Avinash-Malavika: ಮಗ ದೇವರ ಕೊಡುಗೆಯಲ್ಲ, ಅವನೇ ದೇವರು -ಅವಿನಾಶ್ ಮಾಳವಿಕಾ

Weekend With Ramesh: ವೀಕೆಂಡ್ ವಿತ್ ರಮೇಶ್​  ಕಾರ್ಯಕ್ರಮದಲ್ಲಿ ಶನಿವಾರದ ಅತಿಥಿಯಾಗಿ ನಟ ಅವಿನಾಶ್ ಬಂದು ಸಾಧಕರ ಸೀಟಿನಲ್ಲಿ ಕುಳಿತು ಕಳೆತಂದಿದ್ದಾರೆ. ಪ್ರೋಮೋದಲ್ಲಿ ಅವಿನಾಶ್ ಅವರ ದೇವರ ಕೋಣೆಯಲ್ಲಿ ವಿಷ್ಣು ಫೋಟೋ ಇಟ್ಟಿರುವ ದೃಶ್ಯ ಕೂತುಹಲ ಮೂಡಿಸಿದರೇ ಇನ್ನೊಂದೆಡೆ ತಮ್ಮ ಮಗನ ಮೇಲಿನ ಭಾವನೆ ಹಂಚಿಕೊಂಡಿದ್ದಾರೆ..

Written by - Zee Kannada News Desk | Last Updated : Apr 22, 2023, 01:34 PM IST
  • ವೀಕೆಂಡ್ ವಿತ್ ರಮೇಶ್​ ಕಾರ್ಯಕ್ರಮದಲ್ಲಿ ನಟ ಅವಿನಾಶ್
  • ತಮ್ಮ ಮಗನ ಬಗ್ಗೆ ಭಾವನಾತ್ಮಕ ಮಾತಾನಾಡಿದ ಅವಿನಾಶ್ ದಂಪತಿ
  • ಅವಿನಾಶ್ ರವರಿಂದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಇನ್ನಷ್ಟು ಸೊಬಗು
Avinash-Malavika: ಮಗ ದೇವರ ಕೊಡುಗೆಯಲ್ಲ, ಅವನೇ ದೇವರು -ಅವಿನಾಶ್ ಮಾಳವಿಕಾ title=

ಬೆಂಗಳೂರು: ಜೀ ಕನ್ನಡದಲ್ಲಿ ಶನಿವಾರ ಮತ್ತು ಭಾನುವಾರ ಪ್ರಸಾರವಾಗುವ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮವು 5ನೇ ವಾರಕ್ಕೆ ಕಾಲಿಟ್ಟಿದೆ. ಈ ವಾರದ ಸಂಭ್ರಮದಲ್ಲಿ ಶನಿವಾರದ ಅತಿಥಿಯಾಗಿ ನಟ ಅವಿನಾಶ್ ಬಂದು ಸಾಧಕರ ಸೀಟಿನಲ್ಲಿ ಕುಳಿತು ಕಳೆತಂದಿದ್ದಾರೆ. ವೀಕ್ಷಕರು ಅವಿನಾಶ್ ರವರ  ಜೀವನದ  ಏಳು ಬೀಳುಗಳನ್ನು ತಿಳಿಯಲು ಕಾಯುತ್ತಿದ್ದಾರೆ.  ಇವರ ಜೀವನ ಸಾಧನೆ ಕುರಿತು ‘ವೀಕೆಂಡ್ ವಿತ್ ರಮೇಶ್​ ಕಾರ್ಯಕ್ರಮದ ಚಿತ್ರಿಕರಣ ಮುಗಿದಿದೆ ಅದರ  ಪ್ರೋಮೋನ ಜೀ ಕನ್ನಡ ವಾಹಿನಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

ಕಾರ್ಯಕ್ರಮದ ಪ್ರೋಮೋದಲ್ಲಿ ಅವಿನಾಶ್ ಅವರ ದೇವರ ಕೋಣೆಯಲ್ಲಿ ವಿಷ್ಣುದಾದ ಫೋಟೋ ಇಟ್ಟಿರುವ ದೃಶ್ಯ ಕೂತುಹಲ ಮೂಡಿಸಿದರೇ ಇನ್ನೊಂದೆಡೆ ತಮ್ಮ ಮಗನ ಮೇಲಿನ ಭಾವನೆ ಹಂಚಿಕೊಂಡಿದ್ದಾರೆ..

2001ರಲ್ಲಿ ಅವಿನಾಶ್ ಕಿರುತರೆ ನಟಿ ಮಾಳವಿಕ ಅವಿನಾಶ್ ಅವರ ಜೊತೆ ವಿವಾಹವಾಗುತ್ತಾರೆ. ಅವಿನಾಶ್ ಮಾಳವಿಕಾರವಿಗೆ ವಿಶೇಷಚೇತನ ಒಬ್ಬ ಮುದ್ದಾದ ಮಗನು ಇದ್ದಾನೆ. 

ಇದನ್ನೂ ಓದಿ:  Vivek Agnihotri : ಮುಸ್ಲಿಂ ಏರಿಯಾ ಸೇಫ್ ಅಲ್ಲ ಎಂದು ಇವೆಂಟ್ ಲೊಕೇಷನ್ ಬದಲಾಯಿಸಿದ ವಿವೇಕ್ ಅಗ್ನಿಹೋತ್ರಿ

ತಮ್ಮ ಮಗನ ಬಗ್ಗೆ ಮಾತಾನಾಡಿದ ಅವಿನಾಶ್ ದಂಪತಿ, ಮಗ ದೇವರ ಕೊಡುಗೆಯಲ್ಲ, ಅವನೇ ದೇವರು ಎಂದಿದ್ದಾರೆ. ಪ್ರತಿಯೊಬ್ಬರಿಗೂ ತಮ್ಮ ಮಕ್ಕಳ ಬಗ್ಗೆ ನೂರಾರೂ ಕನಸು ಕಂಡಿರುತ್ತಾರೆ. ಕೆಲವೊಂದು ಬಾರಿ ನಮ್ಮ ನೀರಿಕ್ಷೆ ಸುಳ್ಳಾದಾಗ ನೋವು ಆಗುವುದು ಸಹಜ. ಕಾರಣ ಸಮಾಜದ ದೃಷ್ಠಿಕೋನವೇ ಸರಿ ಇಲ್ಲದಿದ್ದಾಗ ನಮ್ಮ ಕಾರ್ಯಕ್ಷಮತೆ ಬಗ್ಗೆ ತಲೆಕೆಡಿಸಿಕೊಳ್ಳಬಾರದು.  

ಜಗತ್ತಿನಲ್ಲಿ 2 ಸಾವಿರ ಮಕ್ಕಳು ಹೀಗಿದ್ದಾರೆ. ಅವನ ಬಗ್ಗೆ ಒಬ್ಬೊಬ್ಬರು ಒಂದು ರೀತಿ ಮಾತನಾಡಿದ್ರು. ಕೆಲವೊಮ್ಮೆ ಅನಿಸುತ್ತದೆ, ನಮ್ಮ ಮನೆಯಲ್ಲಿ ಮಾತ್ರ ಯಾಕೆ ಹೀಗೆ? ಎಲ್ಲರ ಮನೆಯ ಮಕ್ಕಳು ಶಾಲೆಗೆ ಹೋಗುತ್ತಾರೆ. ನಾವು ಸೋಶಿಯಲ್ ಗ್ಯಾದರಿಂಗ್ ಹೋಗಲ್ಲ. ಅಲ್ಲೊಂದು ದೇವಸ್ಥಾನ ಇದೆ ತಾಯತ ಕಟ್ಟಿಸಿ ಎನ್ನುತ್ತಾರೆ ಎಂದು ಭಾವನಾತ್ಮಕ ಮಾತುಗಳನ್ನು ಆಡುತ್ತಾರೆ. 

ಇದನ್ನೂ ಓದಿ: Parineeti Chopra -Raghav : ಪರಿಣಿತಿ ಪ್ರೇಮ ಕಥೆ.. ಆಪ್‌ ಸಂಸದ - ಬಿಟೌನ್‌ ಬೆಡಗಿಯ ಲವ್‌ ಕಹಾನಿ ಶುರುವಾಗಿದ್ದೆಲ್ಲಿ ಗೊತ್ತಾ?

ಮಾಳವಿಕ ಅವಿನಾಶ್ ಸಮಾಜಕ್ಕೆ ನಿಜವಾಗಿಯೂ ಮಾದರಿ. ತಾವು ಅಷ್ಟು ದೊಡ್ಡ ನಟರಾಗಿದ್ದರೂ ತಮ್ಮ ಮಗನಿಗೆ ಪ್ರೀತಿ ಪಾತ್ರರಾಗಿದ್ದಾರೆ. ಇಂದಿನ ಪೀಳಿಗೆಯಲ್ಲಿ ತಮಗೆ ಹುಟ್ಟು ಮಕ್ಕಳಲ್ಲಿ ಏನಾದರೂ ಕೊರತೆ ಇದೆ ಎಂದು ಗೊತ್ತದರೇ ಭೂಮಿಗೆ ಬರುವ ಮೊದಲೇ ಭ್ರೂಣ ಹತ್ಯೆ ಮಾಡುತ್ತಾರೆ. ಅಂಥಹ ಕೆಟ್ಟ ಮನಸ್ಥಿತಿ ಉಳ್ಳವರ ಮಧ್ಯೆ ಅವಿನಾಶ್ ದಂಪತಿ ಇಬ್ಬರು ಮಾದರಿಯಾಗಿದ್ದಾರೆ. 

ಅದೇನೆ ಇರಲಿ ಅವಿನಾಶ್ ವೀಕೆಂಡ್ ವಿತ್ ರಮೇಶ್  ಕಾರ್ಯಕ್ರಮಕ್ಕೆ ಇನ್ನಷ್ಟು ಸೊಬಗನ್ನು ಹೆಚ್ಚಿಸಿದ್ದಾರೆ. ಅವಿನಾಶ್ ಅವರು ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿ ಸೈ ಅನಿಸಿಕೊಂಡಿದ್ದಾರೆ. ಕನ್ನಡ, ತೆಲುಗು, ತಮಿಳು ಚಿತ್ರ ರಂಗದಲ್ಲಿ ತಮ್ಮ ಅದ್ಭುತ ನಟನೆ ಮೂಲಕ ಗುರುತಿಸಿಕೊಂಡಿದ್ದಾರೆ. ಇವರ ಎಪಿಸೋಡ್ ನೋಡಲು ಅಭಿಮಾನಿಗಳು ಕಾತುದಿಂದ ಕಾಯ್ತಾ ಇದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News