ಲವ್ವರ್ ನೋಡಲು ಬಂದ ಗಗನಸಖಿ ಸುಸೈಡ್: ಇದು ಆತ್ಮಹತ್ಯೆಯೋ...? ಕೊಲೆಯೋ…?

air hostess Archana Dhiman Death: ಅರ್ಚನಾ ಧೀಮಾನ್ ಮೂಲತಃ ಹಿಮಾಚಲ ಪ್ರದೇಶದವಳಾಗಿದ್ದು, ಕೇರಳ ಮೂಲದ ಆದೇಶ್ ಎಂಬ ಟೆಕ್ಕಿಯನ್ನ ಪ್ರೀತಿಸುತ್ತಿದ್ದಳು. ಆದೇಶ್ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಟೆಕ್ಕಿಯಾಗಿ ಕೆಲಸ ಮಾಡಿಕೊಂಡಿದ್ದ. ಡೇಟಿಂಗ್ ಆ್ಯಪ್ ಮೂಲಕ ಗಗನಸಖಿ ಅರ್ಚನಾ ಹಾಗೂ ಆದೇಶ್ ಪರಿಚಯವಾಗಿ ಇಬ್ಬರಿಗೂ ಲವ್ ಆಗಿದೆ. ಪ್ರಿಯಕರ ಆದೇಶ್  ನೋಡಲು ಅರ್ಚನಾ ಬೆಂಗಳೂರಿನ ಕೋರಮಂಗಲಕ್ಕೆ ಬಂದಿದ್ದಳು‌.

Written by - VISHWANATH HARIHARA | Edited by - Bhavishya Shetty | Last Updated : Mar 12, 2023, 02:00 PM IST
    • ಅಂತರಾಷ್ಟ್ರೀಯ ಏರ್ ಲೈನ್’ನಲ್ಲಿ ಗಗನಸಖಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಯುವತಿ ಆತ್ಮಹತ್ಯೆ
    • ಬಹು ಮಹಡಿ ಕಟ್ಟಡದಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಅರ್ಚನಾ ಧೀಮಾನ್
    • ಅರ್ಚನಾ ಮೂಲತಃ ಹಿಮಾಚಲ ಪ್ರದೇಶದವಳಾಗಿದ್ದು, ಕೇರಳ ಮೂಲದ ಆದೇಶ್ ಎಂಬ ಟೆಕ್ಕಿಯನ್ನ ಪ್ರೀತಿಸುತ್ತಿದ್ದಳು.
ಲವ್ವರ್ ನೋಡಲು ಬಂದ ಗಗನಸಖಿ ಸುಸೈಡ್: ಇದು ಆತ್ಮಹತ್ಯೆಯೋ...? ಕೊಲೆಯೋ…? title=
air hostess Suicide

air hostess Archana Dhiman Death: ಬೆಂಗಳೂರು: ದೂರದ ದುಬೈನಿಂದ ಬೆಂಗಳೂರಿಗೆ ಬಂದಿದ್ದ ಅಂತರಾಷ್ಟ್ರೀಯ ಏರ್ ಲೈನ್’ನಲ್ಲಿ ಗಗನಸಖಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಯುವತಿ ಬಹು ಮಹಡಿ ಕಟ್ಟಡದಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅರ್ಚನಾ ಧೀಮಾನ್ ಮೃತ ದುರ್ದೈವಿ.

ಇದನ್ನೂ ಓದಿ: Shubh Rajyog 2023 : 700 ವರ್ಷಗಳ ನಂತರ 5 ರಾಜಯೋಗಗಳು, ಈ ನಾಲ್ಕು ರಾಶಿಯವರಿಗೆ ಭಾರಿ ಆರ್ಥಿಕ ಲಾಭ!

ಪ್ರಿಯಕರ ಆದೇಶ್ ವಾಸವಿದ್ದ ಕೋರಮಂಗಲದ ಎಂಟನೇ ಬ್ಲಾಕ್ ನಲ್ಲಿದ್ದ ರೇಣುಕಾ ರೆಸಿಡೆನ್ಸಿ ಅಪಾರ್ಟ್ಮೆಂಟ್ ನಾಲ್ಕನೇ ಮಹಡಿಯಿಂದ ಬಿದ್ದು ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಅರ್ಚನಾ ಧೀಮಾನ್ ಮೂಲತಃ ಹಿಮಾಚಲ ಪ್ರದೇಶದವಳಾಗಿದ್ದು, ಕೇರಳ ಮೂಲದ ಆದೇಶ್ ಎಂಬ ಟೆಕ್ಕಿಯನ್ನ ಪ್ರೀತಿಸುತ್ತಿದ್ದಳು. ಆದೇಶ್ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಟೆಕ್ಕಿಯಾಗಿ ಕೆಲಸ ಮಾಡಿಕೊಂಡಿದ್ದ. ಡೇಟಿಂಗ್ ಆ್ಯಪ್ ಮೂಲಕ ಗಗನಸಖಿ ಅರ್ಚನಾ ಹಾಗೂ ಆದೇಶ್ ಪರಿಚಯವಾಗಿ ಇಬ್ಬರಿಗೂ ಲವ್ ಆಗಿದೆ. ಪ್ರಿಯಕರ ಆದೇಶ್  ನೋಡಲು ಅರ್ಚನಾ ಬೆಂಗಳೂರಿನ ಕೋರಮಂಗಲಕ್ಕೆ ಬಂದಿದ್ದಳು‌. ನಿನ್ನೆ ರಾತ್ರಿ ಇಬ್ಬರು ಪೋರಂ ಮಾಲ್’ಗೆ ಹೋಗಿ ಸಿನಿಮಾ ನೋಡಿಕೊಂಡು ಬಂದಿದ್ದಾರೆ. ತಡರಾತ್ರಿಯವರೆಗೂ ಇಬ್ಬರು ಪಾರ್ಟಿ ಮಾಡಿದ್ದಾರೆ. ಪಾರ್ಟಿ ಬಳಿಕ  ಇಬ್ಬರ ನಡುವೆ ಲವ್ ವಿಚಾರವಾಗಿ ಗಲಾಟೆಯಾಗಿ ಅರ್ಚನಾ, ಆದೇಶ್ ಪರಸ್ಪರ ಕಿತ್ತಾಡಿಕೊಂಡಿದ್ದಾರೆ. ಗಲಾಟೆ ಬಳಿಕ ಯುವತಿ ನಾಲ್ಕನೇ ಮಹಡಿಯಿಂದ ಬಿದ್ದು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಹೇಳಲಾಗಿದೆ.

ಇದನ್ನೂ ಓದಿ: Janhvi Kapoor: ರೆಟ್ರೊ ಲುಕ್‌ ನಲ್ಲಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ ಜಾನ್ವಿ ಕಪೂರ್!

ಯುವತಿ ಅರ್ಚನಾ ಸಾವಿನ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗಿದ್ದು, ಅರ್ಚನಾಳನ್ನು ಆದೇಶ್ ತಳ್ಳಿರುವ ಸಾಧ್ಯತೆ ಇರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಸದ್ಯ ಪ್ರೀಯಕರ ಆದೇಶ್’ನನ್ನು ಕೋರಮಂಗಲ ಪೊಲೀಸರು ವಶಕ್ಕೆ ಪಡೆದು ತನಿಖೆ ವಿಚಾರಣೆ ನಡೆಸುತ್ತಿದ್ದಾರೆ. ಘಟನೆ ಬಗ್ಗೆ ಅರ್ಚನಾ ಪೋಷಕರಿಗೆ ಮಾಹಿತಿ ನೀಡಿದ್ದು, ಪೋಷಕರು ಬಂದು ದೂರು ಯಾವ ರೀತಿ ದಾಖಲು‌ ಮಾಡುತ್ತಾರೆ ಎಂಬ ಆಧಾರದ ಮೇಲೆ ಎಫ್ಐಆರ್ ದಾಖಲಿಸಲು ನಿರ್ಧರಿಸಿದ್ದಾರೆ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News