Deepika Padukone: ಹಾಲಿವುಡ್ ಮಾಧ್ಯಮದ ಮೇಲೆ ದೀಪಿಕಾ ಪಡುಕೋಣೆ ಅಭಿಮಾನಿಗಳು ಗರಂ ಆಗಿದ್ದೇಕೆ ?

Oscars 2023: ನಿನ್ನೆ ನಡೆದ ಆಸ್ಕರ್‌ ಪ್ರಶಸ್ತಿ ಪ್ರದಾನ ಸಮಾರಂಭದ ವೇಳೆ ದೀಪಿಕಾ ಪಡುಕೋಣೆ ನಿರೂಪಣೆ ಮಾಡಿ ಎಲಾ ಭಾರತೀಯರನ್ನು ತನ್ನತ್ನ ಸೆಳೆದುಕೊಂಡಿದ್ದಾರೆ. ಆದರೆ ಇದರ ನಡುವೆ ದೀಪಿಕಾ ಪಡುಕೋಣೆ ಅಭಿಮಾನಿಗಳು ಹಾಲಿವುಡ್ ಮಾಧ್ಯಮದ ಮೇಲೆ ಗರಂ ಆಗಿದ್ದಾರೆ. 

Written by - Zee Kannada News Desk | Last Updated : Mar 14, 2023, 04:08 PM IST
  • ದೀಪಿಕಾ ಪಡುಕೋಣೆಯನ್ನು ಹಾಲಿವುಡ್ ಮಾಡೆಲ್ ಕ್ಯಾಮಿಲಾ ಅಲ್ವೆಸ್ ಎಂದು ಕರೆದ ಮಾಧ್ಯಮ ಹಾಲಿವುಡ್
  • ಬಾಲಿವುಡ್‌ನ ಹಲವರಿಂದ ನಟಿಗೆ ಅಭಿನಂದನೆ ಕೂಗು
  • ದೀಪುಗೆ ಡಾ ನಿಮೋ ಯಾದವ್ ನಿಂದ ಶ್ಲಾಘನೆ
Deepika Padukone: ಹಾಲಿವುಡ್ ಮಾಧ್ಯಮದ ಮೇಲೆ ದೀಪಿಕಾ ಪಡುಕೋಣೆ ಅಭಿಮಾನಿಗಳು ಗರಂ ಆಗಿದ್ದೇಕೆ ? title=

Oscars 2023: ನಿನ್ನೆ ನಡೆದ ಆಸ್ಕರ್‌ ಪ್ರಶಸ್ತಿ ಸಮಾರಂಭದ ವೇಳೆ ದೀಪಿಕಾ ಪಡುಕೋಣೆ ನಿರೂಪಣೆ ಮಾಡಿ ಎಲಾ ಭಾರತೀಯರನ್ನು ತನ್ನತ್ನ ಸೆಳೆದುಕೊಂಡಿದ್ದಾರೆ. ಅಷ್ಟೇ ಅಲ್ಲದೇ ಪ್ರಶಸ್ತಿ ಪಡೆದ ಆರ್‌ ಆರ್‌ ಆರ್‌ ತಂಡದ ಸಂಭ್ರಮವು ಗಗನಕೇರಿತ್ತು. ಆದರೆ ಇದರ ನಡುವೆ  ದೀಪಿಕಾ ಪಡುಕೋಣೆ ಅಭಿಮಾನಿಗಳು ಹಾಲಿವುಡ್ ಮಾಧ್ಯಮದ ಮೇಲೆ ಗರಂ ಆಗಿದ್ದಾರೆ. 

 ದೀಪು ಫ್ಯಾನ್ಸ್‌ ಯಾಕಾಗಿ ಮಾಧ್ಯಮದ ಮೇಲೆ ಕಿಡಿಕಾರಿದ್ದಾರೆ ನೋಡೋಣ..

ಹಾಲಿವುಡ್ ಮಾಧ್ಯಮಗಳು ಬಾಲಿವುಡ್ ದೀಪುವನ್ನು ಗುರುತಿಸುವಲ್ಲಿ ವಿಫಲರಾಗಿದ್ದಾರೆ. ಮಾಧ್ಯಮವು ಹಾಲಿವುಡ್ ಮಾಡೆಲ್ ಕ್ಯಾಮಿಲಾ ಅಲ್ವೆಸ್ ಎಂದು ಅವರ ಹೆಸರನ್ನು ತಪ್ಪಾಗಿ ಗ್ರಹಿಸಿವೆ. ಇದನ್ನು ಗಮನಿಸಿದ ಅಭಿಮಾನಿಗಳು ,  ಮಾಧ್ಯಮದ ಮೇಲೆ ಹರಿಹಾಯ್ದಿದ್ದಾರೆ. ದೀಪಿಕಾ ಯಾರು ಎಂದು ಎಂಬುವುದನ್ನು ನೆನಪಿಸಿದ್ದಾರೆ. 

 

 

ಇದನ್ನೂ ಓದಿ: Puneeth Rajkumar : ಮಾರ್ಚ್‌ 17ರಂದು ಅಪ್ಪು ಫ್ಯಾನ್ಸ್‌ ಗೆ ಕಾದಿದೆ ಬಿಗ್ ಸರ್ಪೈಸ್ .!

ದೀಪಿಕಾ ಪಡುಕೋಣೆ 2023 ರ ಆಸ್ಕರ್‌ನ ರೆಡ್ ಕಾರ್ಪೆಟ್‌ನಲ್ಲಿ ಲೂಯಿ ವಿಟಾನ್ ಕ್ಲಾಸಿಕ್ ಆಫ್ ಶೋಲ್ಡರ್ ಗೌನ್‌ನಲ್ಲಿ ಅದ್ಭುತವಾಗಿ ಕಾಣಿಸುತ್ತಿದ್ದರು. 2023 ರಲ್ಲಿ ಅಕಾಡೆಮಿ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಮೂಲ ಗೀತೆಯನ್ನು ಗೆದ್ದ S. S. ರಾಜಮೌಳಿಯವರ RRR ನ ಗೀತೆ ನಾಟು ನಾಟುವನ್ನು ಅವರೆ ಘೋಷಿಸಿದರು. ದೀಪಿಕಾ ಪಡುಕೋಣೆ 2023 ರ ಆಸ್ಕರ್‌ನಲ್ಲಿ ಕಾಣಿಸಿಕೊಂಡು ಲಕ್ಷಾಂತರ ಅಭಿಮಾನಿಗಳ ಹೃದಯಗಳನ್ನು ಗೆದ್ದರು ಮತ್ತು ದಿವಾ ಕೂಡ ಹೆಮ್ಮೆಯ ಬಗ್ಗೆ ಪ್ರಸ್ತಾಪಿಸಿದ್ದಾರೆ. 

ಇದನ್ನೂ ಓದಿ: Oscars 2023: ಆಸ್ಕರ್‌ ಪ್ರಶಸ್ತಿ ವೇಳೆ ಎನ್‌ಟಿಆರ್ ಉಡುಪಿನಲ್ಲಿದ್ದ ಹುಲಿ ಚಿಹ್ನೆಯ ರಹಸ್ಯವೇನು ಗೊತ್ತೇ?

2023 ರ ಆಸ್ಕರ್‌ನಲ್ಲಿ  ಸುಂದರವಾಗಿ ಮತ್ತು ಆತ್ಮವಿಶ್ವಾಸದಿಂದ ಹಿಡಿದುಕೊಂಡು ಜಾಗತಿಕ ವೇದಿಕೆಯಲ್ಲಿ ಭಾರತೀಯ ಚಿತ್ರರಂಗವನ್ನು ಪ್ರತಿನಿಧಿಸಿದ್ದಕ್ಕಾಗಿ ದೀಪಿಕಾ ಅವರನ್ನು ಶ್ಲಾಘಿಸಲಾಗಿದೆ. ಸಮಂತಾ ರುತ್ ಪ್ರಭು, ಆಲಿಯಾ ಭಟ್ ಮತ್ತು ಕರಣ್ ಜೋಹರ್ ಅವರಿಂದಲೇ ಬಾಲಿವುಡ್‌ನ ಹಲವರಿಂದ ನಟಿಗೆ ಭಾರಿ ಕೂಗು ಸಿಕ್ಕಿದೆ.  ಕಂಗನಾ ರಣಾವತ್ ಕೂಡ, ದೀಪಿಕಾ ಇರುವಲ್ಲಿ ನಿಲ್ಲುವುದು ಎಷ್ಟು ಕಷ್ಟ ಅದರ ನಡುವೆ ಅದನ್ನು ತುಂಬಾ ಚೆನ್ನಾಗಿ ನಿಭಾಹಿಸಿದ್ದೀರಾ ಎಂದು  ದೀಪು ಬಗ್ಗೆ ಗೌರವ ವ್ಯಕ್ತ ಪಡಿಸಿದ್ದಾರೆ. 

ಅಷ್ಟೇ ಅಲ್ಲದೇ ಡಾ ನಿಮೋ ಯಾದವ್ ಕೂಡ , 2 ತಿಂಗಳ ಹಿಂದೆ ಅವರು ತಮ್ಮ ಚಲನಚಿತ್ರಕ್ಕಾಗಿ ಭಾರತದಲ್ಲಿ ಬಹಿಷ್ಕಾರಕ್ಕೊಳಗಾದರು, ಇಂದು ಅವರು ಆಸ್ಕರ್ ಜಾಗತಿಕ ಸಮಾರಂಭದಲ್ಲಿ ಭಾರತವನ್ನು  ಆಕರ್ಷಿಸುವಲ್ಲಿ ದೀಪು ಪಾತ್ರ ಮಹತ್ವಾವಾಗಿತ್ತು ಬಹಿಷ್ಕಾರ ಪಡೆಗೆ ಇಂದು ನಾಚಿಕೆಯಾಗಬೇಕು ಎಂದು ಕಿಡಿಕಾರಿ ದೀಪುವನ್ನು ಶ್ಲಾಘಿಸಿದ್ದಾರೆ.

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News