ದೇಶಾದ್ಯಂತ ಕರೋನಾ ಲಸಿಕೆಯ ಡ್ರೈರನ್ ಅಂದರೆ, ಲಸಿಕೆ ಪ್ರಯೋಗಿಸುವ ಪೂರ್ವಾಭ್ಯಾಸ ನಡೆಸಲಾಗುತ್ತಿದೆ. ಪ್ರಾಥಮಿಕ ಹಂತದ ಪೂರ್ವಾಭ್ಯಾಸ ಯಶಸ್ವಿಯಾದ ಕಾರಣ, ದೇಶಾದ್ಯಂತ ಎಲ್ಲಾ ಜಿಲ್ಲೆಗಳಲ್ಲೂ ಡ್ರೈರನ್ ನಡೆಯುತ್ತಿದೆ.
ಲೋಕಲ್ ಸರ್ಕಲ್ಸ್ 12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ನೀಡುವ ಬಗ್ಗೆ ಭಾರತದಲ್ಲಿ ಕೋವಿಡ್ -19 ಪ್ರಯೋಗಗಳನ್ನು ನಡೆಸಲು ಕೇಂದ್ರ ಸರ್ಕಾರವು ಫಿಜರ್ ಮತ್ತು ಮಾಡ್ರೆನಾ ಕಂಪನಿಗಳಿಗೂ ಅವಕಾಶ ನೀಡುವ ಬಗ್ಗೆಯೂ ಸಮೀಕ್ಷೆಯಲ್ಲಿ ನಡೆಸಿದೆ. ಈ ಸಮೀಕ್ಷೆಗಳಲ್ಲೂ ಆಶ್ಚರ್ಯಕರವಾದ ಅಭಿಪ್ರಾಯಗಳೇ ಲಭ್ಯವಾಗಿವೆ.
ಕೊರೋನಾ ಲಸಿಕೆಗಳಲ್ಲಿ ಹಂದಿ ಮಾಂಸದ ಅಂಶವಿದೆ. ಹಂದಿ ಮಾಂಸ ಸೇವನೆ ಧರ್ಮ ನಿಷಿದ್ಧವಾಗಿರುವ ಕಾರಣ ಮುಸ್ಲಿಮರು ಲಸಿಕೆ ಪಡೆಯಬಾರದು ಎಂಬ ವದಂತಿ ಎದ್ದಿದೆ. ಈ ಹಿನ್ನಲೆಯಲ್ಲಿ ಸ್ಪಷ್ಟೀಕರಣ ನೀಡಿರುವ ಜಮಾತ್-ಎ-ಇಸ್ಲಾಂ-ಹಿಂದ್, 'ಇದು ಆಧಾರರಹಿತ ಸುದ್ದಿ' ಎಂದು ಹೇಳಿದೆ.
ಕೊರೋನಾ ವ್ಯಾಕ್ಸಿನೇಷನ್ ಪ್ರಕ್ರಿಯೆಯು ಜನವರಿ 13 ರಿಂದ ಇಡೀ ದೇಶದಲ್ಲಿ ಪ್ರಾರಂಭವಾಗಬಹುದು ಎಂಬ ಬಗ್ಗೆ ಆರೋಗ್ಯ ಸಚಿವಾಲಯ ಸುಳಿವು ನೀಡಿದೆ. ಈ ಹಿನ್ನಲೆಯಲ್ಲಿ ಲಸಿಕೆ ಸಾಮಾನ್ಯ ಜನರಿಗೆ ಹೇಗೆ ತಲುಪುತ್ತದೆ ಎಂಬ ಪ್ರಶ್ನೆಗಳಿವೆ. ಈ ಪ್ರಕ್ರಿಯೆಯ ಬಗೆಗಿನ ಮಾಹಿತಿಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.
Poonawalla Vs Krishna Ella: ಕೊರೊನಾ ವ್ಯಾಕ್ಸಿನ್ ಗೆ ಸಂಬಂಧಿಸಿದಂತೆ ಪರಸ್ಪರ ಮುಖಾಮುಖಿಯಾಗಿರುವ ಅದರ್ ಪೂನಾವಾಲಾ ಹಾಗೂ ಕೃಷ್ಣಾ ಇಲ್ಲಾ ಮಧ್ಯೆ ಸರ್ಕಾರ ರಾಜಿ ಮಾಡಿದೆ. ಎರಡೂ ಲಸಿಕೆಗಳು ಉತ್ತಮವಾಗಿವೆ ಮತ್ತು ಎರಡರ ಫಲಿತಾಂಶಗಳೂ ಕೂಡ ಉತ್ತಮವಾಗಿವೆ ಎಂದು ಸರ್ಕಾರ ಹೇಳಿದೆ.
ಭಾರತದಲ್ಲಿ COVID-19 ವಿರುದ್ಧ ತುರ್ತು ಬಳಕೆಗಾಗಿ ಅಸ್ಟ್ರಾಜೆನೆಕಾ-ಆಕ್ಸ್ಫರ್ಡ್ನ ಕೋವಿಶೀಲ್ಡ್ ಮತ್ತು ಭಾರತ್ ಬಯೋಟೆಕ್ನ ಕೋವಾಕ್ಸಿನ್ ಎಂಬ ಎರಡು ಲಸಿಕೆಗಳನ್ನು ಡಿಜಿಸಿಐ ಭಾನುವಾರ ಅನುಮೋದಿಸಿದೆ.
COVID-19 Vaccine Update:ಆಕ್ಸ್ಫರ್ಡ್ -ಅಸ್ಟ್ರಾಜೆನೆಕಾದ ಲಸಿಕೆಯಾಗಿರುವ ಕೋವಿಶೀಲ್ಡ್ ಅನ್ನು ಪುಣೆಯ ಸೀರಮ್ ಸಂಸ್ಥೆಯಲ್ಲಿ ಉತ್ಪಾದಿಸಲಾಗುತ್ತಿದೆ. ವಿಶೇಷವೆಂದರೆ, ಭಾರತದ ಔಷಧ ಮಹಾನಿರ್ದೇಶನಾಲಯ ಭಾನುವಾರ ಕೋವಿ ಶೀಲ್ಡ್ ತುರ್ತು ಬಳಕೆಗೆ ಅನುಮತಿ ನೀಡಿದೆ.
Corona Vaccine: ಔಷಧ ಮಹಾನಿರ್ದೆಶನಾಲಯ ಭಾನುವಾರ ಬೆಳಗ್ಗೆ ಸುಮಾರು 11 ಗಂಟೆಗೆ ನಡೆಸಲು ಉದ್ದೇಶಿಸಿರುವ ಪತ್ರಿಕಾಗೋಷ್ಠಿಯಲ್ಲಿ ಕೋವಿಶೀಲ್ಡ್ ಹಾಗೂ ಕೊವ್ಯಾಕ್ಸಿನ್ ಲಸಿಕೆಗಳ ಸಾರ್ವಜನಿಕ ಬಳಕೆಗೆ ಅನುಮತಿ ನೀಡುವ ಸಾಧ್ಯತೆ ಇದೆ. ಇದಕ್ಕೂ ಮೊದಲು ವಿಷಯ ತಜ್ಞರ ಸಮಿತಿ ಕೇವಲ ಎರಡು ದಿನದಲ್ಲಿ ಎರಡು ಲಸಿಕೆಗೆ ಗ್ರೀನ್ ಸಿಗ್ನಲ್ ನೀಡಿದೆ ಎಂಬುದು ಇಲ್ಲಿ ಉಲ್ಲೇಖನೀಯ.
Covaxin Gets Govt. Approval: ಶುಕ್ರವಾರ ಸೀರಮ್ ಇನ್ಸ್ಟಿಟ್ಯೂಟ್ ನ ಕೋವಿಶಿಲ್ದ್ ಗೆ ಅನುಮತಿ ನೀಡಿದ್ದ ವಿಷಯ ತಜ್ಞರ ಸಮೀತಿ (SEC), ಶನಿವಾರ ಭಾರತ ಬಯೋಟಿಕ್ ಕೊವಿಡ್ -19 ಲಸಿಕೆಯಾಗಿರುವ Covaxinಗೂ ಕೂಡ ತುರ್ತು ಬಳಕೆಗೆ ಅನುಮತಿ ನೀಡಿದೆ. ಸಭೆ ಮುಕ್ತಾಯದ ಬಳಿಕ ಈ ಕುರಿತು ಅಧಿಕೃತ ಘೋಷಣೆ ಕೂಡ ಮಾಡಲಾಗಿದೆ.
ಡ್ರೈ ರನ್ ಗೆ ಸಂಬಂಧಿಸಿದಂತೆ ಆರೋಗ್ಯ ಕಾರ್ಯಕರ್ತರಿಗೆ ದೇಶದಲ್ಲಿ ಸಂಪೂರ್ಣ ತರಬೇತಿ ನೀಡಲಾಗಿದೆ. ನಾವು ವಿಶೇಷ ತಂಡವನ್ನು ಸಹ ರಚಿಸಿದ್ದೇವೆ, ಅದು ಸಂಪೂರ್ಣ ಪ್ರಕ್ರಿಯೆಯನ್ನು ಸೂಕ್ಷ್ಮವಾಗಿ ಗಮನಿಸುತ್ತದೆ. ಈ ಡ್ರೈ ರನ್ ನಲ್ಲಿ ಲಸಿಕೆ ನೀಡಲಾಗುವುದಿಲ್ಲ, ಜನರ ಡೇಟಾವನ್ನು ಮಾತ್ರ ತೆಗೆದುಕೊಳ್ಳಲಾಗುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷ್ ವರ್ಧನ್ ಹೇಳಿದರು.
Covishield Vaccine - ಕೊರೊನಾ ವೈರಸ್ ನಿಂದ ರಕ್ಷಣಾ ಪಡೆಯಲು ದೇಶದ ನಾಗರಿಕರು ಕರೋನಾ ಲಸಿಕೆಗಾಗಿ ಕಾಯುತ್ತಿದ್ದಾರೆ. ಹೊಸ ವರ್ಷದ ಪ್ರಾರಂಭದೊಂದಿಗೆ, ಜನರ ಈ ನಿರೀಕ್ಷೆಗೆ ತೆರೆಬೀಳಲಿದೆ. ತಜ್ಞರ ಸಮಿತಿ ಸಭೆಯಲ್ಲಿ, ಕೋವಿಶೀಲ್ಡ್ ಲಸಿಕೆಗೆ (Covishield) ಅನುಮೋದನೆ ಸಿಗುವ ಸಾಧ್ಯತೆ ಇದೆ.
ಸುಳ್ಳು ಆರೋಪಗಳನ್ನು ಮಾಡಿದರೆ 100 ಕೋಟಿ ರೂ.ಗಳ ದಂಡ ವಸೂಲಿ ಮಾಡುವುದಾಗಿ ಕಂಪನಿ ಬೆದರಿಕೆಯೊಡ್ಡಿದೆ. ಇಂತಹ ಆರೋಪಗಳಿಂದ ತನ್ನ ಹಿತ ಕಾಪಾಡಿಕೊಳ್ಳುವುದಾಗಿ ಕಂಪನಿ ಹೇಳಿದ್ದು, ಸುಳ್ಳು ಆರೋಪಕ್ಕಾಗಿ 100 ಕೋಟಿ ರೂ.ವರೆಗೆ ಮಾನಹಾನಿ ಮೊಕದ್ದಮೆ ಹೂಡುವ ಸಾಧ್ಯತೆ ಇದೆ ಎಂದು ಕಂಪನಿ ಹೇಳಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.