಗಿವೆ ಎಂದು ಹೇಳಿದರು.

ವಾಸ್ತವವಾಗಿ, ಕೈಗಾರಿಕೋದ್ಯಮಿ ರಾಹುಲ್ ಬಜಾಜ್ ಅವರು ಶನಿವಾರ ಮುಂಬೈನಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ "ಭಯದ ವಾತಾವರಣ" ಇದೆ. ಜನರು ಸರ್ಕಾರವನ್ನು ಟೀಕಿಸಲು ಹೆದರುತ್ತಾರೆ. ತಮ್ಮ ಟೀಕೆಗಳನ್ನು ಸರ್ಕಾರದಲ್ಲಿ ಪ್ರಶಂಸಿಸುತ್ತಾರೆ ಎಂಬುದರ ಬಗ್ಗೆ ಯಾವುದೇ ಖಚಿಚತೆ ಇಲ್ಲ ಎಂದವರು ತಿಳಿಸಿದ್ದರು. ಈ ಸಂದರ್ಭದಲ್ಲಿ ಗೃಹ ಸಚಿವ ಅಮಿತ್ ಶಾ(Amit Shah) ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(Nirmala Sitharaman) ಮತ್ತು ಇತರರು ಉಪಸ್ಥಿತರಿದ್ದರು. ರಾಹುಲ್ ಬಜಾಜ್ ಅವರ ಹೇಳಿಕೆಯನ್ನು ಅಸ್ತ್ರವಾಗಿ ತೆಗೆದುಕೊಂಡ ಪ್ರತಿಪಕ್ಷಗಳು ಸರ್ಕಾರವನ್ನು ಗುರಿಯಾಗಿಸಿಕೊಂಡು "ರಾಹುಲ್ ಬಜಾಜ್ ಹೇಳಿಕೆ ದೇಶದಾದ್ಯಂತದ ಪ್ರತಿಯೊಂದು ಪ್ರದೇಶದ ಸಾಮಾನ್ಯರ ಭಾವನೆ" ಎಂದು ಪ್ರತಿಪಾದಿಸಿದೆ.

ರಾಹುಲ್ ಬಜಾಜ್ ಎತ್ತಿದ ವಿಷಯಗಳಿಗೆ ಗೃಹ ಸಚಿವ ಅಮಿತ್ ಶಾ ಪ್ರತಿಕ್ರಿಯಿಸಿದ್ದಾರೆ ಎಂದು ಸೋಮವಾರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಟ್ವೀಟ್ ಮಾಡಿದ್ದಾರೆ. ಪ್ರಶ್ನೆಗಳು, ಟೀಕೆಗಳು ಕೇಳಿಬರುತ್ತವೆ, ಅವುಗಳಿಗೆ ಉತ್ತರಿಸಲಾಗುತ್ತದೆ, ಅವುಗಳನ್ನು ಅಂಡರ್ಲೈನ್ ​​ಮಾಡಲಾಗಿದೆ. ಇಂತಹ ವಿಷಯಗಳು ರಾಷ್ಟ್ರೀಯ ಹಿತಾಸಕ್ತಿಗೆ ಧಕ್ಕೆ ತರುತ್ತವೆ. ತಮ್ಮ ಗ್ರಹಿಕೆ ಹರಡುವ ಬದಲು ಉತ್ತರಗಳನ್ನು ಪಡೆಯುವ ಉತ್ತಮ ಮಾರ್ಗಗಳಿವೆ ಎಂದು ಹಣಕಾಸು ಸಚಿವರು ತಿಳಿಸಿದ್ದಾರೆ. 

ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕೈಗಾರಿಕೋದ್ಯಮಿ ರಾಹುಲ್ ಬಜಾಜ್ ಅವರು ಗೃಹ ಸಚಿವ ಅಮಿತ್ ಷಾಗೆ ಜನರಲ್ಲಿ ಭಯದ ವಾತಾವರಣವಿದೆ ಎಂದು ಹೇಳಿದ್ದರು. ಅವರು ಸರ್ಕಾರವನ್ನು ಟೀಕಿಸುವುದರಿಂದ ದೂರ ಸರಿಯುತ್ತಾರೆ, ಏಕೆಂದರೆ ಅವರ ಟೀಕೆಗಳನ್ನು ಸರ್ಕಾರದಲ್ಲಿ ತೆಗೆದುಕೊಳ್ಳಲಾಗುವುದು ಎಂಬುದರಲ್ಲಿ ಜನರಿಗೆ ವಿಶ್ವಾಸವಿಲ್ಲ ಎಂದು ಹೇಳಿದ್ದರು. ರಾಹುಲ್ ಅವರ ಈ ಸಂಪೂರ್ಣ ಹೇಳಿಕೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದನ್ನು ಸಾಕಷ್ಟು ಹಂಚಿಕೊಳ್ಳಲಾಗುತ್ತಿದೆ.

ಸರ್ಕಾರವನ್ನು ಟೀಕಿಸಿದ್ದಕ್ಕಾಗಿ ಕೈಗಾರಿಕೋದ್ಯಮಿಗಳ ಮೇಲಿನ ವಿಶ್ವಾಸದ ಕೊರತೆ, ಸಂಸದ ಪ್ರಜ್ಞಾ ಠಾಕೂರ್ ಅವರು ನಾಥುರಾಮ್ ಗೋಡ್ಸೆ ಮತ್ತು ಜನಸಮೂಹ ಹತ್ಯೆ ಬಗ್ಗೆ ಹೇಳಿಕೆ ನೀಡಿ ಸೂಕ್ತ ಕ್ರಮ ಕೈಗೊಳ್ಳದಿರುವ ಬಗ್ಗೆ ರಾಹುಲ್ ಬಜಾಜ್ ಕಳವಳ ವ್ಯಕ್ತಪಡಿಸಿದ್ದರು.

Trending News